ಒಂದು ದಿನದ ವೀಕೆಂಡ್ ಪ್ರವಾಸಕ್ಕೆ ಇದು ಒಳ್ಳೆಯ ಪ್ಯಾಕೇಜ್: ಕೆಎಸ್ಟಿಡಿಸಿಯಿಂದ ಕಡಿಮೆ ದರದಲ್ಲಿ ಜಲಪಾತಕ್ಕೆ ಟೂರ್
ಬೆಂಗಳೂರಿನ ಜಂಜಾಟದಿಂದ ದೂರವಿರಲು ಬಯಸುವಿರಾ? KSTDCಯು 1480 ರೂ,ಗೆ ಆಕರ್ಷಕ ಒಂದು ದಿನದ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಹೊರಟು ಕೃಷ್ಣಗಿರಿ ಅಣೆಕಟ್ಟು ಮತ್ತು ಹೊಗೇನಕಲ್ ಜಲಪಾತದ ಸೌಂದರ್ಯ ಸವಿಯಬಹುದು. ಈ ಕಡಿಮೆ ವೆಚ್ಚದ ಪ್ರಕೃತಿಮಯ ಪ್ರವಾಸಕ್ಕೆ ಯಶವಂತಪುರದಲ್ಲಿ ಬುಕ್ ಮಾಡಿ, ಅನಾಯಾಸವಾಗಿ ಮಜಾ ಮಾಡಿ.

ಬೆಂಗಳೂರು, ಜು.20: ವೀಕೆಂಡ್ನಲ್ಲಿ ಬೆಂಗಳೂರಿನ ಜಂಜಾಟದಿಂದ ದೂರ ಉಳಿದು ಪ್ರಕೃತಿಯ ಮಡಿಲಲ್ಲಿ ಒಂದು ದಿನ ಕಳೆಯಲು ಬಯಸುವ ಪ್ರವಾಸಿಗರಿಗಾಗಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಅತ್ಯಾಕರ್ಷಕ ಪ್ರವಾಸ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಹೊರಟು ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ಮತ್ತು ಹೊಗೇನಕಲ್ ಜಲಪಾತಕ್ಕೆ (Hogenakkal Falls) ಕೇವಲ 1,480 ರೂ ದರದಲ್ಲಿ ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದಾಗಿದೆ.
ಪ್ರವಾಸದ ದಿನಗಳು
ಪ್ರತಿ ವಾರ ರೂಟಿನ್ ಆಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಪ್ರವಾಸ ಲಭ್ಯವಿರುತ್ತದೆ. ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ಕೆಎಸ್ಟಿಡಿಸಿ (KSTDC) ಬುಕಿಂಗ್ ಕೌಂಟರ್ನಲ್ಲಿ ಬಸ್ ವ್ಯವಸ್ಥೆ ಮಾಡಲಾಗಿರುತ್ತದೆ. ಬೆಳಗ್ಗೆ 6.00 ಗಂಟೆಗೆ ಹೊರಡಬೇಕಾಗುತ್ತದೆ. ತಲಾ ಒಬ್ಬರಿಗೆ 1480 ದರವನ್ನು ನಿಗದಿ ಮಾಡಲಾಗಿದೆ.
ಒಂದು ದಿನದ ಪ್ರವಾಸದ ಸಂಪೂರ್ಣ ವೇಳಾಪಟ್ಟಿ:
| ಸಮಯ | ಭೇಟಿ ನೀಡುವ ಸ್ಥಳ |
| ಬೆಳಿಗ್ಗೆ 06:00 | ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್ಟಿಡಿಸಿ ಬುಕಿಂಗ್ ಕೌಂಟರ್ನಿಂದ ಬಸ್ ನಿರ್ಗಮನ. |
| ಬೆಳಿಗ್ಗೆ 09:00 – 09:30 | ಮಾರ್ಗಮಧ್ಯೆ ರುಚಿಕರವಾದ ಉಪಹಾರಕ್ಕಾಗಿ (Breakfast) ಬಿಡುವು. |
| ಬೆಳಿಗ್ಗೆ 10:00 – 11:00 | ಸುಂದರವಾದ ಕೃಷ್ಣಗಿರಿ ಅಣೆಕಟ್ಟು (Krishnagiri Dam) ವೀಕ್ಷಣೆ ಮತ್ತು ಭೇಟಿ. |
| ಮಧ್ಯಾಹ್ನ 01:00 – 02:00 | ಮಧ್ಯಾಹ್ನದ ಊಟದ (Lunch) ಸಮಯ. |
| ಮಧ್ಯಾಹ್ನ 02:00 – ಸಂಜೆ 05:00 | ಭಾರತದ ನಯಾಗರಾ ಎಂದೇ ಪ್ರಸಿದ್ಧಿಯಾಗಿರುವ ಹೊಗೇನಕಲ್ ಜಲಪಾತದ (Hogenakkal Falls) ಅದ್ಭುತ ವೀಕ್ಷಣೆ. |
| ಸಂಜೆ 05:00 – ರಾತ್ರಿ 09:00 | ಹೊಗೇನಕಲ್ನಿಂದ ಹೊರಟು ಮರಳಿ ಬೆಂಗಳೂರಿಗೆ ಆಗಮನ ಮತ್ತು ಪ್ರವಾಸ ಮುಕ್ತಾಯ. |
ಕಡಿಮೆ ವೆಚ್ಚದಲ್ಲಿ, ಯಾವುದೇ ಆಯಾಸವಿಲ್ಲದೆ ಒಂದೇ ದಿನದಲ್ಲಿ ಸುಂದರ ಜಲಪಾತ ಹಾಗೂ ಅಣೆಕಟ್ಟನ್ನು ಕಣ್ತುಂಬಿಕೊಳ್ಳಲು ಈ ವೀಕೆಂಡ್ ಪ್ಯಾಕೇಜ್ ಅತ್ಯುತ್ತಮ ಅವಕಾಶವಾಗಿದೆ. ಪ್ರವಾಸದ ಹೆಚ್ಚಿನ ವಿವರ ಹಾಗೂ ಬುಕಿಂಗ್ಗಾಗಿ ಸಾರ್ವಜನಿಕರು ಕೆಎಸ್ಟಿಡಿಸಿ ಅಧಿಕೃತ ವೆಬ್ಸೈಟ್ ಅಥವಾ ಯಶವಂತಪುರ ಕೌಂಟರ್ ಅನ್ನು ಸಂಪರ್ಕಿಸಬಹುದಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




