AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯ ತುಲಾಭವನಕ್ಕೆ ಮಾರುಹೋದ ಆಕ್ಸ್‌ಫರ್ಡ್ ವಿವಿ! ತೂಕ-ಅಳತೆ ಸಾಧನಗಳ ಕುರಿತು ಉಪನ್ಯಾಸಕ್ಕೆ ಬಸವರಾಜ್ ಯಳಮಲ್ಲಿಗೆ ಆಹ್ವಾನ

ದಾವಣಗೆರೆಯ ತುಲಾಭವನದಲ್ಲಿ 5,360ಕ್ಕೂ ಹೆಚ್ಚು ತೂಕ ಮತ್ತು ಅಳತೆ ಸಾಧನಗಳನ್ನು ಸಂಗ್ರಹಿಸಲಾಗಿದೆ. ಈ ವಿಚಾರ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದು, ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಗಮನವನ್ನೂ ಸೆಳೆದಿದೆ. ಈ ಅಪರೂಪದ ಸಂಗ್ರಹದ ಕುರಿತು ಉಪನ್ಯಾಸ ನೀಡಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಬಸವರಾಜ್ ಯಳಮಲ್ಲಿಗೆ ಆಹ್ವಾನ ನೀಡಿದೆ.

ದಾವಣಗೆರೆಯ ತುಲಾಭವನಕ್ಕೆ ಮಾರುಹೋದ ಆಕ್ಸ್‌ಫರ್ಡ್ ವಿವಿ! ತೂಕ-ಅಳತೆ ಸಾಧನಗಳ ಕುರಿತು ಉಪನ್ಯಾಸಕ್ಕೆ ಬಸವರಾಜ್ ಯಳಮಲ್ಲಿಗೆ ಆಹ್ವಾನ
ತೂಕ ಮತ್ತು ಅಳತೆ ಸಾಧನಗಳ ಅಪರೂಪದ ಸಂಗ್ರಹದ ಜತೆ ಬಸವರಾಜ್ ಯಳಮಲ್ಲಿImage Credit source: tv9
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Sep 05, 2026 | 8:11 AM

Share

ಮುಖ್ಯಾಂಶಗಳು

  • ತುಲಾಭವನದಲ್ಲಿ 5,360 ತೂಕ ಸಾಧನಗಳ ಸಂಗ್ರಹ
  • ಆಕ್ಸ್‌ಫರ್ಡ್‌ನಲ್ಲಿ ಬಸವರಾಜ್ 14 ದಿನಗಳ ಉಪನ್ಯಾಸ
  • ಸಿರಿಗೆರೆಯಲ್ಲಿ ದೊಡ್ಡ ತುಲಾಭವನ ನಿರ್ಮಾಣ

ದಾವಣಗೆರೆ, ಸೆಪ್ಟೆಂಬರ್ 5: ತೂಕ ಮತ್ತು ಅಳತೆ ಸಾಧನಗಳ ಅಪರೂಪದ ಸಂಗ್ರಹದ ಮೂಲಕ ಗಮನ ಸೆಳೆದಿರುವ ದಾವಣಗೆರೆಯ ‘ತುಲಾಭವನ’ದ ಮುಖ್ಯಸ್ಥ ಬಸವರಾಜ್ ಯಳಮಲ್ಲಿ ಅವರಿಗೆ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಹ್ವಾನ ಬಂದಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಿಸ್ಟರಿ ಆಫ್ ಸೈನ್ಸ್ ಮ್ಯೂಸಿಯಂ ವಿಭಾಗದಲ್ಲಿ ತಮ್ಮ ಸಂಗ್ರಹದ ಕುರಿತು ಅವರು 14 ದಿನಗಳ ಕಾಲ ಉಪನ್ಯಾಸ ನೀಡಲಿದ್ದಾರೆ. ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ತುಲಾಭವನದಲ್ಲಿ 17ನೇ ಶತಮಾನದಿಂದ 20ನೇ ಶತಮಾನದವರೆಗೆ ಬಳಕೆಯಲ್ಲಿದ್ದ ವಿವಿಧ ತೂಕ ಮತ್ತು ಅಳತೆ ಸಾಧನಗಳನ್ನು ಸಂಗ್ರಹಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ 18 ದೇಶಗಳು ಹಾಗೂ ಭಾರತದ ವಿವಿಧ ರಾಜ-ಮಹಾರಾಜರ ಸಂಸ್ಥಾನಗಳಲ್ಲಿ ಬಳಕೆಯಾಗುತ್ತಿದ್ದ ಸಾಧನಗಳೂ ಈ ಸಂಗ್ರಹದಲ್ಲಿವೆ.

5,000ಕ್ಕೂ ಹೆಚ್ಚು ತೂಕ-ಅಳತೆ ಸಾಧನಗಳ ಸಂಗ್ರಹ

ಬಸವರಾಜ್ ಯಳಮಲ್ಲಿ ಅವರ ಕುಟುಂಬ ಕಳೆದ ಸುಮಾರು ಆರು ದಶಕಗಳಿಂದ ತಕ್ಕಡಿ ಮಾರಾಟದ ವೃತ್ತಿಯಲ್ಲಿದೆ. ಈ ವೃತ್ತಿಯ ನಡುವೆಯೇ ವಿವಿಧ ಕಾಲಘಟ್ಟ ಹಾಗೂ ಪ್ರದೇಶಗಳಲ್ಲಿ ಬಳಕೆಯಾಗುತ್ತಿದ್ದ ತೂಕ ಮತ್ತು ಅಳತೆ ಸಾಧನಗಳನ್ನು ಸಂಗ್ರಹಿಸುವ ಆಸಕ್ತಿ ಬೆಳೆದಿದೆ. ತಕ್ಕಡಿ ವ್ಯಾಪಾರದಿಂದ ಬಂದ ಆದಾಯದ ಒಂದು ಭಾಗವನ್ನು ಬಳಸಿಕೊಂಡು ತುಲಾಭವನವನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯಿಂದ ಆರ್ಥಿಕ ನೆರವು ಪಡೆದಿಲ್ಲ ಎಂದು ತುಲಾಭವನದವರು ತಿಳಿಸಿದ್ದಾರೆ.

ಇದೀಗ ತುಲಾಭವನದಲ್ಲಿ ಸುಮಾರು 5,360 ವಿವಿಧ ಮಾದರಿಯ ತೂಕ ಮತ್ತು ಅಳತೆ ಸಾಧನಗಳಿವೆ. ಮಾರುಕಟ್ಟೆಗಳಲ್ಲಿ ಬಳಕೆಯಾಗುತ್ತಿದ್ದ ತಕ್ಕಡಿಗಳಿಂದ ಹಿಡಿದು ಅಂಚೆ ಇಲಾಖೆಯಲ್ಲಿ ತೂಕ ಮಾಡಲು ಬಳಸುತ್ತಿದ್ದ ಸಾಧನಗಳವರೆಗೆ ಹಲವು ಬಗೆಯ ವಸ್ತುಗಳು ಇಲ್ಲಿ ಸಂಗ್ರಹವಾಗಿವೆ.

ಬಗೆ ಬಗೆಯ ತಕ್ಕಡಿಗಳ ಮಾದರಿಗಳ ಸಂಗ್ರಹ

Davanagere Tulabhavan Weighing Instruments

ಮಾಂಸ ಮಾರಾಟ, ಚಿನ್ನದ ವ್ಯಾಪಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುತ್ತಿದ್ದ ತಕ್ಕಡಿಗಳ ಮಾದರಿಗಳೂ ಇಲ್ಲಿವೆ. ಸಾಧನಗಳ ವಿನ್ಯಾಸ, ಬಳಕೆ ಮತ್ತು ಅವುಗಳಿಗೆ ಸಂಬಂಧಿಸಿದ ಕಾಲಘಟ್ಟದ ಮಾಹಿತಿಯನ್ನು ಸಂಗ್ರಹದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ

Davanagere Tulabhavan Collections

ತೂಕ ಮತ್ತು ಅಳತೆ ಸಾಧನಗಳ ಸಂಗ್ರಹಕ್ಕಾಗಿ ತುಲಾಭವನ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಲಾಗಿದೆ.

ಸಿರಿಗೆರೆಯಲ್ಲಿ ದೊಡ್ಡ ಸಂಗ್ರಹಾಲಯ ನಿರ್ಮಾಣ

ಪ್ರಸ್ತುತ ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ತುಲಾಭವನದ ಸಂಗ್ರಹವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯೂ ಇದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಮಠದ ಆವರಣದಲ್ಲಿ ದೊಡ್ಡ ಕಟ್ಟಡ ನಿರ್ಮಿಸಿ, ಸಂಗ್ರಹವನ್ನು ಮತ್ತಷ್ಟು ವ್ಯವಸ್ಥಿತವಾಗಿ ಪ್ರದರ್ಶಿಸಲು ಸಿದ್ಧತೆ ನಡೆಯುತ್ತಿದೆ.

ತೂಕ ಮತ್ತು ಅಳತೆಗೆ ಮಾತ್ರ ಸಂಬಂಧಿಸಿದ ಸಾಧನಗಳನ್ನು ಒಳಗೊಂಡಿರುವುದು ತುಲಾಭವನದ ಪ್ರಮುಖ ವಿಶೇಷತೆಯಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಜನರ ದೈನಂದಿನ ಹಾಗೂ ವ್ಯಾಪಾರಿಕ ಬದುಕಿನಲ್ಲಿ ತೂಕ-ಅಳತೆ ಹೇಗೆ ಬಳಕೆಯಾಗುತ್ತಿತ್ತು ಎಂಬುದನ್ನು ಈ ಸಂಗ್ರಹದ ಮೂಲಕ ತಿಳಿದುಕೊಳ್ಳಬಹುದು.

ಆಕ್ಸ್‌ಫರ್ಡ್‌ನಲ್ಲಿ 14 ದಿನಗಳ ಉಪನ್ಯಾಸ ನೀಡಲಿರುವ ಬಸವರಾಜ್ ಯಳಮಲ್ಲಿ

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹಿಸ್ಟರಿ ಆಫ್ ಸೈನ್ಸ್ ಮ್ಯೂಸಿಯಂ ವಿಭಾಗದ ಆಹ್ವಾನದ ಮೇರೆಗೆ ಬಸವರಾಜ್ ಯಳಮಲ್ಲಿ ಸೆಪ್ಟೆಂಬರ್ 12ರಿಂದ 26ರವರೆಗೆ ಇಂಗ್ಲೆಂಡ್‌ನಲ್ಲಿ ಇರಲಿದ್ದಾರೆ. ಈ ಅವಧಿಯಲ್ಲಿ ತುಲಾಭವನದಲ್ಲಿರುವ ತೂಕ ಮತ್ತು ಅಳತೆ ಸಾಧನಗಳ ಸಂಗ್ರಹ, ಅವುಗಳ ಇತಿಹಾಸ ಹಾಗೂ ಬಳಕೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.

ತೂಕ ಮತ್ತು ಅಳತೆ ಸಾಧನಗಳಿಗೆಂದೇ ಮೀಸಲಾಗಿರುವ ಈ ವಿಶಿಷ್ಟ ಸಂಗ್ರಹಕ್ಕೆ ಅಂತಾರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಂಸ್ಥೆಯಿಂದ ಆಹ್ವಾನ ಬಂದಿರುವುದು ತುಲಾಭವನದ ವಿಶೇಷತೆಯನ್ನು ಗುರುತಿಸುವ ಮಹತ್ವದ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಡಿಕೆ ಶಿವಕುಮಾರ್
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ
ಅಕ್ರಮವಾಗಿ ಸ್ಫೋಟಕಗಳ ಸಾಗಾಟ: 600 ಜಿಲೆಟಿನ್, 100 ಡಿಟೋನೇಟರ್ ಜಪ್ತಿ