AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗಲಿದ ಮಾಲೀಕನ ದಾರಿ ಕಾಯುತ್ತಾ ಕುಳಿತ ಮೂಕಜೀವಿಗಳ ಸ್ವಾಮಿನಿಷ್ಠೆ

ಬೆಳಗಾವಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಸಂಬಂಧಿಕರು ದುಃಖದಲ್ಲಿ ಎರಡ್ಮೂರು ದಿನ ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ ಇಲ್ಲಿ ಎರಡು ಮೂಕಜೀವಿಗಳು ತನ್ನ ಮಾಲೀಕನ ಅಕಾಲಿಕ ನಿಧನದ ಬಳಿಕ ಊಟ ನೀರು ತೊರೆದು ಕೂತಿದ್ದಾರೆ. ಮ‌ನೆ ಮಾಲೀಕ ತೀರಿ ಹೋಗಿ 8 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕರೋಧನೆ ಮಾಡುತ್ತಿವೆ. ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಂಕರಪ್ಪ, ಬೀದಿಯಲ್ಲಿ ಅಲೆದಾಡಿಕೊಂಡಿದ್ದ ನಾಯಿ ಹಾಗೂ ಕೋತಿಯನ್ನ ಒಂದು […]

ಅಗಲಿದ ಮಾಲೀಕನ ದಾರಿ ಕಾಯುತ್ತಾ ಕುಳಿತ ಮೂಕಜೀವಿಗಳ ಸ್ವಾಮಿನಿಷ್ಠೆ
KUSHAL V
|

Updated on: Sep 15, 2020 | 7:23 PM

Share

ಬೆಳಗಾವಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ ಆತನ ಸಂಬಂಧಿಕರು ದುಃಖದಲ್ಲಿ ಎರಡ್ಮೂರು ದಿನ ಅತ್ತು ನಾಲ್ಕನೇ ದಿನಕ್ಕೆ ಸುಮ್ಮನಾಗುತ್ತಾರೆ. ಆದರೆ ಇಲ್ಲಿ ಎರಡು ಮೂಕಜೀವಿಗಳು ತನ್ನ ಮಾಲೀಕನ ಅಕಾಲಿಕ ನಿಧನದ ಬಳಿಕ ಊಟ ನೀರು ತೊರೆದು ಕೂತಿದ್ದಾರೆ. ಮ‌ನೆ ಮಾಲೀಕ ತೀರಿ ಹೋಗಿ 8 ದಿನ ಕಳೆದರೂ ಸಹ ತುತ್ತು ಅನ್ನವನ್ನು ಮುಟ್ಟದೆ ಮೂಕರೋಧನೆ ಮಾಡುತ್ತಿವೆ.

ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಂಕರಪ್ಪ, ಬೀದಿಯಲ್ಲಿ ಅಲೆದಾಡಿಕೊಂಡಿದ್ದ ನಾಯಿ ಹಾಗೂ ಕೋತಿಯನ್ನ ಒಂದು ದಿನ ಮನೆಗೆ ಕರೆತಂದ್ರು. ನಾಯಿಗೆ ಕಡ್ಡಿ ಅಂತಲೂ, ಕೋತಿಗೆ ರಾಮು ಅಂತಾ ಹೆಸರಿಟ್ಟು ಎರಡು ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಸಾಕ್ತಿದ್ರು. ಅವರು ಎಲ್ಲೇ ಹೋಗಲಿ ಇವರೆಡು ಜಂಟಿಯಾಗಿ ಅವರ ಹಿಂದೆ ಹೋಗ್ತಾಯಿದ್ವು. ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ರೂ, ಯಜಮಾನ ಕೊಟ್ಟ ತಿಂಡಿ ಮಾತ್ರ ತಿನ್ನುತ್ತಿದ್ವು.

ಆದ್ರೆ ಕಳೆದ ಎಂಟು ದಿನಗಳ ಹಿಂದೆ ಶಂಕರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯಜಮಾನನ ಸಾವಿನಿಂದ ಶ್ವಾನ ಹಾಗೂ ಕೋತಿ ಶೋಕಸಾಗರದಲ್ಲಿ ಮುಳುಗಿವೆ. 8 ದಿನಗಳಿಂದ ಆಹಾರ ಸೇವಿಸದೆ ಯಜಮಾನ ಬಂದೇ ಬರ್ತಾನೆ ಅಂತಾ ಕಾಯುತ್ತಿವೆ. ಶಂಕರಪ್ಪ ಎಲ್ಲೇ ಹೋದರೂ ತಮ್ಮ ಜೊತೆಗೆ ಬರುತ್ತಿದ್ದ ಕಡ್ಡಿ ಹಾಗೂ ರಾಮುವನ್ನು ತುಂಬಾ ಪ್ರೀತಿಯಿಂದ ಸಾಕಿದ್ರು. ತಾನು ಮಲಗುವ ಕೋಣೆಯೊಳಗೂ ಸಹ ಬಿಟ್ಟುಕೊಳ್ಳುತ್ತಿದ್ದ ಶಂಕರಪ್ಪನಿಗೆ ಅವುಗಳು ನಿಜವಾದ ಸ್ನೇಹಿತರಾಗಿದ್ವು. ಅಷ್ಟೇ ಅಲ್ಲ, ಶಂಕರಪ್ಪ ತನ್ನ ಕಿರಾಣಿ ಅಂಗಡಿ ಮುಂಭಾಗದಲ್ಲೂ ಮೂರ್ನಾಲ್ಕು ಶ್ವಾನಗಳನ್ನ ಸಾಕಿದ್ರು. ಇದೀಗ ಶಂಕರಪ್ಪ ಕಣ್ಮುಚ್ಚಿದ ಬಳಿಕ ಅವರ ಸಾಕು ಪ್ರಾಣಿಗಳು ಊಟ ಸಹ ಮಾಡದೇ ಮೂಕವೇದನೆ ಅನುಭವಿಸ್ತಿವೆ.

ಮನುಷ್ಯ ತೀರಿ ಹೋದ ಮೂರೇ ದಿನಕ್ಕೆ ಹಾಲುತುಪ್ಪ ಬಿಟ್ಟು ಕೈತೊಳೆದುಕೊಳ್ಳುವ ಮನುಷ್ಯ ಸಂಬಂಧಗಳ ಮಧ್ಯೆ ಈ ಶ್ವಾನ ಹಾಗೂ ಕೋತಿ ಪಡುತ್ತಿರುವ ನೋವು, ತೋರುತ್ತಿರುವ ಸ್ವಾಮಿನಿಷ್ಠೆ ಎಂಥ ಕಲ್ಲುಹೃದಯವನ್ನು ಸಹ ಕರಗಿಸಿ ಬಿಡುತ್ತದೆ. -ಸಹದೇವ ಮಾನೆ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ