AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ

ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.

Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ
ಪಿತ್ತಜನಕಾಂಗ (ಪ್ರಾತಿನಿಧಿಕ ಚಿತ್ರ)
TV9 Web
| Updated By: Pavitra Bhat Jigalemane|

Updated on: Feb 27, 2022 | 4:29 PM

Share

ದೇಹದ ಎಲ್ಲಾ ಅಂಗಗಳೂ ಅಚ್ಚುಕಟ್ಟಾಗಿ ಕಾರ್ಯನಿರ್ಹಿಸಿಬಿಟ್ಟರೆ ಆರೊಗ್ಯವಾಗಿರಬಹುದು. ಹೀಗಾಗಿ ಆರೋಗ್ಯ(Health) ವನ್ನು ಕಾಪಾಡಿಕೊಳ್ಳಲು ಜೀವನಶೈಲಿ ಮತ್ತು ಆಹಾರಾಭ್ಯಾಸ ಮುಖ್ಯವಾಗಿರುತ್ತದೆ.  ದೇಹದಲ್ಲಿ ಎಲ್ಲಾ ಅಂಗಗಳೂ ಮುಖ್ಯವೇ. ಅದರಲ್ಲಿ ಯಕೃತ್ ​ ಅಥವಾ ಲಿವರ್ (Liver)​ ಕೂಡ ಒಂದು. ದೇಹದಲ್ಲಿರುವ ಕೊಬ್ಬನ್ನು ಶೇಖರಿಸಿ ಚಯಾಪಯಗೊಳಿಸುವ ಪ್ರಮುಖ ಅಂಗ. ಕೊಬ್ಬು ಸುರಕ್ಷಿತ ಮಟ್ಟವನ್ನು ಮಿರಿದಾಗ ಯಕೃತ್ತಿನ ಕಾರ್ಯ ಚಟುವಟಿಕೆ ಹದಗೆಡುತ್ತದೆ. ಅದನ್ನೇ ಪಿತ್ತಜನಕಾಂಗದ ಕಾಯಿಲೆ ಎನ್ನುತ್ತಾರೆ. ಆರಂಭದಲ್ಲಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಕ್ರಮೇಣ ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು.

ಯಕೃತ್​ ಪ್ರತಿದಿನ 250 ಗ್ಯಾಲನ್​ ರಕ್ತವನ್ನು ಶೋಧಿಸುತ್ತದೆ. ಯಕೃತ್​ ಒಮ್ಮೆ ಹಾನಿಗೊಳಗಾದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗಬಹದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಯಕೃತ್ತಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಅತಿಯಾದ ತೂಕ ನಷ್ಟ: ಕೊಲೊರೆಕ್ಟಲ್​ ಕ್ಯಾನ್ಸರ್​ನಂತಹ ಕಾಯಿಲೆಗೆ ಯಕೃತ್​​ ತುತ್ತಾದಾಗ ದೇಹದಲ್ಲಿ ಅತಿಯಾದ ತೂಕ ನಷ್ಟವಾಗುತ್ತದೆ. ಏಕೆಂದರೆ ಜೀರ್ಣಕ್ರಿಯೆಯಲ್ಲಿ ಯಕೃತ್​ ಪ್ರಮುಖ ಪಾತ್ರವಹಿಸುತ್ತದೆ. ಇದು ಹಾನಿಯಾದಾಗ ಹಸಿವೆಯಾಗದೆ ಇರಬಹುದು, ಇದರಿಂದ ದೇಹದ ತೂಕ ನಷ್ಟವಾಗುತ್ತದೆ.

ಚರ್ಮ ಮತ್ತು ಕಣ್ಣು ಹಳದಿ: ಯಕೃತ್ತಿನ ಕಾಯಿಲೆ ಅಥವಾ ಯಕೃತ್​ ಹಾನಿಗೊಳಗಾದಾಗ ದೇಹದ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಪಿತ್ತಜನಕಾಂಗವು ಸರಿಯಾದ ಕ್ರಮದಲ್ಲಿ ಪಿತ್ತರಸವನ್ನು ತೊಡೆದುಹಾಕಲು ವಿಫಲವಾದಾಗ ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಕಿಬ್ಬೊಟ್ಟೆಯ ನೋವು: ಯಕೃತ್​ ಹಾನಿಗೊಳಗಾದ ಸಂದರ್ಭದಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಪಕ್ಕೆಲುಬು ಮತ್ತು ಬಲಭಾಗದ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ವೇಳೆಯಲ್ಲಿಯೂ ಕೆಲವೊಮ್ಮೆ ಸಮಸ್ಯೆಗಳು ಕಾಣಸಿಕೊಳ್:ಳಬಹುದು.

ದೀರ್ಘಕಾಲದ ಆಯಾಸ: ವ್ಯಾಯಾಮ ಮಾಡಿದ ನಂತರ ಆಯಾಸ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಯಕರತ್ತಿನ ಸಮಸ್ಯೆ ಇದ್ದಾಗ ದೀರ್ಘಕಾಲದ ಆಯಾಸ ಕಾಣಿಸಿಕೊಳ್ಳುತ್ತದೆ. ತೀವ್ರವಾದ ನೋವಿನಿಂದ ಸದಾ ಕಾಲ ಆಯಾಸ ಎನಿಸುತ್ತದೆ.  ದಿನವಿಡೀ ಆಯಾಸ ಎನಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.

ಇದನ್ನೂ  ಓದಿ:

ಆಯುರ್ವೇದದಲ್ಲಿದೆ ಥೈರಾಯಿಡ್​ಗೆ ಸರಳ ಪರಿಹಾರ: ಇಲ್ಲಿದೆ ಮಾಹಿತಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ