AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಳಿಂಬೆ ನಷ್ಟದಿಂದ ಬೇಸತ್ತ ರೈತನ ಹೊಸ ಆವಿಷ್ಕಾರ! ಇತರರಿಗೆ ಮಾದರಿಯಾದ ಅನ್ನದಾತ

ರಾಯಚೂರು: ದುಂಡಾಣು ರೋಗಕ್ಕೆ ಹೆದರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಗೆ ಬಹುತೇಕ ರೈತರು ಗುಡ್‌ಬೈ ಹೇಳಿದ್ದಾರೆ. ಆದ್ರೆ ಬಿಸಿಲನಾಡಿನಲ್ಲಿ ದಾಳಿಂಬೆ ಇಳುವರಿ ಕುಸಿತದಿಂದ ತಪ್ಪಿಸಿಕೊಳ್ಳಲು ಸಾಹಸಿ ರೈತನೋರ್ವ ಮಾಡಿದ ಹೊಸ ಪ್ರಯೋಗ ರೈತ ಸಮುದಾಯದಲ್ಲಿ ಸಂಚಲನ ಮೂಡಿಸಿದೆ. ಅನ್ನದಾತನಿಂದ ವಿನೂತನ ಪ್ರಯೋಗ: ಕಣ್ಣು ಹಾಯಿಸಿದ ಕಡೆಯೆಲ್ಲಾ ದಾಳಿಂಬೆ ಗಿಡಗಳು. ವಿಶಾಲವಾದ ಭೂಮಿಯಲ್ಲಿ 8 ಅಡಿಗೂ ಎತ್ತರ ಬೆಳೆದು ನಿಂತ ದಾಳಿಂಬೆ ಗಿಡಗಳು. ಇಲ್ಲಿ ಸುಮಾರು 22 ಎಕರೆ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನ […]

ದಾಳಿಂಬೆ ನಷ್ಟದಿಂದ ಬೇಸತ್ತ ರೈತನ ಹೊಸ ಆವಿಷ್ಕಾರ! ಇತರರಿಗೆ ಮಾದರಿಯಾದ ಅನ್ನದಾತ
Follow us
ಸಾಧು ಶ್ರೀನಾಥ್​
|

Updated on:Jan 17, 2020 | 1:34 PM

ರಾಯಚೂರು: ದುಂಡಾಣು ರೋಗಕ್ಕೆ ಹೆದರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಾಳಿಂಬೆ ಬೆಳೆಗೆ ಬಹುತೇಕ ರೈತರು ಗುಡ್‌ಬೈ ಹೇಳಿದ್ದಾರೆ. ಆದ್ರೆ ಬಿಸಿಲನಾಡಿನಲ್ಲಿ ದಾಳಿಂಬೆ ಇಳುವರಿ ಕುಸಿತದಿಂದ ತಪ್ಪಿಸಿಕೊಳ್ಳಲು ಸಾಹಸಿ ರೈತನೋರ್ವ ಮಾಡಿದ ಹೊಸ ಪ್ರಯೋಗ ರೈತ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.

ಅನ್ನದಾತನಿಂದ ವಿನೂತನ ಪ್ರಯೋಗ: ಕಣ್ಣು ಹಾಯಿಸಿದ ಕಡೆಯೆಲ್ಲಾ ದಾಳಿಂಬೆ ಗಿಡಗಳು. ವಿಶಾಲವಾದ ಭೂಮಿಯಲ್ಲಿ 8 ಅಡಿಗೂ ಎತ್ತರ ಬೆಳೆದು ನಿಂತ ದಾಳಿಂಬೆ ಗಿಡಗಳು. ಇಲ್ಲಿ ಸುಮಾರು 22 ಎಕರೆ ಪ್ರದೇಶದಲ್ಲಿ 10 ಸಾವಿರಕ್ಕೂ ಹೆಚ್ಚು ದಾಳಿಂಬೆ ಗಿಡಗಳನ್ನ ಬೆಳೆಯಲಾಗಿದೆ. ಗಿಡಗಳ ಕೊಂಬೆಗಳು ಒಂದಕ್ಕೊಂದು ಸೇರಿಕೊಂಡಿದ್ದರಿಂದ ಬುಡಕ್ಕೆ ಬಿಸಿಲು ತಾಗುತ್ತಿಲ್ಲ. ಈ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ನೀರಲಕೇರಾ ಗ್ರಾಮದ ರೈತ ಬಸವರಾಜಗೌಡ ಜಮೀನಿನಲ್ಲಿ.

ಗಿಡಗಳನ್ನು ಬೇರು ಸಮೇತ ಕಿತ್ತು, ಬೇರೆ ಭೂಮಿಯಲ್ಲಿ ಪ್ಲಾಂಟೇಷನ್‌: ಹೀಗೆ ಗಿಡಗಳು ಒಂದಕ್ಕೊಂದು ತಾಗಿದ್ದರಿಂದ ಇಳುವರಿಯಲ್ಲಿ ಕುಸಿತವಾಗಿದೆ. ಹೀಗಾಗಿ 1 ಕೋಟಿ 50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದ್ರಿಂದ ಪ್ಲ್ಯಾನ್ ಮಾಡಿದ ರೈತ ಬಸವರಾಜಗೌಡ, ತಮ್ಮ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ಗಿಡಗಳನ್ನೇ ಬೇರು ಸಮೇತ ಕಿತ್ತು, ಬೇರೆ ಭೂಮಿಯಲ್ಲಿ ಪ್ಲಾಂಟೇಷನ್‌ ಮಾಡೋ ಮೂಲಕ ಇತರೆ ಪ್ರಗತಿಪರ ರೈತರ ಹುಬ್ಬೇರುವಂತೆ ಮಾಡಿದ್ದಾರೆ.

ರಾಯಚೂರಿನಾದ್ಯಂತ ಹಲವಡೆ ದಾಳಿಂಬೆ ಬೆಳೆಗಾರರು ಇದೇ ರೀತಿಯ ಸಮಸ್ಯೆ ಎದುರಿಸ್ತಿದ್ದಾರೆ. ಆದ್ರೆ ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡ ರೈತ ಬಸವರಾಜಗೌಡ, ಜೆಸಿಬಿ ಮೂಲಕ ಅಚ್ಚುಕಟ್ಟಾಗಿ 22 ಎಕರೆ ಜಮೀನಲ್ಲಿ ಬೆಳೆದಿದ್ದ 3 ಸಾವಿರ ದಾಳಿಂಬೆ ಗಿಡಗಳನ್ನ ಕಿತ್ತು ಪಕ್ಕದ ಜಮೀನಿನಲ್ಲಿ ಪ್ಲಾಂಟೇಷನ್‌ ಮಾಡಿಸೋ ಕೆಲ್ಸದಲ್ಲಿ ತೊಡಗಿದ್ದಾರೆ.

ಒಟ್ನಲ್ಲಿ ಪ್ರತಿ ಬಾರಿಯೂ ದಾಳಿಂಬೆ ಬೆಳೆಗಾರರು ಒಂದಲ್ಲಾ ಒಂದು ಕಾರಣಕ್ಕೆ ನಷ್ಟ ಅನುಭವಿಸುತ್ತಲೇ ಇದ್ದಾರೆ. ಆದ್ರೆ ಈ ಸಾಹಸಿ ರೈತನ ವಿನೂತನ ಪ್ರಯೋಗದಿಂದ ನಿಜಕ್ಕೂ ಯಶಸ್ವಿಯಾಗ್ತಾರಾ? ಇಳುವರಿ ಹೆಚ್ಚಾಗುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿರೋದು ಸುಳ್ಳಲ್ಲ.

Published On - 1:20 pm, Fri, 17 January 20

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್