AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lower Back Pain: ಕೆಳ ಬೆನ್ನುನೋವಿಗೆ ಮಕರಾಸನವೇ ಮದ್ದು; ಮೊಸಳೆ ಭಂಗಿಯನ್ನು ಸರಿಯಾಗಿ ಮಾಡುವುದು ಹೇಗೆ?

ಮಕರಾಸನ ಅಥವಾ ಮೊಸಳೆ ಭಂಗಿ, ಕೆಳ ಬೆನ್ನುನೋವನ್ನು ನಿವಾರಿಸಲು ಪರಿಣಾಮಕಾರಿ ಯೋಗ ಭಂಗಿಯಾಗಿದೆ. ಗಟ್ಟಿಮುಟ್ಟಾದ ಬೆನ್ನುಮೂಳೆಗಾಗಿ ಮಕರಾಸನ ಮಾಡುವುದು ಹೇಗೆ? ಇದರಿಂದ ಆಗುವ ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.

Lower Back Pain: ಕೆಳ ಬೆನ್ನುನೋವಿಗೆ ಮಕರಾಸನವೇ ಮದ್ದು; ಮೊಸಳೆ ಭಂಗಿಯನ್ನು ಸರಿಯಾಗಿ ಮಾಡುವುದು ಹೇಗೆ?
ಮಕರಾಸನ ಅಥವಾ ಮೊಸಳೆ ಭಂಗಿ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on:Jul 23, 2023 | 11:21 AM

Share

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು (Back Pain) ಮತ್ತು ಸೊಂಟ ನೋವಿನ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಈ ಸಮಸ್ಯೆಗೆ ವಯಸ್ಸಿನ ಮಿತಿಯಿಲ್ಲ. ಯಾರಿಗೂ ಬರಬಹುದು. ನಮ್ಮ ಜೀವನ ಶೈಲಿಯೇ ಇದಕ್ಕೆಲ್ಲ ಮುಖ್ಯ ಕಾರಣವಾಗಿದೆ. ಇನ್ನು ಕೆಳ ಬೆನ್ನು ನೋವು ದೇಹವನ್ನೇ ದುರ್ಬಲಗೊಳಿಸುತ್ತದೆ, ನಮ್ಮ ದೈನಂದಿನ ಜೀವನ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮವನ್ನೂ ಬೀರುತ್ತದೆ. ಇದನ್ನು ನಿವಾರಣೆ ಮಾಡಲು ನಿಮಗೆ ಔಷಧ, ವ್ಯಾಯಾಮಗಳಿದ್ದರೂ ಯೋಗವು ಸೌಮ್ಯ ಮತ್ತು ಪರಿಣಾಮಕಾರಿ ವಿಧಾನವನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಮೊಸಳೆ ಭಂಗಿ ಎಂದೂ ಕರೆಯಲ್ಪಡುವ ಮಕರಾಸನವು ಒಂದು ಚಿಕಿತ್ಸಕ ಯೋಗ ಭಂಗಿಯಾಗಿದ್ದು, ಇದು ಬೆನ್ನಿನ ಕೆಳಭಾಗದಲ್ಲಿರುವ ನೋವನ್ನು ನಿವಾರಣೆ ಮಾಡುತ್ತದೆ. ಮಕರಾಸನವನ್ನು ಹೇಗೆ ಮಾಡಬೇಕೆಂದು ತಿಳಿಯಲು ಜೊತೆಗೆ ಅದರ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿದೆ ಮಾಹಿತಿ.

ಬೆನ್ನು ನೋವಿಗೆ ಮಕರಾಸನದ ಪ್ರಯೋಜನಗಳು:

ಕೆಳ ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ:

ಮಕರಾಸನವು ಕೆಳ ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಬೆನ್ನುಮೂಳೆಗೆ ಉತ್ತಮ ಬಲ ನೀಡಿ ಗಟ್ಟಿಗೊಳಿಸುತ್ತದೆ ಮತ್ತು ಸ್ನಾಯು ದೌರ್ಬಲ್ಯದಿಂದ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ.

ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುತ್ತದೆ:

ಮಕರಾಸನದ ನಿಯಮಿತ ಅಭ್ಯಾಸವು ಕೆಳ ಬೆನ್ನು ಮತ್ತು ಸೊಂಟದ ನಮ್ಯತೆಯನ್ನು (ಫ್ಲೆಕ್ಸಿಬಿಲಿಟಿ) ಸುಧಾರಿಸುತ್ತದೆ, ಒಟ್ಟಾರೆ ಬೆನ್ನಿನ ಬಿಗಿತವನ್ನು ಕಡಿಮೆ ಮಾಡುತ್ತದೆ.

ಉದ್ವೇಗ ಮತ್ತು ಒತ್ತಡವನ್ನು ನಿವಾರಿಸುತ್ತದೆ:

ಈ ಭಂಗಿಯು ವಿಶ್ರಾಂತಿಯನ್ನು ನೀಡುವುದರ ಜೊತೆಗೆ ಸಂಗ್ರಹವಾದ ಉದ್ವೇಗವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಇದು ಅತ್ಯುತ್ತಮ ಒತ್ತಡ ನಿವಾರಕ ಭಂಗಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ:

ಮಕರಾಸನವು ಬೆನ್ನಿನ ಕೆಳಭಾಗಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಸ್ನಾಯುಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪೂರೈಸುತ್ತದೆ ಮತ್ತು ನೋವನ್ನು ಗುಣಪಡಿಸುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.

ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ:

ಸ್ನಾಯುಗಳನ್ನು ಬಲಪಡಿಸುವ ಮೂಲಕ ಕೆಳ ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಬೆನ್ನುನೋವಿನ ನಿವಾರಣೆಗೆ ಮಕರಾಸನವನ್ನು ಮಾಡುವುದು ಹೇಗೆ?

  • ನಿಮ್ಮ ಹೊಟ್ಟೆಯ ಮೇಲೆ ಆರಾಮವಾಗಿ ಮಲಗಬಹುದಾದ ಸಮತಟ್ಟಾದ ಪ್ರದೇಶವನ್ನು ಹುಡುಕುವ ಮೂಲಕ ಇದನ್ನು ಪ್ರಾರಂಭಿಸಿ.
  • ನೀವು ಯೋಗ ಮಾಡುವಾಗ, ಮ್ಯಾಟ್ ಅಥವಾ ಮೃದುವಾದ ಹಾಸಿಗೆಯನ್ನು ಹಾಸಿಕೊಳ್ಳಿ. ಹೊಟ್ಟೆಯನ್ನು ಕೆಳಗೆ ಮಾಡಿ ಮಲಗಬೇಕು. ಎರಡು ಕಾಲುಗಳನ್ನು ಹಿಂದೆ ಚಾಚಿ ವಿಶ್ರಾಂತಿ ಪಡೆಯಬೇಕು. ಎರಡು ಮೊಣಕೈಗಳನ್ನು ಮಡಚಿ ಮುಂದೆ ಇಟ್ಟುಕೊಳ್ಳಬೇಕು. ಈಗ ಯಾವುದಾದರೂ ಒಂದು ಕೆನ್ನೆಯನ್ನು ಅಥವಾ ಹಣೆಯನ್ನು ಮೊಣಕೈಗಳಿಗೆ ತಾಗಿಸಿ ನಿಮ್ಮ ಕುತ್ತಿಗೆ ಮತ್ತು ಭುಜಗಳು ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಿ.
  • ಈ ಭಂಗಿಯನ್ನು 1-2 ನಿಮಿಷಗಳ ಕಾಲ ಅಥವಾ ಆರಾಮದಾಯಕವೆನಿಸುವವರೆಗೆ ಮಾಡಿ. ಆಳವಾದ, ಸ್ಥಿರವಾದ ಉಸಿರಾಟದ ಮೇಲೆ ಕೇಂದ್ರೀಕರಿಸಿ, ನಿಮ್ಮ ದೇಹವು ವಿಶ್ರಾಂತಿ ಪಡೆಯಲು ಮತ್ತು ನಿಮ್ಮ ಬೆನ್ನಿನ ಕೆಳಭಾಗವು ನೋವಿನಿಂದ ಮುಕ್ತಿ ಹೊಂದಲು ಸಹಾಯ ಮಾಡುತ್ತದೆ.

ಮಕರಾಸನ ಮಾಡುವಾಗ ಮುನ್ನೆಚ್ಚರಿಕೆಗಳು ಮತ್ತು ಸಲಹೆಗಳು:

  • ತೀವ್ರವಾದ ನೋವು ಇದ್ದಲ್ಲಿ ಮಕರಾಸನ ಅಥವಾ ಯಾವುದೇ ವ್ಯಾಯಾಮ ನಿಯಮಾವಳಿಯನ್ನು ಪ್ರಯತ್ನಿಸುವ ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.
  • ನಿಮ್ಮ ದೇಹದ ಮಾತನ್ನು ಕೇಳಿಸಿಕೊಳ್ಳಿ ಮತ್ತು ನೋವು ಅಥವಾ ಅಸ್ವಸ್ಥತೆಯನ್ನು ಉಂಟುಮಾಡುವ ಯಾವುದೇ ಭಂಗಿಯನ್ನೂ ಬಲವಂತದಿಂದ ಮಾಡಬೇಡಿ. ನಿಮ್ಮ ದೇಹಕ್ಕೆ ಅನುಗುಣವಾಗುವಂತ ಭಂಗಿಯನ್ನು ಮಾತ್ರ ಮಾಡಿ.
  • ಯೋಗ ಮಾಡಲು ನಿಯಮಿತ ಅಭ್ಯಾಸವು ಎಂದಿಗೂ ಮುಖ್ಯ. ಕ್ರಮೇಣ, ನಿಮ್ಮ ದೇಹವು ಹೆಚ್ಚು ಆರಾಮದಾಯಕವಾಗುತ್ತಿದ್ದಂತೆ ಭಂಗಿಯ ಅವಧಿಯನ್ನು ಕ್ರಮೇಣ ಹೆಚ್ಚಿಸಿಕೊಳ್ಳಿ.

ಕೆಳ ಬೆನ್ನಿನ ಸ್ನಾಯುಗಳನ್ನು ಬಲಪಡಿಸಿ, ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ, ಈ ಭಂಗಿಯು ಅಸ್ವಸ್ಥತೆಯನ್ನು ನಿರ್ವಹಿಸಲು ನೈಸರ್ಗಿಕ ಮತ್ತು ಸಮಗ್ರ ವಿಧಾನವನ್ನು ನೀಡುತ್ತದೆ. ಮಕರಾಸನವನ್ನು ನಿಮ್ಮ ನಿಯಮಿತ ಯೋಗಾಭ್ಯಾಸದಲ್ಲಿ ಅಳವಡಿಸಿಕೊಳ್ಳಿ ಮತ್ತು ಅದು ನಿಮ್ಮ ಬೆನ್ನಿನ ಕೆಳಭಾಗಕ್ಕೆ ಒದಗಿಸುವ ಹಿತವಾದ ಪ್ರಯೋಜನಗಳನ್ನು ತಪ್ಪದೇ ಅನುಭವಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 11:20 am, Sun, 23 July 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ