AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore: ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಿ ಸರ್, ವಿಲ್ಲಾ ನಿವಾಸಿಗಳಿಂದ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ

ಪೂರ್ವಾಂಕರ ವಿಲ್ಲಾ ಒತ್ತುವರಿ ತೆರವು ವಿಚಾರ ಸಂಬಂಧ ಅಲ್ಲಿನ ನಿವಾಸಿಗಳು ಏಕಾಏಕಿ ಕೆಡವಿ ಹಾಕಿದರೆ ನಾವೆಲ್ಲಿ ಹೋಗೋಣ? ಸ್ವಲ್ಪ ತಾಳ್ಮೆಯಿಂದ ಇರುವಂತೆ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Bangalore: ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಿ ಸರ್, ವಿಲ್ಲಾ ನಿವಾಸಿಗಳಿಂದ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Rakesh Nayak Manchi|

Updated on:Sep 20, 2022 | 7:00 PM

Share

ಬೆಂಗಳೂರು: ಮಹದೇವಪುರದ ರಾಚೇನಹಳ್ಳಿಯಲ್ಲಿರುವ ಪೂರ್ವಾಂಕರ ವಿಲ್ಲಾ ಒತ್ತುವರಿ ತೆರವು ವಿಚಾರ ಸಂಬಂಧ ಅಲ್ಲಿನ ನಿವಾಸಿಗಳು ಏಕಾಏಕಿ ಕೆಡವಿ ಹಾಕಿದರೆ ನಾವೆಲ್ಲಿ ಹೋಗೋಣ? ಸ್ವಲ್ಪ ತಾಳ್ಮೆಯಿಂದ ಇರುವಂತೆ ಬಿಬಿಎಂಪಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಪೂರ್ವಾಂಕರ ಲಿಮಿಟೆಡ್ ರಾಜಕಾಲುವೆಗಳ ಒತ್ತವರಿ ಮಾಡಿಕೊಂಡಿರುವುದು ಸಮೀಕ್ಷೆ ವೇಳೆ ತಿಳಿದುಬಂತಿದ್ದು. ಅದರಂತೆ ಇಂದು ಬುಲ್ಡೋಜರ್​ಗಳು ಒತ್ತುವರಿ ತೆರವು ಮಾಡುವ ನಿಟ್ಟಿನಲ್ಲಿ ಸ್ಥಳಕ್ಕೆ ಆಗಮಿಸಿತ್ತು. ಈ ವೇಳೆ ಅಧಿಕಾರಿಗಳಿಗೆ ವಿಲ್ಲಾ ನಿವಾಸಿಗಳು ಸಮಯಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ನ್ಯಾಯಾಲಯದಿಂದ ಸ್ಟೇ ಆರ್ಡರ್ ಇದೆ. ನಾವು ಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿ. ಏಕಾಏಕಿ‌ ಬಂದು ಕೆಡವಿ ಹಾಕಿದರೆ ನಾವು ಎಲ್ಲಿಗೆ ಹೋಗಬೇಕು? ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ನಮಗೆ ಟೈಂ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕೋರ್ಟ್ ಸ್ಟೇ ಆರ್ಡರ್ ಇದೆ ಎಂದು ಹೇಳುತ್ತಾ ಕಾಲಾವಕಾಶ ಕೇಳಿದ ವಿಲ್ಲಾ ನಿವಾಸಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಕೋರ್ಟ್ ಆರ್ಡರ್ ಪ್ರತಿ ತೋರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಏಕಾಏಕಿ ತೆರವು ಬಗ್ಗೆ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ನಾವು ದಿಢೀರ್ ಅಂತ ಬಂದು ತೆರವು ಮಾಡುತ್ತಿಲ್ಲ ಎಂದಿದ್ದಾರೆ. ನಾವು ನಿಮಗೆ ದಿಢೀರ್ ಬಂದು ಮಾರ್ಕಿಂಗ್ ಮಾಡಿ ತೆರವು ಮಾಡುತ್ತಿಲ್ಲ. ಸುಮ್ಮನೆ ಸ್ಟೇ ಆರ್ಡರ್ ಅಂತ ಹೇಳುತ್ತಿದ್ದೀರಿ. ಎಲ್ಲಿದೆ ತೋರಿಸಿ ಸ್ಟೇ ಆರ್ಡರ್ ಎಂದು ಕೇಳಿದ್ದಾರೆ. ಅಲ್ಲದೆ ನಾವು ಕೋರ್ಟ್ ಆರ್ಡರ್ ಇದಿದ್ದರೆ ಸುಮ್ಮನೆ ಇರುತ್ತಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸ್ಥಳದಲ್ಲೇ ನಿಂತಿರುವ ಬುಲ್ಡೋಜರ್​ಗಳು

ಒತ್ತುವರಿ ತೆರವಿಗೆ ನಿವಾಸಿಗಳ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಒತ್ತುವರಿ ತೆರವು ಕಾರ್ಯಾಚರಣೆಗೆ ಆಗಮಿಸಿದ ಜೆಸಿಬಿ ಹಾಗೂ ಹಿಟಾಚಿ ಸ್ಥಳದಲ್ಲೇ ನಿಂತಿವೆ. ದಯವಿಟ್ಟು ತೆರವು ಮಾಡಬೇಡಿ ಎಂದು ರಸ್ತೆಯಲ್ಲೇ ಚೇರ್ ಹಾಕಿ ವೃದ್ಧ ಮಹಿಳೆ ಕುಳಿತುಕೊಂಡಿದ್ದಾರೆ. ಅಲ್ಲದೆ ನಿವಾಸಿಗಳು ಕೂಡ ಜೆಸಿಬಿ ವಾಹನಕ್ಕೆ ಅಡ್ಡಲಾಗಿ ನಿಂತಿದಿದ್ದಾರೆ. ಒತ್ತುವರಿ ತೆರವಿಗೆ ಅಡ್ಡಿ ಪಡಿಸುತ್ತಿರುವ ಹಿನ್ನೆಲೆ ರಕ್ಷಣೆ ಕೊಡಿ ಎಂದು ಬಿಬಿಎಂಪಿ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದಾರೆ.

ನಮ್ಮನ್ನ ಎಳೆದು ಹಾಕಬೇಡಿ, ಹೊಟ್ಟೆ ಉರಿಸಬೇಡಿ

ಪೂರ್ವ ಪಾರ್ಕ್ ರಿಡ್ಜ್ ಒತ್ತುವರಿಗೆ ನಿವಾಸಿಗಳಿಂದ ಅಡ್ಡಿ ವ್ಯಕ್ತವಾಗುತ್ತಿದೆ. ಪೊಲೀಸರು ನಮಗೆ ರಕ್ಷಣೆ ಕೊಡಬೇಕು. ನಮ್ಮನ್ನ ಎಳೆದು ಹಾಕಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. 2.5 ಮೀ ಅಗಲ, 100 ಮೀಟರ್ ಒತ್ತುವರಿ ತೆರವು ಮಾಡುವ ಸಲುವಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ನಿವಾಸಿಗಳು, ನಾಳೆಯವರೆಗಾ ಸಮಯ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ನಮ್ಮ ಹೊಟ್ಟೆ ಉರಿಸಬೇಡಿ ಎಂದು ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ನಾವು ತೆರವಿಗೆ ಬಿಡುವುದಿಲ್ಲ, ಒಂದು ದಿನ ಕಾಲಾವಕಾಶ ಕೊಡಿ. ಕತ್ತಲಲ್ಲಿ ಹೇಗೆ ಮನೆ ತೆರವು ಮಾಡುತ್ತೀರಿ ಎಂದು ವಾದುಕ್ಕಿಳಿದಿದ್ದಾರೆ.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Tue, 20 September 22

ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಬೆಂಗಳೂರು: ಮೂರು ತಿಂಗಳಲ್ಲಿ ಮತ್ತೆ ಹೆಬ್ಬಾಳ ಫ್ಲೈಓವರ್ ವಿಸ್ತರಣೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ
ಸಿಎಂ ವಿರುದ್ಧ ಕೊಲೆ ಮಾಡಿದ ಆರೋಪ, ಎಸ್​ಐಟಿ ರಚಿಸ್ತೀರಾ: ಅಶೋಕ್ ಪ್ರಶ್ನೆ