ಖಾಲಿ ಬಾಟಲ್ನಲ್ಲಿ ದೋಣಿ
ಆರನೇ ತರಗತಿಯಲ್ಲಿ ಓದುವ ಸರೋಜಾ ಒಂದು ಭೀಷ್ಮ ಕೆರೆಯಲ್ಲಿ ಖಾಲಿ ಬಾಟಲ್ ತೇಲಾಡುವುದನ್ನು ನೋಡಿದ್ದಾಳೆ. ಆ ಬಾಟಲ್ ಮೇಲೆ ಇರುವೆಗಳು ಪ್ರಯಾಣ ಮಾಡಿದ್ದನ್ನು ನೋಡಿದ ಕೂಡಲೇ ಸರೋಜಾ ತಲೆಯಲ್ಲಿ ನಾವೂ ಈ ರೀತಿ ತೆಲುವ ದೋಣಿ ಮಾಡಿದರೆ ಆಗಬಹುದಾ ಅಂತ ವಿಚಾರ ಮಾಡಿದ್ದಾಳೆ. ಆಗ ಮಾರನೇ ದಿನ ಶಾಲೆಗೆ ಬಂದ ಸರೋಜಾ ತನ್ನಲ್ಲಿದ್ದ ಆಲೋಚನೆಗಳನ್ನು ವಿಜ್ಞಾನ ಶಿಕ್ಷಕರಾದ ಜಿ.ಬಿ ಹಾವನೂರ ಹಾಗೂ ಮುಖ್ಯೋಪಾಧ್ಯಾಯ ವಾಯ್ ಎಂ.ಕಟ್ಟಿ ಬಳಿ ಹೇಳಿಕೊಂಡಿದ್ದಾಳೆ. ಆಗ ವಿದ್ಯಾರ್ಥಿನಿ ಆಲೋಚನೆಗೆ ಮೆಚ್ಚಿದ ಶಿಕ್ಷಕರು ಹೇಗೆ ಮಾಡುವ ವಿಚಾರವಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಆಗ ತನ್ನ ಆಲೋಚನೆಯನ್ನು ಶಿಕ್ಷಕರ ಮುಂದೆ ವಿವರವಾಗಿ ಹೇಳಿದ್ದಾಳೆ. ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಸುಮಾರ 1 ಲೀಟರ್ನ 195 ಖಾಲಿ ಕುಡಿಯವ ನೀರಿನ ಬಾಟಲ್ಗಳನ್ನು ಸಂಗ್ರಹ ಮಾಡಿದ್ದಾರೆ. ಬಿದರಿನ ಕಟ್ಟಿಗೆ ಬಳಸಿಕೊಂಡು ಉದ್ದ ಮೂರು ಫೀಟ್ ಅಗಲ ಮೂರು ಫೀಟ್ ಆಕಾರದಲ್ಲಿ ತೇಲುವ ದೋಣಿ ನಿರ್ಮಾಣ ಮಾಡಿದ್ದಾರೆ. ದೋಣಿ ಸುಮಾರು 90 ಭಾರ ಹೊತ್ತು ನೀರಿನಲ್ಲಿ ತೇಲುತ್ತದೆ. ವಿದ್ಯಾರ್ಥಿಗಳು ಪೂರ್ಣ ಮಾಡಿದ ಬಳಿಕ ಗದಗ ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಶಿಕ್ಷಕರು ಹಾಗೂ ಮಕ್ಕಳು ದೋಣಿಯಲ್ಲಿ ಕುಳಿತು ಪ್ರಯೋಗ ಮಾಡಿದ್ದು, ವಿದ್ಯಾರ್ಥಿಗಳ ಆವಿಷ್ಕಾರ ಯಶಸ್ಸು ಆಗಿದೆ.
ನೀರಿನಲ್ಲಿ ದೋಣಿಯನ್ನು ಬಿಡುತ್ತಿದ್ದಾರೆ
ದೋಣಿಯಲ್ಲಿ ಸಾಗುತ್ತಿದ್ದಾರೆ
ತೇಲುವ ದೋಣಿ ಮಾಡಲು ಎಷ್ಟು ಬಾಟಲ್ಗಳು ಬಳಕೆ ಮಾಡಿದ್ದಾರೋ ಅದರ ಅರ್ಧದಷ್ಟು ಭಾರ ಹೊತ್ತುಕೊಂಡು ಸಾಗುತ್ತದೆ. ಮಕ್ಕಳ ಸಾಧನೆಗೆ ಇಡೀ ಶಿಕ್ಷಕರ ವೃದ್ಧ ಅಭಿನಂದನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹದಲ್ಲಿ ಸಾಕಷ್ಟು ಅವಘಡಗಳು ನಡೆದಿವೆ. ಇಂಥಹ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರು ಯಾವುದೇ ಖರ್ಚು ಇಲ್ಲದೇ ವೇಸ್ಟ್ ಬಾಟಲ್ಗಳಿಂದ ತೇಲವು ದೋಣಿ ಮಾಡಿಕೊಂಡರೆ ಅಪಾಯದಲ್ಲಿ ಸಹಾಯವಾಗುತ್ತದೆ ಎನ್ನುವ ಸಂದೇಶ ಸರ್ಕಾರಿ ಶಾಲೆಯ ಮಕ್ಕಳು ನೀಡಿದ್ದಾರೆ.
ಶಾಲೆಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕಿ
ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಇದನ್ನೂ ಓದಿ
Yuvarathnaa Trailer: ಕೌಂಟರ್ ಕೊಟ್ರೆ ಎನ್ಕೌಂಟರ್; ಯುವರತ್ನ ಟ್ರೇಲರ್ನಲ್ಲಿ ಮಿಂಚಿದ ಪುನೀತ್ ರಾಜ್ಕುಮಾರ್