ಕೆಲಸ ಇಲ್ಲದಿದ್ರೂ ಉತ್ತಮ ಸಂಬಳ ಸಿಗುತ್ತಿದೆ ಎಂದ ಪ್ರೊಫೆಸರ್ಗೆ ನೋಟಿಸ್ ಕೊಟ್ಟ ವಿವಿ
ಮಂಗಳೂರು: ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೊರಿದ ಸಮಾಜಶಾಸ್ತ್ರ ಪ್ರೊಫೆಸರ್ಗೆ 7 ದಿನಗಳ ಒಳಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ. ಮಂಗಳೂರು ವಿವಿ ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್ ಎಂಬವವರು ಫೇಸ್ ಬುಕ್ನಲ್ಲಿ ಪ್ರಾಧ್ಯಾಪಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಏಕೆಂದರೆ ಯಾವುದೇ ಕೆಲಸ, ರಿಸ್ಕ್ ಇಲ್ಲದೆ ನನಗೆ ಸಂಬಳ ಬರುತ್ತಿದೆ (ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್) ಎಂದು ಪೋಸ್ಟ್ […]

ಮಂಗಳೂರು: ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಅಸಂಬದ್ದ ಪೋಸ್ಟ್ ಹಾಕಿ ಉದ್ದಟತನ ತೊರಿದ ಸಮಾಜಶಾಸ್ತ್ರ ಪ್ರೊಫೆಸರ್ಗೆ 7 ದಿನಗಳ ಒಳಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತದಿಂದ ನೋಟಿಸ್ ನೀಡಲಾಗಿದೆ.
ಮಂಗಳೂರು ವಿವಿ ಸಮಾಜಶಾಸ್ತ್ರ ಪ್ರೊಫೆಸರ್ ಗೋವಿಂದ ರಾಜ್ ಎಂಬವವರು ಫೇಸ್ ಬುಕ್ನಲ್ಲಿ ಪ್ರಾಧ್ಯಾಪಕನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಏಕೆಂದರೆ ಯಾವುದೇ ಕೆಲಸ, ರಿಸ್ಕ್ ಇಲ್ಲದೆ ನನಗೆ ಸಂಬಳ ಬರುತ್ತಿದೆ (ಪ್ರೌಡ್ ಟು ಬಿ ಎ ಟೀಚರ್, ಬಿಕಾಸ್ ಡ್ರಾಯಿಂಗ್ ಎ ಗುಡ್ ಸ್ಯಾಲರಿ ವಿತೌಟ್ ವರ್ಕ್ ಅಂಡ್ ರಿಸ್ಕ್) ಎಂದು ಪೋಸ್ಟ್ ಹಾಕಿದ್ದಾರೆ.
ಜೊತೆಗೆ ರಾಜ್ಯದ ಪ್ರಮುಖ ಸ್ವಾಮೀಜಿಯೊಬ್ಬರ ಬಗ್ಗೆಯೂ ಅಪಹಾಸ್ಯದ ಪೋಸ್ಟ್ ಮಾಡಿದ್ದು, ಈ ಅಪಹಾಸ್ಯ ಪೋಸ್ಟ್ ಗಮನಕ್ಕೆ ಬಂದ ಹಿನ್ನೆಲೆ ಮಂಗಳೂರು ವಿವಿ ಆಡಳಿತದಿಂದ ಪ್ರೊಫೆಸರ್ ಗೋವಿಂದ ರಾಜ್ಗೆ 7 ದಿನಗಳ ಒಳಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.