Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ
ಬಸವರಾಜ್ ಹೊರಟ್ಟಿ
Follow us
TV9 Web
| Updated By: sandhya thejappa

Updated on:Jun 11, 2022 | 3:38 PM

ಧಾರವಾಡ: ಮಾಜಿ ಸಭಾಪತಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ (Basavaraj Horatti) ವಿರುದ್ಧ ಆರೋಪಗಳು ಕೇಳಿಬಂದಿವೆ. ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ಇಂದು (ಜೂನ್ 11) ಸುದ್ದಿಗೋಷ್ಠಿ ನಡೆಸಿ, 1980ರಲ್ಲಿ ಎಂಎಲ್ಸಿ ಆಗಿದ್ದರು. 19 ವರ್ಷ ಎಂಎಲ್​ಸಿ ವೇತನ, ಭತ್ಯೆ ಜೊತೆಗೆ ಶಿಕ್ಷಕರ (Teachers) ವೇತನವನ್ನೂ ಪಡೆದಿದ್ದಾರೆ. 18 ವರ್ಷ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಮತ್ತೋರ್ವ ಶಿಕ್ಷಕನಿಗೆ ನೌಕರಿ ಸಿಗುವುದನ್ನು ತಪ್ಪಿಸಿದರು. ಸಚಿವರಾದ ಬಳಿಕ ಲ್ಯಾಮಿಂಗ್ಟನ್ ಶಾಲೆಗೆ ಶಾಲಾ ಸುಧಾರಣಾ ಸಮಿತಿ ಮಾಡಿಕೊಂಡಿದ್ದರು. ಆಗ ಪಾಲಿಕೆ ಆಯುಕ್ತರು ಸಮಿತಿ ಮಾಡಲು ಬರೋಲ್ಲ ಅಂತಾ ಆಗಲೇ ಹೇಳಿದ್ದರು. ಆಗ ಶಾಲಾ ಸುಧಾರಣಾ ಸಮಿತಿ ವಿಸರ್ಜನೆ ಅಂತಾ ಹೇಳಿಕೊಂಡಿದ್ದರು. ಆದರೆ ಇಂದಿಗೂ ಆ ಶಾಲೆಗೆ ನಾನೇ ಚೇರ್ಮನ್ ಅಂತಾ ಹೇಳಿಕೊಳ್ಳುತ್ತಾರೆ ಅಂತ ಆರೋಪಿಸಿದೆ.

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಅವರಿಗೆ ಆಯೋಗ ನೋಟಿಸ್ ಸಹ ನೀಡಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ತಮ್ಮ ಹಿಡಿತ ಸಾಧಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಹೊರಟ್ಟಿ ಹೇಳಿದರು.

ಇದನ್ನೂ ಓದಿ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ

ಇದನ್ನೂ ಓದಿ
Image
ಸೀರೆಗಳನ್ನು ಹೀಗೂ ಕಳುವು ಮಾಡಬಹುದಾ? ವಿಡಿಯೊ ನೋಡಿ ದಂಗಾಗುತ್ತೀರಿ ಮಾರಾಯ್ರೇ!
Image
IND vs SA: ಭಾರತ- ಆಫ್ರಿಕಾ ಪಂದ್ಯದ ನಡುವೆ ಪರಸ್ಪರ ಬಡಿದಾಡಿಕೊಂಡ ಫ್ಯಾನ್ಸ್..! ವಿಡಿಯೋ ವೈರಲ್
Image
ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಸರ್ವೋದಯ ಶಿಕ್ಷಣ ಸಂಸ್ಥೆ ಉಳ್ಳಾಗಡ್ಡಿ ಎನ್ನುವವರಿಂದ ಪಡೆದಿದ್ದಾರೆ. ಬಿಳಿ ಹಾಳೆ ಮೇಲೆ ಬರೆಯಿಸಿಕೊಂಡು ಅದನ್ನು ಪಡೆದಿದ್ದಾರೆ. ಈಗಾಗಲೇ ಕೋರ್ಟ್ ಈ ಸಂಸ್ಥೆಗೂ ಉಳ್ಳಾಗಡ್ಡಿಗೆ ಸಂಬಂಧ ಇಲ್ಲ ಅಂತಾ ಹೇಳಿದೆ. ಸರ್ವೋದಯ ಶಿಕ್ಷಣ ಸಂಸ್ಥೆ ನಮಗೆ ಬರೆದುಕೊಡಿ ಅಂತಾ ನಾವು ಎಂದೂ ಕೇಳಿಲ್ಲ. ಮ್ಯಾನೇಜ್​ಮೆಂಟ್ ಸಂಬಂಧಿತ ವ್ಯಾಜ್ಯ ಇದ್ದಿದ್ದಕ್ಕೆ ಸರ್ಕಾರದ ಆಡಳಿತಾಧಿಕಾರಿ ಕೊಡಿ ಅಂತಾ ಕೇಳಿದ್ದೇವೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ತಿಳಿಸಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Sat, 11 June 22

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್