AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ನಾಳೆ ಅಹಿಂದ ವರ್ಗ ರಾಜಭವನ ಚಲೋ

ನಾಳೆ‌ ರಾಜಭವನ ಚಲೋಗೆ ಕರೆ ವಿಚಾರವಾಗಿ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ರಾಜ್ಯಮಟ್ಟದ ಸಂಘ ಸಂಸ್ಥೆಗಳು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಬೆಂಬಲ ಕೊಡುತ್ತೇವೆ. ಎಲ್ಲಾ ಶಾಸಕರು ಮಂತ್ರಿಗಳು ಕೂಡ ನಾಳೆ ರಾಜ ಭವನಕ್ಕೆ ಹೋಗಿ ನೀವು ಮಾಡುತ್ತಿರುವುದು ಸರಿನಾ ಅಂತ ರಾಜ್ಯಪಾಲರನ್ನು ಕೇಳುತ್ತೇವೆ ಎಂದಿದ್ದಾರೆ.

ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ನಾಳೆ ಅಹಿಂದ ವರ್ಗ ರಾಜಭವನ ಚಲೋ
ಮುಡಾ ಹಗರಣ: ರಾಜ್ಯಪಾಲರ ವಿರುದ್ಧ ನಾಳೆ ಅಹಿಂದ ವರ್ಗ ರಾಜಭವನ ಚಲೋ
ನವೀನ್ ಕುಮಾರ್ ಟಿ
| Edited By: |

Updated on: Aug 26, 2024 | 6:24 PM

Share

ದೇವನಹಳ್ಳಿ, ಆಗಸ್ಟ್​ 26: ಮುಡಾ ಹಗರಣ ವಿರುದ್ಧ ಸಿಎಂ ಸಿದ್ದರಾಮಯ್ಯ (Siddaramaiah) ಈಗಾಗಲೇ ಕಾನೂನು ಸಮರ ನಡೆಸುತ್ತಿದ್ದಾರೆ. ಹೋರಾಟಕ್ಕಿಳಿದ ಸಿಎಂಗೆ, ಸಚಿವರು, ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್​ ಬೆಂಬಲವೂ ಸಿಕ್ಕಿದೆ. ಈ ಮಧ್ಯೆ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ರಾಜ್ಯದ ಶೋಷಿತ ವರ್ಗಗಳ ಮಹಾ ಒಕ್ಕೂಟ ಹಿಂದುಳಿದ ವರ್ಗದ ಅಲ್ಪಸಂಖ್ಯಾತರು ನಾಳೆ‌ ರಾಜಭವನ ಚಲೋಗೆ ಕರೆ ನೀಡಲಾಗಿದೆ.

ರಾಜಭವನ ಚಲೋಗೆ ನಾವು ಬೆಂಬಲ ಕೊಡುತ್ತೇವೆ: ಕೆ.ಹೆಚ್ ಮುನಿಯಪ್ಪ

ಈ ವಿಚಾರವಾಗಿ ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ,  ರಾಜ್ಯಮಟ್ಟದ ಸಂಘ ಸಂಸ್ಥೆಗಳು ನಾಳೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾವು ಬೆಂಬಲ ಕೊಡುತ್ತೇವೆ. ಎಲ್ಲಾ ಶಾಸಕರು ಮಂತ್ರಿಗಳು ಕೂಡ ನಾಳೆ ರಾಜ ಭವನಕ್ಕೆ ಹೋಗಿ ನೀವು ಮಾಡುತ್ತಿರುವುದು ಸರಿನಾ ಅಂತ ರಾಜ್ಯಪಾಲರನ್ನು ಕೇಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ: ವಿಡಿಯೋ ಸಮೇತ ‘ವೈಟ್ನರ್‌’ ಹಿಂದಿರುವ ಅಸಲಿ ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಕಾಂಗ್ರೆಸ್​ನಲ್ಲಿ ಕೂಡ ಶೋಷಿತ ವರ್ಗದ ಸಮುದಾಯಗಳು ಇವೆ. ಸಂವಿಧಾನಕ್ಕೆ ವಿರುದ್ಧವಾಗಿ ಅವರು ಷಡ್ಯಂತ್ರ ಹಾಕ್ಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ತೆಗಿಯಬೇಕು ಎನ್ನುವ ಚಿಂತನೆಯಲ್ಲಿ ಕೇವಲ ಸಿದ್ದರಾಮಯ್ಯನವರ ಹೆಸರನ್ನ ಮುಂದೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸೈಟ್​ನ ವಿಷಯ ಭಾರಿ ದೊಡ್ಡದೇನಲ್ಲ, ಇದರ ಜೊತೆಯಲ್ಲಿ ರಾಜ್ಯಪಾಲರ ಸಾಕಷ್ಟು ವಿಷಯಗಳು ಅವರ ಮುಂದೆ ಪೆಂಡಿಂಗ್ ಇವೆ. ಆ ಪೆಂಡಿಂಗ್ ಇರೋ ಯಾವ ವಿಷಯಗಳನ್ನು ಎತ್ತಿಕೊಂಡಿಲ್ಲ. ದಿನಾಂಕ 26 ರಂದು ಅಬ್ರಹಾಂ 11 ಗಂಟೆಗೆ ಅರ್ಜಿ ಕೊಟ್ಟರೆ ಸಾಯಂಕಾಲ 10 ಗಂಟೆಗೆ ನೋಟಿಸ್ ಕೊಡುತ್ತಾರೆ. ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡುತ್ತಾರೆ. ಹಾಗದರೆ ಈ ಹಿಂದಿನ ಅರ್ಜಿಗಳಿಗೆ ಅನ್ವಯಿಸುವುದಿಲ್ಲವಾ?  ಕೇವಲ ಒಂದು ಸೈಟ್ ವಿಷಯದಲ್ಲಿ ಮುಖ್ಯಮಂತ್ರಿಗೆ ಒಂದು ಸಂಬಂಧ ಇಲ್ಲ, ಫೋನ್ ಮಾಡಿಲ್ಲ ಅರ್ಜಿ ಬರಲಿಲ್ಲ, ಬಿಜೆಪಿಯವರ ಆಡಳಿತದಲ್ಲಿದ್ದ ಮುಡಾದಲ್ಲಿ ಈ ಸೈಟನ್ನು ಅವರ ಜಮೀನಿನ ಬದಲಾಗಿ ಅವರು ತೆಗೆದುಕೊಂಡಿರೋದು, ಈ ಹಿಂದೆ ಒಬ್ಬ ಹೆಣ್ಣುಮಗಳು ನಮಗೆ ಅನ್ಯಾಯ ಆಗಿದೆ ಅಂತ ಕೋರ್ಟ್​​ಗೆ ಹೋದಾಗ ಅವರಿಗೆ 4 ಎಕರೆನಾ ವಾಪಾಸ್ ಕೊಡಿ ಅಂತ ಹೇಳಿತ್ತು.

ಇದನ್ನೂ ಓದಿ: ಕೆಂಪಣ್ಣ ಆಯೋಗದ ವರದಿ ಬಿಡುಗಡೆ ಮಾಡಿದ್ರೆ: ಸಿಎಂ ಪಂಚೆ, ಶರ್ಟ್ ಎಲ್ಲ ಮಸಿ ಆಗೋದು ಗ್ಯಾರಂಟಿ

ಇಲ್ಲಿ ಕಾನೂನು ಏನಿದೆ ಇವರು ಅರ್ಧ ತಗೊಂಡು ಅರ್ಧ ಕೊಡಿ ಅಂದ್ದರು. ಆದರೆ ಅರ್ಧನು ಕೊಡಲಿಲ್ಲ. ಅದು ಅವರ ಅಣ್ಣ ಕೊಟ್ಟಿರುವ ಜಮೀನು. ಸಿದ್ದರಾಮಯ್ಯನವರಿಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಯಾವುದೇ ಒಂದು ದಾಖಲೆಯಲ್ಲಿ ಉಲ್ಲೇಖವಿಲ್ಲ. ಇದು ರಾಜಕೀಯವಾಗಿ ಅವರ ಮೇಲೆ ಷಡ್ಯಂತ್ರ ನಡೆಯುತ್ತಿದೆ. ಕೇವಲ ಸಿದ್ದರಾಮಯ್ಯನವರ ಮೇಲೆ ಅಲ್ಲ, ಕಾಂಗ್ರೆಸ್ ಪಕ್ಷವನ್ನ ತೆಗೆಬೇಕು, ಸರ್ಕಾರ ತೆಗೆಯಬೇಕು ಅಂತ ಒಂದು ಷಡ್ಯಂತ್ರ ನಡುತ್ತಿದೆ. ನಾವೆಲ್ಲ ಮೆಟ್ಟಿನಿಂತಿದ್ದೇವೆ. ಹೋರಾಟಕ್ಕೆ ಸನ್ನದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More