AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನದು ಪ್ರೀತಿ ವೈಫಲ್ಯ, ತಂಗಿಯ ಮದುವೆಯೂ ರದ್ದು: ಮನನೊಂದ ಯುವಕ ನೇಣಿಗೆ ಶರಣು..

ಮೈಸೂರು: ತನ್ನ ಲವ್ ಫೇಲ್ ಮತ್ತು ತಂಗಿಯ ಮದುವೆಯೂ ರದ್ದಾದ ಹಿನ್ನೆಲೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ವಿಜಯಶ್ರೀಪುರದಲ್ಲಿ ನಡೆದಿದೆ. ಚೇತನ್ ಶರ್ಮ(29) ಮೃತ ದುರ್ದೈವಿ. ಬೆಂಗಳೂರಿನ ಚೇತನ್ ಶರ್ಮ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್ ಶರ್ಮ ಹತ್ತು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೇಮ ಕಾರಣಾಂತರಗಳಿಂದ ಮುರಿದುಬಿದ್ದಿತ್ತು. ಹೀಗಾಗಿ ಚೇತನ್ ಶರ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಅಲ್ಲದೆ ಇತ್ತೀಚೆಗಷ್ಟೆ […]

ತನ್ನದು ಪ್ರೀತಿ ವೈಫಲ್ಯ, ತಂಗಿಯ ಮದುವೆಯೂ ರದ್ದು: ಮನನೊಂದ ಯುವಕ ನೇಣಿಗೆ ಶರಣು..
ಸಾಂದರ್ಭಿಕ ಚಿತ್ರ
ಪೃಥ್ವಿಶಂಕರ
|

Updated on:Nov 14, 2020 | 1:20 PM

Share

ಮೈಸೂರು: ತನ್ನ ಲವ್ ಫೇಲ್ ಮತ್ತು ತಂಗಿಯ ಮದುವೆಯೂ ರದ್ದಾದ ಹಿನ್ನೆಲೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ವಿಜಯಶ್ರೀಪುರದಲ್ಲಿ ನಡೆದಿದೆ.

ಚೇತನ್ ಶರ್ಮ(29) ಮೃತ ದುರ್ದೈವಿ. ಬೆಂಗಳೂರಿನ ಚೇತನ್ ಶರ್ಮ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದ ಚೇತನ್ ಶರ್ಮ ಹತ್ತು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೇಮ ಕಾರಣಾಂತರಗಳಿಂದ ಮುರಿದುಬಿದ್ದಿತ್ತು. ಹೀಗಾಗಿ ಚೇತನ್ ಶರ್ಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಅಲ್ಲದೆ ಇತ್ತೀಚೆಗಷ್ಟೆ ಫಿಕ್ಸ್ ಆಗಿದ್ದ ತಂಗಿಯ ಮದುವೆ ಕ್ಯಾನ್ಸಲ್ ಆಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದಿದ್ದ ಚೇತನ್ ಶರ್ಮ ಮಾನಸಿಕ ಖಿನ್ನತೆಗೆ ಒಳಗಾಗಿ ಮೈಸೂರಿನ ವಿಜಯಶ್ರೀಪುರದಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 1:19 pm, Sat, 14 November 20