AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Hippo Day 2025: ಫೆಬ್ರವರಿ 15 ರಂದೇ ವಿಶ್ವ ಹಿಪ್ಪೋ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಪರಿಸರ ಸಮತೋಲನಕ್ಕೆ ಪ್ರತಿಯೊಂದು ಜೀವಿಗಳ ಕೊಡುಗೆ ಅಪಾರವಾದದ್ದು. ಹೌದು, ಅತ್ಯಂತ ವೈವಿಧ್ಯಮಯ ಆವಾಸಸ್ಥಾನದ ಭಾಗವಾಗಿರುವ ಹಿಪೋಪೊಟಮಸ್ ಅಥವಾ ನೀರ್ಗುದುರೆ ಅಳಿವಿನಂಚಿನಲ್ಲಿದ್ದು, ಹಿಪ್ಪೋಗಳ ಸಂರಕ್ಷಣೆ, ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಹಿಪ್ಪೋ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Hippo Day 2025: ಫೆಬ್ರವರಿ 15 ರಂದೇ ವಿಶ್ವ ಹಿಪ್ಪೋ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
Hippo Day
ಸಾಯಿನಂದಾ
| Edited By: |

Updated on: Feb 15, 2025 | 10:02 AM

Share

ಪರಿಸರ ಸಮತೋಲನಕ್ಕೆ ಈ ಸೃಷ್ಟಿಯಲ್ಲಿರುವ ಜೀವಿಗಳ ಪಾತ್ರ ಕೊಡುಗೆ ಬಹುದೊಡ್ಡದು. ಪ್ರಾಣಿ ಸಂಕುಲದಲ್ಲಿರುವ ಒಂದೇ ಒಂದು ಜೀವಿಯೂ ಅಳಿವಿನಂಚಿಗೆ ತಲುಪಿದರೂ ಇಡೀ ಪರಿಸರ ವ್ಯವಸ್ಥೆಯೇ ಸಮತೋಲನ ಕಳೆದುಕೊಳ್ಳುತ್ತವೆ. ಹೌದು, ಸಾಮಾನ್ಯವಾಗಿ ಈ ಹಿಪೋಪೊಟಮಸ್ ಅಥವಾ ನೀರ್ಗುದುರೆಯನ್ನು ಮೃಗಾಯಲದಲ್ಲಿ ನೋಡಿರುತ್ತೇವೆ. ಪೀಯಾಯಿ ಆಕಾದರದ ತಲೆ, ಅಗಾಧ ಗಾತ್ರದ ಬಾಯಿ ಮತ್ತು ಹಲ್ಲುಗಳು, ಕೂದಲುಗಳಿಲ್ಲದ ಶರೀರ, ಮೋಟು ಮೋಟಾದ ಕಾಲುಗಳು, 1,500 ಕೆಜಿ ತೂಕ ಹೊಂದಿರುವ ದೈತ್ಯ ಗಾತ್ರದ ಹಿಪ್ಪೋಗಳು ನೀರಿನಲ್ಲೇ ಹೆಚ್ಚು ಸಮಯ ಕಳೆಯುತ್ತವೆ. ಆದರೆ, ಇದು ಭೂಮಿ ಮತ್ತು ನೀರಿನಲ್ಲಿ ವಾಸಿಸುವುದರಿಂದ ಇದನ್ನು ಅರೆ-ಜಲವಾಸಿ ಎನ್ನಲಾಗುತ್ತದೆ. ನದಿಗಳು, ಸರೋವರಗಳು ಮತ್ತು ಮ್ಯಾಂಗ್ರೂವ್ ಚೌಗು ಪ್ರದೇಶಗಳಲ್ಲಿ ವಾಸಿಸುವ ಈ ಜೀವಿಗಳ ಸಂತತಿಯೂ ನಶಿಸಿಹೋಗುತ್ತಿವೆ. ಪ್ರಕೃತಿಯ ಅಪರೂಪದ ಪ್ರಾಣಿಯಾಗಿರುವ ಇದನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಇಂದು ಇವುಗಳು ಅಳಿವಿನಂಚಿಗೆ ಸರಿಯುತ್ತಿರುವ ಕಾರಣ ಈ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 15 ರಂದು ವಿಶ್ವ ಹಿಪ್ಪೋ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹಿಪ್ಪೋ ದಿನದ ಇತಿಹಾಸ ಹಾಗೂ ಮಹತ್ವ:

ಆಫ್ರಿಕಾದಲ್ಲಿ ಹಿಪ್ಪೋಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2006 ರಲ್ಲಿ, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ಹಿಪ್ಪೋಗಳನ್ನು ದುರ್ಬಲ ಪ್ರಭೇದಗಳೆಂದು ಪಟ್ಟಿ ಮಾಡಿತು. ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆಯು 20% ರಷ್ಟು ಕಡಿಮೆಯಾಗಿದೆ ಎನ್ನಲಾಗಿತ್ತು. ಬರಗಾಲವು ಆವಾಸಸ್ಥಾನ ನಷ್ಟಕ್ಕೆ ಕಾರಣವಾಗಿದೆ.

ಮಾಂಸ ಹಾಗೂ ದಂತಗಳಿಗಾಗಿ ಹಿಪ್ಪೋಗಳನ್ನು ಬೇಟೆಯಾಡಲಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲಾಯಿತು. ಈ ದಿನದಂದು, ಹಿಪ್ಪೋಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು ಮತ್ತು ಹವಾಮಾನ ಸಂರಕ್ಷಣಾ ಗುಂಪುಗಳು ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್