ಸಂಸ್ಥೆಯ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. Hunger has no Religion
ದಿನಕ್ಕೆ ನೂರಾರು ಜನರು ಉದ್ಯೋಗ ಅರಿಸಿ, ಹಳ್ಳಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಾರೆ. ಹೀಗೆ ಬರುವ ಜನರು ಕೆಲಸ ಸಿಗದೇ ತುತ್ತು ಅನ್ನಕ್ಕಾಗಿ ಪರದಾಟವನ್ನು ನಡೆಸುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ, ಮಧ್ಯಾಹ್ನದ ವೇಳೆಯಲ್ಲಿ ಅನ್ನ, ಬೆಳೆ ಸಾರು, ಜೊತೆಗೆ ಶೀರಾ ಸಹ ನೀಡಿ ಹೊಟ್ಟೆ ತುಂಬಿಸುವ ಕಾರ್ಯವನ್ನು ಈ ತಂಡ ಮಾಡುತ್ತಿದೆ.ಇನ್ನು ಇವರ ಈ ಸಹಾಯಹಸ್ತಕ್ಕೆ ಹಸಿದ ಜೀವಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅನ್ನ ನೀಡುವ ಕೆಲಸದ ಹಿಂದಿದೆ ಹಸಿವಿನ ಮಹತ್ವ:
ಈ ಸಂಸ್ಥೆಯ ಸದಸ್ಯರು ಮಾಡಿರುವ ನಿರ್ಧಾರವೇ ಅನ್ನ ನೀಡುವ ಕೆಲಸದ ಹಿಂದಿದೆ ಹಸಿವಿನ ಮಹತ್ವ ಎಂಬ ಉದ್ದೇಶದಿಂದ. ಇದರ ಅರ್ಥ ಯಾರು ಕೂಡ ಹಸಿವಿನಿಂದ ನರಳಬಾರದು, ಹಸಿವಿನಿಂದ ಮಲಗಬಾರದು ಎನ್ನುವುದಾಗಿದೆ. ಹೀಗಾಗಿ ನಗರದ ತುಂಬೆಲ್ಲಾ ಎರಡೂ ಹೊತ್ತು ಓಡಾಟ ನಡೆಸುವ ಈ ಗುಂಪು ಭಿಕ್ಷುಕರು, ಕಡುಬಡವರಿಗೆ ಅನ್ನ ಹಾಕುವ ಕಾರ್ಯ ಮಾಡುತ್ತಿದೆ.
ಹಂಗರ್ ಹ್ಯಾಸ್ ನೋ ರಿಲಿಜನ್ ಧ್ಯೇಯದ ಅಡಿಯಲ್ಲಿ ಅನ್ನದಾನ
ಈ ತಂಡದಿಂದ ನಗರದ ರೈಲ್ವೇ ನಿಲ್ದಾಣ, ಬಸ್ ನಿಲ್ದಾಗಳಲ್ಲಿ ಹಸಿವಿನಿಂದ ಬಳಲುವ ಎಲ್ಲರಿಗೂ ಒಂದು ತುತ್ತು ಅನ್ನ ನೀಡಿ ಅನ್ನದಾತರಾಗುತ್ತಿದ್ದಾರೆ. ತಾವು ತಮ್ಮ ಕಷ್ಟ ಜೀವನದಲ್ಲಿ ಉಪವಾಸ ಇದ್ದೆವು. ಹೀಗಾಗಿಯೇ ನಾವು ಅನುಭವಿಸಿದ ಕಷ್ಟ ಯಾರಿಗೂ ಬರಬಾರದು ಎನ್ನುವ ಸದುದ್ದೇಶದಿಂದ ಹಸಿವು ಮುಕ್ತ ನಗರವನ್ನಾಗಿಸುವ ಧ್ಯೇಯದೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ಊಟ ಪಡೆಯುತ್ತಿರುವ ದೃಶ್ಯ
ಒಟ್ಟಿನಲ್ಲಿ ದೇಶದ ಹಲವೆಡೆ ಜಾತಿ ಭೇದ ಭಾವ ಮಾಡಿಕೊಂಡು ಗುದ್ದಾಟ ನಡೆಸಿದರೆ, ಇಲ್ಲೊಂದು ಮುಸ್ಲಿಂ ಯುವಕ ಸಂಸ್ಥೆ ಹಸಿದವರಿಗೆ ಯಾವ ಜಾತಿ, ನಾವೆಲ್ಲರೂ ಒಂದೇ ಎಂಬ ಜಾಗೃತಿಯ ಜೊತೆಗೆ, ಹಸಿವು ನೀಗಿಸುತ್ತಿರುವ ಈ ಸಂಸ್ಥೆಗೆ, ಹ್ಯಾಟ್ಸಾಪ್ ಹೇಳಲೆಬೇಕು. ಇಂತಹ ಸಾಮಾಜಿಕ ಕಾರ್ಯ ಇನ್ನಷ್ಟು ವ್ಯಾಪಿಸಲಿ ಎಂಬುವುದೇ ನಮ್ಮೆಲ್ಲರ ಆಶಯವಾಗಿದೆ.
ಊಟ ಸೇವಿಸುತ್ತಿರುವ ಚಿತ್ರಣ
ಇದನ್ನೂ ಓದಿ: ಹಣ ಕೊಡದೆ ನಿರ್ಗತಿಕರ ಹೊಟ್ಟೆ ತುಂಬಿಸಲು ಹೊಸ ಐಡಿಯಾ.. ‘ಡಿಎಫ್’ ಫುಡ್ ಕಾರ್ಡ್ ಕೊಟ್ಟರೆ ಊಟ ಉಚಿತ