AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಕ್ತ ಮಠಕ್ಕೆ ಮುಸ್ಲಿಂ ವ್ಯಕ್ತಿ ಪೀಠಾಧಿಪತಿ: ವಿರೋಧಿಸಿದ ಗ್ರಾಮಸ್ಥರಿಗೆ ತಿಳಿ ಹೇಳಿದ ವಚನಾನಂದ ಶ್ರೀ

ಅದು ಲಿಂಗಾಯಿತ ವಿರಕ್ತಮಠ. ಮಠಕ್ಕೆ ಓರ್ವ ಯುವ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸಬೇಕೆಂದು ಗ್ರಾಮಸ್ಥರು ನಿರ್ಧಾರ ಮಾಡಿದ್ದರು. ಅದರಂತೆ ಯಾದಗಿರಿಯಿಂದ ಓರ್ವ ಸ್ವಾಮೀಜಿಯನ್ನು ಕರೆತಂದು ಪೀಠಾಧಿಪತಿ ಮಾಡಿದ್ದರು. ಸ್ವಾಮೀಜಿ ಕೂಡ ಅತ್ಯುತ್ತಮವಾಗಿ ಬಸವ ತತ್ವ ಬೋಧಿಸುತ್ತಿದ್ದರು. ಆದರೆ ಸ್ವಾಮೀಜಿಗಳ ಪೂರ್ವಾಶ್ರಮದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ. ಇನ್ನು  ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಮುಸ್ಲಿಂ ಪೀಠಾಧಿಪತಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ವಿರಕ್ತ ಮಠಕ್ಕೆ ಮುಸ್ಲಿಂ ವ್ಯಕ್ತಿ ಪೀಠಾಧಿಪತಿ: ವಿರೋಧಿಸಿದ ಗ್ರಾಮಸ್ಥರಿಗೆ ತಿಳಿ ಹೇಳಿದ ವಚನಾನಂದ ಶ್ರೀ
Vachananda Swamiji
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Aug 05, 2025 | 6:58 PM

Share

ಗದಗ, (ಆಗಸ್ಟ್ 05): ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆಯ ಚೌಡಹಳ್ಳಿಯ ಮಠದ ‌ಪೀಠಾಧಿಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಡವಾಗಿ ತಿಳಿದುಬಂದಿದೆ. ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್‌ ಎಂದು ಇತ್ತು. ವಿಚಾರ ಗೊತ್ತಾಗುತ್ತಿದ್ದಂತೆಯೇ ಚೌಡಹಳ್ಳಿ ಗ್ರಾಮಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ. ಇನ್ನು ಬಗ್ಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಮ್ಮದ್ ನಿಸಾರ್ ಅಲಿಯಾಸ್ ನಿಜಲಿಂಗಸ್ವಾಮೀಜಿ (mohammad nissar Aliyas nijalinga swamiji) ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. 22 ವರ್ಷದ ಒಬ್ಬ ಯುವಕ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ನಿತ್ಯ ಶಿವಯೋಗ ಸಾಧನೆ ಮಾಡ್ಕೊಂಡು, ಕಾಯಕ ದಾಸೋಹ ಮಾಡಿಕೊಂಡು ಸನ್ಯಾಸತ್ವ ವಿರಕ್ತಾಶ್ರಮ ಸ್ವೀಕಾರ ಪಡೆದುಕೊಂಡು ಸ್ವಾಮೀಜಿ ಆದ್ರೆ ಸಂತೋಷ ಪಡಬೇಕು.. ನಮ್ಮವ ನಮ್ಮವ ಇವ ನಮ್ಮವ ಎನ್ನಬೇಕು ಎಂದಿದ್ದಾರೆ

ಈ ಬಗ್ಗೆ ಗದನನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಚನಾನಂದ ಶ್ರೀ, ಈ ಸ್ವಾಮಿಗಳು ಮೂಲತಃ ಇಸ್ಲಾಂ ಧರ್ಮದವರು ಅಂತ ಗ್ರಾಮಸ್ಥರಿಗೆ ಗೋತ್ತಾಗಿಲ್ಲ. ಒಂದು ಸಲ ಸನ್ಯಾಸತ್ವ ಸ್ವೀಕಾರ ಮಾಡಿದ್ರೆ ಮತ್ತೆ ಪೂರ್ವಾಶ್ರಮದ ಕಡೆ ಹೋಗಬಾರದು. ಗುರುಮಲ್ಲೇಶಪ್ಪನವರು ಮೈಸೂರು, ಚಾಮರಾಜನಗರ ಭಾಗದಲ್ಲಿ ನೂರಾರು ಮಠಗಳು ಇವೆ. ಈ ಮಠದ ಪೀಠಕ್ಕೆ ಮಠಾಧೀಶರು ಆಗಿದ್ರು. ಪೂರ್ವಾಶ್ರಮದ ಮಾಹಿತಿ ಇಲ್ಲದೇ ಈ ಘಟನೆ ನಡೆದಿದೆ. ನಿಜಲಿಂಗಸ್ವಾಮೀಜಿ ಅಂತ ಪೀಠಾಧಿಪತಿ ಆಗಿದ್ದರು. ಈಗ ಗ್ರಾಮಸ್ಥರ ಒತ್ತಾಯ ಮೇರೆಗೆ ಪೀಠ ತೊರೆದಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ್ದೇನೆ. ಧೈರ್ಯ, ಸ್ಥೈರ್ಯ ತುಂಬಲಾಗಿದೆ ಎಂದರು.

ಇದನ್ನೂ ಓದಿ: ಲಿಂಗಾಯತ ವಿರಕ್ತ ಮಠಕ್ಕೆ ಮುಸಲ್ಮಾನ ಪೀಠಾಧಿಪತಿ: ಒಂದುವರೆ ತಿಂಗಳ ಬಳಿಕ ಸತ್ಯ ಬಹಿರಂಗ

ಆ ಧರ್ಮ ಬಿಟ್ಟು ಬಹಳ ಪಯಣ ಮಾಡಿದ್ದಾರೆ. ಈ ತತ್ವದಲ್ಲಿ ಇರಬೇಕು. ನಿಮಗೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಅಂತ ಧೈರ್ಯ ನೀಡಿದ್ದೇವೆ. ಸ್ವಾಮೀಜಿಯೊಬ್ಬರ ಆಶ್ರಮದಲ್ಲಿ ಆಶ್ರಯ ನೀಡಲಾಗಿದೆ. ನಾಳೆ, ನಾಡಿದ್ದು, ಬಸವತತ್ವ ಇರುವ ಮಠಾಧೀಶರು ಭೇಟಿ ಮಾಡುತ್ತೇವೆ. ಇಂಥ ಯುವ ಸ್ವಾಮೀಗಳು ಹಿಂದೂತ್ವಕ್ಕೆ ಬರಲಿ. ಪ್ರೀತಿ ಗೌರವ ಇಟ್ಕೊಂಡು ನಮ್ಮ ತತ್ವವನ್ನು ಅವರ ಮೂಲಕ ಪ್ರಚಾರ ಮಾಡಬೇಕು. ಒಬ್ಬ ಸ್ವಾಮೀಜಿಯನ್ನು‌ ಮಠಕ್ಕೆ ಕರೆತರಬೇಕಾದ್ರೆ ಪೂರ್ವಾಶ್ರಮದ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಭಕ್ತರ ಜವಾಬ್ದಾರಿ ಎಂದು ಹೇಳಿದರು.

ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್‌ ಎಂದು ಇತ್ತು. ಮಹಮದ್ ನಿಸಾರ್‌ ಅವರು ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್‌ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು. ಆದ್ರೆ, ಇದೀಗ ಚೌಡಹಳ್ಳಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Tue, 5 August 25