AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಂಗಾತಿಯಿಂದ ಸ್ಪಂದನೆ ಇಲ್ಲದಿದ್ದಾಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ನಿಮ್ಮ ಸಂಗಾತಿಯಿಂದ ಅಸಹಜ ನಿರೀಕ್ಷೆಗಳು ನಿಮ್ಮ ಮಧ್ಯ ಸಂಘರ್ಷಗಳಿಗೆ ಕಾರಣವಾಗಬಹುದು ಮತ್ತು ಸಂವಹನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು" ಎಂದು ತಿಳಿದು ಬಂದಿದೆ.

Relationship Tips: ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಂಗಾತಿಯಿಂದ ಸ್ಪಂದನೆ ಇಲ್ಲದಿದ್ದಾಗ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 20, 2023 | 5:48 PM

ನೀವು ಧ್ವನಿ ಎತ್ತದೆಯೇ ನಿಮ್ಮ ಸಂಗಾತಿ ನೀವು ಅನುಭವಿಸುತ್ತಿರುವ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ ಎಂದು ನೀವು ನಿರೀಕ್ಷಿಸುತ್ತೀರಾ? ಅಥವಾ ಅವರು ನಿಮ್ಮನ್ನು ಬದಲಾಯಿಸುತ್ತಾರೆ, ಅದು ನಿಮ್ಮನ್ನು ಪ್ರೀತಿಸುವ ಸಂಕೇತವೇ? ಎಂದೆಲ್ಲ ಯೋಚಿಸುತ್ತೀರಾ? ಬಳಿಕ ನೀವು ಇವುಗಳನ್ನು ಸಾಮಾನ್ಯ ವಿಷಯಗಳು ಎಂದು ಭಾವಿಸುತ್ತಿರಿ, ಆದರೆ ತಜ್ಞರು ಅವುಗಳನ್ನು ‘ಅವಾಸ್ತವಿಕ ನಿರೀಕ್ಷೆಗಳು’ ಅಥವಾ ಅಸಹಜ ಎಂದು ಬಣ್ಣಿಸುತ್ತಾರೆ. ಇದು ದೀರ್ಘಾವಧಿಯಲ್ಲಿ ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಬದಲಾಗಿ, ನಿಮ್ಮ ಸಂಗಾತಿಯ ಮಿತಿಗಳನ್ನು ಅರ್ಥಮಾಡಿಕೊಂಡಲ್ಲಿ ತೃಪ್ತಿದಾಯಕ ಸಂಬಂಧ ನಿಮ್ಮದಾಗಬಹುದು.

ಸಂಬಂಧದಲ್ಲಿ ಅವಾಸ್ತವಿಕ ನಿರೀಕ್ಷೆಗಳು ಹೇಗಿರುತ್ತವೆ? ಇಲ್ಲಿದೆ ಉದಾಹರಣೆ

-ಅವರು ನಿಮಗಾಗಿ ಬದಲಾಗುತ್ತಾರೆ ಎಂದು ಭಾವಿಸುವುದು.

-ನಿಮಗೆ ಏನು ಬೇಕು ಎಂದು ಅವರು ತಿಳಿದಿರಬೇಕು ಎಂದು ಯೋಚಿಸುವುದು (ನೀವು ಅದನ್ನು ಹೇಳದೆ).

-ನೀವು ಪರಸ್ಪರ ಇಬ್ಬರೂ ಪ್ರತಿಯೊಂದು ವಿಷಯವನ್ನು ಪ್ರೀತಿಸಬೇಕು ಎಂದು ಯೋಚಿಸುವುದು.

– ನೀವು ತಾಳ್ಮೆಯಿಂದ ಕಾಯುತ್ತಿದ್ದ ಸಂತೋಷವನ್ನು ಅವರೇ ಒದಗಿಸುತ್ತಾರೆ ಎಂದು ಯೋಚಿಸುವುದು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಸಾಮಾನ್ಯ. ಆದಾಗ್ಯೂ, ಇತರ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಹೊದರೇ, ಅವು ಅವಾಸ್ತವಿಕವಾಗಬಹುದು ಏಕೆಂದರೆ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಗೆ ಅವುಗಳನ್ನು ಪೂರೈಸಲು ಸಾಧ್ಯವಾಗದಿರಬಹುದು.

ಇದನ್ನೂ ಓದಿ: Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ

ನಿಮ್ಮ ಸಂಗಾತಿಯಿಂದ ನೀವು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿದ್ದರೆ ಏನಾಗುತ್ತೆ?

ನಿರೀಕ್ಷೆಗಳು ಅವಾಸ್ತವಿಕವಾದಾಗ ಅದು ಅತೃಪ್ತಿ, ನಿರಾಶೆ ಮತ್ತು ಅದರ ಪರಿಣಾಮವಾಗಿ ಅಸಮಾಧಾನ, ಕೋಪ ಹಾಗೂ ಅತೃಪ್ತಿಗೆ ಕಾರಣವಾಗಬಹುದು. ಇದು ದಂಪತಿ ಮಧ್ಯೆ ಸಂಘರ್ಷಗಳಿಗೆ ಕಾರಣವಾಗಬಹುದು. ಕೆಲವೊಮ್ಮೆ ಸಂದರ್ಭಗಳು ಎಲ್ಲದಕ್ಕೂ ಕಾರಣವಾಗುತ್ತದೆ. ಹಾಗಾಗಿ ನೀವು ಅವರನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಅವಾಸ್ತವಿಕ ನಿರೀಕ್ಷೆಗಳನ್ನು ಬಾರದಿರಲು ಏನು ಮಾಡಬಹುದು?

– ನಿಮ್ಮ ನಿರೀಕ್ಷೆಗಳನ್ನು ಮೌಲ್ಯಮಾಪನ ಮಾಡಲು ಸಿದ್ಧರಾಗಿ. ಅಂದರೆ ಸರಿಯೋ ತಪ್ಪೋ ಯೋಚಿಸಿ.

– ಇತರ ವ್ಯಕ್ತಿಯ ಸಾಮರ್ಥ್ಯ ಏನು ಎಂದು ಯೋಚಿಸಿ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡ ಬೇಡಿ.

– ನಿಮ್ಮ ಸಂತೋಷ ಕ್ಕಾಗಿ ಇನ್ನೊಬ್ಬರಿಗೆ ಹೊರೆಯಾಗಲು ಬಿಡಬೇಡಿ.

– ಅವರು ನಿಮಗಾಗಿ ಏನು ಮಾಡಬಹುದು ಎಂಬುದನ್ನುಅರ್ಥಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:48 pm, Thu, 20 April 23

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ: ನಿರ್ದೇಶಕ ನಾಗಶೇಖರ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ