AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಪುರುಷರಲ್ಲಿ ಈ ಅಭ್ಯಾಸಗಳಿದ್ದರೆ, ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾದ ಪ್ರತಿಯೊಂದು ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಈ ಕೆಲವು ಅಭ್ಯಾಸಗಳನ್ನು ಹೊಂದಿರುವ ಪುರುಷರು ತಮ್ಮ ಮನೆಗಳನ್ನು ತಾವೇ ನಾಶಪಡಿಸುತ್ತಾರೆ, ಅವರಿಂದ ಮನೆಯ ಶಾಂತಿ ಮತ್ತು ನೆಮ್ಮದಿಯೇ ಹಾಳಾಗುತ್ತದೆ ಎಂದಿದ್ದಾರೆ. ಹಾಗಿದ್ರೆ ಪುರುಷರ ಯಾವ ಅಭ್ಯಾಸಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಪುರುಷರಲ್ಲಿ ಈ ಅಭ್ಯಾಸಗಳಿದ್ದರೆ, ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on:Dec 13, 2025 | 7:18 PM

Share

ನಮ್ಮ ಅಭ್ಯಾಸಗಳು (habits) ಸಹ ನಮ್ಮ ಏಳ್ಗೆ, ಅವನತಿಯನ್ನು ನಿರ್ಧರಿಸುತ್ತವೆ. ಒಳ್ಳೆಯ ಅಭ್ಯಾಸಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವಂತೆ, ಕೆಟ್ಟ ಅಭ್ಯಾಸಗಳಿಂದ ಜೀವನವೇ ಹಾಳಾಗುತ್ತದೆ. ಅದರಲ್ಲೂ ಪುರುಷರ ಈ ಕೆಲವೊಂದು ಅಭ್ಯಾಸಗಳು ಇಡೀ ಮನೆಯ ನೆಮ್ಮದಿಯನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹೌದು ಪುರುಷರಲ್ಲಿ ಈ ಕೆಲವೊಂದು ಅಭ್ಯಾಸಗಳಿದ್ದರೆ, ಅವರ ಅಭ್ಯಾಸಗಳ ಕಾರಣದಿಂದಲೇ ಅವರ ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎಂದಿದ್ದಾರೆ. ಹಾಗಿದ್ರೆ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮನೆಯ ಶಾಂತಿ, ನೆಮ್ಮದಿ ಹಾಳಾಗಲು ಕಾರಣ ಪುರುಷರ ಈ ಅಭ್ಯಾಸಗಳು:

ಹೆಂಡತಿಯನ್ನು ಅಗೌರವಿಸುವ ವ್ಯಕ್ತಿ: ಚಾಣಕ್ಯರ ಪ್ರಕಾರ, ತನ್ನ ಹೆಂಡತಿಯನ್ನು ಗೌರವಿಸದ ಪುರುಷನು ತನ್ನ ಮನೆಯನ್ನು ಎಂದಿಗೂ ಶಾಂತಿ ಮತ್ತು ನೆಮ್ಮದಿಯಿಂದ ಇಡಲು ಸಾಧ್ಯವಿಲ್ಲ. ಗಂಡನಾದವನು ಹೆಂಡತಿಯನ್ನು ಪದೇ ಪದೇ ಅವಮಾನಿಸುವುದು, ಅವಳ ಭಾವನೆಗಳನ್ನು ನಿರ್ಲಕ್ಷಿಸುವುದು ಇವೆಲ್ಲವು ಆಕೆಯ ಭಾವನೆಗಳಿಗೆ ನೋವುಂಟುಮಾಡುತ್ತದೆ. ಇದರಿಂದ ಮನೆಯು ಉದ್ವಿಗ್ನತೆ, ಸಂಘರ್ಷ ಮತ್ತು ನಕಾರಾತ್ಮಕತೆಯಿಂದ ತುಂಬಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಅನೈತಿಕ ಸಂಬಂಧ:  ಚಾಣಕ್ಯರು  ಹೇಳುವಂತೆ, ಗಂಡನಾದವನು ನಿಷ್ಠನಾಗಿರಬೇಕು. ಪುರುಷನಾದವನು ಅನೈತಿಕ ಸಂಬಂಧವನ್ನು ಹೊಂದಿದರೆ, ಇದರಿಂದ ಸಂಸಾರ ಹಾಳಾಗುತ್ತದೆ. ಇದು ಕುಟುಂಬದ ಖ್ಯಾತಿ, ಗೌರವ ಮತ್ತು ಸ್ಥಿರತೆಯನ್ನು ನಾಶಮಾಡುತ್ತವೆ.

ಸಾಲ ಮಾಡುವವರು: ಕೆಲವು ಪುರುಷರು ತಮ್ಮ ಖರ್ಚುಗಳನ್ನು ಪೂರೈಸಲು ಪದೇ ಪದೇ ಹಣವನ್ನು ಸಾಲ ಪಡೆಯುತ್ತಾರೆ. ಚಾಣಕ್ಯರ ಪ್ರಕಾರ, ತನ್ನ ಆರ್ಥಿಕ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗದ ಮತ್ತು ನಿರಂತರವಾಗಿ ಸಾಲ ಮಾಡುವ ವ್ಯಕ್ತಿ ತನ್ನ ಕುಟುಂಬವನ್ನು  ತೊಂದರೆಗೆ ಸಿಲುಕಿಸುತ್ತಾನೆ. ಅಲ್ಲದೆ ಈ ಅಭ್ಯಾಸವು ಕುಟುಂಬವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದಲ್ಲದೆ, ಮಾನಸಿಕ ಒತ್ತಡ ಮತ್ತು ಸಂಘರ್ಷಕ್ಕೂ ಕಾರಣವಾಗುತ್ತದೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಬುದ್ಧಿವಂತ ಜನರಲ್ಲಿ ಮಾತ್ರ ವಿಶೇಷ ಗುಣಗಳಿರುವುದಂತೆ

ಜವಾಬ್ದಾರಿಗಳಿಂದ ಓಡಿಹೋಗುವ ವ್ಯಕ್ತಿ: ತನ್ನ ಕುಟುಂಬದ ಜವಾಬ್ದಾರಿಗಳಿಂದ ಹಿಂದೆ ಸರಿಯುವ, ಓಡಿಹೋಗುವ ವ್ಯಕ್ತಿಯಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಆತ ಕುಟುಂಬವನ್ನು ಸರಿಯಾಗಿ ನಿರ್ವಹಿಸಲು ಸಹ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Sat, 13 December 25

ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ