ಕಾಡಿನ ಮಧ್ಯೆ ನಿರ್ಮಿಸಿದ ದೇವಸ್ಥಾನದಿಂದ ಕಾಡು ಬೆಳೆಸುವ ಪಣ; ಈ ದೇಗುಲಕ್ಕೆ ಬರುವ ಭಕ್ತರಿಗೆ ಗಿಡವೆ ಪ್ರಸಾದ

ದೇವಸ್ಥಾನದಲ್ಲಿ ಬರುವ ಭಕ್ತರಿಗೆ ತೀರ್ಥ, ಪ್ರಸಾದ ನೀಡೋದು ಸಾಮಾನ್ಯ .ಆದ್ರೆ, ಇಲ್ಲೊಂದು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಗಿಡಗಳನ್ನು ನೀಡುವ ಮೂಲಕ ಹಸಿರು ಕ್ರಾಂತಿಗೆ ಹೊಸ ಅಡಿಪಾಯ ಹಾಕಿದೆ. ಎಲ್ಲಿ ಅಂತೀರಾ ಈ ಸ್ಟೋರಿ ಓದಿ.

ಕಾಡಿನ ಮಧ್ಯೆ ನಿರ್ಮಿಸಿದ ದೇವಸ್ಥಾನದಿಂದ ಕಾಡು ಬೆಳೆಸುವ ಪಣ; ಈ ದೇಗುಲಕ್ಕೆ ಬರುವ ಭಕ್ತರಿಗೆ ಗಿಡವೆ ಪ್ರಸಾದ
ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿರುವ ಜೈನ ಸಂಪ್ರದಾಯದ ದೇವಸ್ಥಾನ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 6:54 PM

ಉತ್ತರ ಕನ್ನಡ, ಜೂ.11: ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿರುವ ಜೈನ ಸಂಪ್ರದಾಯದ ಶ್ರೀ ಜೈನಜಟಕ, ಶ್ರೀ ಮಹಾದೇವಿ, ಶ್ರೀ ನಾಗದೇವತೆ  ದೇವಸ್ಥಾನ(Temple)ಕ್ಕೆ ಜೈನರು, ಮೀನುಗಾರರು, ಹಾಲಕ್ಕಿ ಜನಾಂಗ ಸೇರಿದಂತೆ ಹಲವರು ನಡೆದುಕೊಳ್ಳುತ್ತಾರೆ. ಪ್ರತಿ ವರ್ಷದ ಜೂನ್ ತಿಂಗಳಲ್ಲಿ ಉತ್ತಮ ಮಳೆ, ಬೆಳಗಾಗಿ ಈ ಗ್ರಾಮದ ಜನರು ಈ ದೇವರಲ್ಲಿ ಸಸಿಗಳನ್ನು ಇಟ್ಟು ಬೇಡಿಕೊಳ್ಳುತ್ತಾರೆ. ನಂತರ ಪ್ರಸಾದವಾಗಿ ಸಿಗುವ ಈ ಸಸಿಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಪೋಷಿಸುವ ಮೂಲಕ ಈ ಪರಿಸರಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಅಂಕೊಲಾ ತಾಲೂಕಿನ ಕಾಡಿನಲ್ಲಿರುವ ದೇವಸ್ಥಾನಕ್ಕಿದೆ ಭಾರಿ ಮಹಿಮೆ

ಈ ಬಾರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಊರಿನ ಜನರ ಸಹಕಾರದಲ್ಲಿ ನೆರವೇರಿಸಿದ್ದು, ಹೋಮ-ಹವನಗಳ ಜೊತೆ ಗಿಡಗಳನ್ನು ಸಹ ಇಟ್ಟು ಪೂಜೆ ಮಾಡುವ ಮೂಲಕ ಪರಿಸರ ಪ್ರೇಮ ಮೆರೆದರೆ, ಬಂದ ಪುರೋಹಿತರಾದಿಯಾಗಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡಿದ್ದು ಹೊಸ ಮುನ್ನುಡಿ ಬರದಿದ್ದಾರೆ. ಇನ್ನು ಈ ಊರಿನಲ್ಲಿ ಮಳೆಗಾಲ ಪ್ರಾರಂಭದಲ್ಲಿ ಇಲ್ಲಿನ ಜಟಕ ದೇವರನ್ನು ಊರಿನ ಗದ್ದೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಮೂಲಕ ತಮ್ಮ ಹೊಲದಲ್ಲಿ ಉತ್ತಮ ಬೆಳೆಯ ಆಶಿರ್ವಾದ ಬೇಡುವ ಇಲ್ಲಿನ ಜನರು, ದೇವರಿಗೆ ಕಾಣಿಕೆ ರೂಪದಲ್ಲಿ ಬೆಳೆದ ಬೆಳೆ ಜೊತೆ ಗಿಡವನ್ನು ಸಹ ನೀಡಿ ಕಾಣಿಕೆ ಅರ್ಪಿಸುತ್ತಾರೆ.

ಇದನ್ನೂ ಓದಿ:ಗೋಸುಂಬೆ ಮೇಲೆ ದಾಳಿ ಮಾಡಿ ನುಂಗಿದ ಹಸಿರು ಹಾವು; ವಿಡಿಯೋ ವೈರಲ್​

ಇನ್ನು ಪ್ರಸಾದ ರೂಪದಲ್ಲಿ ಗ್ರಾಮದ ಜನರಿಗೆ, ಬರುವ ಭಕ್ತರಿಗೆ ಗಿಡಗಳನ್ನು ನೀಡುವ ಮೂಲಕ ಮನೆಯಲ್ಲಿ ಗಿಡಗಳನ್ನು ಬೆಳಸಬೇಕು ಎಂಬ ಉದ್ದೇಶ ಈ ದೇವಸ್ಥಾನದ ಆಡಳಿತಮಂಡಳಿಯದ್ದು. ಹೀಗಾಗಿ ಈ ಬಾರಿ ಒಂದೇ ದಿನದಲ್ಲಿ 1500 ಕ್ಕೂ ಹೆಚ್ಚು ಗಿಡಗಳನ್ನು ಬಂದ ಭಕ್ತರಿಗೆ ನೀಡಿದ್ದು, ನೇರಳೆ, ನೆಲ್ಲಿ, ಸಂಪಿಗೆ, ಅಶೋಕ, ಹಲಸು ಹೀಗೆ ಹತ್ತು ಹಲವು ಜಾತಿಯ ಗಿಡಗಳನ್ನು ನೀಡಿದ್ದು, ಈ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಸಹ ಕೈ ಜೋಡಿಸಿ ಹಸಿರು ಕಾಂತ್ರಿಗೆ ಮುನ್ನುಡಿ ಬರೆದರು. ಇಂದಿನ ಕಾಲದಲ್ಲಿ ದೇವಸ್ಥಾನಗಳು ಎಂದರೇ ದುಡ್ಡು ಮಾಡುವ ಕೇಂದ್ರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತಿರುವಾಗಲೇ, ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಗಿಡಗಳನ್ನು ನೀಡುವ ಮೂಲಕ ಹಸಿರು ಕ್ರಾಂತಿಗೆ ತಳಹದಿ ಹಾಕಿದ್ದು ಎಲ್ಲರೂ ಮೆಚ್ಚುವಂತದ್ದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್​: ಡಿಕೆ ಶಿವಕುಮಾರ್
ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್​: ಡಿಕೆ ಶಿವಕುಮಾರ್
ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ
ಅಬ್ದುಲ್ ರಜಾಕ್​​ ಬಳಿ ಮಾಂಸ ಮಾರಾಟ ಲೈಸೆನ್ಸ್ ಇಲ್ಲ-ಆಹಾರ ಇಲಾಖೆ ಆಯುಕ್ತ
ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ; ರವಿ
ದರ್ಶನ್​ಗೆ ಡಯಟ್ ಬಗ್ಗೆ ಗೊತ್ತು, ಅವರು ಆರೋಗ್ಯ ಕಾಪಾಡಿಕೊಳ್ಳುತ್ತಾರೆ; ರವಿ
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?