AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ 4 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಮರಗಳ ನಾಶ; ರಸ್ತೆ ನಿರ್ಮಾಣಕ್ಕಾಗಿ ಉರುಳಿದ ಹಸಿರು ಮರಗಳು

ಒಂದೆಡೆ ಪರಿಸರ ರಕ್ಷಣೆ, ಸಸಿ ನೆಡಿ ಎಂಬ ಘೋಷಣೆ ಕೇಳುತ್ತಲೇ ಇರುತ್ತದೆ, ಮತ್ತೊಂದೆಡೆ ಮರ ಕಡಿಯುವ ಶಬ್ದವೂ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಸೌಕರ್ಯ ಹೆಚ್ಚಿಸಲು ಮರಗಳ ನಾಶ ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ. ಹಾಗೇ ಕರ್ನಾಟಕದಲ್ಲಿ 2018-2021ರವರೆಗೆ ಸುಮಾರು 1 ಲಕ್ಷ ಮರಗಳನ್ನು ಕಡಿಯಲಾಗಿದೆ ಎಂದು ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ತಿಳಿಸಿದೆ. ಇವೆಲ್ಲ ಮರಗಳನ್ನು ಬರೀ ರಸ್ತೆ, ಹೆದ್ದಾರಿ ನಿರ್ಮಾಣಗಳಿಗಾಗಿಯೇ ಕಡಿಯಲಾಗಿದ್ದು, ಬಹುತೇಕ ಹಸಿರು ಮರಗಳೇ (ಒಣಮರಗಳಲ್ಲ) ಆಗಿವೆ. ಅದರಲ್ಲಿ 56,629 ಮರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ […]

ಕರ್ನಾಟಕದಲ್ಲಿ 4 ವರ್ಷಗಳಲ್ಲಿ 1 ಲಕ್ಷಕ್ಕೂ ಅಧಿಕ ಮರಗಳ ನಾಶ; ರಸ್ತೆ ನಿರ್ಮಾಣಕ್ಕಾಗಿ ಉರುಳಿದ ಹಸಿರು ಮರಗಳು
ಮರಗಳನ್ನು ಕಡಿದಿರುವ ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on: Apr 01, 2022 | 7:46 AM

Share

ಒಂದೆಡೆ ಪರಿಸರ ರಕ್ಷಣೆ, ಸಸಿ ನೆಡಿ ಎಂಬ ಘೋಷಣೆ ಕೇಳುತ್ತಲೇ ಇರುತ್ತದೆ, ಮತ್ತೊಂದೆಡೆ ಮರ ಕಡಿಯುವ ಶಬ್ದವೂ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಸೌಕರ್ಯ ಹೆಚ್ಚಿಸಲು ಮರಗಳ ನಾಶ ಮಾಡದೆ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ. ಹಾಗೇ ಕರ್ನಾಟಕದಲ್ಲಿ 2018-2021ರವರೆಗೆ ಸುಮಾರು 1 ಲಕ್ಷ ಮರಗಳನ್ನು ಕಡಿಯಲಾಗಿದೆ ಎಂದು ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ತಿಳಿಸಿದೆ. ಇವೆಲ್ಲ ಮರಗಳನ್ನು ಬರೀ ರಸ್ತೆ, ಹೆದ್ದಾರಿ ನಿರ್ಮಾಣಗಳಿಗಾಗಿಯೇ ಕಡಿಯಲಾಗಿದ್ದು, ಬಹುತೇಕ ಹಸಿರು ಮರಗಳೇ (ಒಣಮರಗಳಲ್ಲ) ಆಗಿವೆ. ಅದರಲ್ಲಿ 56,629 ಮರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನೆಗಳಿಗಾಗಿ ಕತ್ತರಿಸಲಾಗಿದೆ (ರಾಷ್ಟ್ರೀಯ ಹೆದ್ದಾರಿ ನಿರ್ಮಾಣ). 2018-2019ರ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿ ಯೋಜನೆಯ ಭಾಗವಾದ ಬೆಂಗಳೂರು-ನಿಡಘಟ್ಟ ಯೋಜನೆಗಾಗಿ ಕತ್ತರಿಸಲಾಗಿದೆ ಎಂದು ಪಿಡಬ್ಲ್ಯೂಡಿ ಮಾಹಿತಿ ನೀಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 1,03, 538 ಮರಗಳನ್ನು ಕಡಿಯಲಾಗಿದ್ದರೂ, ಅದಕ್ಕೆ ಬದಲಾಗಿ 5.3 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾಗಿ ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಹಾಗಿದ್ದಾಗ್ಯೂ ನೆಟ್ಟ ಸಸಿಗಳೆಲ್ಲ ಬದುಕಿಲ್ಲ, ಶೇ. 60-70ರಷ್ಟು ಸಸಿಗಳು ಬದುಕಿವೆ. ನೆಟ್ಟು 10 ವರ್ಷದವರೆಗೆ ಅರಣ್ಯ ಇಲಾಖೆ ಸಸಿಗಳ ಕಾಳಜಿ ಮಾಡಲಿದೆ. ಅಷ್ಟಾದರೂ ರಸ್ತೆ ಬದಿಗಳಲ್ಲಿ ನೆಡಲಾಗುವ ಸಸಿಗಳು ಹಲವು ಕಾರಣಕ್ಕೆ ಒಣಗಿ, ಸತ್ತು ಹೋಗುತ್ತವೆ. ಅದರಲ್ಲೂ ಉತ್ತರ ಕರ್ನಾಟಕದಂಥ ಒಣಹವೆಯ ಪ್ರದೇಶಗಳಲ್ಲಿ ಸಸಿಗಳ ನಿರ್ವಹಣೆ ತುಂಬ ಕಷ್ಟ ಎಂದೂ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ವಿವಿಧೆಡೆ ರಸ್ತೆ ಅಗಲೀಕರಣ, ನಿರ್ಮಾಣದಂಥ ಯೋಜನೆಗಳು ಸದಾ ಅನುಷ್ಠಾನದಲ್ಲಿ ಇರುತ್ತವೆ. ಅದಕ್ಕೆ ಅನಿವಾರ್ಯವಾಗಿ ಮರಗಳನ್ನು ಕಡಿದುಕೊಳ್ಳಬೇಕು. ಹೀಗೆ ಮರ ಕಡಿಯುವವರಿಗೆ ಒಂದು ನಿಯಮವಿದೆ. ಒಂದು ಮರ ಕಡಿದವರು 10 ಗಿಡಗಳನ್ನು ನೆಡುವುದು ಕಡ್ಡಾಯ. ಆದರೆ ಅದೆಷ್ಟು ಮಂದಿ ನೆಡುತ್ತಾರೋ? ಅದರ ಆರೈಕೆ ಹೇಗೆ ಆಗುತ್ತದೆ ಎಂಬಿತ್ಯಾದಿಗಳು ಪಕ್ಕಾ ಲೆಕ್ಕಕ್ಕೆ ಸಿಗದೆ ಇರುವಂಥವು.

ಇದನ್ನೂ ಓದಿ:ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ಸುಲಭ ವಿಧಾನ

ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ