Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ

ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.

Liver damage: ಈ ಲಕ್ಷಣಗಳು ಯಕೃತ್ತಿನ ಹಾನಿಯ ಮುನ್ಸೂಚನೆ ನೀಡುತ್ತದೆ
ಪಿತ್ತಜನಕಾಂಗ (ಪ್ರಾತಿನಿಧಿಕ ಚಿತ್ರ)
Follow us
| Updated By: Pavitra Bhat Jigalemane

Updated on: Feb 27, 2022 | 4:29 PM

ದೇಹದ ಎಲ್ಲಾ ಅಂಗಗಳೂ ಅಚ್ಚುಕಟ್ಟಾಗಿ ಕಾರ್ಯನಿರ್ಹಿಸಿಬಿಟ್ಟರೆ ಆರೊಗ್ಯವಾಗಿರಬಹುದು. ಹೀಗಾಗಿ ಆರೋಗ್ಯ(Health) ವನ್ನು ಕಾಪಾಡಿಕೊಳ್ಳಲು ಜೀವನಶೈಲಿ ಮತ್ತು ಆಹಾರಾಭ್ಯಾಸ ಮುಖ್ಯವಾಗಿರುತ್ತದೆ.  ದೇಹದಲ್ಲಿ ಎಲ್ಲಾ ಅಂಗಗಳೂ ಮುಖ್ಯವೇ. ಅದರಲ್ಲಿ ಯಕೃತ್ ​ ಅಥವಾ ಲಿವರ್ (Liver)​ ಕೂಡ ಒಂದು. ದೇಹದಲ್ಲಿರುವ ಕೊಬ್ಬನ್ನು ಶೇಖರಿಸಿ ಚಯಾಪಯಗೊಳಿಸುವ ಪ್ರಮುಖ ಅಂಗ. ಕೊಬ್ಬು ಸುರಕ್ಷಿತ ಮಟ್ಟವನ್ನು ಮಿರಿದಾಗ ಯಕೃತ್ತಿನ ಕಾರ್ಯ ಚಟುವಟಿಕೆ ಹದಗೆಡುತ್ತದೆ. ಅದನ್ನೇ ಪಿತ್ತಜನಕಾಂಗದ ಕಾಯಿಲೆ ಎನ್ನುತ್ತಾರೆ. ಆರಂಭದಲ್ಲಿ ಈ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ದೇಹದಲ್ಲಿನ ಕೆಲವು ಬದಲಾವಣೆಗಳಿಂದ ಯಕೃತ್ತಿನ ಸಮಸ್ಯೆಯನ್ನು ಪತ್ತೆಹಚ್ಚಬಹುದಾಗಿದೆ.  ಈ ರೀತಿ ಯಕೃತ್ತಿನ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಒಳಿತಲ್ಲ. ಏಕೆಂದರೆ ಇದು ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಅದು ಕ್ರಮೇಣ ಯಕೃತ್ತಿನ ವೈಫಲ್ಯಕ್ಕೂ ಕಾರಣವಾಗಬಹುದು.

ಯಕೃತ್​ ಪ್ರತಿದಿನ 250 ಗ್ಯಾಲನ್​ ರಕ್ತವನ್ನು ಶೋಧಿಸುತ್ತದೆ. ಯಕೃತ್​ ಒಮ್ಮೆ ಹಾನಿಗೊಳಗಾದರೆ ದೇಹದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟಾಗಬಹದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಕಂಡುಬಂದರೆ ಯಕೃತ್ತಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಅತಿಯಾದ ತೂಕ ನಷ್ಟ: ಕೊಲೊರೆಕ್ಟಲ್​ ಕ್ಯಾನ್ಸರ್​ನಂತಹ ಕಾಯಿಲೆಗೆ ಯಕೃತ್​​ ತುತ್ತಾದಾಗ ದೇಹದಲ್ಲಿ ಅತಿಯಾದ ತೂಕ ನಷ್ಟವಾಗುತ್ತದೆ. ಏಕೆಂದರೆ ಜೀರ್ಣಕ್ರಿಯೆಯಲ್ಲಿ ಯಕೃತ್​ ಪ್ರಮುಖ ಪಾತ್ರವಹಿಸುತ್ತದೆ. ಇದು ಹಾನಿಯಾದಾಗ ಹಸಿವೆಯಾಗದೆ ಇರಬಹುದು, ಇದರಿಂದ ದೇಹದ ತೂಕ ನಷ್ಟವಾಗುತ್ತದೆ.

ಚರ್ಮ ಮತ್ತು ಕಣ್ಣು ಹಳದಿ: ಯಕೃತ್ತಿನ ಕಾಯಿಲೆ ಅಥವಾ ಯಕೃತ್​ ಹಾನಿಗೊಳಗಾದಾಗ ದೇಹದ ಚರ್ಮ ಮತ್ತು ಕಣ್ಣು ಹಳದಿ ಬಣ್ಣಕ್ಕೆ ತಿರುಗುತ್ತದೆ. ಪಿತ್ತಜನಕಾಂಗವು ಸರಿಯಾದ ಕ್ರಮದಲ್ಲಿ ಪಿತ್ತರಸವನ್ನು ತೊಡೆದುಹಾಕಲು ವಿಫಲವಾದಾಗ ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಕಿಬ್ಬೊಟ್ಟೆಯ ನೋವು: ಯಕೃತ್​ ಹಾನಿಗೊಳಗಾದ ಸಂದರ್ಭದಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸಿಕೊಳ್ಳುತ್ತದೆ. ಪಕ್ಕೆಲುಬು ಮತ್ತು ಬಲಭಾಗದ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆ ವೇಳೆಯಲ್ಲಿಯೂ ಕೆಲವೊಮ್ಮೆ ಸಮಸ್ಯೆಗಳು ಕಾಣಸಿಕೊಳ್:ಳಬಹುದು.

ದೀರ್ಘಕಾಲದ ಆಯಾಸ: ವ್ಯಾಯಾಮ ಮಾಡಿದ ನಂತರ ಆಯಾಸ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಯಕರತ್ತಿನ ಸಮಸ್ಯೆ ಇದ್ದಾಗ ದೀರ್ಘಕಾಲದ ಆಯಾಸ ಕಾಣಿಸಿಕೊಳ್ಳುತ್ತದೆ. ತೀವ್ರವಾದ ನೋವಿನಿಂದ ಸದಾ ಕಾಲ ಆಯಾಸ ಎನಿಸುತ್ತದೆ.  ದಿನವಿಡೀ ಆಯಾಸ ಎನಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು.

ಇದನ್ನೂ  ಓದಿ:

ಆಯುರ್ವೇದದಲ್ಲಿದೆ ಥೈರಾಯಿಡ್​ಗೆ ಸರಳ ಪರಿಹಾರ: ಇಲ್ಲಿದೆ ಮಾಹಿತಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ