AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್

ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 04, 2020 | 7:21 PM

Share

ವಾಷಿಂಗ್ಟನ್: ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ಯುಟ್ಯೂಬ್ ಸಂಸ್ಥೆಯ ಸಮುದಾಯ ಮಾರ್ಗಸೂಚಿ ಪ್ರಕಾರ ಕಾಮೆಂಟ್ ಪೋಸ್ಟಿಸುವ ಮುನ್ನ ಅದು ಯಾವುದೇ ರೀತಿಯಲ್ಲಿ ಅಸಭ್ಯವಾಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಕಾಮೆಂಟ್ ಅಸಭ್ಯವಾಗಿದೆಯೇ ಎಂಬುದನ್ನು ಗೂಗಲ್​ನ ಕೃತಕ ಬುದ್ಧಿಮತ್ತೆ (ಎಐ) ಪತ್ತೆ ಹಚ್ಚುತ್ತದೆ. ಹೀಗೆ ಪತ್ತೆ ಹಚ್ಚಿದ ನಂತರ ಕಾಮೆಂಟ್ ಎಡಿಟ್ ಮಾಡಲು ಅವಕಾಶ ನೀಡಲಾಗುವುದು.

ಯುಟ್ಯೂಬ್​​ನಲ್ಲಿ ಗೌರವಯುತ ವಿಚಾರ ವಿನಿಮಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಳಕೆದಾರರು ಕಾಮೆಂಟ್ ಮಾಡುವಾಗ ಅವರ ಕಾಮೆಂಟ್ ಇತರರನ್ನು ರೇಗಿಸುವಂತಿರಬಾರದು. ಹಾಗಾಗಿ ಪೋಸ್ಟ್‌ ಮಾಡುವ ಮುನ್ನ ಅದು ಹೇಗಿದೆ ಎಂಬುದನ್ನು ತೋರಿಸಿ ಎಚ್ಚರಿಕೆ ಸಂದೇಶ ನೀಡುವ ಹೊಸ ಫೀಚರ್ ಆರಂಭಿಸುವುದಾಗಿ ಯುಟ್ಯೂಬ್ ತಮ್ಮ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

ಈ ಫೀಚರ್ ಈಗ ಅಂಡ್ರಾಯ್ಡ್​ನಲ್ಲಿ ಲಭ್ಯವಾಗಿದೆ. ಕಾಮೆಂಟ್ ಅಸಭ್ಯವಾಗಿದ್ದರೆ ಯುಟ್ಯೂಬ್ ಅದನ್ನು ತೆಗೆದುಹಾಕಲಿದೆ. ಒಂದು ವೇಳೆ ಅಸಭ್ಯ ಕಾಮೆಂಟ್ ಎಂಬ ಎಚ್ಚರಿಕೆ ಬಂದರೂ ಬಳಕೆದಾರರು ಆ ಕಾಮೆಂಟ್ ಪೋಸ್ಟಿಸಿದ್ದರೆ ಅದನ್ನು ಯುಟ್ಯೂಬ್ ತೆಗೆದುಹಾಕಲೇ ಬೇಕೆಂದೇನಿಲ್ಲ. ಆದರೆ ಅಸಭ್ಯ ಪೋಸ್ಟ್ ಎಂದು ಇತರ ಬಳಕೆದಾರರು ರಿಪೋರ್ಟ್ ಮಾಡಿದ್ದರೆ ಯುಟ್ಯೂಬ್ ಅದನ್ನು ಅಸಭ್ಯ ಎಂದು ಗುರುತಿಸುತ್ತದೆ.

ತಪ್ಪು ಮಾಹಿತಿ, ಸಂಚು, ತಾರತಮ್ಯ, ಕಿರುಕುಳ, ಸಾಮೂಹಿಕ ಹತ್ಯೆ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮೊದಲಾದ ವಿಷಯಗಳಿರುವ ವಿಡಿಯೊಗಳಿಗೆ ಕಡಿವಾಣ ಹಾಕಲು ಯುಟ್ಯೂಬ್ ಕ್ರಮ ಕೈಗೊಂಡಿದ್ದರೂ ಅಲ್ಲಿನ ಕಾಮೆಂಟ್ ಮಾತ್ರ ಸಭ್ಯತೆಯ ಎಲ್ಲೆ ಮೀರುತ್ತಿದ್ದವು.

ತಿಂಗಳಿಗೆ 200 ಕೋಟಿ ಬಳಕೆದಾರರು ಯೂಟ್ಯೂಬ್ ಬಳಸುತ್ತಿದ್ದು ಪ್ರತಿ ನಿಮಿಷಕ್ಕೆ 500 ಗಂಟೆಗಿಂತಲೂ ಹೆಚ್ಚು ಅವಧಿಯ ವಿಡಿಯೊಗಳು ಇಲ್ಲಿ ಅಪ್​ಲೋಡ್ ಆಗುತ್ತವೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್