AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Watch Day 2023: ರಾಷ್ಟ್ರೀಯ ಗಡಿಯಾರ ದಿನದ ಇತಿಹಾಸ, ಮಹತ್ವ, ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ!

ರಾಷ್ಟ್ರೀಯ ಗಡಿಯಾರ ದಿನವು ನಮ್ಮ ಜೀವನದಲ್ಲಿ ಗಡಿಯಾರಗಳ ಕಾಲಾತೀತ ಆಕರ್ಷಣೆ ಮತ್ತು ಅದರ ಮಹತ್ವವನ್ನು ಗೌರವಿಸುವ ಸಮಯವಾಗಿದೆ. ಈ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

National Watch Day 2023: ರಾಷ್ಟ್ರೀಯ ಗಡಿಯಾರ ದಿನದ ಇತಿಹಾಸ, ಮಹತ್ವ, ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 19, 2023 | 12:40 PM

ರಾಷ್ಟ್ರೀಯ ಗಡಿಯಾರ ದಿನವು (National Watch Day) ಸಮಯಪಾಲನಾ ಸಾಧನಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಮೀಸಲಾಗಿರುವ ವಿಶೇಷ ಸಂದರ್ಭವಾಗಿದೆ. ಒಂದು ದಿನವನ್ನು ನಿರ್ದಿಷ್ಟವಾಗಿ ಕೈಗಡಿಯಾರಗಳಿಗೆ ಏಕೆ ಸಮರ್ಪಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ನೀವು ಕೇಳಬಹುದು. ಏಕೆಂದರೆ, ಈ ಆವಿಷ್ಕಾರವಿಲ್ಲದೆ, ನೀವು ನಿಖರವಾಗಿ ಸಮಯವನ್ನು ಹೇಳಲು ಹೇಗೆ ಸಾಧ್ಯವಾಗುತ್ತಿತ್ತು? ಇದನ್ನು ಬಿಟ್ಟರೆ ನಿಮಗೆ ಬೇರೆ ಯಾವ ಮಾರ್ಗವಿಲ್ಲ. ಈ ಪೋರ್ಟಬಲ್ ಸಾಧನವು ಮಾನವಕುಲದ ಕಾರ್ಯಗಳಿಗೆ ಪ್ರಯೋಜನಕರಿ ವಸ್ತುವಾಗಿದೆ. ಇದರಿಂದಾಗಿ ನಮ್ಮ ಇತಿಹಾಸವನ್ನು ನಿಖರವಾಗಿ ಹೇಳಬಹುದಾಗಿದ್ದು ಈ ಸಾಧನವು ನಮ್ಮ ದೈನಂದಿನ ದಿನಚರಿಯ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ನಮ್ಮ ಜೀವನದಲ್ಲಿ ಸಮಯ ಎನ್ನುವುದು ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದರ ಬಗ್ಗೆ ನಿಮಗೆ ತಿಳಿದಿರಬಹುದು. ಸಮಯ ಪ್ರಜ್ಞೆಯಿಂದ ಇರುವುದನ್ನು ಮತ್ತು ಪ್ರತಿ ಕ್ಷಣವನ್ನು ಹೆಚ್ಚು ಬಳಸಿಕೊಳ್ಳುವುದನ್ನು ಇದು ಸೂಚಿಸುತ್ತದೆ. ಈ ದಿನ ಗಡಿಯಾರಗಳು ನಮ್ಮ ದೈನಂದಿನ ದಿನಚರಿಗಳ ಮೇಲೆ ಬೀರಿದ ಪ್ರಭಾವವನ್ನು ನೆನಪಿಸುತ್ತದೆ.

ರಾಷ್ಟ್ರೀಯ ಗಡಿಯಾರ ದಿನ ಯಾವಾಗ?

ರಾಷ್ಟ್ರೀಯ ಗಡಿಯಾರ ದಿನವನ್ನು ವಾರ್ಷಿಕವಾಗಿ ಜೂನ್ 19 ರಂದು ಆಚರಿಸಲಾಗುತ್ತದೆ, ಇದು ಸಮಯಪಾಲನಾ ಸಾಧನಗಳ ಮಹತ್ವವನ್ನು ಗುರುತಿಸಲು ಮತ್ತು ಪ್ರಶಂಸಿಸಲು ವಿಶೇಷ ಸಂದರ್ಭವಾಗಿ ಕಾರ್ಯ ನಿರ್ವಹಿಸುತ್ತದೆ.

ರಾಷ್ಟ್ರೀಯ ಗಡಿಯಾರ ದಿನದ ಇತಿಹಾಸ:

ಅಮೆರಿಕದ ಪ್ರಸಿದ್ಧ ಐಷಾರಾಮಿ ಡಿಪಾರ್ಟ್ಮೆಂಟ್ ಸ್ಟೋರ್ ಸರಪಳಿಯಾದ ನಾರ್ಡ್ಸ್ಟ್ರೋಮ್ 2017 ರಲ್ಲಿ ರಾಷ್ಟ್ರೀಯ ಗಡಿಯಾರ ದಿನವನ್ನು ಆಚರಿಸಿತ್ತು. ನಮ್ಮ ಜೀವನದಲ್ಲಿ ಗಡಿಯಾರಗಳ ಮಹತ್ವ ಮತ್ತು ಅವುಗಳ ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಗುರುತಿಸಿ, ಗಡಿಯಾರ ತಯಾರಿಕೆಯ ಕಲಾತ್ಮಕತೆಯನ್ನು ಆಚರಿಸಲು ದಿನವನ್ನು ರಚಿಸಿದರು. ನ್ಯಾಷನಲ್ ಡೇ ಕ್ಯಾಲೆಂಡರ್ನ ರಿಜಿಸ್ಟ್ರಾರ್ ಅಧಿಕೃತವಾಗಿ ಜೂನ್ 19ನ್ನು ರಾಷ್ಟ್ರೀಯ ಗಡಿಯಾರ ದಿನವೆಂದು ಘೋಷಿಸಿದರು, ಇದನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಈ ವಿಶೇಷ ದಿನವು ಗಡಿಯಾರಗಳ ಇತಿಹಾಸ, ವಿನ್ಯಾಸ ಮತ್ತು ಕರಕುಶಲತೆಯನ್ನು ಗೌರವಿಸಲು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ, ಅವುಗಳ ಆಕರ್ಷಣೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ:International Day of Yoga 2023: ಮಧುಮೇಹಿಗಳು ಸುರಕ್ಷಿತವಾಗಿ ಮಾಡಬಹುದಾದ ಆಸನಗಳು ಇಲ್ಲಿವೆ

ರಾಷ್ಟ್ರೀಯ ಗಡಿಯಾರ ದಿನದ ಮಹತ್ವ:

ರಾಷ್ಟ್ರೀಯ ಗಡಿಯಾರ ದಿನವು ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಇದು ನಮ್ಮ ಜೀವನದಲ್ಲಿ ಗಡಿಯಾರಗಳ ನಿರಂತರ ಆಕರ್ಷಣೆ ಮತ್ತು ಅದರ ಮಹತ್ವವನ್ನು ನೆನಪಿಸುತ್ತದೆ. ಸಮಯ ಪಾಲನಾ ಸಾಧನಗಳ ಹಿಂದಿನ ಕರಕುಶಲತೆ, ವಿನ್ಯಾಸ ಮತ್ತು ಇತಿಹಾಸವನ್ನು ಪ್ರಶಂಸಿಸಲು ಇದು ಕೆಲವು ಸಂದರ್ಭವನ್ನು ಒದಗಿಸುತ್ತದೆ. ಗಡಿಯಾರ ತಯಾರಿಕೆಯಲ್ಲಿ ಒಳಗೊಂಡಿರುವ ಕಲಾತ್ಮಕತೆ ಮತ್ತು ನಿಖರತೆಯನ್ನು ಈ ದಿನ ಜನರಿಗೆ ತೋರ್ಪಡಿಸಲಾಗುತ್ತದೆ. ಇದಲ್ಲದೆ, ಈ ದಿನವು ನಮ್ಮ ದೈನಂದಿನ ದಿನಚರಿಗಳಲ್ಲಿ ಗಡಿಯಾರಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜೊತೆಗೆ ಸಮಯ ಪ್ರಜ್ಞೆ ಮತ್ತು ಸಮಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುತ್ತದೆ. ಗಡಿಯಾರಗಳ ಸಾಂಸ್ಕೃತಿಕ, ಪ್ರಾಯೋಗಿಕ ಮತ್ತು ಸೌಂದರ್ಯದ ಮಹತ್ವವನ್ನು ಮತ್ತು ಸಮಾಜದ ಮೇಲೆ ಅವುಗಳ ಶಾಶ್ವತ ಪ್ರಭಾವವನ್ನು ಗುರುತಿಸುವ ಸಮಯ ಇದಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:39 pm, Mon, 19 June 23

ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಭೂಮಿಕ್ ಸಾಕುತ್ತಿದ್ದ ನಾಯಿ ಅನ್ನ-ನೀರು ಬಿಟ್ಟು ರೋದಿಸುತ್ತಿದೆ: ಅಶೋಕ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಪುನಾರಚನೆ ಬಗ್ಗೆ ಗೊತ್ತಿಲ್ಲ, ನನಗೆ ಸಚಿವನಾಗುವ ಆಕಾಂಕ್ಷೆ ಇಲ್ಲ: ರಾಜು ಕಾಗೆ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯಲು ಶಿವಕುಮಾರ್ ಕಾರಣ: ವಿಜಯೇಂದ್ರ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್​ಗೆ ವಿವಾಹ ವಾರ್ಷಿಕೋತ್ಸವ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ
ಕಾಲ್ತುಳಿತ ಪ್ರಕರಣಕ್ಕೆ ಕಾರಣ ವರದಿಯ ಬಂದ ನಂತರ ಗೊತ್ತಾಗುತ್ತೆ: ಜಾರಕಿಹೊಳಿ