AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಗಳು ಬಿಟ್ಟಿಬಿದ್ದಿದ್ದಾರೆ ಎಂದು ಭಗವಾನ್​ಗೆ ಅನಿಸುತ್ತಿದೆಯಾ: ರಾಮನ ಬಗ್ಗೆ ಆಡಿದ ಅಸಭ್ಯ ಮಾತಿಗೆ ವ್ಯಾಪಕ ಆಕ್ರೋಶ

ಬಹುಸಂಖ್ಯಾತ ಹಿಂದೂಗಳೇನು ಬಿಟ್ಟಿಬಿದ್ದಿದ್ದಾರೆ ಎಂದು ಭಗವಾನ್ ಅವರಿಗೆ ಅನಿಸುತ್ತಿದೆಯಾ? ಅಥವಾ ನಾಲಗೆಗೆ ಚೇಳಿನ ಕೆರೆತಾನಾ ಎಂದು ಲೇಖಕಿ ಪರ್ಝಾನಾ ಅಶ್ರಫ್ ಪ್ರಶ್ನಿಸಿದ್ದಾರೆ.

ಹಿಂದೂಗಳು ಬಿಟ್ಟಿಬಿದ್ದಿದ್ದಾರೆ ಎಂದು ಭಗವಾನ್​ಗೆ ಅನಿಸುತ್ತಿದೆಯಾ: ರಾಮನ ಬಗ್ಗೆ ಆಡಿದ ಅಸಭ್ಯ ಮಾತಿಗೆ ವ್ಯಾಪಕ ಆಕ್ರೋಶ
ಪ್ರೊ ಕೆ.ಎಸ್.ಭಗವಾನ್
TV9 Web
| Edited By: |

Updated on:Jan 23, 2023 | 10:45 AM

Share

ಬೆಂಗಳೂರು: ಶ್ರೀರಾಮನ (Lord Sri Rama) ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಸಾಹಿತಿ ಭಗವಾನ್ (Bhagavan) ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಹಿಂದುತ್ವಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುವವರೂ ಭಗವಾನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ‘ಬಹುಸಂಖ್ಯಾತರ ಶ್ರದ್ಧೆಯ ಬಗ್ಗೆ ಅಸಡ್ಡೆಯಿಂದ ಮಾತನಾಡುವ ಧೋರಣೆ ತಪ್ಪು’ ಎಂದು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್​ ಕಾರ್ಯಕರ್ತರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ‘ಇಡೀ ದೇಶ ಭಕ್ತಿಯಿಂದ ಕಾಣುವ ಶ್ರೀರಾಮಚಂದ್ರ ಹಾಗೂ ಸೀತಾಮಾತೆಯ ಬಗ್ಗೆ ಭಗವಾನ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಲವು ಬಾರಿ ಇಂಥದ್ದೇ ಹೇಳಿಕೆಗಳನ್ನು ನೀಡಿರುವ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಲಾಗಿದೆ.

‘ಸೀತೆಗೆ ಹೆಂಡ ಕುಡಿಸಿ ರಾಮ ತಾನೂ ಕುಡಿಯುತ್ತಿದ್ದ’ ಎಂದು ಭಗವಾನ್ ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ‘ಈ ಹಿಂದೆಯೂ ಭಗವಾನ್ ಅವರು ಪ್ರಭು ಶ್ರೀರಾಮ, ಶ್ರೀಕೃಷ್ಣ ಹಾಗೂ ಭಗವದ್ಗೀತೆ ಬಗ್ಗೆ ಅಶ್ಲೀಲವಾಗಿ ಮಾತನಾಡಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ನಂತರದ ದಿನಗಳಲ್ಲಿ ಅವರಿಗೆ ನ್ಯಾಯಾಲಯವು ಷರತ್ತು ಬದ್ದ ಜಾಮೀನು ನೀಡಿತ್ತು. ಆದರೆ ಇದೀಗ ಮತ್ತೆ ಶ್ರೀರಾಮನ ವಿರುದ್ಧ ಭಗವಾನ್ ಅಸಭ್ಯವಾಗಿ ಮಾತನಾಡಿರುವುದು ಶ್ರದ್ಧಾಳುಗಳ ಆಕ್ಷೇಪಕ್ಕೆ ಕಾರಣವಾಗಿದೆ.

‘ನ್ಯಾಯಾಲಯವು ನೀಡಿರುವ ಜಾಮೀನಿಗೆ ಸರ್ಕಾರವು ಆಕ್ಷೇಪ ಸಲ್ಲಿಸಬೇಕು. ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂಗಳು ಶಾಂತಿಪ್ರಿಯರು ಎನ್ನುವ ಕಾರಣಕ್ಕೆ ಎಲ್ಲರೂ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಪ್ರವೃತ್ತಿ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಭಗವಾನ್​ಗೆ 6 ಪ್ರಶ್ನೆ ಕೇಳಿದ ಫರ್ಝಾನಾ ಅಶ್ರಫ್

ಸಾಹಿತಿ ಭಗವಾನ್ ಅವರ ಶ್ರೀರಾಮನ ಬಗ್ಗೆ ಆಡಿರುವ ಆಕ್ಷೇಪಾರ್ಹ ಮಾತುಗಳಿಗೆ ಪ್ರಗತಿಪರ ಹಾಗೂ ವೈಚಾರಿಕ ಸಾಹಿತಿಗಳ ವಲಯದಲ್ಲಿಯೂ ಆಕ್ಷೇಪ ಕೇಳಿಬಂದಿದೆ. ಈ ಕುರಿತು ಸಾಹಿತಿ ಹಾಗೂ ಪ್ರಗತಿಪರ ಚಿಂತಕಿ ಯು.ಟಿ.ಫರ್ಝಾನಾ ಅಶ್ರಫ್ ಭಗವಾನ್ ಅವರಿಗೆ 6 ಪ್ರಶ್ನೆಗಳನ್ನು ಕೇಳಿದ್ದಾರೆ. ಇಂಥ ಪ್ರಯತ್ನಗಳನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಸಲಹೆ ಮಾಡಿದ್ದಾರೆ.

  1. ಭಗವಾನ್ ನಿಮಗೆ ಇಂಥ ವಿಚಾರವನ್ನೇ ಮಾತನಾಡಬೇಕೆನಿಸುತ್ತಿದೆ? ಇತರ ಬುದ್ಧಿನೆಟ್ಟಗಿರುವ ಬುದ್ಧಿಜೀವಿಗಳನ್ನೂ ಇವರೆಲ್ಲರೂ ಹೀಗೆಯೇ ಎಂದು ಸಮಾಜಕ್ಕೆ ತೋರಿಸುವುದಾ? ಪ್ರಸಕ್ತ ಸಮಾಜದಲ್ಲಿರುವ ಯಾವ ಸಮಸ್ಯೆಗಳೂ ನಿಮ್ಮನ್ನು ಬಾಧಿಸುವುದಿಲ್ಲವೇ?
  2. ಶ್ರೀರಾಮನ ಬಗ್ಗೆ ಏಕಿಷ್ಟು ಹಗೆ? ರಾಮನ ಬಗ್ಗೆ ಕಾಲಕಾಲಕ್ಕೆ ಇಂತಹಾ ಮಾತುಗಳನ್ನು ತೇಲಿ ಬಿಡುವುದೇಕೆ?
  3. ರಾಮ‌ ಒಂದು ವೇಳೆ ಕುಡಿದರೂ ಕುಡಿತ ಹಿಂದೂ ಪರಂಪರೆಯಲ್ಲಿ ನಿಷಿದ್ಧ ವಿಚಾರವೇನೂ ಅಲ್ಲವಲ್ಲ. ಅದರಿಂದ ಯಾರಿಗೇನು ಸಮಸ್ಯೆ?
  4. ಅಷ್ಟಕ್ಕೂ ಅವರು ತ್ರೇತಾಯುಗದಲ್ಲಿ ಕುಡಿಯುತ್ತಿದ್ದ ವಿಚಾರವನ್ನು ಈಗ ಪ್ರಸ್ತಾಪಿಸುವುದು ನಮ್ಮ ಸಮಾಜಕ್ಕೆ ಎಷ್ಟರಮಟ್ಟಿಗೆ ಅಗತ್ಯ?
  5. ಈ‌ ಮೂಲಕ ಭಗವಾನ್ ಅವರು ಎಲ್ಲಾ ವಿಚಾರವಾದಿಗಳಿಗೂ ಅವಮಾನ‌ಮಾಡುತ್ತಿದ್ದಾರೆ. ವಿಚಾರವಾದಿಗಳಿಗೆ ಯಾವತ್ತೂ ಸಂಯಮವು ಅವಶ್ಯಕ ಎನ್ನುವುದು ತಿಳಿದಿರಬೇಕು. ಮೊದಲಿಗೆ ಸಮಾಜದತ್ತ ಅಪಾರ ಪ್ರೀತಿ ಇರಬೇಕು.
  6. ಭಗವಾನ್ ಅವರಿಗೆ ಯಾವತ್ತೂ ಕ್ಷೋಭೆ ಸೃಷ್ಟಿಸುವುದರತ್ತ ಯಾಕಿಷ್ಟು ಒಲವು? ಬಹುಸಂಖ್ಯಾತ ಹಿಂದೂಗಳೇನು ಬಿಟ್ಟಿಬಿದ್ದಿದ್ದಾರೆ ಎಂದು ಭಗವಾನ್ ಅವರಿಗೆ ಅನಿಸುತ್ತಿದೆಯಾ? ಅಥವಾ ನಾಲಗೆಗೆ ಚೇಳಿನ ಕೆರೆತಾನಾ?

ಇದನ್ನೂ ಓದಿ: ಶ್ರೀರಾಮಚಂದ್ರನ ಕುರಿತು ವಿವಾದಾತ್ಮಕ ಹೇಳಿಕೆ: ಹಿಂದೂ ಪರ ಕಾರ್ಯಕರ್ತರಿಂದ ಸಾಹಿತಿ ಪ್ರೊ. ಭಗವಾನ್ ವಿರುದ್ಧ ದೂರು

ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Mon, 23 January 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್