AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್

ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ಮರುಚಿಂತನೆಗೆ ಅವಕಾಶ ನೀಡಲಿದೆ ಯೂಟ್ಯೂಬ್
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 04, 2020 | 7:21 PM

Share

ವಾಷಿಂಗ್ಟನ್: ಯುಟ್ಯೂಬ್ ವಿಡಿಯೊಗಳಿಗೆ ಕಾಮೆಂಟ್ ಮಾಡುವ ಮುನ್ನ ನಿಮ್ಮ ಕಾಮೆಂಟ್ ಅಸಭ್ಯವಾಗಿಲ್ಲ ಎಂದು ಖಾತರಿ ಪಡಿಸಿದ ನಂತರವೇ ಮಂದುವರಿಯಿರಿ ಎಂಬ ಸಂದೇಶ ಇನ್ನು ಮುಂದೆ ಕಾಣಿಸಿಕೊಳ್ಳಲಿದೆ.

ಯುಟ್ಯೂಬ್ ಸಂಸ್ಥೆಯ ಸಮುದಾಯ ಮಾರ್ಗಸೂಚಿ ಪ್ರಕಾರ ಕಾಮೆಂಟ್ ಪೋಸ್ಟಿಸುವ ಮುನ್ನ ಅದು ಯಾವುದೇ ರೀತಿಯಲ್ಲಿ ಅಸಭ್ಯವಾಗಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಕಾಮೆಂಟ್ ಅಸಭ್ಯವಾಗಿದೆಯೇ ಎಂಬುದನ್ನು ಗೂಗಲ್​ನ ಕೃತಕ ಬುದ್ಧಿಮತ್ತೆ (ಎಐ) ಪತ್ತೆ ಹಚ್ಚುತ್ತದೆ. ಹೀಗೆ ಪತ್ತೆ ಹಚ್ಚಿದ ನಂತರ ಕಾಮೆಂಟ್ ಎಡಿಟ್ ಮಾಡಲು ಅವಕಾಶ ನೀಡಲಾಗುವುದು.

ಯುಟ್ಯೂಬ್​​ನಲ್ಲಿ ಗೌರವಯುತ ವಿಚಾರ ವಿನಿಮಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಳಕೆದಾರರು ಕಾಮೆಂಟ್ ಮಾಡುವಾಗ ಅವರ ಕಾಮೆಂಟ್ ಇತರರನ್ನು ರೇಗಿಸುವಂತಿರಬಾರದು. ಹಾಗಾಗಿ ಪೋಸ್ಟ್‌ ಮಾಡುವ ಮುನ್ನ ಅದು ಹೇಗಿದೆ ಎಂಬುದನ್ನು ತೋರಿಸಿ ಎಚ್ಚರಿಕೆ ಸಂದೇಶ ನೀಡುವ ಹೊಸ ಫೀಚರ್ ಆರಂಭಿಸುವುದಾಗಿ ಯುಟ್ಯೂಬ್ ತಮ್ಮ ಬ್ಲಾಗ್​ಪೋಸ್ಟ್​ನಲ್ಲಿ ಹೇಳಿದೆ.

ಈ ಫೀಚರ್ ಈಗ ಅಂಡ್ರಾಯ್ಡ್​ನಲ್ಲಿ ಲಭ್ಯವಾಗಿದೆ. ಕಾಮೆಂಟ್ ಅಸಭ್ಯವಾಗಿದ್ದರೆ ಯುಟ್ಯೂಬ್ ಅದನ್ನು ತೆಗೆದುಹಾಕಲಿದೆ. ಒಂದು ವೇಳೆ ಅಸಭ್ಯ ಕಾಮೆಂಟ್ ಎಂಬ ಎಚ್ಚರಿಕೆ ಬಂದರೂ ಬಳಕೆದಾರರು ಆ ಕಾಮೆಂಟ್ ಪೋಸ್ಟಿಸಿದ್ದರೆ ಅದನ್ನು ಯುಟ್ಯೂಬ್ ತೆಗೆದುಹಾಕಲೇ ಬೇಕೆಂದೇನಿಲ್ಲ. ಆದರೆ ಅಸಭ್ಯ ಪೋಸ್ಟ್ ಎಂದು ಇತರ ಬಳಕೆದಾರರು ರಿಪೋರ್ಟ್ ಮಾಡಿದ್ದರೆ ಯುಟ್ಯೂಬ್ ಅದನ್ನು ಅಸಭ್ಯ ಎಂದು ಗುರುತಿಸುತ್ತದೆ.

ತಪ್ಪು ಮಾಹಿತಿ, ಸಂಚು, ತಾರತಮ್ಯ, ಕಿರುಕುಳ, ಸಾಮೂಹಿಕ ಹತ್ಯೆ, ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮೊದಲಾದ ವಿಷಯಗಳಿರುವ ವಿಡಿಯೊಗಳಿಗೆ ಕಡಿವಾಣ ಹಾಕಲು ಯುಟ್ಯೂಬ್ ಕ್ರಮ ಕೈಗೊಂಡಿದ್ದರೂ ಅಲ್ಲಿನ ಕಾಮೆಂಟ್ ಮಾತ್ರ ಸಭ್ಯತೆಯ ಎಲ್ಲೆ ಮೀರುತ್ತಿದ್ದವು.

ತಿಂಗಳಿಗೆ 200 ಕೋಟಿ ಬಳಕೆದಾರರು ಯೂಟ್ಯೂಬ್ ಬಳಸುತ್ತಿದ್ದು ಪ್ರತಿ ನಿಮಿಷಕ್ಕೆ 500 ಗಂಟೆಗಿಂತಲೂ ಹೆಚ್ಚು ಅವಧಿಯ ವಿಡಿಯೊಗಳು ಇಲ್ಲಿ ಅಪ್​ಲೋಡ್ ಆಗುತ್ತವೆ.

Follow Us
Ghanashyam D M | ಡಿ.ಎಂ.ಘನಶ್ಯಾಮ
Ghanashyam D M | ಡಿ.ಎಂ.ಘನಶ್ಯಾಮ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​