AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಪೂಜೆ: ಆಸ್ಟ್ರೇಲಿಯಾದಲ್ಲಿರುವ ಹೊಸ ಮನೆಗೆ ಮೈಸೂರಿನಿಂದ ಪೂಜೆ

ಗೃಹಪ್ರವೇಶ ನಡೆದಿದ್ದು ದೂರದ ಆಸ್ಟ್ರೇಲಿಯಾದಲ್ಲಿ. ಮೂಲತಃ ಬೆಂಗಳೂರಿನ ದೀಪ್ತಿ ಎಂಬುವವರ ಮನೆಯಲ್ಲಿ. ದೀಪ್ತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಕೆಲಸದ ನಿಮಿತ್ತ ತೆರಳಿದ್ದರು. ಈಗ ಅಲ್ಲೇ ಒಂದು ಮನೆಯನ್ನು ಖರೀದಿ ಮಾಡಿದ್ದಾರೆ.

ಆನ್​ಲೈನ್​ ಪೂಜೆ: ಆಸ್ಟ್ರೇಲಿಯಾದಲ್ಲಿರುವ ಹೊಸ ಮನೆಗೆ ಮೈಸೂರಿನಿಂದ ಪೂಜೆ
ಆನ್​ಲೈನ್​ ಮೂಲಕ ಪೂಜೆ
TV9 Web
| Edited By: |

Updated on: Jun 17, 2021 | 10:16 AM

Share

ಮೈಸೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲವೂ ಆನ್​ಲೈನ್​ ಮುಖಾಂತರವೇ ಆಗುತ್ತಿದೆ. ಶಿಕ್ಷಣ, ಕೆಲಸ ಆಯ್ತು. ಇದೀಗ ಶುಭ ಕಾರ್ಯಗಳ ಸರದಿ. ವಿದೇಶದ ಗೃಹಪ್ರವೇಶವನ್ನು ಮೈಸೂರಿನಲ್ಲೇ ಕುಳಿತು ಧಾರ್ಮಿಕವಾಗಿ ನೆರವೇರಿಸಿದ್ದಾರೆ. ಮೈಸೂರಿನ ಡಾ.ಭ್ರಮರಾಂಭ ಮಹೇಶ್ವರಿಯವರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ದೇಶದ ಮೊದಲ ಮಹಿಳಾ ಪುರೋಹಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ಶ್ರೀರಾಂಪುರದ ತಮ್ಮ ಮನೆಯಲ್ಲೇ ಕುಳಿತು ಆಸ್ಟ್ರೇಲಿಯಾದಲ್ಲಿ ಇರುವ ನೂತನ ಮನೆಯ ಗೃಹಪ್ರವೇಶವನ್ನು ಧಾರ್ಮಿಕವಾಗಿ ಮಾಡಿಕೊಟ್ಟಿದ್ದಾರೆ.

ಗೃಹಪ್ರವೇಶ ನಡೆದಿದ್ದು ದೂರದ ಆಸ್ಟ್ರೇಲಿಯಾದಲ್ಲಿ. ಮೂಲತಃ ಬೆಂಗಳೂರಿನ ದೀಪ್ತಿ ಎಂಬುವವರ ಮನೆಯಲ್ಲಿ. ದೀಪ್ತಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಕೆಲಸದ ನಿಮಿತ್ತ ತೆರಳಿದ್ದರು. ಈಗ ಅಲ್ಲೇ ಒಂದು ಮನೆಯನ್ನು ಖರೀದಿ ಮಾಡಿದ್ದಾರೆ. ಹೊಸ ಮನೆಯ ಗೃಹಪ್ರವೇಶವನ್ನು ಧಾರ್ಮಿಕವಾಗಿ ಸಂಪ್ರದಾಯಬದ್ಧವಾಗಿ ಮಾಡಬೇಕು ಅನ್ನೋದು ದೀಪ್ತಿ ಅವರ ಆಸೆ. ಆದರೆ ಕೊರೊನಾದ ಈ ವೇಳೆಯಲ್ಲಿ ಅದು ಅಸಾಧ್ಯವಾಗಿತ್ತು. ಹೀಗಾಗಿ ಆನ್​ಲೈನ್​ ಮೂಲಕವೇ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಮೂರು ದಿನದ ಮೊದಲೇ ದೀಪ್ತಿ ವಿಡಿಯೋ ಕಾಲ್ ಮೂಲಕ ಹೊಸ ಮನೆಯನ್ನು ಭ್ರಮರಾಂಭ ಮಹೇಶ್ವರಿ ಅವರಿಗೆ ತೋರಿಸಿದ್ದಾರೆ. ಅದರಂತೆ ಮನೆಯ ಯಾವ ಜಾಗದಲ್ಲಿ ಪೂಜೆ ಮಾಡಬೇಕು ಎನ್ನುವುದು ನಿರ್ಧಾರವಾಗಿದೆ. ಕೊನೆಗೆ ಪೂಜೆಯ ದಿನ ಗಣ ಹೋಮ ಬಲಿ ಪೂಜೆ ಸೇರಿದಂತೆ ಗೃಹ ಪ್ರವೇಶದ ಎಲ್ಲಾ ಪೂಜಾ ಕೈಂಕರ್ಯಗಳನ್ನು ಮಂತ್ರದೊಂದಿಗೆ ಮಾಡಿಕೊಡಲಾಗಿದೆ.

ಮೈಸೂರಿನ ಡಾ.ಭ್ರಮರಾಂಭ ಮಹೇಶ್ವರಿಯವರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ

ಇದನ್ನೂ ಓದಿ

ಬಾಯ್ತುಂಬ ನಗುವುದರ ಮೂಲಕ ಆರೋಗ್ಯವನ್ನೂ ಸುಧಾರಿಸಿಕೊಳ್ಳಿ; ಉತ್ತಮ ಸ್ನೇಹವನ್ನೂ ಕಾಪಾಡಿಕೊಳ್ಳಿ

ನಗ್ನವಾಗಿ ನಟಿಸುತ್ತೀರಾ ಎಂದು ಕೇಳಿದ ರಿಪೋರ್ಟರ್​ಗೆ ನಟಿ ಕರೀನಾ ಕಪೂರ್​ ನೀಡಿದ ಉತ್ತರ ಹೇಗಿತ್ತು?

(Mysore priest performs Online House warming which is built in Australia though online Video call)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್