AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟದ ಫೈಟ್​​ ನಡುವೆ ಸ್ಫೋಟಕ ಭವಿಷ್ಯ ನುಡಿದ ಹುಲಿಗೆಮ್ಮ ಜೋಗತಿ: ಡಿಕೆಶಿಗೆ ಇದ್ಯಾ ಸಿಎಂ ಯೋಗ?

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ಬಗ್ಗೆ ಗದಗದಲ್ಲಿ ಹುಲಿಗೆಮ್ಮ ದೇವಿ ಜೋಗತಿ ಬೈಲಮ್ಮ ಎಂಬವರು ಸ್ಫೋಟಕ ಭಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಗುದ್ದಾಟ ಜೋರಾಗಿರುವಾಗಲೇ ಈ ಭವಿಷ್ಯ ಕುತೂಹಲ ಮೂಡಿಸಿದೆ. ಡಿಕೆಶಿ ಸೇರಿ ಕೆಲ ನಾಯಕರ ಹೆಸರೂ ಸಿಎಂ ರೇಸ್​ನಲ್ಲಿ ಕೇಳಿ ಬರುತ್ತಿದ್ದು, ಆ ಬಗ್ಗೆಯೂ ಜೋಗತಿ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಇರುವ ಬಾಂಧವ್ಯ ಎಂತಹದ್ದು ಎಂಬುದನ್ನೂ ಉಲ್ಲೇಖಿಸಿದ್ದಾರೆ.

ಪಟ್ಟದ ಫೈಟ್​​ ನಡುವೆ ಸ್ಫೋಟಕ ಭವಿಷ್ಯ ನುಡಿದ ಹುಲಿಗೆಮ್ಮ ಜೋಗತಿ: ಡಿಕೆಶಿಗೆ ಇದ್ಯಾ ಸಿಎಂ ಯೋಗ?
ಜೋಗತಿ ಭವಿಷ್ಯ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Nov 24, 2025 | 5:43 PM

Share

ಗದಗ, ನವೆಂಬರ್​ 24: ರಾಜ್ಯದಲ್ಲಿ ಸಿಎಂ ಕುರ್ಚಿಯ ಗುದ್ದಾಟ ಬಲು ಜೋರಾಗಿದೆ. ಸಿಎಂ, ಡಿಸಿಎಂ ನಡುವೆ ನೀ ಕೊಡೆ ನಾ ಬಿಡೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಬಗ್ಗೆ ಹುಲಿಗೆಮ್ಮ ದೇವಿ ಅಚ್ಚರಿಯ ಭವಿಷ್ಯ ನುಡಿದಿದ್ದಾಳೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅಣ್ಣ-ತಮ್ಮನಂತೆ ಇದ್ದಾರೆ. ಸಿದ್ದರಾಮಯ್ಯ ಖುಷಿ ಖುಷಿಯಿಂದ ಸಿಎಂ ಸ್ಥಾನವನ್ನು ಡಿ.ಕೆ. ಶಿವಕುಮಾರ್​​ಗೆ ಬಿಟ್ಟು ಕೊಡ್ತಾರೆಂದು ಹುಲಿಗೆಮ್ಮ ದೇವಿಯ ಜೋಗತಿ ಬೈಲಮ್ಮ ಹೇಳಿದ್ದಾರೆ.

‘ಎರಡೂವರೆ ತಿಂಗಳಲ್ಲಿ ಡಿಕೆಶಿ ಸಿಎಂ’

ಹುಲಿಗೆಮ್ಮ ದೇವಿ ಆರಾಧಾನೆ ಮಾಡುವ ಗದಗ ನಗರ ರಾಚೋಟೇಶ್ವರ ನಗರದ ಬೈಲಮ್ಮ ಎಂಬ ಜೋಗತಿ ಈ ಬಗ್ಗೆ ಭವಿಷ್ಯ ನುಡಿದಿದ್ದು, ಸಿದ್ದರಾಮಯ್ಯ ಅವರ ಹತ್ತಿರ ಯಾವುದೇ ಕಪಟತನವಿಲ್ಲ. ಹೀಗಾಗಿ ಅಣ್ಣ ಹೇಗೆ ತಮ್ಮನಿಗಾಗಿ ಬಿಟ್ಟು ಕೊಡ್ತಾನೋ, ಹಾಗೆಯೇ ಸಿದ್ದರಾಮಯ್ಯ ಸಂತೋಷದಿಂದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್​​ಗೆ ಬಿಟ್ಟುಕೊಡ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಬ್ಬರ ಕಚ್ಚಾಟದಲ್ಲಿ ಮೂವರನೇವರು ಮೂಗು ತೋರಿಸುತ್ತಿದ್ದಾರೆ. ಆದ್ರೆ ಅವರಿಗೆ ಯಾವುದೇ ಸಿಎಂ ಸ್ಥಾನ ಸಿಗೋದಿಲ್ಲ. ಇನ್ನು, ಎರಡೂವರೆ ತಿಂಗಳಲ್ಲಿ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳತ್ತಾರೆಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಕಿತ್ತಾಟ, ಅಂದಿನ ಶಾಸಕಾಂಗ ಸಭೆಯ ರಹಸ್ಯ ಬಿಚ್ಚಿಟ್ಟ ರಾಯರೆಡ್ಡಿ

ರಾಜ್ಯದ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್​​ ನಾಯಕರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಸಿಎಂ ಆಗಿ ಇನ್ನೆರಡೂವರೆ ವರ್ಷ ಸಿದ್ದರಾಮಯ್ಯ ಮುಂದುವರಿಯುತ್ತಾರೋ ಅಥವಾ ಡಿಕೆಶಿ ಅವರಿಗೆ ಬಿಟ್ಟುಕೊಡ್ತಾರೋ ಎಂಬ ಪ್ರಶ್ನೆ ಉದ್ಭವಿಸಿದೆ. ದಲಿತ ನಾಯಕರಾದ ಸತೀಶ ಜಾರಕಿಹೊಳಿ, ಗೃಹ ಸಚಿವ ಜಿ. ಪರಮೇಶ್ವರ ಹೆಸರು ಕೂಡ ಸಿಎಂ ಸ್ಥಾನದ ರೇಸ್​​ನಲ್ಲಿದೆ. ಈ ನಡುವೆ ಹುಲಿಗೆಮ್ಮ ದೇವಿಯ ಜೋಗತಿ ಬೈಲಮ್ಮ ನುಡಿದಿರುವ ಭವಿಷ್ಯ ಭಾರಿ ಕುತೂಹಲ ಮೂಡಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:41 pm, Mon, 24 November 25