ಕಟಿಧಾನ್ ಅಗ್ರಿ-ಟೆಕ್ ಆವಿಷ್ಕಾರಗಳಿಗೆ ಒಲಿದ ಎಲಿವೇಟ್ 2023-24 ವಿಜೇತ ಪ್ರಶಸ್ತಿ
ಬೆಂಗಳೂರಿನ ಕಟಿಧಾನ್ ಸ್ಟಾರ್ಟಪ್ ಕಂಪನಿಯೊಂದು ಶಾರ್ಕ್ ಟ್ಯಾಂಕ್ ಇಂಡಿಯಾ ಎಂಬ ರಿಯಾಲಿಟಿ ಶೋನಲ್ಲಿ ರೂ. 1.5 ಕೋಟಿ ರೂ. ಗೆಲ್ಲುವ ಮೂಲಕ ಸುದ್ದಿಯಾಗಿತ್ತು. ಆದರೆ ಇದೀಗ ಕಟಿಧಾನ್ನ ಸಂಸ್ಥಾಪಕ ಅಯಾನ್ ಎಸ್ಆರ್ ಅವರು ಎಲಿವೇಟ್ 2023-24ರ ವಿಜೇತ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಕರ್ನಾಟಕ ಸರ್ಕಾರವು ಕಟಿಧಾನ್ ಅಗ್ರಿ-ಟೆಕ್ ಆವಿಷ್ಕಾರಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇತ್ತೀಚೆಗಷ್ಟೇ ಎಲಿವೇಟ್ 2023-24 ರ ಪ್ರಮುಖ ಅನುದಾನ ಕಾರ್ಯಕ್ರಮದಲ್ಲಿ ವಿಜೇತರಿಗೆ ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ಕ್ಲೀನ್ಟೆಕ್, ಅಗ್ರಿ-ಟೆಕ್ ಮತ್ತು ವನ್ಯಜೀವಿ-ತಂತ್ರಜ್ಞಾನದ ಮೂಲಕ ಪರಿಚಿತವಾಗಿರುವ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪೆನಿಯೂ ಕಟಿಧಾನ್ ಸಂಸ್ಥೆಯೂ ಈ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕಟಿಧಾನ್ನ ಸಂಸ್ಥಾಪಕ ಅಯಾನ್ ಎಸ್ಆರ್ ಅವರು ಎಲಿವೇಟ್ 2023-24 ರ ವಿನ್ನರ್ ಅವಾರ್ಡ್ ಸ್ವೀಕರಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕಟಿಧಾನ್ನ ಸಂಸ್ಥಾಪಕ ಮತ್ತು ನಿರ್ದೇಶಕ ಅಯನ್ ಎಸ್ ಆರ್, “ಎಲಿವೇಟ್ ಗ್ರಾಂಟ್ ಪ್ರಶಸ್ತಿಯನ್ನು ಗೆದ್ದಿರುವುದಕ್ಕೆ ನಮಗೆ ಅತ್ಯಂತ ಹೆಮ್ಮೆ ಹಾಗೂ ಖುಷಿಯಿದೆ. ಈ ಅದ್ಭುತವಾದ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ನಾನು ಕರ್ನಾಟಕ ಸರ್ಕಾರಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಸ್ಟಾರ್ಟಪ್ಗಳಿಗೆ ಬಂಡವಾಳ ಬೆಂಬಲವನ್ನು ಒದಗಿಸುವ ನಮ್ಮ ದೇಶದ ಏಕೈಕ ರಾಜ್ಯ ಸರ್ಕಾರವೆಂದರೆ ಅದು ಕರ್ನಾಟಕ. ಹೂಡಿಕೆದಾರರ ಸಂಪರ್ಕಗಳು, ಮಾರುಕಟ್ಟೆ ಪ್ರವೇಶ ಕಾರ್ಯಕ್ರಮಗಳು, ತೆರಿಗೆ ವಿನಾಯಿತಿಗಳು, ಜಾಗತಿಕ ನೆಟ್ವರ್ಕ್ಗಳು ಮತ್ತು ಇತರ ಪ್ರಯೋಜನಗಳನ್ನು ಒದಗಿಸುವಲ್ಲಿ ಸರ್ಕಾರವು ಸದಾ ಬೆಂಬಲವನ್ನು ನೀಡುತ್ತಿದೆ” ಎಂದಿದ್ದಾರೆ.
“ಭಾರತದಿಂದ ವಿಶ್ವಕ್ಕೆ ಮಾದರಿಯಾಗುವ ಕಂಪನಿಗಳನ್ನು ನಿರ್ಮಿಸುವ ಅನುಕೂಲಕರವಾದ ಆರಂಭಿಕ ಪರಿಸರ ವ್ಯವಸ್ಥೆಯನ್ನು ಪೋಷಿಸುವಲ್ಲಿ ಬೆಂಗಳೂರು ಮತ್ತು ಕರ್ನಾಟಕವು ಮುನ್ನಡೆಯುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಎಲಿವೇಟ್ ಅನುದಾನವು ನಮ್ಮ ಆಲೋಚನೆಗಳ ಮೂಲ ಮಾದರಿಯೂ ಹೊರಬರಲು ಸಹಾಯ ಮಾಡುತ್ತದೆ. ಇದು ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಒಪ್ಪಂದ ಮಾಡಿಕೊಳ್ಳಲು ಪರೋಕ್ಷವಾಗಿ ನಮಗೆ ಸಹಾಯ ಮಾಡಿದೆ. ಈ ಎಲಿವೇಟ್ ಎಂಬುದು ಮೆಟ್ಟಿಲುಗಳು ಇದ್ದ ಹಾಗೆ, ನಾವು ಒಂದೊಂದು ಹಂತದಲ್ಲಿ ಮೇಲೆರಲು ಸಹಾಯಕವಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಆಯ್ಕೆ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಹೋಟೆಲ್ ಮ್ಯಾನೇಜ್ಮೆಂಟ್ ಯಾಕೆ ಆಗಿರಬೇಕು? ಇಲ್ಲಿದೆ 10 ಕಾರಣಗಳು
ಈ ಕಾರ್ಯಕ್ರಮದಲ್ಲಿ ಇ ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಮಾತನಾಡಿ,’ಕರ್ನಾಟಕವು ನಾವೀನ್ಯತೆ ಮತ್ತು ತಾಂತ್ರಿಕ ಪ್ರಗತಿಯಿಂದಾಗಿ ದಾರಿದೀಪವಾಗಿ ನಿಂತಿದೆ. ತಮ್ಮ ಗಮನಾರ್ಹ ಸಾಧನೆಗಳೊಂದಿಗೆ ಭಾರತದ ಆರಂಭಿಕ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ನವೋದ್ಯಮಿಗಳ ಸಮುದಾಯವನ್ನು ಹೊಂದಿರುವ ರಾಜ್ಯವು ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಧಾನ ಕೇಂದ್ರವಾಗಿ ತನ್ನ ಖ್ಯಾತಿಯನ್ನು ಗಟ್ಟಿಗೊಳಿಸಿದೆ” ಎಂದಿದ್ದಾರೆ. ಈ ಸಮಾರಂಭದಲ್ಲಿ ಸಿದ್ಧಾರ್ಥ್ ಪೈ (3one4 ಕ್ಯಾಪಿಟಲ್), ಪ್ರಶಾಂತ್ ಪ್ರಕಾಶ್ (ಎಕ್ಸೆಲ್ ಪಾಲುದಾರರು), ಅನಂತ್ ನಾರಾಯಣ್ (ಮೆನ್ಸಾ ಬ್ರಾಂಡ್ಸ್) ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.