Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಆಭರಣವನ್ನು ಆತ್ಮೀಯರಿಗೆ ಧರಿಸಲು ಕೊಡ್ತೀರಾ? ಈ ತಪ್ಪು ಎಂದಿಗೂ ಮಾಡ್ಲೇಬೇಡಿ

ಸೌಂದರ್ಯ ಹೆಚ್ಚಿಸುವ ಆಭರಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲಿ ಮಹಿಳೆಯರಿಗೆ ಒಡವೆಗಳ ಮೇಲೆ ಹೆಚ್ಚು ವ್ಯಾಮೋಹವಿರುತ್ತದೆ. ಕೈಗೆ, ಕೊರಳಿಗೆ ಕಿವಿ ಬಗೆ ಬಗೆಯ ವಿನ್ಯಾಸದ ಆಭರಣಗಳನ್ನು ಮಾಡಿ ಧರಿಸುತ್ತಾರೆ. ತಮ್ಮಲ್ಲಿ ಎಷ್ಟೇ ಒಡವೆಗಳಿದ್ದರೂ ಬೇರೆಯವರು ಧರಿಸುವ ಆಭರಣದ ಮೇಲೆ ಕಣ್ಣೀರುತ್ತದೆ. ಹೀಗಾಗಿ ನಿಮ್ಮ ಆತ್ಮೀಯರು ಅಥವಾ ಸ್ನೇಹಿತರು ಒಂದು ದಿನದ ಮಟ್ಟಿಗೆ ಈ ಆಭರಣ ಕೊಡುವೆಯಾ ಎಂದು ಕೇಳಿರುವ ಅನುಭವ ನಿಮಗಾಗಿರಬಹುದು. ಆದರೆ ನಿಮ್ಮ ಒಡವೆಗಳನ್ನು ಇತರರಿಗೆ ಧರಿಸಲು ನೀಡಬಾರದು ಎನ್ನುವುದು ಏಕೆ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ನಿಮ್ಮ ಆಭರಣವನ್ನು ಆತ್ಮೀಯರಿಗೆ ಧರಿಸಲು ಕೊಡ್ತೀರಾ? ಈ ತಪ್ಪು ಎಂದಿಗೂ ಮಾಡ್ಲೇಬೇಡಿ
ಸಾಂಧರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 28, 2025 | 4:37 PM

ಹಬ್ಬ ಹರಿದಿನಗಳಿರಲಿ, ಶುಭ ಸಮಾರಂಭಗಳಿರಲಿ ಹೆಣ್ಣು ಮಕ್ಕಳು ಆಭರಣ (Jewellery)ಗಳನ್ನು ಧರಿಸುತ್ತಾರೆ. ಹೆಣ್ಣು ಮಕ್ಕಳಿಗೆ ಆಭರಣಕ್ಕೂ ಎಲ್ಲಿಲ್ಲದ ನಂಟಿದೆ. ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುವ ಈ ಒಡವೆಗಳು ಪ್ರತಿಷ್ಠೆಯ ಸಂಕೇತ ಕೂಡ ಆಗಿದೆ. ಅದರಲ್ಲಿಯೂ ತಮ್ಮಲ್ಲಿ ಬಗೆ ಬಗೆಯ ವಿನ್ಯಾಸದ ಅಭರಣಗಳಿದ್ದರೆ ತಮ್ಮ ಸ್ನೇಹಿತರು ಹಾಗೂ ಸುತ್ತಮುತ್ತಲಿನ ಮಹಿಳೆಯರು ಧರಿಸಿರುವ ಆಭರಣಗಳು ಇವರನ್ನು ಸೆಳೆಯುತ್ತವೆ. ಸಹೋದರಿಯರು, ಆತ್ಮೀಯರು ಅಥವಾ ಸ್ನೇಹಿತರಿದ್ದರೆ ತಮ್ಮ ಒಡವೆಗಳನ್ನು ವಿನಿಮಯ ಮಾಡಿಕೊಂಡು ಧರಿಸುತ್ತಾರೆ. ಆದರೆ ನೀವು ಧರಿಸುವ ಒಡವೆಗಳನ್ನು ಇತರರಿಗೆ ಯಾವುದೇ ಕಾರಣಕ್ಕೂ ಕೊಡಬಾರದು ಎಂದು ಹೇಳುವುದಿದೆ. ಇದರ ಹಿಂದೆ ಆರೋಗ್ಯ (Helath) ಕ್ಕೆ ಸಂಬಂಧಿತ ಹಾಗೂ ಆಧ್ಯಾತ್ಮಿಕ (Spiritual) ಕಾರಣಗಳು ಸೇರಿವೆ.

* ಹೆಣ್ಣಿನ ಹದಿನಾರು ಶೃಂಗಾರಗಳಲ್ಲಿ ಒಡವೆಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಒಬ್ಬ ಸ್ತ್ರೀ ಮನೆಯಲ್ಲಿರುವ ಆಭರಣವನ್ನು ಯಾರಿಗೂ ಕೂಡ ಕೊಡಬಾರದು. ಈ ಆಭರಣದಲ್ಲಿ ಲಕ್ಷ್ಮೀದೇವಿ ವಾಸವಾಗಿದ್ದಾಳೆ, ಹೀಗಾಗಿ ಮದುವೆಯಾದ ಸ್ತ್ರೀ ತನ್ನ ಒಡವೆಗಳನ್ನು ದಾನವಾಗಿ ಕೊಡಬಾರದು. ಒಂದು ಬೇರೆಯವರಿಗೆ ಒಡವೆಗಳನ್ನ ಧರಿಸಲು ಕೊಟ್ಟರೆ ಆಕೆಯ ಜೀವನದಲ್ಲಿ ಬಡತನ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ.

* ಹೆಚ್ಚಿನ ಮಹಿಳೆಯರು ಬೇರೆಯವರ ಆಭರಣವನ್ನು ಧರಿಸುತ್ತಾರೆ. ಅದರಲ್ಲಿ ಒಬ್ಬರು ಧರಿಸಿದ ಉಂಗುರವನ್ನು ಇಷ್ಟಪಟ್ಟು ಕೈ ಬೆರಳಿಗೆ ಹಾಕಿಕೊಳ್ಳುತ್ತಾರೆ. ಆದರೆ ಈ ತಪ್ಪನ್ನು ನೀವು ಎಂದಿಗೂ ಮಾಡಬಾರದಂತೆ. ನಿಮ್ಮ ಬೇರೆಯವರಿಗೆ ಉಂಗುರಗಳನ್ನು ಧರಿಸಲು ನೀಡಿದರೆ ನಿಮ್ಮ ಅದೃಷ್ಟವು ಕೈಕೊಡಬಹುದು ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ
Image
ರಾತ್ರಿ ಚಪಾತಿ ತಿನ್ನುತ್ತೀರಾ? ನಿಮ್ಮಲ್ಲಿ ಖಂಡಿತ ಈ ಬದಲಾವಣೆ
Image
ಕಣ್ಣಿಗೆ ಕಸ ಬಿದ್ದರೆ ತಕ್ಷಣ ಕಣ್ಣನ್ನು ಉಜ್ಜಬೇಡಿ, ಈ ಕೆಲಸ ಮೊದ್ಲು ಮಾಡಿ
Image
ನೀರಿಗೆ ಇದನ್ನು ಹಾಕಿ ಸ್ನಾನ ಮಾಡಿದ್ರೆ ಬೆವರಿನ ವಾಸನೆ ದೂರವಾಗುತ್ತೆ
Image
ನೀವು ಆಯ್ಕೆ ಮಾಡಿಕೊಳ್ಳುವ ಬೀಚ್ ಚಿತ್ರದಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

* ನಿಮ್ಮ ಆತ್ಮೀಯರು ಅಥವಾ ಸ್ನೇಹಿತರು ನಿಮ್ಮ ಆಭರಣ ಧರಿಸಲು ಕೇಳಿದರೆ ತೆಗೆದುಕೊಡಬೇಡಿ. ಒಂದು ವೇಳೆ ಯಾರಿಗಾದರೂ ಒಣ ಚರ್ಮ, ಇಸುಬು, ಸೋರಿಯಾಸಿಸ್, ಗಜಕರ್ಣದಂತಹ ಚರ್ಮದ ಸಮಸ್ಯೆಗಳು ಇದ್ದರೆ ಅದು ಹರಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅದಲ್ಲದೇ ನಿಮ್ಮ ಆಭರಣ ಬೇರೆಯವರು ಧರಿಸಿದ್ದರೆ ಅದನ್ನು ಹಾಗೆಯೇ ನೀವು ಬಳಕೆ ಮಾಡಬೇಡಿ. ಅನಿವಾರ್ಯ ಸಂದರ್ಭದಲ್ಲಿ ಆಭರಣಗಳನ್ನು ಬೇರೆಯವರಿಗೆ ಧರಿಸಲು ಕೊಟ್ಟರೂ ನೀವು ಧರಿಸುವ ಮುನ್ನ ನೀರಿನಲ್ಲಿ ಅದ್ದಿ ತೆಳುವಾದ ಬಟ್ಟೆಯಲ್ಲಿ ಒರೆಸಿ ಧರಿಸುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Fri, 28 March 25

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ