AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ವರ್ಷ ನಂತರ ಈ ಇಬ್ಬರು ಶಾಸಕರನ್ನ ಉಚ್ಛಾಟನೆ ಮಾಡಿದ್ಯಾಕೆ? ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು?

ಬೆಂಗಳೂರಿನ ಯಶವಂತಪುರದ ಬಿಜೆಪಿಯ (BJP) ಶಾಸಕ ಎಸ್‌ಟಿ ಸೋಮಶೇಖರ್‌ (ST Somashekar) ಮತ್ತು ಯಲ್ಲಾಪುರದ ಶಾಸಕ ಶಿವರಾಂ ಹೆಬ್ಬಾರ್‌ (Shivaram Hebbar) ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 2023ರಿಂದಲೂ ಅವರು ಪಕ್ಷದಿಂದ ದೂರು ಉಳಿದಿದ್ದರು. ಹೀಗಾಗಿ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕೆಂಬ ಮಾತುಗಳು ಸಹ ಕೇಳಿಬಂದಿದ್ದವು. ಆದ್ರೆ, ಹೈಕಮಾಂಡ್ ಎರಡು ವರ್ಷಗಳ ನಂತರ ಕ್ರಮಕೈಗೊಂಡಿದೆ. ಹಾಗಾದ್ರೆ, 2 ವರ್ಷ ನಂತರ ಈ ರೀತಿಯ ಕ್ರಮಕೈಗೊಂಡಿರುವುದಕ್ಕೆ ಕಾರಣಗಳೇನು? ಹೈಕಮಾಂಡ್​​ ನ ಲೆಕ್ಕಾಚಾರ ಇಲ್ಲಿದೆ.

2 ವರ್ಷ ನಂತರ ಈ ಇಬ್ಬರು ಶಾಸಕರನ್ನ ಉಚ್ಛಾಟನೆ ಮಾಡಿದ್ಯಾಕೆ? ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು?
St Somashekhar And Shivaram Hebbar
Follow us
ರಮೇಶ್ ಬಿ. ಜವಳಗೇರಾ
|

Updated on:May 27, 2025 | 7:24 PM

ಬೆಂಗಳೂರು (ಮೇ 27): ಬಿಜೆಪಿಯಿಂದ (BJP) ಗೆದ್ದು ವಿಧಾನಸಭೆ ಪ್ರವೇಶಿಸಿರುವ ಯಶವಂತಪುರ ಶಾಸಕ ಎಸ್​ ಟಿ ಸೋಮಶೇಖರ್ (ST somashekhar) ಹಾಗೂ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ (Shivaram hebbar) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಆದ್ರೆ, ಅಂದಿನಿಂದಲೂ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಸಾಲದಕ್ಕೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಪರ ಬಹಿರಂಗ ಬ್ಯಾಟಿಂಗ್ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅಂತಿಮವಾಗಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ಕೇಂದ್ರ ಶಿಸ್ತು ಸಮಿತಿ ಇಂದು (ಮೇ 27) ಆದೇಶ ಹೊರಡಿಸಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿ ಶಿಸ್ತು ಸಮಿತಿ ಇಬ್ಬರು ಶಾಸಕರಿಗೆ ನೋಟಿಸ್ ನೀಡಿತ್ತು. ಆ ನೋಟಿಸ್‌ಗೆ ಮೇ 25ರ ಒಳಗೆ ಉತ್ತರಿಸುವಂತೆ ಸೂಚನೆ ನೀಡಿತ್ತು. ನೋಟಿಸ್‌ಗೆ ಉತ್ತರಿಸುವ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಇದನ್ನೂ ಓದಿ: ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

ಯಶವಂತಪುರ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಯಲ್ಲಾಪುರ ಶಾಸಕರಾದ ಶಿವರಾಮ್ ಹೆಬ್ಬಾರ್ ಅವರ ಮೇಲೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿತ್ತು. ಪದೇ ಪದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇಂದಿನಿಂದ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ಪಕ್ಷದ ಸದಸ್ಯತ್ವದಿಂದ ಉಚ್ಛಾಟನೆಗೊಂಡಿದ್ದಾರೆ.

ಇದನ್ನೂ ಓದಿ
Image
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
Image
10-12 ಸೀಟ್​ ಖಾಲಿ ಆಗುತ್ತೆ: ಉಚ್ಛಾಟನೆ ಬೆನ್ನಲ್ಲೇ ಸೋಮಶೇಖರ್ ಬಾಂಬ್!
Image
ಅವರಿಬ್ಬರು ಯಾರನ್ನೂ ರೇಪ್ ಮಾಡಿರಲಿಲ್ಲ ಅಲ್ವಾ: ಡಿಕೆಶಿ ಪ್ರಶ್ನೆ
Image
ಬಿಜೆಪಿಯಿಂದ ಶಾಸಕ್ ಶಿವರಾಮ್ ಹೆಬ್ಬಾರ್ ಹಾಗೂ ಎಸ್​ಟಿ ಸೋಮಶೇಖರ್ ಉಚ್ಚಾಟನೆ

ಉಚ್ಚಾಟನೆಗೆ ಕಾರಣ ಏನು?

  • ಪದೇ ಪದೇ ಡಿಕೆಶಿ ನಿವಾಸದ ಕದ ತಟ್ಟುತ್ತಿದ್ದ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಾರ್ವಜನಿಕ ಸಭೆಗಳಲ್ಲಿ ಹೊಗಳುತ್ತಿದ್ದರು. ಗ್ಯಾರಂಟಿ, ಸರ್ಕಾರದ ಯೋಜನೆಗಳಿಗೆ ಶಹಬ್ಬಾಸ್‌ಗಿರಿ ನೀಡುತ್ತಿದ್ದರು.
  • ಕಾಂಗ್ರೆಸ್ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸದೇ ಡೋಂಟ್ ಕೇರ್ ಎನ್ನುತ್ತಿದ್ದರು. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ, ಸಂಘಟನಾ ಸಭೆಗಳಿಂದ ದೂರ ಉಳಿದಿದ್ದರು. ಬಿಜೆಪಿಯೊಳಗಿನ ಭಿನ್ನಮತದ ಬಗ್ಗೆ ಬಹಿರಂಗ ವ್ಯಂಗ್ಯ, ಒಂದು ಗುಂಪಿನ ಬಗ್ಗೆ ನಿರಂತರ ವಾಗ್ದಾಳಿ ನಡೆಸುತ್ತಿದ್ದರು.
  • ಹೀಗೆ ಇಬ್ಬರು ನಾಯಕರು ಬಹಿರಂಗವಾಗಿ ಕಾಂಗ್ರೆಸ್‌ ಸಭೆಯಲ್ಲಿ ಭಾಗಿಯಾಗುತ್ತಿದ್ದರು. ಅಷ್ಟೇ ಅಲ್ಲದೇ ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಇಬ್ಬರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಂಡಿದೆ.

ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು?

ರಾಜ್ಯ ಬಿಜೆಪಿ ವಿಷಯ ಅಂದ್ರೆ ಹೈಕಮಾಂಡ್ ಮೂಗು ಮುರಿಯುತ್ತಿತ್ತು. ರಾಜ್ಯ ನಾಯಕರು ದೂರು ನೀಡಲು ಹೋದರೂ ಡೋಂಡ್​ ಕೇರ್​ ಎನ್ನುತ್ತಿದ್ದ ಹೈಕಮಾಂಡ್ ಇದೀಗ ಏಕಾಏಕಿ ಎಚ್ಚೆತ್ತುಕೊಂಡಿದೆ. ಯಾವುದೇ ಸಂಘಟನೆ ಮಾಡುತ್ತಿಲ್ಲ. ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹೈಕಮಾಂಡ್​, ರಾಜ್ಯ ಬಿಜೆಪಿ ಮೇಲೆ ಗರಂ ಆಗಿದೆ. ಪ್ರಮುಖವಾಗಿ ಬಿಜೆಪಿ ನಂಬಿರುವುದೇ ಬೂತ್​ ಮಟ್ಟದ ಸಂಘಟನೆ. ಈಗ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೆ ನಡೆಯಲಿದೆ, ಆದ್ರೆ, ರಾಜ್ಯ ಬಿಜೆಪಿಯಲ್ಲಿ ತಳಮಟ್ಟದ ಸಂಘಟನೆ ಅಷ್ಟಾಗಿ ಬಲಿಷ್ಠವಾಗಿಲ್ಲ. ಹೀಗಾಗಿ ಎಲ್ಲಾ ಗುಂಪುಗಾರಿಕೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಮೇನ್ ಲೀಡರ್​ ಗಳನ್ನೇ ಪಕ್ಷದಿಂದ ಹೊರಹಾಕಿದೆ. ಇದರೊಂದಿಗೆ ಹೈಕಮಾಂಡ್ ಇತರರಿಗೂ ಸಂದೇಶ ರವಾನಿಸಿದೆ.

ಪಕ್ಷಕ್ಕಿಂತ ಯಾವುದು ದೊಡ್ಡವರಲ್ಲ ಎನ್ನುವ ಸಂದೇಶ ಸಹ ನೀಡಿದಂತಿದೆ. ಒಂದು ವೇಳೆ ನಾಯಕರೇ ಹೀಗೆ ಗುಂಪುಗಾರಿಕೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಪರಿಸ್ಥಿತಿ ಏನು? ಹೀಗಾದರೆ ತಳಮಟ್ಟದಲ್ಲಿ ಸಂಘಟನೆಗೆ ದೊಡ್ಡ ಪೆಟ್ಟು ಬೀಳಲಿದೆ  ಎನ್ನುವುದನ್ನು  ಹೈಕಮಾಂಡ್ ಅರಿತುಕೊಂಡಿದೆ.

ಸೋಮಶೇಖರ್ ಹಾಗೂ ಹೆಬ್ಬಾರ್ ಸಹ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಕೆಲ ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಆದ್ರೆ, ಇದನ್ನು ಬಿಜೆಪಿ ಅಷ್ಟಾಗಿ ಕೇರ್ ಮಾಡಿಲ್ಲ. ಯಾಕಂದ್ರೆ, ಈ ಇಬ್ಬರು ಶಾಸಕರು ಬೇರೆ ಪಕ್ಷದಿಂದ ಬಂದವರು. ಕಳದ ಸರ್ಕಾರವಧಿಯಲ್ಲಿ ಸಚಿವರು ಸಹ ಆಗಿದ್ದವು. ಈಗ ಅಧಿಕಾರ ಇಲ್ಲದಿದ್ದಾಗ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಂದೆ ಇವರು ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ ಎನ್ನುವುದನ್ನು ಹೈಕಮಾಂಡ್ ಅರಿತಿದೆ. ಹೀಗಾಗಿ ಸೋಮಶೇಖರ್ ಮತ್ತು ಹೆಬ್ಬಾರ್ ದೂರು ನೀಡಿದ್ದ ಮೂಲ ಬಿಜೆಪಿ ಮುಖಂಡರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.  ಬದಲಾಗಿ ಇಬ್ಬರನ್ನು ಉಚ್ಛಾಟಿಸಿ ಮೂಲ ಬಿಜೆಪಿ ಮುಖಂಡರ ಬೆನ್ನಿಗೆ ನಿಂತಿದೆ.

ಅಲ್ಲದೇ ಮುಂಬರುವ ಸ್ಥಳೀಯ ಚುನಾವಣೆಗಳ ದೃಷ್ಟಿಯಿಂದ  ಹೈಕಮಾಂಡ್ ಏಕಾಏಕಿ ಈ ಕ್ರಮಕೈಗೊಂಡಿದೆ.  ಇಂತಹ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿದ್ದರೆ ಸ್ಥಳೀಯವಾಗಿ ಪಕ್ಷ ಹಿನ್ನಡೆಯಾಗುತ್ತೆ, ಮುಂದೆ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲೂ ಸಹ ಹೊಡೆತ ಕೊಡುತ್ತೆ ಎನ್ನುವ ಲೆಕ್ಕಾಚಾರದಿಂದಲೇ ಹೈಕಮಾಂಡ್ ಈ ದಿಟ್ಟ ಕ್ರಮಕೈಗೊಂಡಿದೆ ಎನ್ನಲಾಗಿದೆ.

ಏಕಾಏಕಿ ಎಚ್ಚೆತ್ತುಕೊಂಡ ಹೈಕಮಾಂಡ್

ರಾಜ್ಯ ಬಿಜೆಪಿಯಲ್ಲಿನ ಕೆಲ ದೋಷದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಹೈಕಮಂಡ್​ ಇದೀಗ ಏಕಾಏಕಿ ಎಚ್ಚೆತ್ತುಕೊಂಡಿದೆ. ಕರ್ನಾಟಕ ಬಿಜೆಪಿಯಲ್ಲಿನ ಆಂತರಿಕ, ಬಹಿರಂಗ ಕಚ್ಚಾಟಗಳನ್ನು ನೋಡಿ ನೋಡಿ ಸಾಕಾಗಿ ಹೈಕಮಾಂಡ್​ ದಿಟ್ಟ ಕ್ರಮಗಳನ್ನ ಕೈಗೊಳ್ಳುತ್ತಿದೆ. ​ ಮೊನ್ನೇ ಅಷ್ಟೇ ಬಸನಗೌಡ ಪಾಟೀಲ್ ಯತ್ನಾಳ್​ ಅವರಂತಹ ಕಟ್ಟರ್ ಹಿಂದುತ್ವವಾದಿಯನ್ನೇ ಪಕ್ಷದಿಂದ ಹೊರಹಾಕುವ ಕೆಲಸ ಮಾಡಿದೆ. ಅದಕ್ಕೂ ಮೊದಲು ಯಡಿಯೂರಪ್ಪ ಜತೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿಬೆಳೆಸಿದ ನಿಷ್ಠಾವಂತ ನಾಯಕನನ್ನೇ ಹಿಂದೆ ಮುಂದೆ ನೋಡದೇ ಪಕ್ಷದಿಂದ ಅಮಾನತು ಮಾಡಿದೆ.

ರಾಜ್ಯ ಬಿಜೆಪಿಗೆ ಹೈಕಮಾಂಡ್ ಖಡಕ್‌ ಸಂದೇಶ

ಯತ್ನಾಳ್ ಜೊತೆ ಇದೀಗ ಮತ್ತಿಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡೋ ಮೂಲಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೂ ಸಂದೇಶ ನೀಡಿದೆ. ರಾಜ್ಯ ಬಿಜೆಪಿಯಲ್ಲಿ ಅಶಿಸ್ತು, ಗುಂಪುಗಾರಿಕೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆ ಆಗಿತ್ತು. ಈ ಬಗ್ಗೆ ಗರಂ ಆಗಿದ್ದ ಹೈಕಮಾಂಡ್, ಅಶಿಸ್ತು‌ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಘಟನೆ, ಪಕ್ಷ ಬಲವರ್ಧನೆಗೆ ಮುಂದಾಗಿದೆ.

ಪಕ್ಷ ಸಂಘಟನೆ ಬಗ್ಗೆ ಹೈಕಮಾಂಡ್​ ಅಸಮಾಧಾನ

ಬಿಜೆಪಿ ಇತ್ತೀಚೆಗೆ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡಿತ್ತು. ಆದ್ರೆ, ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆಯ ಸಮಾರೋಪ ಮಾಡಲೇ ಇಲ್ಲ. ಹೀಗಾಗಿ ಅದು ಅರ್ಧಂಬರ್ಧಕ್ಕೆ ಮುಕ್ತಾಯವಾಗಿದೆ. ಈಗ ಹೊಸದಾಗಿ ಸಂಘಟನೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ಸಂಘಟನೆಗೆ ಸಂಬಂಧಿಸಿದಂತೆ  ರಾಜ್ಯ ಬಿಜೆಪಿಯಲ್ಲಿ ಹೊಸದಾಗಿ ಯಾವುದೇ ಒಂದು ಕಾರ್ಯಕ್ರಮಗಳು ರೂಪರೇಷಗಳು ಸಿದ್ಧಗೊಳ್ಳುತ್ತಾ ಇಲ್ಲ ಎಂದು ಹೈಕಮಾಂಡ್ ಬೇಸರಗೊಂಡಿದೆ. ಯಾವುದೇ ರೀತಿಯ ಸಂಘಟನಾ ಚರ್ಚೆಗಳಾಗಲಿ, ಸಂಘಟನಾತ್ಮಕ ಕಾರ್ಯಕ್ರಮಗಳನ್ನಾಗಲಿ ರೂಪಿಸುವಲ್ಲಿ ಒಂದು ಸಭೆಗಳನ್ನಾಗಲಿ, ಪ್ರಧಾನ ಕಾರ್ಯದರ್ಶಿಗಳ ಸಭೆಯಾಗಲಿ ಯಾವುದು ಕೂಡ ನಡೆಯುತ್ತಿಲ್ಲ ಎನ್ನುವುದು ಹೈಕಮಾಂಡ್ ಒಂದು ಹಂತದಲ್ಲಿ ಬೇಸರಗೊಳ್ಳುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಪ್ರಮುಖವಾಗಿ ಗಮನಿಸುವುದಾದರೆ ರಾಜ್ಯ ಸರ್ಕಾರದ ವಿರುದ್ಧ ಅನೇಕ ಹೋರಾಟಗಳನ್ನ ಮಾಡುವಲ್ಲಿ ಬಿಜೆಪಿ ಒಂದಿಷ್ಟು ಪ್ರಯತ್ನಗಳನ್ನ ಮಾಡಿತ್ತು. ಮೂಡ ಹಗರಣಕ್ಕೆ ಸಂಬಂಧಪಟ್ಟಂತೆ ಒಂದು ಪಾದಯಾತ್ರೆಯನ್ನ ಮಾಡಿತ್ತು. ನಂತರದಲ್ಲಿ ಜನಾಕ್ರೋಶ ಯಾತ್ರೆಯನ್ನ ಮಾಡಿತ್ತು. ಬೆಲೆ ಏರಿಕೆಯ ಬಗ್ಗೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನ ಮಾಡಿತು. ಈ ಒಂದು ಹೋರಾಟ ಕೇವಲ ಸರ್ಕಾರ ವಿರುದ್ಧ ಪ್ರತಿಭಟನೆಗಳನ್ನ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನಿಡಿದರೆ ಸಂಘಟನೆ ಎನ್ನುವಂತದ್ದು ಚುರುಕಾಗುವುದಿಲ್ಲ. ಮುಂದೆ ತಾಲೂಕಾ, ಜಿಲ್ಲಾ ಪಂಚಾಯತಿ ಚುನಾವಣೆ ಇದೆ. ಹೀಗಾಗಿ ಕಾರ್ಯಕರ್ತರನ್ನ ಬ್ಯುಸಿಯಾಗಿ ಇರಿಸಬೇಕು. ಸಂಘಟನೆಯಲ್ಲಿ ತೊಡಗಿಸಿಕೊಂಡಿರುವಂತ ಪದಾಧಿಕಾರಿಗಳನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿದಾಗ ಪಕ್ಷ ಸಂಘಟನೆಯಾಗುತ್ತೆ. ಹಾಗೇ ಕಾರ್ಯಕರ್ತರು ಕೂಡ ಉತ್ಸಾಹದಿಂದ ಇರ್ತಾರೆ. ಆದರೆ ಇತ್ತೀಚಿಗೆ ಬಿಜೆಪಿಯಲ್ಲಿ ಅದ್ಯಾವುದು ಸಹ ನಡೆದಿಲ್ಲ.

ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆದು ಐದಾರು ತಿಂಗಳಾಗಿದೆ. ಇನ್ನು ಕೋರ್ ಕಮಿಟಿ ಸಭೆ ನಾಡಿದ್ದು 29ಕ್ಕೆ ನಿಗದಿಯಾಗಿದೆ. ಆದರೆ ಕೋರ್ ಕಮಿಟಿ ಸಭೆ ಕೂಡ ಆಗದೇನೆ ಎರಡು ಮೂರು ತಿಂಗಳಗಳೇ ಆಗಿದೆ. ಕಳೆದ ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ಬೇಸರ ವ್ಯಕ್ತಡಿಸಿದ್ದರೋ ಅದೇ ಲಾಸ್ ಮೀಟಿಂಗ್. ಅದಾದ ಮೇಲೆ ಇಲ್ಲಿಯ ತನಕ ಕೋರ್ ಕಮಿಟಿ ಸಭೆ ಕೂಡ ಆಗಿಲ್ಲ. ಮುಂದೆ ಯಾವುದೇ ಕಾರ್ಯಕ್ರಮಗಳನ್ನ ಯೋಜನೆಗಳನ್ನ ರಾಜ್ಯ ಬಿಜೆಪಿ ಸಿದ್ಧಪಡಿಸಿಲ್ಲ ಎನ್ನುವ ಚರ್ಚೆಗಳು ಪಕ್ಷದ ಆತಂತರಿಕದಲ್ಲಿ ಚರ್ಚೆಯಾಗುತ್ತಿದೆ.

ಸಂಘಟನಾತ್ಮಕ ಅಥವಾ ಯಾವುದೇ ಒಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸಭೆಗಳು ಪ್ರತಿ 15 ದಿನಗಳಿಗೆ ಅಥವಾ ಒಂದು ತಿಂಗಳಿಗೆ ಒಮ್ಮೆ ನಡೆಯುತ್ತೆ. ಮುಂದಿನ ಮೂರು ತಿಂಗಳುಗಳ ಪಕ್ಷದ ಕಾರ್ಯಚಟುವಟಿಕೆಗಳ ರೂಪರೇಷೆಗಳ ಬಗ್ಗೆ ಚರ್ಚೆ ನನಡೆಯುತ್ತವೆ. ಆದ್ರೆ, ಬಿಜೆಪಿಯಲ್ಲಿ ಆ ರೀತಿ ಯಾವುದೇ ಸಭೆಗಳು ಆಗುತ್ತಿಲ್ಲ. ಈ ಕಾರಣಕ್ಕಾಗಿ ಸ್ವತಃ ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಬೆಂಗಳೂರಿಗೆ ಆಗಮಿಸಿದ್ದು,ಕೂಡಲೇ ಸಭೆ ಕರೆದಿದ್ದಾರೆ. ಓಬಿಸಿ ಮೋರ್ಚದ ಸಭೆ, ಮಹಿಳಾ ಮೋರ್ಚ ಸಭೆ ಹಾಗೂ ಯುವಮೋರ್ಚ ಸಭೆಯನ್ನ ಕೂಡ ಕರೆಯಲಾಗಿದೆ. ಮೂರು ದಿನಗಳ ಕಾಲ ಈ ಸಭೆ ನಡೆಯುತ್ತೆ ಎಂದು ತಿಳಿದುಬಂದಿದೆ.

ಆಪರೇಷನ್ ಸಿಂಧೂರ್ ಯಶಸ್ವಿ ಬಗ್ಗೆ ಕೆಲವು ಕಾಂಗ್ರೆಸ್​ ನಾಯಕರುಗಳು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡಿರುವುದು. ಪ್ರಮುಖವಾಗಿ ಕೇಂದ್ರ ಸರ್ಕಾರ ಯಾವ ಆಪರೇಷನ್ ಸಿಂಧೂರದಲ್ಲಿ ಯಶಸ್ವಿ ಆಯ್ತು ಎನ್ನುವುದನ್ನು ಜನರ ಬಳಿ ತೆಗೆದುಕೊಂಡು ಹೋಗುವುಕ್ಕೆ ಪ್ರತಿ ಜಿಲ್ಲೆಗಳಿಗೂ ಕಾರ್ಯಕ್ರಮ ಆಯೋಜಿಸಿ ಭಾಷಣ ಮಾಡಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಒನ್ ನೇಷನ್ ಒಂದು ಎಲೆಕ್ಷನ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೂಡ ಮತ್ತೆ ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಅದರ ಕುರಿತಂತೆ ಮೇ 29ಕ್ಕೆ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ. ಆ ಕೋರ್ ಕಮಿಟಿ ಸಭೆಯಲ್ಲಿ ಯಾವೆಲ್ಲ ಹೊಸ ವಿಚಾರಗಳ ಬಗ್ಗೆ ಅಥವಾ ಯಾವೆಲ್ಲ ಮುಂದಿನ ಹೋರಾಟಗಳ ಬಗ್ಗೆ ಸಂಘಟನೆಯ ಬಗ್ಗೆ ಚರ್ಚೆಗಳು ನಡೆಯಲಿವೆ. ಅದರಲ್ಲೂ ಮುಖ್ಯವಾಗಿ ಖಾಲಿ ಇರುವ 9 ಜಿಲ್ಲಾಧ್ಯಕ್ಷ ಆಯ್ಕೆ ಬಗ್ಗೆ ಮಾತುಕತೆಗಳು ನಡೆಯುವ ಸಾಧ್ಯತೆಗಳಿವೆ.

ಯಾವುದು ಆಗಿಲ್ಲ ಸಂಘಟನೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳನ್ನ ಕೆಲವೊಂದಿಷ್ಟು ಜನರನ್ನ ಬದಲಾವಣೆ ಮಾಡಿ ಹೊಸಬರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನುವಂತ ಚರ್ಚೆ ಆಗಿತ್ತು. ಅದು ಕೂಡ ಆಗಲಿಲ್ಲ. ಹೀಗಾಗಿ ಪದಾಧಿಕಾರಿಗಳ ಹೊಸ ಪಟ್ಟಿಯನ್ನ ಬಿಡುಗಡೆ ಮಾಡುವುದಾಗಲಿ, ಕೋರ್ ಕಮಿಟಿಯಲ್ಲಿ ಹೊಸ ಕೋರ್ ಕಮಿಟಿ ರಚನೆ ಮಾಡುವುದಾಗಲಿ. ಈ ಯಾವ ಪ್ರಕ್ರಿಯೆಗಳು ಇಲ್ಲಿಯ ತನಕ ಆಗದೆ ಇರುವ ಹಿನ್ನೆಲೆಯಲ್ಲಿ ಬಹುಶಃ ಹೈಕಮಾಂಡ್ ಸಹಜವಾಗಿ ಬೇಸರಗೊಂಡಿರುವುದಕ್ಕೆ ಕಾರಣವಾಗಿದೆ. ಇದಕ್ಕಾಗಿ ಸ್ವತಃ ರಾಧಾಮೋಹನ್ ಅಗರವಾಲ್ ಸಭೆಯನ್ನ ಕರೆದಿದ್ದು, ಈ ಸಭೆಯ ಬಳಿಕ ಅವರೇ ಸ್ವತಃ ಕೆಲವು ಜಿಲ್ಲೆಗಳಿಗೆ ಪ್ರವಾಸವನ್ನ ಮಾಡಿ ಸಂಘಟನೆಗೆ ಚುರುಕು ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.

ಒಟ್ಟಿನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ  ಲೆಕ್ಕಾಚಾರದಿಂದ ಹೈಕಮಾಂಡ್ , ಪಕ್ಷ ವಿರೋಧಿ, ಗುಂಪುಗಾರಿಕೆ ಮಾಡುವ ನಾಯಕರಿಗೆ ಚುರುಕು ಮುಟ್ಟಿಸಿದೆ.

Published On - 7:20 pm, Tue, 27 May 25

5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
5 ಹುಲಿಗಳ ಸಾವಿನ ಸುತ್ತ ಹಸು: ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ನೆರೆಯ ಭೀತಿ
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ಕೇರಳದ ಕೊಟ್ಟಿಯೂರು ದೇವಸ್ಥಾನದಲ್ಲಿ ದರ್ಶನ್ ಮಾಡಿಸಿದ ಪೂಜೆಯ ವಿಶೇಷತೆ ಏನು?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ