AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lungs Health: ಶ್ವಾಸಕೋಶಕ್ಕೆ ಜೀವ ತುಂಬಿ, ಉಸಿರಾಟದ ಶಕ್ತಿ ಹೆಚ್ಚಿಸುವ ಪ್ರಾಣಾಯಾಮ ಮತ್ತು ಯೋಗಾಸನ

Yoga and Pranayama that improves lungs health: ಭಾರತದ ದೊಡ್ಡದೊಡ್ಡ ನಗರ ಹಾಗೂ ಸುತ್ತಮುತ್ತ ಮಾಲಿನ್ಯ ಮಟ್ಟ ಬಹಳ ಅಧಿಕ ಇದೆ. ಅದರಲ್ಲೂ ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ದಟ್ಟ ಮಾಲಿನ್ಯ ಇದೆ. ಇದರಿಂದ ಶ್ವಾಸಕೋಶದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ನಡುವೆ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಾಬಾ ರಾಮದೇವ್ ಕೆಲವು ಯೋಗ ಭಂಗಿಗಳನ್ನು ಸೂಚಿಸಿದ್ದಾರೆ. ಅದರ ವಿವರ ಇಲ್ಲಿದೆ.

Lungs Health: ಶ್ವಾಸಕೋಶಕ್ಕೆ ಜೀವ ತುಂಬಿ, ಉಸಿರಾಟದ ಶಕ್ತಿ ಹೆಚ್ಚಿಸುವ ಪ್ರಾಣಾಯಾಮ ಮತ್ತು ಯೋಗಾಸನ
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 07, 2025 | 1:53 PM

Share

ಪ್ರಸ್ತುತ ಅನೇಕ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮಾಲಿನ್ಯವು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ, ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯೋಗವು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ನೈಸರ್ಗಿಕ ಚಿಕಿತ್ಸೆಯಾಗಿದೆ. ಹೆಚ್ಚುತ್ತಿರುವ ಈ ಮಾಲಿನ್ಯದಲ್ಲಿ ಯಾವ ಯೋಗ ಮತ್ತು ಪ್ರಾಣಾಯಾಮ ವ್ಯಾಯಾಮಗಳು ಪ್ರಯೋಜನಕಾರಿ ಎಂದು ಬಾಬಾ ರಾಮದೇವ್ (Baba Ramdev) ವಿವರಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಯೋಗವು ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸುತ್ತದೆ, ಉಸಿರಾಟವನ್ನು ಸುಲಭಗೊಳಿಸುತ್ತದೆ. ಯೋಗವು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇದು ಶ್ವಾಸಕೋಶಗಳು ಲೋಳೆಯನ್ನು ತೆರವುಗೊಳಿಸಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಯಾವ ಯೋಗ ಭಂಗಿಗಳು ಪರಿಣಾಮಕಾರಿ ಎಂದು ತಿಳಿಯೋಣ.

ಇದನ್ನೂ ಓದಿ: ದಂತ ಕಾಂತಿಯೋ, ಅಲೋವೆರಾ ಜೆಲ್ಲೋ, ಹಸುವಿನ ತುಪ್ಪವೋ… ಅತಿಹೆಚ್ಚು ಮಾರಾಟವಾಗುವ ಪತಂಜಲಿ ಉತ್ಪನ್ನಗಳಿವು

ಶ್ವಾಸಕೋಶದ ಆರೋಗ್ಯಕ್ಕೆ ಈ ಯೋಗ ಭಂಗಿಗಳು ಪರಿಣಾಮಕಾರಿ

ಕಪಾಲಭಾತಿ

ಕಪಾಲಭಾತಿ ಪ್ರಾಣಾಯಾಮವು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿ ಎಂದು ಬಾಬಾ ರಾಮದೇವ್ ವಿವರಿಸುತ್ತಾರೆ. ಇದು ಕಫವನ್ನು ಕಡಿಮೆ ಮಾಡುತ್ತದೆ ಮತ್ತು ಶ್ವಾಸಕೋಶದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಶ್ವಾಸಕೋಶದಿಂದ ವಿಷವನ್ನು (ಟಾಕ್ಸಿಕ್) ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಶ್ವಾಸಕೋಶವನ್ನು ಬಲಪಡಿಸುತ್ತದೆ.

ಭುಜಂಗಾಸನ

ಈ ಯೋಗಾಸನವು ಬೆನ್ನುಮೂಳೆ ಮತ್ತು ಎದೆಯನ್ನು ಹಿಗ್ಗಿಸುವ ಮೂಲಕ ಶ್ವಾಸಕೋಶದ ಜಾಗವನ್ನು ಹೆಚ್ಚಿಸುತ್ತದೆ. ಇದು ಉಸಿರಾಟವನ್ನು ದೀರ್ಘಗೊಳಿಸುತ್ತದೆ, ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ. ಈ ಆಸನವು ಶ್ವಾಸಕೋಶ ಸಂಕುಚಿತಗೊಳ್ಳುವುದನ್ನು ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ವಕ್ರಾಸನ

ಈ ಆಸನವು ದೇಹದ ಮಧ್ಯಭಾಗವನ್ನು ಬಗ್ಗಿಸುವ ಮೂಲಕ ಶ್ವಾಸಕೋಶ ಮತ್ತು ಪಕ್ಕೆಲುಬುಗಳ ಸುತ್ತಲಿನ ಸ್ನಾಯುಗಳನ್ನು ತೆರೆಯುತ್ತದೆ. ಇದು ಆಳವಾಗಿ ಉಸಿರಾಡಲು ಸುಲಭಗೊಳಿಸುತ್ತದೆ. ಇದು ಎದೆಯ ಬಿಗಿತವನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ಶ್ವಾಸಕೋಶವನ್ನು ನಮ್ಯವಾಗಿರಿಸುತ್ತದೆ.

ಮಕರಾಸನ

ಈ ಆಸನವನ್ನು ವಿಶ್ರಾಂತಿ ಸ್ಥಿತಿಯಲ್ಲಿ ಮಾಡಲಾಗುತ್ತದೆ ಮತ್ತು ಇದು ಶ್ವಾಸಕೋಶಗಳಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಉಸಿರಾಟವು ನಿಧಾನ ಮತ್ತು ಆಳವಾಗುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ರೆಸ್ಪಿರೇಟರಿ ಸಿಸ್ಟಂ ಅನ್ನು ಸುಧಾರಿಸುತ್ತದೆ ಮತ್ತು ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡುತ್ತದೆ.

ಇದನ್ನೂ ಓದಿ: ಆರ್ಗ್ಯಾನಿಂಗ್ ಫಾರ್ಮ್​ನಿಂದ ಸೋಲಾರ್ ಎನರ್ಜಿವರೆಗೆ ಪರಿಸರ ಉಳಿಸುವ ಜವಾಬ್ದಾರಿ ಹೊತ್ತ ಪತಂಜಲಿ

ಇವೂ ಕೂಡ ಅಗತ್ಯ

  • ಧೂಮಪಾನ ಮತ್ತು ಮಾಲಿನ್ಯದಿಂದ ದೂರವಿರಿ.
  • ಮನೆ ಮತ್ತು ಕೋಣೆಯಲ್ಲಿ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ.
  • ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಆಳವಾದ ಉಸಿರಾಟ ಅಥವಾ ಪ್ರಾಣಾಯಾಮ ಮಾಡಿ.
  • ಬ್ರಿಸ್ ವಾಕ್ ಇತ್ಯಾದಿ ಲಘು ಕಾರ್ಡಿಯೋ ಚಟುವಟಕೆಗಳು ಶ್ವಾಸಕೋಶವನ್ನು ಬಲಪಡಿಸುತ್ತವೆ.
  • ಕಫವು ತೆಳುವಾಗುವಂತೆ ಹಾಗೂ ಶ್ವಾಸಕೋಶದ ಮೇಲೆ ಒತ್ತಡ ಬೀಳದಂತೆ ಸಾಕಷ್ಟು ನೀರು ಕುಡಿಯಿರಿ

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ