AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಬಾಟಲ್​ಗಳಲ್ಲಿ ದೋಣಿ ನಿರ್ಮಿಸಿ ಯಶಸ್ಸು ಕಂಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಗದಗ ನಗರದ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಧನೆ ಎಲ್ಲರನ್ನು ದಂಗು ಬಡಿಸಿದೆ. ಮಕ್ಕಳು ಸುಡಗಾಡ ಸಿದ್ದರು. ಅಲೆಮಾರಿ ಜನಾಂಗದ ಕುಟುಂಬದ ಮಕ್ಕಳು. ಈ ಮಕ್ಕಳ ಮಾತೃಭಾಷೆ ತೆಲುಗು. ಇಂಥಹ ಮಕ್ಕಳ ಮನಸ್ಸಿನಲ್ಲಿ ಕನ್ನಡ ಅರಳಿಸಿದ ಕೀರ್ತಿ ಸರ್ಕಾರಿ ಶಾಲೆಯ ಶಿಕ್ಷಕರದ್ದು.

ಗದಗ: ಬಾಟಲ್​ಗಳಲ್ಲಿ ದೋಣಿ ನಿರ್ಮಿಸಿ ಯಶಸ್ಸು ಕಂಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
ದೋಣಿಯಲ್ಲಿ ಸಾಗುತ್ತಿರುವ ವಿದ್ಯಾರ್ಥಿನಿಯರು
sandhya thejappa
|

Updated on: Mar 20, 2021 | 3:36 PM

Share

ಗದಗ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಜನರೆ ಹೆಚ್ಚು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ. ಸೌಲಭ್ಯ ಇರಲ್ಲ ಎನ್ನುವ ಆರೋಪ ಸಾಮಾನ್ಯ. ಆದರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮಕ್ಕಳ ಅದ್ಭುತ ಆವಿಷ್ಕಾರ ಖಾಸಗಿ ಶಾಲೆಗಳು ನಾಚಿಸುವಂತಿದೆ. ಮಕ್ಕಳ ಮಾತೃಭಾಷೆ ತೆಲಗು ಆದರೂ ಕನ್ನಡ ಶಾಲೆಯ ಮಕ್ಕಳ ಸಾಧನೆಗೆ ಅಲ್ಲಿನ ಶಿಕ್ಷರೇ ಫಿದಾ ಆಗಿದ್ದಾರೆ. ಸ್ಲಂ ಮಕ್ಕಳ ಒಂದು ಸಾಧನೆ ಎಲ್ಲರನ್ನೂ ಬೆರಗು ಮಾಡುವಂತಿದೆ. ಗದಗ ನಗರದ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಧನೆ ಎಲ್ಲರನ್ನು ದಂಗು ಬಡಿಸಿದೆ. ಮಕ್ಕಳು ಸುಡಗಾಡ ಸಿದ್ದರು. ಅಲೆಮಾರಿ ಜನಾಂಗದ ಕುಟುಂಬದ ಮಕ್ಕಳು. ಈ ಮಕ್ಕಳ ಮಾತೃಭಾಷೆ ತೆಲುಗು. ಇಂಥಹ ಮಕ್ಕಳ ಮನಸ್ಸಿನಲ್ಲಿ ಕನ್ನಡ ಅರಳಿಸಿದ ಕೀರ್ತಿ ಸರ್ಕಾರಿ ಶಾಲೆಯ ಶಿಕ್ಷಕರದ್ದು. ಸುಡಗಾಡ ಸಿದ್ದರು, ಅಲೆಮಾರಿ ಜನಾಂಗದವರ ಬದುಕು ಗುಡಿಸಲಿನಲ್ಲಿ. ತಾವು ದುಡಿದು ಹೊಟ್ಟೆಗೆ ಹಾಕುವಾಗಲೇ ಬದುಕು ಸಾಕಾಗಿರುತ್ತದೆ. ಈ ನಡುವೆ ಮಕ್ಕಳಿಗೆ ಶಾಲೆ ಎನ್ನುವುದು ಮರಿಚಿಕೆ. ಇಂಥಹದರಲ್ಲಿ ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತುಂಬೆಲ್ಲಾ ಅಲೆಮಾರಿ ಜನಾಂಗದ ಮಕ್ಕಳೇ ಹೆಚ್ಚು. ಶಾಲೆಯ ಮಕ್ಕಳ ಮನದಲ್ಲಿ ಕನ್ನಡದ ದೀಪವನ್ನು ಶಿಕ್ಷಕರು ಹಚ್ಚಿದ್ದಾರೆ. ಒಳ್ಳೆಯ ಪ್ರತಿಭೆಯನ್ನಾಗಿ ಮಾಡಿದ್ದಾರೆ.

ಖಾಲಿ ಬಾಟಲ್​ನಲ್ಲಿ ದೋಣಿ ಆರನೇ ತರಗತಿಯಲ್ಲಿ ಓದುವ ಸರೋಜಾ ಒಂದು ಭೀಷ್ಮ ಕೆರೆಯಲ್ಲಿ ಖಾಲಿ ಬಾಟಲ್ ತೇಲಾಡುವುದನ್ನು ನೋಡಿದ್ದಾಳೆ. ಆ ಬಾಟಲ್ ಮೇಲೆ ಇರುವೆಗಳು ಪ್ರಯಾಣ ಮಾಡಿದ್ದನ್ನು ನೋಡಿದ ಕೂಡಲೇ ಸರೋಜಾ ತಲೆಯಲ್ಲಿ ನಾವೂ ಈ ರೀತಿ ತೆಲುವ ದೋಣಿ ಮಾಡಿದರೆ ಆಗಬಹುದಾ ಅಂತ ವಿಚಾರ ಮಾಡಿದ್ದಾಳೆ. ಆಗ ಮಾರನೇ ದಿನ ಶಾಲೆಗೆ ಬಂದ ಸರೋಜಾ ತನ್ನಲ್ಲಿದ್ದ ಆಲೋಚನೆಗಳನ್ನು ವಿಜ್ಞಾನ ಶಿಕ್ಷಕರಾದ ಜಿ.ಬಿ ಹಾವನೂರ ಹಾಗೂ ಮುಖ್ಯೋಪಾಧ್ಯಾಯ ವಾಯ್ ಎಂ.ಕಟ್ಟಿ ಬಳಿ ಹೇಳಿಕೊಂಡಿದ್ದಾಳೆ. ಆಗ ವಿದ್ಯಾರ್ಥಿನಿ ಆಲೋಚನೆಗೆ ಮೆಚ್ಚಿದ ಶಿಕ್ಷಕರು ಹೇಗೆ ಮಾಡುವ ವಿಚಾರವಿದೆ ಅಂತ ಪ್ರಶ್ನೆ ಮಾಡಿದ್ದಾರೆ. ಆಗ ತನ್ನ ಆಲೋಚನೆಯನ್ನು ಶಿಕ್ಷಕರ ಮುಂದೆ ವಿವರವಾಗಿ ಹೇಳಿದ್ದಾಳೆ. ಆಗ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಸುಮಾರ 1 ಲೀಟರ್​ನ 195 ಖಾಲಿ ಕುಡಿಯವ ನೀರಿನ ಬಾಟಲ್​ಗಳನ್ನು ಸಂಗ್ರಹ ಮಾಡಿದ್ದಾರೆ. ಬಿದರಿನ ಕಟ್ಟಿಗೆ ಬಳಸಿಕೊಂಡು ಉದ್ದ ಮೂರು ಫೀಟ್ ಅಗಲ ಮೂರು ಫೀಟ್ ಆಕಾರದಲ್ಲಿ ತೇಲುವ ದೋಣಿ ನಿರ್ಮಾಣ ಮಾಡಿದ್ದಾರೆ. ದೋಣಿ ಸುಮಾರು 90 ಭಾರ ಹೊತ್ತು ನೀರಿನಲ್ಲಿ ತೇಲುತ್ತದೆ. ವಿದ್ಯಾರ್ಥಿಗಳು ಪೂರ್ಣ ಮಾಡಿದ ಬಳಿಕ ಗದಗ ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಶಿಕ್ಷಕರು ಹಾಗೂ ಮಕ್ಕಳು ದೋಣಿಯಲ್ಲಿ ಕುಳಿತು ಪ್ರಯೋಗ ಮಾಡಿದ್ದು, ವಿದ್ಯಾರ್ಥಿಗಳ ಆವಿಷ್ಕಾರ ಯಶಸ್ಸು ಆಗಿದೆ.

ನೀರಿನಲ್ಲಿ ದೋಣಿಯನ್ನು ಬಿಡುತ್ತಿದ್ದಾರೆ

ದೋಣಿಯಲ್ಲಿ ಸಾಗುತ್ತಿದ್ದಾರೆ

ತೇಲುವ ದೋಣಿ ಮಾಡಲು ಎಷ್ಟು ಬಾಟಲ್​ಗಳು ಬಳಕೆ ಮಾಡಿದ್ದಾರೋ ಅದರ ಅರ್ಧದಷ್ಟು ಭಾರ ಹೊತ್ತುಕೊಂಡು ಸಾಗುತ್ತದೆ. ಮಕ್ಕಳ ಸಾಧನೆಗೆ ಇಡೀ ಶಿಕ್ಷಕರ ವೃದ್ಧ ಅಭಿನಂದನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹದಲ್ಲಿ ಸಾಕಷ್ಟು ಅವಘಡಗಳು ನಡೆದಿವೆ. ಇಂಥಹ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರು ಯಾವುದೇ ಖರ್ಚು ಇಲ್ಲದೇ ವೇಸ್ಟ್ ಬಾಟಲ್​ಗಳಿಂದ ತೇಲವು ದೋಣಿ ಮಾಡಿಕೊಂಡರೆ ಅಪಾಯದಲ್ಲಿ ಸಹಾಯವಾಗುತ್ತದೆ ಎನ್ನುವ ಸಂದೇಶ ಸರ್ಕಾರಿ ಶಾಲೆಯ ಮಕ್ಕಳು ನೀಡಿದ್ದಾರೆ.

ಶಾಲೆಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕಿ

ಶ್ರೀರಾಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಇದನ್ನೂ ಓದಿ

Ripped Jeans;ತೀರತ್​ ಸಿಂಗ್ ರಾವತ್ ಅವರಿಗೊಂದು ಪತ್ರ: ಹೆಣ್ಣುಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸಮಾನತೆಯ ಬಗ್ಗೆ ಯೋಚಿಸಬೇಕೆನ್ನಿಸುತ್ತಿಲ್ಲವೆ?

Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!