AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಈ ಯೋಗಾಸನ ಮಾಡಿ, ವೃದ್ಧಾಪ್ಯದಲ್ಲಿ ಕಾಡುವ ಮಂಡಿ, ಕೀಲು ನೋವಿನಿಂದ ಮುಕ್ತಿ ಪಡೆಯಿರಿ

ಮನುಷ್ಯನಿಗೆ ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ ವೃದ್ಧಾಪ್ಯ ಆವರಿಸುತ್ತಿದಂತೆ ಹೆಚ್ಚಿನವರಿಗೆ ಮಂಡಿ ನೋವು, ಕೀಲುನೋವು ಸಮಸ್ಯೆಗಳು ಕಾಡುತ್ತವೆ. ಈ ವಿಪರೀತ ನೋವಿನಿಂದ ಮುಕ್ತಿ ಪಡೆಯಲು ವಿವಿಧ ಔಷಧಿಗಳನ್ನು ಪಡೆಯುತ್ತಾರೆ. ಆದರೆ ಇದು ಅಷ್ಟು ಸುಲಭವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನೀವು ಪ್ರತಿನಿತ್ಯ ಈ ಮೂರು ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಮಂಡಿ ಕೀಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು.

ಪ್ರತಿದಿನ ಈ ಯೋಗಾಸನ ಮಾಡಿ, ವೃದ್ಧಾಪ್ಯದಲ್ಲಿ ಕಾಡುವ ಮಂಡಿ, ಕೀಲು ನೋವಿನಿಂದ ಮುಕ್ತಿ ಪಡೆಯಿರಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Aug 09, 2023 | 6:57 PM

Share

ಮನುಷ್ಯನಿಗೆ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ 55 ರಿಂದ 60 ರ ವಸಂತಕ್ಕೆ ಕಾಲಿಡುತ್ತಿದ್ದಂತೆ ಹೆಚ್ಚಿನವರಿಗೆ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಮುಂತಾದವು ಹೆಚ್ಚು ಬಾಧಿಸುತ್ತವೆ. ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ, ಇದರಿಂದಾಗಿ ಮೊಣಕಾಲು ನೋವು ಹೆಚ್ಚಾಗುತ್ತದೆ. ಇದು ದಿನನಿತ್ಯದ ಕೆಲಸದಲ್ಲಿ ನಿಮಗೆ ತೊಂದರೆಯುಂಟು ಮಾಡಬಹುದು. ಅನೇಕ ಜನರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವಿವಿಧ ಬಗೆಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಮಂಡಿ ನೋವು, ಕೀಲು ನೋವಿಗೆ ಅಷ್ಟು ಸುಲಭವಾಗಿ ಔಷಧಿಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಪ್ರತಿನಿತ್ಯ ಈ ಮೂರು ಬಗೆಯ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಮಂಡಿ ಹಾಗೂ ಸ್ನಾಯು ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಆ ಯೋಗ ಭಂಗಿಗಳು ಯಾವುವು ಎಂಬುದನ್ನು ನೋಡೋಣ.

ವೃದ್ಧಾಪ್ಯದಲ್ಲಿ ಸ್ನಾಯುನೋವಿನಿಂದ ಮುಕ್ತಿ ಪಡೆಯಲು ಸಹಕಾರಿ ಈ ಯೋಗಭಂಗಿಗಳು:

ತಾಡಾಸನ:

ತಾಡಾಸನದ ಅಭ್ಯಾಸವು ತೊಡೆಗಳು, ಕಣಕಾಲುಗಳು ಮತ್ತು ಕೈಗಳನ್ನು ಬಲಪಡಿಸುತ್ತದೆ. ಮಾತ್ರವಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ದೇಹದ ರಚನೆಯನ್ನೂ ಸುಧಾರಿಸುತ್ತದೆ. ತಾಡಾಸನ ಮಾಡಲು, ನೇರವಾಗಿ ನಿಂತು ಬೆನ್ನುಮೂಳೆಯನ್ನು ನೇರವಾಗಿರಿಸಿ. ಎರಡು ಕಾಲುಗಳ ನಡುವೆ ಅಂತರವನ್ನು ಇಟ್ಟುಕೊಂಡು ಆಳವಾದ ಉಸಿರನ್ನು ತೆಗೆದುಕೊಂಡು ಎರಡೂ ಕೈಗಳನ್ನು ನೇರವಾಗಿ ತಲೆಯ ಮೇಲೆ ಸರಿಸಿ. ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗುವಾಗ ಉಸಿರಾಟದ ವೇಗಕ್ಕೆ ಗಮನಕೊಡಿ ಹಾಗೂ ಉಸಿರನ್ನು ನಿಧಾನಕ್ಕೆ ಬಿಡಿ ಈ ಆಸನವನ್ನು 10 ರಿಂದ 15 ಬಾರಿ ಪುನರಾವರ್ತಿಸಿ.

ಇದನ್ನೂ ಓದಿ:  ಯೋಗಾಸನ ಮಾಡಲು ಪ್ರಾರಂಭಿಸಿದ್ದೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ

ಭುಜಂಗಾಸನ:

ಈ ಯೋಗ ಭಂಗಿಯ ಅಭ್ಯಾಸವು ಹೊಟ್ಟೆ ಅಂಗಗಳನ್ನು ಆರೋಗ್ಯಕರವಾಗಿರಿಸುವ ಮೂಲಕ ಮಲಬದ್ಧತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದ. ಬೆನ್ನು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಹೃದಯ ಮತ್ತು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಈ ಯೋಗದ ವಯಸ್ಸಾದವರು ಎದುರಿಸುತ್ತಿರುವ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.

ಭುಜಂಗಾಸ ಮಾಡಲು ಹೊಟ್ಟೆಯ ಭಾಗ ನೆಲಕ್ಕೆ ಚಾಚುವಂತೆ ಮಲಗಿ ಮತ್ತು ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಕೈಗಳನ್ನು ಪಕ್ಕಕ್ಕೆ ಇಟ್ಟು, ತಲೆಯನ್ನು ಎತ್ತಿ. ಈ ಸ್ಥಿತಿಯಲ್ಲಿ ಎದೆಯ ಭಾಗ ಮೆಲಕ್ಕೆ ಬಂದು ಬಾಗಿದಂತಿರಬೇಕು. ಮತ್ತು ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಆಸನವನ್ನು ಪ್ರತಿನಿತ್ಯ ಮಾಡುವ ಮೂಲಕ ಸ್ನಾಯು ಹಾಗೂ ಕೀಲು ನೋವಿನಿಂದ ಪರಿಹಾರ ಪಡೆಯಬಹುದು.

ದಿನನಿತ್ಯ ಯೋಗಾಭ್ಯಾಶವನನು ಮಾಡುವ ಮೂಲಕ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡಾ ಸುಧಾರಿಸಿಕೊಳ್ಳಬಹುದು.

ಪ್ರಾಣಾಯಾಮವು ಸಹಕಾರಿ

ಪ್ರಾಣಾಯಾಮ ಕೀಲುನೋವನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮದ ನಿಯಮಿತ ಅಭ್ಯಾಸವು ಬೆನ್ನುಮೂಳೆಯನ್ನು ನೇರಗೊಳಿಸುತ್ತದೆ. ಮತ್ತು ಬೆನ್ನು ನೋವಿಗೆ ಪರಿಹಾರ ನೀಡುತ್ತದೆ. ಪ್ರಾಣಾಯಾಮವು ಕೀಲುನೋವನ್ನು ನಿವಾರಿಸಲು ಸಹ ಸಹಕಾರಿಯಾಗಿದೆ. ಅಲ್ಲದೆ ಪ್ರಾಣಾಯಾಮವು ಅಧಿಕರಕ್ತದೊತ್ತಡ, ಒತ್ತಡ, ಹೃದ್ರೋಗ, ಹೊಟ್ಟೆ ಮತ್ತು ಉಸಿರಾಟದ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸುತ್ತದೆ.

ಪ್ರಾಣಾಯಾಮ ಮಾಡಲು ಚಾಪೆಯ ಮೇಲೆ ಕಾಲು ಚಾಚಿ ಕುಳಿತುಕೊಳ್ಳಿ. ಕಣ್ಣುಗಳನ್ನು ನಿಧಾನವಾಗಿ ಮುಚ್ಚುವ ಮೂಲಕ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಬಲಗೈ ಮತ್ತು ಹೆಬ್ಬೆರೆಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಎಡ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ. ನಂತರ ಎಡ ಮೂಗಿನ ಹೊಳ್ಳೆಯನ್ನು ಉಂಗುರದ ಬೆರಳಿನಿಂದ ಮುಚ್ಚುವ ಮೂಲಕ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರನ್ನು ಬಿಡಿ. ಹೀಗೆ ಕೆಲವು ಬಾರಿ ಈ ಭಂಗಿಯನ್ನು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:10 pm, Wed, 9 August 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ