ವಿದ್ಯಾರ್ಥಿ, ಪೋಷಕರ ಒತ್ತಾಯಕ್ಕೆ ಕಾಲೇಜು ಓಪನ್ ಮಾಡಿದ್ದೇವೆ -DCM ಡಾ. ಅಶ್ವತ್ಥ್ ನಾರಾಯಣ
ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭ ಮಾಡಿರುವ ವಿಚಾರದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಕಾಲೇಜುಗಳನ್ನು ಆರಂಭ ಮಾಡಿದ್ದೇವೆ. ವಿದ್ಯಾರ್ಥಿಗಳು ಆನ್ಲೈನ್ ಪಾಠ ಅರ್ಥವಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿ ಸರ್ಕಾರದ ಗೈಡ್ ಲೈನ್ನೊಂದಿಗೆ ಕಾಲೇಜು ಆರಂಭ ಮಾಡಿದ್ದೇವೆ ಅಲ್ಲದೆ ಹಂತ ಹಂತವಾಗಿ ಮುಂದಿನ ತರಗತಿ ಆರಂಭವಾಗಲಿದೆ ಎಂದರು. ಕೋವಿಡ್ ಟೆಸ್ಟ್ಗೆ ವಿದ್ಯಾರ್ಥಿಗಳ ಹಣ ಕೊಡಬೇಕಾಗಿಲ್ಲ. ಸರ್ಕಾರದಿಂದಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತೆ ಹಾಗೂ […]

ಬೆಂಗಳೂರು: ರಾಜ್ಯದಲ್ಲಿ ಕಾಲೇಜುಗಳು ಆರಂಭ ಮಾಡಿರುವ ವಿಚಾರದ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯದ ಮೇರೆಗೆ ಕಾಲೇಜುಗಳನ್ನು ಆರಂಭ ಮಾಡಿದ್ದೇವೆ. ವಿದ್ಯಾರ್ಥಿಗಳು ಆನ್ಲೈನ್ ಪಾಠ ಅರ್ಥವಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೀಗಾಗಿ ಸರ್ಕಾರದ ಗೈಡ್ ಲೈನ್ನೊಂದಿಗೆ ಕಾಲೇಜು ಆರಂಭ ಮಾಡಿದ್ದೇವೆ ಅಲ್ಲದೆ ಹಂತ ಹಂತವಾಗಿ ಮುಂದಿನ ತರಗತಿ ಆರಂಭವಾಗಲಿದೆ ಎಂದರು.
ಕೋವಿಡ್ ಟೆಸ್ಟ್ಗೆ ವಿದ್ಯಾರ್ಥಿಗಳ ಹಣ ಕೊಡಬೇಕಾಗಿಲ್ಲ. ಸರ್ಕಾರದಿಂದಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತೆ ಹಾಗೂ ಕಾಲೇಜಿಗೆ ಬರಲೇಬೇಕು ಎಂದು ಯಾವ ವಿದ್ಯಾರ್ಥಿಗಳಿಗೂ ಒತ್ತಾಯವಿಲ್ಲ. ಆನ್ ಲೈನ್ ಮೂಲಕವೂ ಪಾಠ ಕೇಳಬಹುದು. ಜೊತೆಗೆ ಕಾಂಟ್ಯಾಕ್ಟ್ ತರಗತಿಗಳು ಮುಂದುವರಿಯಲಿದೆ ಎಂದರು




