Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ […]

ನೆಚ್ಚಿನ ಮೇಷ್ಟ್ರ ಬೀಳ್ಕೊಡುಗೆಗೆ ಗ್ರಾಮವೆಲ್ಲಾ Present ಸರ್, ಆದ್ರೆ ದೈಹಿಕ ಅಂತರ Absent​!
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Jul 16, 2020 | 7:20 PM

ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್​ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ ಆಯೋಜಿಸಿದ್ದರು. ವಿದ್ಯಾರ್ಥಿಗಳು Present ಸರ್, ಸಾಮಾಜಿಕ ಅಂತರ Absent ಸರ್! ಶರಣಪ್ಪರಿಗೆ ಅದ್ಧೂರಿ ಸನ್ಮಾನ ನೀಡುವುದರ ಜೊತೆಗೆ ರಥದಲ್ಲಿ ಕೂರಿಸಿ ಗ್ರಾಮದೆಲ್ಲೆಲ್ಲಾ ಮೆರವಣಿಗೆ ಸಹ ಮಾಡಿದರು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹ ಭಾಗಿಯಾದರು. ಈ ನಡುವೆ ಸಾಮಾಜಿಕ ಅಂತರ ಪಾಲಿಸೋದು ಏನಾಯ್ತು ಅಂತಾ ಕೇಳೋದೂ ಬೇಡ. ಗುಂಪುಗುಂಪಾಗಿ ಮೆರವಣಿಗೆ ನಡೆಸಿದ ನೀಲಹಳ್ಳಿಯ ಗ್ರಾಮಸ್ಥರೇ ಇದಕ್ಕೆ ಉತ್ತರ ನೀಡಬೇಕು. ಒಟ್ನಲ್ಲಿ ಮೇಷ್ಟ್ರ ಕ್ಲಾಸ್​ನಲ್ಲಿ ಓದಿದ್ದ ಎಲ್ಲಾ ವಿದ್ಯಾರ್ಥಿಗಳು Present ಸರ್​ ಎಂದು ಹಾಜರಿ ಕೂಗಿದ್ರೂ ಸಾಮಾಜಿಕ ಅಂತರ ಮಾತ್ರ Absent ಸರ್ ಎಂಬುವಂತೆ ಇತ್ತು.

Published On - 7:14 pm, Thu, 16 July 20

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ