AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ಮಕ್ಕಳನ್ನು ಪಡೆದ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬ ಪೋಷಕರ ಸಂತೋಷ ಮಕ್ಕಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ಮಕ್ಕಳು ಜೀವನದಲ್ಲಿ ಯಶಸ್ಸು ಗಳಿಸಿದರೆ ತಂದೆ-ತಾಯಿ ಬಹಳಷ್ಟು ಖುಷಿಪಡುತ್ತಾರೆ. ಯಶಸ್ಸು ಒಂದುಕಡೆಯಾದರೆ, ಈ ಕೆಲವೊಂದು ಗುಣಗಳನ್ನು ಹೊಂದಿರುವ ಮಕ್ಕಳನ್ನು ಹೊಂದಿರುವ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ. ಪೋಷಕರಿಗೆ ಅದೃಷ್ಟವನ್ನು ತಂದುಕೊಡುವ, ಗೌರವವನ್ನು ಹೆಚ್ಚಿಸುವ ಮಕ್ಕಳ ಆ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಇಂತಹ ಮಕ್ಕಳನ್ನು ಪಡೆದ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on:Feb 03, 2026 | 8:43 PM

Share

ಪ್ರತಿಯೊಬ್ಬ ಪೋಷಕರು (parents) ತಮ್ಮ ಮಕ್ಕಳು ಉತ್ತಮ ಗುಣವನ್ನು ಹೊಂದಿರಬೇಕು, ಕೊನೆಗಾಲದಲ್ಲಿ ಆಸರೆಯಾಗಿ ನಿಲ್ಲಬೇಕು ಎಂದು ಬಯಸುತ್ತಾರೆ. ಆದರೆ ಕೆಲ ಮಕ್ಕಳು ಕೊನೆಗಾಲದಲ್ಲಿ ತಂದೆತಾಯಿಗೆ ಆಸರೆಯಾಗಿರದೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ, ಪೋಷಕರಿಗೆ ನೋವಾಗುವಂತೆ ನಡೆದುಕೊಳ್ಳುತ್ತಾರೆ. ಇಂತಹ ಮಧ್ಯೆ ಈ ಕೆಲವೊಂದು ಸದ್ಗುಣಗಳನ್ನು ಮೈಗೂಡಿಸಿಕೊಂಡಿರುವ ಮಕ್ಕಳ ಪೋಷಕರೇ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಇಂತಹ ಮಕ್ಕಳನ್ನು ಹೊಂದಿರುವ ಪೋಷಕರು ಗೌರವ, ಸಂತೋಷ ಮತ್ತು ತೃಪ್ತಿಯಿಂದ ಬದುಕುತ್ತಾರಂತೆ. ಹಾಗಿದ್ರೆ ಆ ಗುಣಗಳು ಯಾವುವು ಎಂಬುದನ್ನು ನೋಡೋಣ.

ಈ ಗುಣಗಳಿರುವ ಮಕ್ಕಳನ್ನು ಹೊಂದಿರುವ ಪೋಷಕರು ಅದೃಷ್ಟವಂತರು:

ವಿಧೇಯ ಮತ್ತು ಸಭ್ಯ ಸ್ವಭಾವ: ಚಾಣಕ್ಯ ನೀತಿಯ ಪ್ರಕಾರ, ವಿಧೇಯ ಮಕ್ಕಳು ಪೋಷಕರಿಗೆ ಬಹು ದೊಡ್ಡ ಆಸ್ತಿ ಇದ್ದಂತೆ. ಹಿರಿಯರ ಮಾತನ್ನು ಕೇಳುವ, ನಿಯಮಗಳನ್ನು ಪಾಲಿಸುವ ಮತ್ತು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮಕ್ಕಳನ್ನು ಸಮಾಜವು ಗೌರವಿಸುತ್ತದೆ. ಅಂತಹ ಮಕ್ಕಳು ತಮ್ಮ ಸ್ವಂತ ಮನೆಯನ್ನು ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಕುಲದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ.

ಸರಿ ಮತ್ತು ತಪ್ಪುಗಳ ತಿಳುವಳಿಕೆ: ಒಳ್ಳೆಯ ಮಕ್ಕಳ ಲಕ್ಷಣವೆಂದರೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸುವ ಸಾಮರ್ಥ್ಯ. ಚಾಣಕ್ಯರು ಹೇಳುವಂತೆ ವಿವೇಚನಾಶೀಲ ವ್ಯಕ್ತಿ ಮಾತ್ರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಂತನಶೀಲ ಹೆಜ್ಜೆಗಳನ್ನು ಇಡುವ ಮಕ್ಕಳು ಕಷ್ಟದ ಸಮಯದಲ್ಲೂ ತಮ್ಮ ಕುಟುಂಬಕ್ಕೆ ಬೆಂಬಲವಾಗುತ್ತಾರೆ. ಈ ಗುಣವು ಮಕ್ಕಳನ್ನು ಸ್ವಾವಲಂಬಿ ಮತ್ತು ಜವಾಬ್ದಾರಿಯುತವಾಗಿಸುತ್ತದೆ.

ಜ್ಞಾನ ಮತ್ತು ಶ್ರದ್ಧೆಗೆ ಗೌರವ: ಶಿಕ್ಷಣ, ಅನುಭವ ಮತ್ತು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುವ ಮಕ್ಕಳು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಜ್ಞಾನವನ್ನು ಪಡೆಯಲು ಸದಾ ಉತ್ಸುಕರಾಗಿರುವ ಮಕ್ಕಳಿಗೆ  ಸರಸ್ವತಿ ಮತ್ತು ಲಕ್ಷ್ಮಿ ದೇವಿ ಆಶೀರ್ವಾದ ಸದಾ ಇರುತ್ತದೆ.  ಇವರು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ, ಕುಟುಂಬಕ್ಕೆ ಕೀರ್ತಿ ತರುತ್ತಾರೆ. ಶಿಕ್ಷಣ ಮಾತ್ರವಲ್ಲ, ಲೋಕ ಜ್ಞಾನ, ಕಠಿಣ ಮಕ್ಕಳು ಸಹ ತಮ್ಮ ಪ್ರಯತ್ನಗಳ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಅವರ ಹೆತ್ತವರಿಗೆ ಹೆಮ್ಮೆ ತರುತ್ತಾರೆ.

ಇದನ್ನೂ ಓದಿ: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಪ್ರಶ್ನೆಗಳನ್ನು ಕೇಳಲೇಬೇಕು

 ಗುರಿಗಳು ಮತ್ತು ಉನ್ನತ ವಿಚಾರಗಳು: ಚಾಣಕ್ಯನ ಪ್ರಕಾರ, ಉನ್ನತ ಆದರ್ಶಗಳನ್ನು ಹೊಂದಿರುವ ಮತ್ತು ಜೀವನದಲ್ಲಿ ಗುರಿಯನ್ನು ಹೊಂದಿಸುವ ಮಕ್ಕಳು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತಾರೆ. ಗುರಿಗಳನ್ನು ಅನುಸರಿಸುವ ಮಕ್ಕಳು ಶಿಸ್ತು ಮತ್ತು ತಾಳ್ಮೆಯನ್ನು ಕಲಿಯುತ್ತಾರೆ. ಹೀಗೆ ಮಕ್ಕಳು ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ, ಪೋಷಕರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ.

ಹೀಗೆ ಸದ್ಗುಣಶೀಲ ಮಕ್ಕಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸುವುದರ ಜೊತೆಗೆ ತಮ್ಮ ಪೋಷಕರ ಜೀವನವನ್ನೂ ಅರ್ಥಪೂರ್ಣವಾಗಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Tue, 3 February 26

ಆರ್​​ಟಿಓ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲು
ಆರ್​​ಟಿಓ ಅಧಿಕಾರಿಗಳ ಮತ್ತೊಂದು ಕಳ್ಳಾಟ ಬಯಲು
ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಮೂರು ತಿಂಗಳಲ್ಲಿ 250 ಕೋಟಿ ಕಳೆದುಕೊಂಡಿದ್ದಾರೆ ನಿರ್ಮಾಪಕರು: ಕೆ ಮಂಜು
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಪಾಕ್ ಕ್ರಿಕೆಟ್ ಭವಿಷ್ಯ ಮೋದಿ ಕೈಯಲ್ಲಿದೆ; ರಮೀಜ್ ರಾಜಾ
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಧರ್ಮರಾಯಸ್ವಾಮಿ ದೇಗುಲದ ಚಿನ್ನದ ನಕ್ಲೇಸ್ ಕಳ್ಳತನ ಪ್ರಕರಣಕ್ಕೆ ಬಿಗ್ ಟಿಸ್ಟ್
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಯಶ್ ತಾಯಿ ಮಾಡಿದ ಆರೋಪ ತಳ್ಳಿಹಾಕಿದ ಪಿಡಿಒ ನಟರಾಜ್; ವಿಡಿಯೋ ನೋಡಿ..
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಚೀಟಿ ಹೆಸರಲ್ಲಿ 4 ಕೋಟಿ ಮಕ್ಮಲ್​​ ಟೋಪಿ: ಕಣ್ಣೀರು ಹಾಕಿದ ಸಂತ್ರಸ್ತರು
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ 70ಕ್ಕೂ ಹೆಚ್ಚು ಗೋವು ರಕ್ಷಣೆ
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ