AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾನ್ಯ ನಡಿಗೆ ಇಂದೇ ನಿಲ್ಲಿಸಿ, ಜಪಾನೀಸ್ ನಡಿಗೆ ಪ್ರಾರಂಭಿಸಿ, ಇಲ್ಲಿಂದಲೇ ನಿಮ್ಮ ಆರೋಗ್ಯ ವೃದ್ಧಿ

ನಡಿಗೆಯಲ್ಲಿ ಹಲವು ವಿಧಗಳು ಇದೆ. ಆದರೆ ಅದರಿಂದ ಬೇರೆ ಬೇರೆ ರೀತಿಯ ಆರೋಗ್ಯ ಪ್ರಯೋಜನಗಳು ಇದೆ. ಇದರ ಜತೆಗೆ ಒಂದು ವಿಶೇಷ ನಡಿಗೆ ಇದೆ. ಅದು ಜಪಾನೀಸ್ ನಡಿಗೆ, ಈ ನಡಿಗೆಯಿಂದ ಬಗ್ಗೆ ಡಾ. ಸೇಥಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಜಪಾನೀಸ್ ನಡಿಗೆ ಎಂಬುದನ್ನು ಜಪಾನಿನ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹೊಸ ರೀತಿಯ ನಡಿಗೆ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಧ್ಯಂತರ ನಡಿಗೆ ಎಂದು ಹೆಸರಿಸಲಾಗಿದೆ.

ಸಾಮಾನ್ಯ ನಡಿಗೆ ಇಂದೇ ನಿಲ್ಲಿಸಿ, ಜಪಾನೀಸ್ ನಡಿಗೆ ಪ್ರಾರಂಭಿಸಿ, ಇಲ್ಲಿಂದಲೇ ನಿಮ್ಮ ಆರೋಗ್ಯ ವೃದ್ಧಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:May 30, 2025 | 3:51 PM

Share

ಈಗಿನ ಕಾಲದಲ್ಲಿ ವೃದ್ದರಿಗೆ ಮಾತ್ರವಲ್ಲ ಯುವ ಸಮೂಹಕ್ಕೂ ಕೂಡ ಈ ನಡಿಗೆ ಎಂಬುದು ಅನಿವಾರ್ಯವಾಗಿದೆ. ಏಕೆಂದರೆ ದಿನದಿಂದ ದಿನಕ್ಕೆ ವಾತಾವರಣದ ಬದಲಾವಣೆ, ಜೀವನಶೈಲಿ, ಹಾಗೂ ಒತ್ತಡದ ಕೆಲಸ ಇವುಗಳನ್ನು ದೇಹದಲ್ಲಿರುವ ಸಾಮಾರ್ಥ್ಯವನ್ನು ಕಡಿಮೆ ಮಾಡುತ್ತಿದೆ, ಇದನ್ನು ತಪ್ಪಿಸಲು ನಾವು ನಡಿಗೆ ವ್ಯಾಯಾಮದಂತಹ ಚಟುವಟಿಕೆಯನ್ನು ಮಾಡುತ್ತದೆ. ಆದರೆ ನಡಿಗೆಗಳು ಹೇಗಿರಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರಬಾರದು. ಈ ನಡೆಯುದಾದರೆ ಜಪನ್ (Japanese fitness )​​​ ಜನರು ನಡೆಯುವಂತೆ ನಡೆಯಿರಿ. ಹೌದು ಈ ಬಗ್ಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೇಥಿ ನಡಿಗೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ಇನ್ಸ್ಟಾದಲ್ಲಿ ಹೇಳಿದ್ದಾರೆ. ಸಾಮಾನ್ಯ ನಡಿಗೆಯೂ ಸದೃಢವಾಗಿರಿಸುತ್ತದೆ ಮತ್ತು ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದರ ಜತೆಗೆ ಜೀರ್ಣಕ್ರಿಯೆ, ರಕ್ತದ ಹರಿವನ್ನು ಸುಧಾರಿಸುತ್ತದೆ. ಆದರೆ ಜಪಾನೀಸ್ ವಾಕಿಂಗ್​​ನಿಂದ ಅನೇಕ ಪ್ರಯೋಜನಗಳು ಇದೆ. ಅದು ಹೇಗೆ ಎಂಬ ಬಗ್ಗೆ ಡಾ. ಸೇಥಿ ವಿವರಿಸಿದ್ದಾರೆ.

ಜಪಾನೀಸ್ ವಾಕಿಂಗ್ ತಂತ್ರ:

ಜಪಾನಿನ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಹೊಸ ರೀತಿಯ ನಡಿಗೆ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಧ್ಯಂತರ ನಡಿಗೆ ಎಂದು ಹೆಸರಿಸಲಾಗಿದೆ. ಈ ನಡಿಗೆಯ ಪ್ರಕಾರ ಮೊದಲ ಮೂರು ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು. ನಂತರದ ಮೂರು ನಿಮಿಷಗಳ ಕಾಲ ತುಂಬಾ ವೇಗವಾಗಿ ನಡೆಯಬೇಕು. ಪ್ರತಿದಿನ 30 ನಿಮಿಷಗಳ ಕಾಲ ಹೀಗೆ ಮಾಡಬೇಕು. ನೀವು ಪ್ರತಿದಿನ ಅರ್ಧ ಗಂಟೆ ಮಧ್ಯಂತರ ನಡಿಗೆ ಮಾಡಿದರೆ ಆರೋಗ್ಯದಲ್ಲಿ ಒಂದು ಮ್ಯಾಜಿಕ್​​ ಆಗುವುದು ಖಂಡಿತ. ಈ ರೀತಿಯ ನಡಿಗೆ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸದೃಢವಾಗಿರಿಸುತ್ತದೆ ಎಂದು ಡಾ. ಸೇಥಿ ಹೇಳುತ್ತಾರೆ.

ಇದನ್ನೂ ಓದಿ
Image
ಗರ್ಭಕಂಠ, ಥೈರಾಯ್ಡ್ , ಮೈಗ್ರೇನ್ ಸಮಸ್ಯೆಗೆ 2 ನಿಮಿಷ, 4 ವ್ಯಾಯಮಾ
Image
ಟರ್ಕಿಶ್‌ ಆಭರಣಗಳಿಗೂ ತಟ್ಟಿದ ಬಹಿಷ್ಕಾರ ಬಿಸಿ
Image
ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ
Image
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು

ಇಲ್ಲಿದೆ ವಿಡಿಯೋ ನೋಡಿ:

ಮಧ್ಯಂತರ ನಡಿಗೆ:

ಮಧ್ಯಂತರ ನಡಿಗೆ ಮಾಡಲು, ಮೊದಲನೆಯದಾಗಿ ನೀವು 3 ರಿಂದ 5 ನಿಮಿಷಗಳ ಕಾಲ ಆರಾಮವಾಗಿ ನಡೆಯಬೇಕು. ಸ್ವಲ್ಪ ಹೊತ್ತಿನ ನಂತರ ಚುರುಕಾದ ನಡಿಗೆಯನ್ನು ಮಾಡಬೇಕು, ಅಂದರೆ ತುಂಬಾ ವೇಗವಾಗಿ ನಡೆಯಬೇಕು. ಮತ್ತೆ 3 ರಿಂದ 5 ನಿಮಿಷಗಳ ಕಾಲ ನಿಧಾನವಾಗಿ ನಡೆಯಬೇಕು. ಇದನ್ನು ಎರಡರಿಂದ ನಾಲ್ಕು ಬಾರಿ ಮಾಡಬೇಕು. ಕೊನೆಗೆ 3-5 ನಿಮಿಷಗಳ ಕಾಲ ನಿಧಾನವಾಗಿ ನಡೆಯುವ ಮೂಲಕ ವಿರಾಮ ತೆಗೆದುಕೊಳ್ಳಬೇಕು. ನೀವು ಆರೋಗ್ಯವಾಗಿರಲು ಮತ್ತು ನಿಮ್ಮ ಮನಸ್ಸು ಸಹ ಉತ್ತಮವಾಗಿರಲು ಇದನ್ನು ಪ್ರತಿದಿನ ಮಾಡಬೇಕು.

ಈ ನಡಿಗೆ ನಡಿಯುವಾಗ ಈ ವಸ್ತುಗಳು ನಿಮ್ಮಲ್ಲಿ ಇರಬೇಕು:

ಪ್ರಮುಖವಾಗಿ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನೀರು ಕುಡಿದರೆ, ನಿಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದಿಲ್ಲ. ಇದಲ್ಲದೆ, ನೇರ ಮತ್ತು ಸಮತಟ್ಟಾದ ರಸ್ತೆಯ ಜತೆಗೆ ಏರಿಳಿತ ಪ್ರದೇಶದಲ್ಲಿ ನಡೆಯುವುದು ಇನ್ನು ಉತ್ತಮ. ಜತೆಗೆ ಆಹಾರಕ್ರಮದ ಬಗ್ಗೆಯೂ ಗಮನ ಇರಬೇಕು. ಇದು ಬೊಜ್ಜು ಕಡಿಮೆ ಮಾಡಲು ಸಹ ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಳ್ಳುತ್ತಾ? ನಟಿ ಮಲೈಕಾ ಅರೋರಾ ಹೇಳುವ ಈ ವಿಧಾನ ಮಾಡಿ

ಮಧ್ಯಂತರ ನಡಿಗೆಯ ಪ್ರಯೋಜನ

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ತೂಕ ಇಳಿಕೆ

ಸ್ನಾಯುಗಳನ್ನು ಬಲಪಡಿಸುವುದು

ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದು

ತ್ರಾಣ ಮತ್ತು ಶಕ್ತಿಯಲ್ಲಿ ಹೆಚ್ಚಳ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Fri, 30 May 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್