AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥರಗುಟ್ಟುವ ಚಳಿ ನಡುವೆ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ: ಯಾವುದರ ದರ ಎಷ್ಟಿದೆ?

ತರಕಾರಿಗಳಲ್ಲಿ ರಾಜಾ ಅಂದ್ರೆ ಅದು ಟೊಮೆಟೊ. ನಿತ್ಯ ಅಡುಗೆ ಆರಂಭ ಆಗೋದೆ ಟೊಮೆಟೊದಿಂದ. ಇದೀಗ ಈ ಆದ್ರೆ ಕೆಂಪುಸುಂದರಿಗೆ ಬೇಡಿಕೆ ಹೆಚ್ಚಾಗಿದೆ. ಹೌದು.. ಅಕಾಲಿಕ ಮಳೆ, ಚಂಡಮಾರುತದ ಎಫೆಕ್ಟ್ ನಿಂದ ತಮಿಳುನಾಡು, ನಮ್ಮ ಕರ್ನಾಟಕದಲ್ಲಿ ಇಳುವರಿ ಸರಿಯಾಗಿ ಬಾರದ್ದರಿಂದ ನುಗ್ಗೆಕಾಯಿ ಆರ್ನೂರ ಗಡಿ ದಾಟಿದ್ರೆ ಕೆಲ ತರಕಾರಿಗಳ ದರ ಶತಕ ಬಾರಿಸಿವೆ. ಹಾಗಾದ್ರೆ, ಯಾವ್ಯಾವ ತರಕಾರಿಯ ದರ ಎಷ್ಟಿದೆ ಎನ್ನುವ ವಿವರ ಇಲ್ಲಿದೆ ನೋಡಿ.

ಥರಗುಟ್ಟುವ ಚಳಿ ನಡುವೆ ಜನರಿಗೆ ತರಕಾರಿ ಬೆಲೆ ಏರಿಕೆ ಬಿಸಿ: ಯಾವುದರ ದರ ಎಷ್ಟಿದೆ?
Vegetables
ಕಿರಣ್​ ಸೂರ್ಯ
| Edited By: |

Updated on:Nov 30, 2025 | 10:04 PM

Share

ಬೆಂಗಳೂರು, (ನವೆಂಬರ್ 30): ಸಾಂಬಾರ್‌ಗೂ ಬೇಕು. ಸಾಗುಗೂ ಬೇಕು. ಥರಥರ ಚಳಿನಡುವೆ ಮಾಡಿಕೊಳ್ಳೋ ಬಿಸಿಬಿಸಿ ರಸಂನಲ್ಲೂ ಇದರ ಪಾತ್ರವೇ ದೊಡ್ಡದು.ವೆಜ್‌,ನಾನ್‌ವೆಜ್ ಅಂತಾ ಎಲ್ಲಾ ಬಗೆಯ ಅಡುಗೆಯಲ್ಲೂ ಮೇಲುಗೈ ಸಾಧಿಸಿರುವ ತರಕಾರಿ ಅಂದ್ರೆ ಅದು ಟೊಮೆಟೊ (Tomato). ಇದೀಗ ಅದೇ ಕೆಂಪು ಸುಂದರಿ ಟೊಮೆಟೊ ದರ ಈಗ ಮುಗಿಲು ಮುಟ್ಟಿದೆ. ಇನ್ನೊಂದೆಡೆ ಸಿಲಿಕಾನ್ ಸಿಟಿ ಜನರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.ಇದರ ಜೊತೆಯಲ್ಲಿ ಉಳಿದಂತೆ ಅವರೆಕಾಯಿ, ಬೀನ್ಸ್‌, ತೊಂಡೆಕಾಯಿ, ಕ್ಯಾರೆಟ್‌, ಹಸಿಮೆಣಸಿನಕಾಯಿ ಸೇರಿದಂತೆ ಇತರೆ ಬಹುತೇಕ ತರಕಾರಿಗಳು (vegetables price) ನೂರರ ಗಡಿಯಲ್ಲೇ ಇವೆ

ಈಗಾಗಲೇ ಟೊಮೆಟೊ ಬೆಲೆ ಅರ್ಧ ಶತಕ ಬಾರಿಸಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕಬಾರಿಸುತ್ತಿದೆ.ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಸಪ್ಲೈ ಆಗ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ವಂತೆ, ಇದರಿಂದ ಪ್ರತಿದಿನ ನಗರಕ್ಕೆ 30 ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಸಪ್ಲೈ ಆಗ್ತಿದ್ಯಂತೆ.ಇತ್ತ ಒಂದು ಕೆಜಿ ನುಗ್ಗೆಕಾಯಿ 500 ರಿಂದ 600 ರುಪಾಯಿ ಆಗಿರುವ ಕಾರಣ ಗೃಹಿಣಿಯರು ನುಗ್ಗೆಕಾಯಿ ಸಹವಾಸ ಬೇಡ ಅಂತಿದ್ದಾರೆ.

ಇದನ್ನೂ ಓದಿ: Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಆರಕ್ಕೇರಿದ ಟೊಮೆಟೊ, 600ಕ್ಕೆ ಜಿಗಿದ ನುಗ್ಗೆಕಾಯಿ!

ಆರಕ್ಕೇರೋ, ಮೂರಕ್ಕಿಳಿಯೋ ತರಕಾರಿ ಅಂತಾ ಕರೆಸಿಕೊಳ್ಳೋ ತರಕಾರಿ ಅಂದ್ರೆ ಟೊಮೆಟೊ. ಯಾಕಂದ್ರೆ ಒಮ್ಮೆ 1 ರೂಪಾಯಿಗೆ ಒಂದು ಕೆಜಿ ಆಗುತ್ತೆ, ಮತ್ತೊಮ್ಮೆ ಶತಕದ ಆಟ ಆಡುತ್ತೆ. ಹೀಗೆ ಆಟವಾಡ್ತಿರೋ ಟೊಮೆಟೊ ಈಗ ಶತಕದ ಸಮೀಪ ಬಂದು ನಿಂತಿದೆ. ರಾಜ್ಯದಲ್ಲಿ ಟೊಮೆಟೊಗೆ ಫೇಮಸ್ ಆಗಿರೋ ಕೋಲಾರದಲ್ಲೇ 15 ಕೆಜಿ ಒಂದು ಬಾಕ್ಸ್‌ನ ಬೆಲೆ 600 ರಿಂದ850 ಆಗಿದೆ. ಅಂದ್ರೆ ಹೋಲ್‌ಸೇಲ್‌ ದರವೇ ಪ್ರತೀ ಕೆಜಿಗೆ 50 ರಿಂದ 60 ರೂಪಾಯಿ ಆಗಿದೆ. ಗ್ರಾಹಕರಿಗೆ 70- 80 ರೂಪಾಯಿಗೆ ಸಿಗ್ತಿದೆ. ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಬೇಡಿಕೆಯಂತೆ ಮಾರುಕಟ್ಟೆಗೆ ಟೊಮೆಟೊ ಬರ್ತಿಲ್ಲ. ಹೀಗಾಗೇ ಬೆಲೆ ಏರಿಕೆ ಆಗಿದೆ.

ಇನ್ನು ಟೊಮೆಟೊ ಜತೆ ನುಗ್ಗೆಕಾಯಿ ಕೂಡಾ ಭರ್ಜರಿ ಬೆಲೆ ಹೆಚ್ಚಿಸಿಕೊಂಡಿದೆ. ಬೆಂಗಳೂರಿನಿಗೆ ನಿತ್ಯ 100 ಟನ್‌ ನುಗ್ಗೆಕಾಯಿ ಬರ್ತಿತ್ತು. ಆದ್ರೀಗ ಅದು 40 ರಿಂದ 30 ಟನ್‌ಗೆ ಇಳಿದಿದೆ. ಹೀಗೆ ಆವಕ ಕುಸಿತ ಆಗ್ತಿದ್ದಂತೆ ಬೆಲೆ ಏರಿಕೆ ಆಗಿದೆ. ಒಂದು ಕೆಜಿ ನುಗ್ಗೆಕಾಯಿ ಬೆಲೆ ಬರೋಬ್ಬರಿ 600 ರೂಪಾಯಿಗೆ ಏರಿಕೆ ಆಗಿದೆ. ತಮಿಳುನಾಡಿನಲ್ಲಿ ನುಗ್ಗೆಕಾಯಿ ಹೆಚ್ಚಾಗಿ ಬೆಳೆಯಲಾಗ್ತಿದ್ದು, ಅಲ್ಲಿನ ಬೆಳೆ ಬರೋವರೆಗೂ ಇದೇ ದರ ಮುಂದುವರಿಯಲಿದೆ .ದರ ಹೆಚ್ಚಾಗ್ತಿದ್ದಂತೆ ಗೃಹಿಣಿಯರು ನುಗ್ಗೆಕಾಯಿ ಬಳಕೆಯನ್ನೇ ನಿಲ್ಲಿಸಲು ಮುಂದಾಗಿದ್ದಾರೆ.

ತರಕಾರಿ ಹೋಲ್ ಸೇಲ್ ಮತ್ತು ರಿಟೇಲ್ ದರಗಳು.

  • ನುಗ್ಗೆಕಾಯಿ- 500 ರಿಂದ 600 ರುಪಾಯಿ.
  • ಅವರೆಕಾಯಿ- 80 ರಿಂದ 100 ರುಪಾಯಿ.
  • ಗ್ರೀನ್ ಬಟಾಣಿ- 80 ರಿಂದ 100 ರುಪಾಯಿ.
  • ಬೀನ್ಸ್- 60 ರಿಂದ 80 ರುಪಾಯಿ.
  • ತೊಂಡೆಕಾಯಿ- 80 ರಿಂದ 100 ರುಪಾಯಿ.
  • ತೊಗರಿಕಾಯಿ- 70 ರಿಂದ 80 ರುಪಾಯಿ.
  • ಕ್ಯಾರೆಟ್- 60 ರಿಂದ 80 ರುಪಾಯಿ.
  • ಬೀಟ್​​​ ರೂಟ್- 60 ರಿಂದ 60 ರುಪಾಯಿ.
  • ಹಣ್ಣು ಹುರಳಿಕಾಯಿ- 100 ರಿಂದ 120 ರುಪಾಯಿ.
  • ಹಸಿ ಮೆಣಸಿನಕಾಯಿ- 80 ರಿಂದ 100 ರುಪಾಯಿ.
  • ಬೆಂಡೇಕಾಯಿ- 60 ರಿಂದ 80 ರುಪಾಯಿ.
  • ಟೊಮೆಟೊ- 60 ರಿಂದ 80 ರುಪಾಯಿ.

ಇನ್ನೂ ಹೋಲ್ ಸೇಲ್ ನಲ್ಲಿ 500 ರುಪಾಯಿ ಕೆಜಿಗೆ ಮಾರಾಟವಾಗುತ್ತಿರುವ ನುಗ್ಗೆಕಾಯಿ, ರಿಟೇಲ್ ನಲ್ಲಿ 600 ಗೆ ಮಾರಾಟವಾಗ್ತಿದೆ. ಶೇಕಡ 60% ರಷ್ಟು ನುಗ್ಗೆಕಾಯಿ ಪೊರೈಕೆ ಕುಸಿತ ಕಂಡಿದ್ಯಂತೆ. ತಮಿಳುನಾಡಿನಿಂದ ನುಗ್ಗೆಕಾಯಿ ಸಪ್ಲೈ ಬರುವವರೆಗೂ ದರದಲ್ಲಿ ಕಡಿಮೆ ಆಗೋದಿಲ್ವಂತೆ. ಈಗಾಗಲೇ ತಮಿಳುನಾಡಿನಲ್ಲಿ ರೈತರು ಹೆಚ್ಚಾಗಿ ಬೆಳೆ ಬೆಳೆದಿದ್ದು, ಜನವರಿ ಫೆಬ್ರವರಿಯಲ್ಲಿ ಒಂದಷ್ಟು ಬೆಲೆ ಕಡಿಮ ಆಗಲಿದ್ಯಂತೆ. ಈ ಹಿಂದೆ ನುಗ್ಗೆಕಾಯಿ ಬೆಲೆ ಕಡಿಮೆ ಇದ್ದಾಗ ಮಾರಾಟ ಮಾಡ್ತಿದ್ವಿ ದರ ಏರಿಕೆ ಆದ ಮೇಲೆ ನುಗ್ಗೆಕಾಯಿ ಮಾರಾಟ ಮಾಡುವುದನ್ನು ಬಿಟ್ಟಿದ್ದೇವೆ ಅಂತಾರೇ ತರಕಾರಿ ವ್ಯಾಪಾರಿ ಅಜಯ್.

ಒಟ್ಟಿನಲ್ಲಿ ಅಕಾಲಿಕ ಮಳೆ ಮತ್ತು ಚಂಡಮಾರುತದ ಎಫೆಕ್ಟ್ ನಿಂದ ನುಗ್ಗೆಕಾಯಿ ಸೇರಿದಂತೆ ತರಕಾರಿ ದರ ಗಗನಕ್ಕೇರಿದ್ದು, ಡಿಸೆಂಬರ್ ನಲ್ಲೂದರೂ ದರ ಕಡಿಮೆ ಆಗಲಿದ್ಯಾ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:57 pm, Sun, 30 November 25

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ