AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ […]

ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 16, 2020 | 7:20 PM

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ ಆಯೋಜಿಸಿದ್ದರು. ವಿದ್ಯಾರ್ಥಿಗಳು Present ಸರ್, ಸಾಮಾಜಿಕ ಅಂತರ Absent ಸರ್! ಶರಣಪ್ಪರಿಗೆ ಅದ್ಧೂರಿ ಸನ್ಮಾನ ನೀಡುವುದರ ಜೊತೆಗೆ ರಥದಲ್ಲಿ ಕೂರಿಸಿ ಗ್ರಾಮದೆಲ್ಲೆಲ್ಲಾ ಮೆರವಣಿಗೆ ಸಹ ಮಾಡಿದರು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹ ಭಾಗಿಯಾದರು. ಈ ನಡುವೆ ಸಾಮಾಜಿಕ ಅಂತರ ಪಾಲಿಸೋದು ಏನಾಯ್ತು ಅಂತಾ ಕೇಳೋದೂ ಬೇಡ. ಗುಂಪುಗುಂಪಾಗಿ ಮೆರವಣಿಗೆ ನಡೆಸಿದ ನೀಲಹಳ್ಳಿಯ ಗ್ರಾಮಸ್ಥರೇ ಇದಕ್ಕೆ ಉತ್ತರ ನೀಡಬೇಕು. ಒಟ್ನಲ್ಲಿ ಮೇಷ್ಟ್ರ ಕ್ಲಾಸ್​ನಲ್ಲಿ ಓದಿದ್ದ ಎಲ್ಲಾ ವಿದ್ಯಾರ್ಥಿಗಳು Present ಸರ್​ ಎಂದು ಹಾಜರಿ ಕೂಗಿದ್ರೂ ಸಾಮಾಜಿಕ ಅಂತರ ಮಾತ್ರ Absent ಸರ್ ಎಂಬುವಂತೆ ಇತ್ತು.

Published On - 7:14 pm, Thu, 16 July 20

ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್