AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಪ್ರಶಾಂತ್​ ಸಂಬರಗಿ ಕ್ಯಾರೆಕ್ಟರ್​ ಸರಿ ಇಲ್ಲ’! ನಿಧಿ ಸುಬ್ಬಯ್ಯ ಹೊರಿಸಿದ ಈ ಗಂಭೀರ ಆರೋಪಕ್ಕೆ ಕಾರಣ ಏನು?

BBK8: ಪ್ರಶಾಂತ್​ ಸಂಬರಗಿ ವರ್ತನೆಯಿಂದ ಅನೇಕರಿಗೆ ಕಿರಿಕಿರಿ ಆಗುತ್ತಿದೆ. ತಮ್ಮ ಅಸಮಾಧಾನವನ್ನು ನಟಿ ನಿಧಿ ಸುಬ್ಬಯ್ಯ ನೇರವಾಗಿ ಹೇಳಿಕೊಂಡಿದ್ದಾರೆ. ಇದರಿಂದ ದೊಡ್ಡ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ!

Bigg Boss Kannada: ‘ಪ್ರಶಾಂತ್​ ಸಂಬರಗಿ ಕ್ಯಾರೆಕ್ಟರ್​ ಸರಿ ಇಲ್ಲ’! ನಿಧಿ ಸುಬ್ಬಯ್ಯ ಹೊರಿಸಿದ ಈ ಗಂಭೀರ ಆರೋಪಕ್ಕೆ ಕಾರಣ ಏನು?
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ
ಮದನ್​ ಕುಮಾರ್​
|

Updated on: Mar 24, 2021 | 12:31 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಆಟ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಬೇರೆ ಬೇರೆ ಕ್ಷೇತ್ರದಿಂದ ಬಂದಿರುವ, ಭಿನ್ನ ಮನಸ್ಥಿತಿಯ ಹಲವು ಸ್ಪರ್ಧಿಗಳ ನಡುವೆ ಹೊಂದಿಕೊಂಡು ಜೀವನ ಮಾಡುವುದು ಕಷ್ಟದ ವಿಚಾರ. ಅದರ ಮಧ್ಯೆ ಯಾರಾದರೂ ಅನಗತ್ಯ ಕಿರಿಕಿರಿ ಮಾಡಿದರೆ ಮನೆಯೊಳಗಿನ ವಾತಾವರಣ ಇನ್ನಷ್ಟು ಕೆಡುವುದು ಗ್ಯಾರಂಟಿ. ಸದ್ಯ ಪ್ರಶಾಂತ್​ ಸಂಬರಗಿ ಮೇಲೆ ಅನೇಕರು ಅಂಥ ಆರೋಪ ಹೊರಿಸುತ್ತಿದ್ದಾರೆ.

ಪ್ರಶಾಂತ್​ ಸಂಬರಗಿ ಮೇಲೆ ಹಲವರಿಗೆ ಅಸಮಾಧಾನ ಇದೆ ಎಂಬುದು ನಿಜ. ಆದರೆ ನಟಿ ನಿಧಿ ಸುಬ್ಬಯ್ಯ ಅವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಶಾಂತ್​ ಅವರ ಕ್ಯಾರೆಕ್ಟರ್​ ಬಗ್ಗೆ ಮಾತನಾಡಿದ್ದಾರೆ. ‘ಆ ಮನುಷ್ಯನ ಕ್ಯಾರೆಕ್ಟರ್​ ಸರಿ ಇಲ್ಲ’ ಎಂದು ಎಲ್ಲರ ಎದುರಿನಲ್ಲಿ ನೇರವಾಗಿ ಹೇಳಿದ್ದಾರೆ. ಆದರೆ ಇದಿನ್ನೂ ಪ್ರಶಾಂತ್​ ಸಂಬರಗಿ ಕಿವಿಗೆ ಬಿದ್ದಿಲ್ಲ. ಒಂದು ವೇಳೆ ಈ ವಿಚಾರ ಪ್ರಶಾಂತ್​ಗೆ ಗೊತ್ತಾದರೆ ದೊಡ್ಮನೆಯಲ್ಲಿ ಅವರು ರಂಪಾಟ ಮಾಡುವ ಸಾಧ್ಯತೆ ಹೆಚ್ಚಿದೆ.

ಅಷ್ಟಕ್ಕೂ ನಿಧಿಗೆ ಪ್ರಶಾಂತ್​ ಮೇಲೆ ಇಂತಹ ಭಾವನೆ ಬರಲು ಕಾರಣ ಏನು? ಪ್ರಶಾಂತ್​ ಅವರದ್ದು ಸ್ವಲ್ಪ ಮೊಂಡುತನ ಜಾಸ್ತಿ. ತಾವು ಹೇಳಿದ್ದೇ ಸರಿ ಎಂದು ಅವರು ಆಗಾಗ ವಾದ ಮಾಡುತ್ತಾರೆ. ಇತರೆ ಸ್ಪರ್ಧಿಗಳನ್ನು ಹಲವು ಬಾರಿ ಅವರು ಕೀಳಾಗಿ ಕಂಡ ಉದಾಹರಣೆ ಇದೆ. ಇತ್ತೀಚೆಗೆ ನಡೆದ ಒಂದು ಟಾಸ್ಕ್​ನಲ್ಲಿ ನಿಧಿಗೂ ಇದೇ ರೀತಿ ಫೀಲ್​ ಆಗಿದೆ. ನಿಧಿ ಅವರನ್ನು ಪ್ರಶಾಂತ್​ ಪದೇಪದೇ ವೀಕ್ ಎಂದು​ ಹೇಳಿದ್ದು ಅವರಿಗೆ ಇಷ್ಟ ಆಗಿಲ್ಲ. ಬೇರೆಯವರಿಗೆ ಸ್ವಾತಂತ್ರ್ಯ ನೀಡದೇ ಎಲ್ಲರ ಮೇಲೂ ತಮ್ಮ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸುತ್ತಿರುವ ಪ್ರಶಾಂತ್​ರನ್ನು ಕಂಡರೆ ಸದ್ಯಕ್ಕೆ ಅನೇಕರಿಗೆ ಹಿಡಿಸುತ್ತಿಲ್ಲ.

ಈ ವಾರ ಕ್ಯಾಪ್ಟನ್​ ಅರವಿಂದ್​ ಕೆ.ಪಿ. ಅವರನ್ನು ಹೊರತುಪಡಿಸಿ ಬೇರೆ ಎಲ್ಲ ಸದಸ್ಯರೂ ನಾಮಿನೇಟ್​ ಆಗಿದ್ದಾರೆ. ಹಾಗಾಗಿ ಎಲ್ಲರ ಮೇಲೂ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಟ ಆಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂಥ ಸಂದರ್ಭದಲ್ಲಿ ಪ್ರಶಾಂತ್​ ಸಂಬರಗಿ ತೋರಿಸುತ್ತಿರುವ ವರ್ತನೆಗೆ ನಿಧಿ ಸುಬ್ಬಯ್ಯ ಮಾತ್ರವಲ್ಲದೆ ರಘು ಗೌಡ ಕೂಡ ಬೇಸತ್ತಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕ ವೀಕ್ಷಕರಲ್ಲೂ ಮನೆ ಮಾಡಿದೆ.

ಇದನ್ನೂ ಓದಿ: ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..

ಅಧಿಕಪ್ರಸಂಗ ನಂಗೆ ಇಷ್ಟ ಆಗಲ್ಲ; ತಮ್ಮದೇ ಟೀಂನವರಿಗೆ ಎಚ್ಚರಿಕೆ ಕೊಟ್ಟ ನಿಧಿ ಸುಬ್ಬಯ್ಯ

ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಿಸುತ್ತಿದ್ದ ವ್ಯಕ್ತಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಟೀಮ್ ಇಂಡಿಯಾವನ್ನು ಕೂಡಿಕೊಂಡ ಮುಂಬೈ ಇಂಡಿಯನ್ಸ್ ವೇಗಿ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮಧ್ಯಾಹ್ನ ರಾಹುಲ್ ಗಾಂಧಿಯನ್ನು ಭೇಟಿಯಾಗಲಿರುವ ಸಿಎಂ, ಡಿಸಿಎಂ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಮನೆ ಎದುರು ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ