AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಿನದ್ದು ಬ್ರೇಕ್‌ಥ್ರೂ ಇನ್‌ಫೆಕ್ಷನ್‌, ರೋಗಲಕ್ಷಣಗಳ ತೀವ್ರತೆ ಕಡಿಮೆ

ಕೇರಳದಲ್ಲಿ ಇಲ್ಲಿಯವರೆಗೆ ಅರ್ಹ ಜನಸಂಖ್ಯೆಯ 95 ಪ್ರತಿಶತದಷ್ಟು ಜನರು ಮೊದಲ ಲಸಿಕೆ ಪಡೆದಿದ್ದು ಅವರಲ್ಲಿ 52 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.  ಪ್ರಸ್ತುತ, ಭಾರತದಲ್ಲಿನ ದೈನಂದಿನ ಪ್ರಕರಣಗಳ ಎಣಿಕೆಯಲ್ಲಿ ಸುಮಾರು 50 ಪ್ರತಿಶತದಷ್ಟು ಕೇರಳದಿಂದ ವರದಿಯಾಗುತ್ತಿದೆ.

ಕೇರಳದ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಿನದ್ದು ಬ್ರೇಕ್‌ಥ್ರೂ ಇನ್‌ಫೆಕ್ಷನ್‌, ರೋಗಲಕ್ಷಣಗಳ ತೀವ್ರತೆ ಕಡಿಮೆ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 05, 2021 | 1:23 PM

Share

ತಿರುವನಂತಪುರಂ: ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ ಕಳೆದ ಎರಡು ವಾರಗಳಲ್ಲಿ ಕೇರಳದಲ್ಲಿ ದಿನನಿತ್ಯದ ಕೊವಿಡ್ (Covid-19)  ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಸಂಪೂರ್ಣ ಲಸಿಕೆ ಪಡೆದವರಲ್ಲಿ ಕಾಣಿಸಿಕೊಂಡಿರುವ  ಬ್ರೇಕ್ ಥ್ರೂ ಇನ್ ಫೆಕ್ಷನ್ ಅಥವಾ ಪ್ರಕರಣಗಳು ಆಗಿವೆ. ಆದರೆ ವ್ಯಾಕ್ಸಿನೇಷನ್ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಿರುವುದರಿಂದ ಆಮ್ಲಜನಕದ ಹಾಸಿಗೆಗಳು ಅಥವಾ ಐಸಿಯು ಪ್ರವೇಶದ ಅಗತ್ಯವಿರುವ ಪ್ರಕರಣಗಳ ಒಂದು ಸಣ್ಣ ಭಾಗ ಮಾತ್ರ ಎಂದು ಅಧಿಕಾರಿಗಳು ಹೇಳಿದರು. ಅಕ್ಟೋಬರ್ 19 ರಿಂದ ನವೆಂಬರ್ 2 ರವರೆಗೆ ಕಳೆದ 15 ದಿನಗಳಲ್ಲಿ ಕೇರಳದಿಂದ 1,19,401 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ ಎಂದು ಡೇಟಾ ತೋರಿಸುತ್ತದೆ. ಇವುಗಳಲ್ಲಿ, 1,00,593 ಲಸಿಕೆಗೆ ಅರ್ಹತೆ ಹೊಂದಿದ್ದು, 67,980 (ಶೇ. 57.9) ಒಟ್ಟು ಪ್ರಕರಣಗಳ ಎಣಿಕೆ ಎರಡೂ ಡೋಸ್‌ಗಳು ಅಥವಾ ಒಂದೇ ಡೋಸ್ ಅನ್ನು ಪಡೆದುಕೊಂಡಿದೆ.

ಧನಾತ್ಮಕ ಪ್ರಕರಣಗಳಲ್ಲಿ ವ್ಯಾಕ್ಸಿನೇಷನ್‌ಗೆ ಅರ್ಹರಾದವರಲ್ಲಿ 40,584 (ಒಟ್ಟು ಎಣಿಕೆಯ ಶೇಕಡಾ 34.9) ಸಂಪೂರ್ಣವಾಗಿ ಲಸಿಕೆಯನ್ನು ಹಾಕಲಾಗಿದೆ. 27,396 ಮಂದಿ (ಒಟ್ಟು ಎಣಿಕೆಯ ಶೇಕಡಾ 22.9) ಕೇವಲ ಒಂದು ಡೋಸ್ ಲಸಿಕೆ ಹಾಕಿಸಿದ್ದರು. ಉಳಿದವರು ಲಸಿಕೆ ಹಾಕಿಸಿಕೊಂಡಿಲ್ಲ

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿತ್ತು. ಲಸಿಕೆಯು ಸೋಂಕಿನ ತೀವ್ರತೆಯನ್ನು ತಡೆಯುತ್ತದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದರು. ಕಳೆದ ಒಂದು ವಾರದಲ್ಲಿ 77,516 ಸಕ್ರಿಯ ಪ್ರಕರಣಗಳಲ್ಲಿ ಕೇವಲ 2 ಪ್ರತಿಶತದಷ್ಟು ಮಾತ್ರ ಆಮ್ಲಜನಕ ಹಾಸಿಗೆಗಳ ಅಗತ್ಯವಿದೆ ಮತ್ತು ಸುಮಾರು 1.5 ಪ್ರತಿಶತದಷ್ಟು ರೋಗಿಗಳಿಗೆ ಮಾತ್ರ ಐಸಿಯು ಪ್ರವೇಶದ ಅಗತ್ಯವಿದೆ ಎಂದು  ಹೇಳಿದರು.

ರಾಜ್ಯದಲ್ಲಿ ಇಲ್ಲಿಯವರೆಗೆ ಅರ್ಹ ಜನಸಂಖ್ಯೆಯ 95 ಪ್ರತಿಶತದಷ್ಟು ಜನರು ಮೊದಲ ಲಸಿಕೆ ಪಡೆದಿದ್ದು ಅವರಲ್ಲಿ 52 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.  ಪ್ರಸ್ತುತ, ಭಾರತದಲ್ಲಿನ ದೈನಂದಿನ ಪ್ರಕರಣಗಳ ಎಣಿಕೆಯಲ್ಲಿ ಸುಮಾರು 50 ಪ್ರತಿಶತದಷ್ಟು ಕೇರಳದಿಂದ ವರದಿಯಾಗುತ್ತಿದೆ, ಇದು ದೇಶದ ಸಕ್ರಿಯ ಪ್ರಕರಣಗಳಲ್ಲಿ 45 ಪ್ರತಿಶತದಷ್ಟಿದೆ.

ರಾಜ್ಯದ ಇತ್ತೀಚಿನ ಸೆರೋಪ್ರೆವೆಲೆನ್ಸ್ ಸಮೀಕ್ಷೆಯಿಂದ ಬಹಿರಂಗಗೊಂಡಂತೆ ಕೇರಳವು ಮುಖ್ಯವಾಗಿ ಸೋಂಕಿನಿಂದ ಹೆಚ್ಚಾಗಿ ವ್ಯಾಕ್ಸಿನೇಷನ್‌ನಿಂದ ರೋಗ ಪ್ರತಿರೋಧ ಶಕ್ತಿ ಪಡೆದಿದೆ ಎಂದು ವೀಣಾ ಜಾರ್ಜ್ ಹೇಳಿದರು.

ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳು ಸೋಂಕಿಗೆ ಒಳಗಾಗುತ್ತಿದ್ದರೂ, ಕೊವಿಡ್‌ನಿಂದಾಗಿ ಅವರಲ್ಲಿ ಸಾವುಗಳು ಬಹಳ ವಿರಳ. ಸಂಪೂರ್ಣವಾಗಿ ಲಸಿಕೆ ಹಾಕಿದ ಜನರು ಸಾವನ್ನಪ್ಪಿದ ಸಂದರ್ಭಗಳಲ್ಲಿ ಸಂತ್ರಸ್ತರು ತುಂಬಾ ವಯಸ್ಸಾದವರು ಅಥವಾ ತೀವ್ರವಾದ ಕೊಮೊರ್ಬಿಡಿಟಿ ಅಂಶಗಳನ್ನು ಹೊಂದಿದ್ದರು ಎಂದು ಅವರು ಹೇಳಿದರು.

ಸಂಪೂರ್ಣವಾಗಿ ಲಸಿಕೆಯನ್ನು ಪಡೆದ ಮೊದಲ ಆರೋಗ್ಯ ಕಾರ್ಯಕರ್ತರು ಈ ದಿನಗಳಲ್ಲಿ ನಿಯಮಿತವಾಗಿ ಸೋಂಕಿಗೆ ಒಳಗಾಗುವವರಲ್ಲಿ ಇದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. “ಇದರ ಹೊರತಾಗಿ, ವ್ಯಾಕ್ಸಿನೇಷನ್ ಎಲ್ಲಾ ವರ್ಗಗಳ ಜನರಲ್ಲಿ ತಪ್ಪು ವಿಶ್ವಾಸವನ್ನು ನೀಡಿದೆ, ಇದು ಕೊವಿಡ್ ಪ್ರೋಟೋಕಾಲ್ ನಿರ್ಲಕ್ಷಿಸಲು ಅನೇಕರನ್ನು ಪ್ರೇರೇಪಿಸುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಶಿಕ್ಷಕರು ಮೊದಲು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೊವಿಡ್ ಕುರಿತು ರಾಜ್ಯದ ತಜ್ಞರ ಸಮಿತಿಯ ಸದಸ್ಯ ಡಾ ಟಿ ಎಸ್ ಅನೀಶ್ ಹೇಳಿದ್ದಾರೆ.

ಸಂಪೂರ್ಣವಾಗಿ ಲಸಿಕೆ ಹಾಕಿದವರಲ್ಲಿ ಸೋಂಕು ಕಂಡು ಬಂದ ಕಾರಣ ಸಂಪೂರ್ಣವಾಗಿ ಲಸಿಕೆ ಹಾಕಿದವರಲ್ಲಿ ರೋಗ ಪ್ರತಿರೋಧ  ಶಕ್ತಿ ಕಡಿಮೆಯಾಗುತ್ತಿದೆಯೇ ಎಂದು ಅನುಮಾನಿಸಲು ಕಾರಣವಾಗಿದೆ. ಮತ್ತೊಂದು ಅಂಶವೆಂದರೆ, ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಹೊಂದಿರುವವರಲ್ಲಿ ಆರೋಗ್ಯ ಕಾರ್ಯಕರ್ತರು ಬೇಗನೆ ಪರೀಕ್ಷೆಗೊಳಗಾಗುತ್ತಾರೆ ”ಎಂದು ಅವರು ಹೇಳಿದರು.

ಕೊವಿಡ್‌ನ ನೈಸರ್ಗಿಕ ಸೋಂಕು ಅತಿ ಹೆಚ್ಚು ಇರುವ ಸ್ಥಳಗಳು ಅಥವಾ ರಾಜ್ಯಗಳಲ್ಲಿ, ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಅನೀಶ್ ಹೇಳಿದರು.

“ಕೇರಳವು ನೈಸರ್ಗಿಕ ಸೋಂಕಿನ ಬದಲು ಲಸಿಕೆಯಿಂದ ರೋಗ ಪ್ರತಿರೋಧ ಶಕ್ತಿ ಹೊಂದಿತ್ತು ಮತ್ತು ರಾಜ್ಯವು ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಪ್ರಕರಣಗಳಿಗೆ ಗುರಿಯಾಗಿದೆ. ಬ್ರೇಕ್‌ಥ್ರೂ ಇನ್‌ಫೆಕ್ಷನ್‌ ಆರೋಗ್ಯ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ತೋರಿಸುತ್ತದೆ. ವ್ಯಾಕ್ಸಿನೇಷನ್ ನಂತರ ಸಂಭವಿಸುವ ಸೋಂಕುಗಳಲ್ಲಿ, ರೋಗಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಸೌಮ್ಯ ಲಕ್ಷಣಗಳಿರುವ ಇಂತಹ ಪ್ರಕರಣಗಳನ್ನು ಪರಿಣಾಮಕಾರಿ ಪರೀಕ್ಷಾ ತಂತ್ರಗಳ ಮೂಲಕ ಮಾತ್ರ ಪತ್ತೆ ಹಚ್ಚಬಹುದು,’’ ಎಂದು ಹೇಳಿದರು.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಯ ಮಹಿಳಾ ಕೇಂದ್ರಿತ ಭರವಸೆಗಳು ಉತ್ತರ ಪ್ರದೇಶದ ಚುನಾವಣೆಗಾಗಿ ಮಾತ್ರ: ಕಾಂಗ್ರೆಸ್ ಪಕ್ಷದ ನಾಯಕರು

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ