
ಬೆಂಗಳೂರು, (ಆಗಸ್ಟ್ 22): ವಾಲ್ಮೀಕಿ ನಿಗಮದಲ್ಲಿನ ಹಗರಣ (valmiki corporation scam) ಖಂಡಿಸಿ ಬಿಜೆಪಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ತಿದೆ. ಸಚಿವ ಬಿ.ನಾಗೇಂದ್ರ (B Nagendra) ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸಾಲು ಸಾಲು ಪ್ರತಿಭಟನೆ, ಧರಣಿ ನಡೀತಿದೆ. ದಿನಕ್ಕೊಂದು ಜಿಲ್ಲೆಯಲ್ಲಿ ಪ್ರತಿಭಟನೆ ಆಗ್ತಿದೆ. ಸದನದಲ್ಲೂ ರಾಜೀನಾಮೆ ಕೇಳ್ತಿದ್ದಾರೆ. ಇದೀಗ ರಾಯಚೂರು ನಗರದ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿನ ಹೋರಾಟ 4ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಸಚಿವ ನಾಗೇಂದ್ರಗೆ ಸಿಬಿಐ ಸಂಕಷ್ಟ ಎದುರಾಗುತ್ತಾ? ಅನ್ನೋ ಪ್ರಶ್ನೆ ಎದ್ದಿದೆ. ಯಾಕೆಂದ್ರೆ ಅದಕ್ಕೆ ತಕ್ಕಂತೆ ಬೆಳವಣಿಗೆಗಳು ಆಗ್ತಿದೆ. ಸಿಬಿಐ ಅಧಿಕಾರಿಗಳು ರಾಜ್ಯಪಾಲರಿಗೆ (Governor) ಪತ್ರ ಬರೆದಿದ್ದು, ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದ್ದಾರೆ.
ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ಕೊಡೋ ಅಧಿಕಾರ ಗವರ್ನರ್ಗೆ ಇದ್ಯಾ? ಮುಂದೆ ಏನೆಲ್ಲಾ ಬೆಳವಣಿಗೆ ಆಗುತ್ತೆ ಅನ್ನೋದನ್ನೇ ನೋಡೋದಾದ್ರೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆ.19ರಡಿಯಲ್ಲಿ ರಾಜ್ಯಪಾಲರ ಅನುಮತಿ ಅಗತ್ಯ. ಒಂದು ವೇಳೆ ಅನುಮತಿ ಇಲ್ಲದೇ ಆರೋಪಪಟ್ಟಿಯನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಿಎಂ ವಿರುದ್ಧದ ಕೇಸ್ ಆಗಿದ್ದರೆ ರಾಜ್ಯಪಾಲರೇ ಅನುಮತಿ ಕೊಡಬಹುದು. ಆದರೆ ಸಚಿವರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿಗೆ ಸಂಪುಟದ ಸಲಹೆ ನೀಡಬಹುದು. ಒಂದು ವೇಳೆ ಸಂಪುಟ ಅನುಮತಿ ನಿರಾಕರಿಸಿದ್ರೆ ರಾಜ್ಯಪಾಲರಿಗೆ ವಿವೇಚನಾಧಿಕಾರವಿದೆ. ದಾಖಲೆ ಪರಿಗಣಿಸಿ ರಾಜ್ಯಪಾಲರೇ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಬಹುದು.
ರಾಜ್ಯಪಾಲರು ಅನುಮತಿ ನೀಡಿದರೆ ಕೋರ್ಟ್ನಲ್ಲಿ ಸಾಕ್ಷ್ಯವಿಚಾರಣೆ ಆರಂಭವಾಗುತ್ತದೆ. ಇನ್ನು ರಾಜ್ಯಪಾಲರು ವಿವೇಚನೆ ಬಳಸಿ ಅನುಮತಿ ನೀಡಿದರೆ ನಾಗೇಂದ್ರ ಪ್ರಶ್ನಿಸಬಹುದು. ಸಚಿವ ಸಂಪುಟದ ಸಲಹೆ ಪಡೆದಿಲ್ಲವೆಂದು ಕೋರ್ಟ್ನಲ್ಲಿ ನಾಗೇಂದ್ರ ಪ್ರಶ್ನಿಸಬಹುದು.
ಸದ್ಯ ಹೈಕೋರ್ಟ್ ಈಗಾಗಲೇ ಸಿಬಿಐಯ ಜಾಮೀನು ರದ್ದು ಮನವಿಯ ಮೇಲೆ ನಾಗೇಂದ್ರರಿಗೆ ನೋಟಿಸ್ ನೀಡಿದೆ… ತನಿಖೆ, ಕಾಗ್ನಿಜನ್ಸ್ ಅಥವಾ ಸ್ಯಾಂಕ್ಷನ್ ಪ್ರಕ್ರಿಯೆಯಲ್ಲಿ ಮೂಲಭೂತ ಕಾನೂನು ದೋಷವಿದ್ದರೆ ಹೈಕೋರ್ಟ್ನಲ್ಲಿ ಸೂಕ್ತ ಪರಿಹಾರ ಕೋರಬೇಕಷ್ಟೇ.

ಇನ್ನು ಸಿಬಿಐ ಚಾರ್ಜ್ಶೀಟ್ನಲ್ಲಿ ನಾಗೇಂದ್ರರ ಹೆಸರು ಇದೆ. ಪ್ರಕರಣದಲ್ಲಿ ಬಹುಕೋಟಿ ಹಣ ದುರುಪಯೋಗದ ಆರೋಪ ಇದೆ. ಇದಷ್ಟೇ ಅಲ್ಲ, ಸಿಬಿಐ ವಿಚಾರಣೆಗೆ ಮೇಲ್ನೋಟಕ್ಕೆ ಅರ್ಹವಾದ ಸಾಕಷ್ಟು ವಿಷಯಗಳಿವೆ ಅನ್ನೋದು ಬಿಜೆಪಿ ವಾದ ಆಗಿದೆ.