AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಮತ್ತೆ ನೋಡಬೇಕೆನಿಸುವ ಭಕ್ತಿಪ್ರದಾನ, ಪ್ರಕೃತಿದತ್ತ ಚುಂಚನಕಟ್ಟೆ ಸೀತೆ ಮಡು ವೈಭೋಗ, ಏನಿದರ ಸ್ಥಳ ಪುರಾಣ?

ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಇರುವ ಸೀತೆ ಮಡು ಇಂದಿಗೂ ಕೂಡ ಅನೇಕ ಕಥೆಗಳನ್ನು ವಿವರಿಸುತ್ತದೆ. ರಾಮಾಯಣದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರಿಗೆ ವನವಾಸದ ಪ್ರಸಂಗ ಎದುರಗುತ್ತಾದೆ. ಆ ಸಮಯದಲ್ಲಿ ಈಗಿನ ಕೆ.ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ (ಈ ಹಿಂದಿನ ಚುಂಚಾರಣ್ಯಕ್ಕೆ -Chunchanakatte Waterfall) ಕ್ಕೆ ಬಂದಿದ್ದರು. ಚುಂಚನಕಟ್ಟೆಯಲ್ಲಿ ಕೆಲವು ದಿನಗಳ ಕಾಲ ಉಳಿಯುತ್ತಾರೆ. ಈ ಸಮಯಲ್ಲಿ‌ ಸೀತೆ ಸ್ನಾನ ಮಾಡಬೇಕಾದ ಸ್ಥಿತಿ ಎದುರಾಗುತ್ತೆ.

ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​|

Updated on: Jan 19, 2024 | 5:39 PM

Share

ಹಿಂದೂಗಳ ಅನೇಕ ವರ್ಷಗಳ ಕನಸಾಗಿದ್ದ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಒಂದೆರಡು ದಿನಗಳಷ್ಟೇ ಬಾಕಿ ಉಳಿದಿವೆ. ಮೈಸೂರಿನಲ್ಲಿ ಸಿಕ್ಕ ಕೃಷ್ಣ ಶಿಲೆ, ಮೈಸೂರಿನ ಶಿಲ್ಪಿಯಿಂದಲೇ ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲ ಮೂರ್ತಿಯಾಗಿ ರೂಪುಗೊಂಡಿದೆ. ಇದಷ್ಟೆ ಅಲ್ಲದೆ ಮೈಸೂರಿಗೂ ರಾಮನಿಗೂ ಸಾಕಷ್ಟು ನಂಟಿದ್ದು ಐತಿಹಾಸಿಕ ಕುರುಹುಗಳು ಶ್ರೀರಾಮನ ಜೀವಂತಿಕೆಯನ್ನ ಸಾರಿ ಹೇಳ್ತಿವೆ.

ರಾಜ್ಯದ ಹಲವೆಡೆ ರಾಮನ ಹೆಜ್ಜೆ ಗುರುತಿದೆ. ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರು ರಾಜ್ಯದ ಅನೇಕ ಸ್ಥಳಗಳಲ್ಲಿ ಸುತ್ತಾಟ ನಡೆಸಿ ಪೌರಾಣಿಕ ಕುರುಹುಗಳನ್ನ ಬಿಟ್ಟು ಹೋಗಿದ್ದಾರೆ. ಹೌದು. ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಇರುವ ಸೀತೆ ಮಡು ಇಂದಿಗೂ ಕೂಡ ಅನೇಕ ಕಥೆಗಳನ್ನು ವಿವರಿಸುತ್ತದೆ. ಏನಿದು ಸೀತೆ ಮಡು ಇತಿಹಾಸ ಅನ್ನೋದನ್ನ ನೋಡೋದಾದ್ರೆ ರಾಮಾಯಣದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣರಿಗೆ ವನವಾಸದ ಪ್ರಸಂಗ ಎದುರಾಗುತ್ತದೆ. ಅವರು ವನವಾಸದ ಸಮಯದಲ್ಲಿ ಈಗಿನ ಕೆ.ಆರ್. ನಗರ ತಾಲ್ಲೂಕಿನ ಚುಂಚನಕಟ್ಟೆಗೆ (ಈ ಹಿಂದಿನ ಚುಂಚಾರಣ್ಯ) ಬಂದಿದ್ದರು. ರಾಮನ ಪರಿವಾರ ಚುಂಚನಕಟ್ಟೆಯಲ್ಲಿ ಕೆಲವು ದಿನಗಳ ಕಾಲ ಉಳಿಯುತ್ತಾರೆ. ಈ ಸಮಯದಲ್ಲಿ‌ ಸೀತೆ ಸ್ನಾನ ಮಾಡಬೇಕಾದ ಸ್ಥಿತಿ ಎದುರಾಗುತ್ತೆ.

ಈ ವೇಳೆ‌ ಎಲ್ಲಿಯೂ ಕೂಡ ನದಿ ಇರುವ ಸುಳಿವು ಸಿಗುವುದಿಲ್ಲವಂತೆ. ಆ ಸಮಯದಲ್ಲಿ ಲಕ್ಷ್ಮಣ ಸೀತೆಗಾಗಿ ಬಾಣವನ್ನು ನೆಲದ ಕಡೆಗೆ ಪ್ರಯೋಗ ಮಾಡುತ್ತಾನೆ. ಬಾಣವನ್ನು ಬಿಟ್ಟ ಜಾಗದಿಂದ ನೀರು ಚಿಮ್ಮುತ್ತದಂತೆ. ಆ ನೀರಿನಲ್ಲಿ ಸೀತೆ ಸ್ನಾನ ಮಾಡುತ್ತಾರೆ ಎನ್ನುವುದು ಹಿಂದೂ ಪುರಾಣದ ಮಾತು. ಈ‌ ರೀತಿ ಸೀತೆ ಸ್ನಾನ ಮಾಡುವ ಸ್ಥಳವನ್ನು ಇಂದಿಗೂ ಕೂಡ ಎಲ್ಲರೂ ಸೀತೆ ಮಡು ಎಂದು ಕರೆಯುತ್ತಾರೆ, ಜೊತೆಗೆ ಲಕ್ಷ್ಮಣ ಬಾಣವನ್ನು ಬಿಟ್ಟ ಸ್ಥಳವನ್ನು ಧನಷ್ಕೋಟಿ ಎಂದು ಕರೆಯುತ್ತಾರೆ ಎಂದು ಅರ್ಚಕರಾದ ನಾರಾಯಣ್ ಅಯ್ಯಂಗಾರ್ ಮಹತ್ವದ ಮಾಹಿತಿ ನೀಡುತ್ತಾರೆ.

ಜೊತೆಗೆ ಇಲ್ಲಿನ ಜನರ ವಿಶೇಷ ನಂಬಿಕೆಯೆಂದರೆ ನದಿಯಲ್ಲಿ ಹೆಚ್ಚು ನೀರು ಬಂದ ಸಮಯದಲ್ಲಿ ಸೀತೆ ಮಡುವಿನಲ್ಲಿ ಸೀಗೆಕಾಯಿ ಹಾಗೂ ಹರಿಶಿಣ ಬಣ್ಣದ ನೀರು ಬರುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ ಕೂಡ. ಇದಷ್ಟೆ ಅಲ್ಲದೆ ರಾಮ ಸೀತೆ ದೇವಸ್ಥಾನಕ್ಕೆ ಹೋದರೆ ನಮಗೆ ಹೆಚ್ಚು ಕಾಣಿಸುವುದು ರಾಮನ ಎಡ ಭಾಗದಲ್ಲಿ ಸೀತೆ ನಿಂತು ದರ್ಶನ ನೀಡ್ತಿರೋ ಮೂರ್ತಿ.

ಮೈಸೂರಿನ ಕೆ.ಅರ್. ನಗರ ತಾಲ್ಲೂಕಿನ ಚುಂಚನಕಟ್ಟೆಯಲ್ಲಿರೋ ಶ್ರೀ ರಾಮ ದೇವಸ್ಥಾನದಲ್ಲಿ ಸೀತೆ ರಾಮನ ಬಲ ಭಾಗದಲ್ಲಿ ನಿಂತು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ. ಈ ರೀತಿ ಬಲಭಾಗದಲ್ಲಿ ನಿಂತು ದರ್ಶನ ನೀಡುವುದಕ್ಕೂ ಒಂದು ಕಥೆಯಿದೆ. ಈ ಹಿಂದೆ ವನವಾಸದ ಸಮಯದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣ ಚುಂಚನಕಟ್ಟೆಗೆ ಅಗಮಿಸುತ್ತಾರೆ. ಈ ಸಮಯದಲ್ಲಿ ಚುಂಚನಕಟ್ಟೆಯಲ್ಲಿಯೇ ತೃಣಬಿಂದು ಮಹರ್ಷಿಗಳು ಬೀಡು ಬಿಟ್ಟಿರುತ್ತಾರೆ.

ಈ ವೇಳೆ ಲಕ್ಷ್ಮಣ ಧನುಸ್ಸು ಪ್ರಯೋಗ ಮಾಡಿ ನೀರು ಹರಿಸಿದ್ದ ಜಾಗವನ್ನು ಇದೇ ರೀತಿ ಹರಿಯುವ ರೀತಿಯಲ್ಲಿ ಮಾಡುವಂತೆ ರಾಮನನ್ನು ಕೇಳಿಕೊಳ್ಳುತ್ತಾರೆ ತೃಣಬಿಂದು ಮಹರ್ಷಿ. ಅದಷ್ಟೆ ಅಲ್ಲದೆ ಎಲ್ಲಾ ಕಡೆ ಸೀತಾ ಮಾತೆಯನ್ನು ತನ್ನ ಎಡ ಭಾಗದಲ್ಲಿ ನಿಲ್ಲಿಸಿ ದರ್ಶನ ನೀಡುತ್ತೀರಿ. ಆದರೆ ನನಗೆ ನೀವು ಸೀತೆ ಮಾತೆಯನ್ನು ತಮ್ಮ ಬಲ ಭಾಗದಲ್ಲಿ ನಿಲ್ಲಿಸಿ ದರ್ಶನ ಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದರಿಂದ ರಾಮ ತೃಣಬಿಂದು ಮಹರ್ಷಿಗಾಗಿ ಸೀತೆಯನ್ನು ಬಲಭಾಗದಲ್ಲಿ ನಿಲ್ಲಿಸಿ ದರ್ಶನ ನೀಡುತ್ತಾನೆ. ಈ ಕಾರಣದಿಂದ ಮಹರ್ಷಿಗಳು ಅದೇ ರೀತಿ ವಿಗ್ರಹಗಳನ್ನು ಕೆತ್ತನೆ ನಡೆಸಿ, ಪ್ರತಿಷ್ಠಾಪನೆ ಮಾಡುತ್ತಾರೆ.

ಒಟ್ಟಿನಲ್ಲಿ ಆ ಕಡೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದ್ರೆ, ಮತ್ತೊಂದೆಡೆ ರಾಮ ಬಿಟ್ಟು ಹೋದ ಕುರುಹುಗಳು ಅದರಲ್ಲೂ ನಮ್ಮ ಕರ್ನಾಟಕದಲ್ಲಿ ರಾಮನ ಇರುವಿಕೆಯನ್ನ ಸಾರಿ ಸಾರಿ ಹೇಳುತ್ತಿವೆ.

 ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ