AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yellow Fungus: ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಯೆಲ್ಲೋ ಫಂಗಸ್ ಪತ್ತೆ; ರೋಗ ಲಕ್ಷಣ ಹಾಗೂ ಇತರ ಮಾಹಿತಿ ಇಲ್ಲಿದೆ

ದೇಹದಲ್ಲಿ ಆಂತರಿಕವಾಗಿ ಆರಂಭವಾಗುವ ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ, ಯೆಲ್ಲೋ ಫಂಗಸ್​ನ್ನು ಕಡೆಗಣಿಸುವುದು ಒಳ್ಳೆಯದಲ್ಲ.

Yellow Fungus: ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಯೆಲ್ಲೋ ಫಂಗಸ್ ಪತ್ತೆ; ರೋಗ ಲಕ್ಷಣ ಹಾಗೂ ಇತರ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 21, 2021 | 10:00 AM

Share

ದೆಹಲಿ: ಕೊರೊನಾ ಸೋಂಕು ಎರಡನೇ ಅಲೆಯ ನಡುವೆ ಹಲವು ವೈದ್ಯಕೀಯ ಸವಾಲುಗಳು ಎದುರಾಗಿದೆ. ಕೊವಿಡ್-19 ಸೋಂಕಿನಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್​ನಂತಹ ಖಾಯಿಲೆಗಳು ದೇಹಸೇರುತ್ತಿದೆ. ದೇಹದ ಸಕ್ಕರೆ ಪ್ರಮಾಣವೂ ಅಧಿಕವಾಗಿ ಕೆಲವಷ್ಟು ಮಂದಿ ಸಕ್ಕರೆ ಖಾಯಿಲೆಗೆ ತುತ್ತಾಗಿದ್ದಾರೆ. ಈ ಎಲ್ಲದರ ನಡುವೆ ಈಗ ಮತ್ತೊಂದು ಸಮಸ್ಯೆ ಕಂಡುಬಂದಿದೆ. ದೇಶದಲ್ಲಿ ಮೊತ್ತ ಮೊದಲ ಯೆಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ. ಘಾಜಿಯಾಬಾದ್​ನಲ್ಲಿ ಸೋಮವಾರ (ಮೇ 24) ಮೊದಲ ಯೆಲ್ಲೋ ಫಂಗಸ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಯೆಲ್ಲೋ ಫಂಗಸ್ ಬ್ಲ್ಯಾಕ್ ಮತ್ತು ವೈಟ್ ಫಂಗಸ್​ಗಳಿಗಿಂತ ಹೆಚ್ಚು ಅಪಾಯಕಾರಿ ಎಂಬ ಮಾಹಿತಿ ಲಭ್ಯವಾಗಿದೆ. ಆಲಸ್ಯ, ತೂಕ ಇಳಿಕೆಯಾಗುವುದು, ಹಸಿವು ಕಡಿಮೆ ಇರುವುದು ಅಥವಾ ಹಸಿವೆಯೇ ಆಗದಿರುವುದು ಯೆಲ್ಲೋ ಫಂಗಸ್​ನ ಲಕ್ಷಣಗಳಾಗಿರಲಿವೆ. ದೇಹದಲ್ಲಿ ಗಾಯಗಳಿದ್ದರೆ ಗುಣವಾಗುವ ಪ್ರಮಾಣ ಯೆಲ್ಲೋ ಫಂಗಸ್​ನಿಂದಾಗಿ ಕಡಿಮೆ ಆಗುವ ಸಾಧ್ಯತೆಯಿದೆ. ಅಂಗಾಂಗ ವೈಫಲ್ಯ ಅಥವಾ ಕಣ್ಣುಗಳ ಸಮಸ್ಯೆ ಕಂಡುಬರಬಹುದಾಗಿದೆ.

ದೇಹದಲ್ಲಿ ಆಂತರಿಕವಾಗಿ ಆರಂಭವಾಗುವ ಈ ಖಾಯಿಲೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೇ ಹೋದರೆ ಮಾರಕವಾಗುವ ಸಾಧ್ಯತೆ ಇದೆ. ಹಾಗಾಗಿ, ಯೆಲ್ಲೋ ಫಂಗಸ್​ನ್ನು ಕಡೆಗಣಿಸುವುದು ಒಳ್ಳೆಯದಲ್ಲ. ಯೆಲ್ಲೋ ಫಂಗಸ್​ಗೆ ಕೂಡ ಅಂಪೋಟೆರಿಸಿನ್ ಬಿ ಇಂಜೆಕ್ಷನ್ ಔಷಧವಾಗಿದೆ.

ಸ್ವಚ್ಛತೆ ಇಲ್ಲದಿರುವುದು, ಅತಿಯಾದ ತೇವಾಂಶ ಇತ್ಯಾದಿ ಯೆಲ್ಲೋ ಫಂಗಸ್​ಗೆ ಕಾರಣವಾಗಬಹುದು. ಕೇಂದ್ರ ಆರಓಗ್ಯ ಸಚಿವಾಲಯ ಸೋಮವಾರ ಬೆಳಗ್ಗೆ ನೀಡಿದ ವರದಿಯ ಪ್ರಕಾರ, ಇಲ್ಲಿಯವರೆಗೆ 5,424 ಮೈಕೊರ್​ಮೈಕೊಸಿಸ್ ಪ್ರಕರಣಗಳು ದೇಶದ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿದೆ. 5,424 ಪ್ರಕರಣಗಳ ಪೈಕಿ 4,556 ರೋಗಿಗಳು ಕೊರೊನಾ ಸೋಂಕಿಗೆ ತುತ್ತಾದವರಾಗಿದ್ದಾರೆ. ಹಾಗೂ ಶೇ. 55ರಷ್ಟು ರೋಗಿಗಳು ಸಕ್ಕರೆ ಖಾಯಿಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಕೊರೊನಾ ಇಲ್ಲದವರಲ್ಲಿಯೂ ಬ್ಲ್ಯಾಕ್ ಫಂಗಸ್ ಪತ್ತೆ.. ಹೊರ ಬೀಳುತ್ತಿದೆ ಭಯಾನಕ ಸತ್ಯ

ಬ್ಲ್ಯಾಕ್​ ಫಂಗಸ್​ ಸೋಂಕು ಬಾರದಂತೆ ತಡೆಗಟ್ಟಲು ಇಲ್ಲಿದೆ ಸರಳ ಸಲಹೆಗಳು

Published On - 3:26 pm, Mon, 24 May 21

Follow Us
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ
ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು