Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು

ಮದುವೆಗಳಲ್ಲಿ ಹಾರ ಬದಲಿಸುವ ಸಂದರ್ಭದಲ್ಲಿ ಈ ಆಟ ಸಹಜ. ಎರಡೂ ಕಡೆಯವರು ವಧು-ವರನನ್ನು ಎತ್ತಿ ಹಿಡಿದು, ಹಾರ ಹಾಕಲಾಗದಂತೆ ಸ್ವಲ್ಪ ಹೊತ್ತು ಸತಾಯಿಸುತ್ತಾರೆ.

Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು
ಪರಸ್ಪರರಿಗೆ ಹಾರ ಹಾಕಲು ಸಿದ್ಧತೆ
Follow us
| Updated By: Lakshmi Hegde

Updated on: Jun 27, 2021 | 3:41 PM

ಇತ್ತೀಚೆಗಂತೂ ಮದುವೆಗೆ ಸಂಬಂಧಪಟ್ಟ ಒಂದಲ್ಲ ಒಂದು ವಿಚಿತ್ರ, ವಿಲಕ್ಷಣ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ಮಟನ್​ ಇಲ್ಲವೆಂದು ಮದುವೆ ಮುರಿದುಕೊಂಡ ವರ, ತನ್ನ ಪತಿಯಾಗುವವನಿಗೆ ಕನ್ನಡಕವಿಲ್ಲದೆ ಓದಲು ಸಾಧ್ಯವಿಲ್ಲವೆಂದು ತಿಳಿದು ಮಂಟಪದಿಂದ ಎದ್ದು ಹೋದ ವಧು..ಹೀಗೆ ಇತ್ತೀಚೆಗೆ ಇಂಥ ಹಲವಾರು ವಿಚಾರಗಳನ್ನು ಓದಿದ್ದೇವೆ. ಹಾಗೇ ಈಗೊಂದು ವಿಡಿಯೋ ವೈರಲ್​ ಆಗಿದೆ. ಆದರೆ ಇದು ಮೂರುವರ್ಷದ ಹಿಂದಿನದು. ಇದೀಗ ಮತ್ತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಅದೊಂದು ಮದುವೆ. ಅಲ್ಲಿ ಪರಸ್ಪರರಿಗೆ ಮಾಲೆ ಹಾಕುವ ಕಾರ್ಯಕ್ರಮ ನಡೆಯುತ್ತಿದ್ದು, ವಧು-ವರ ಎದುರುಬದುರಾಗಿ ನಿಂತಿದ್ದಾರೆ. ಅಷ್ಟರಲ್ಲಿ ವರನ ಕಡೆಯವರೊಬ್ಬರು ಬಂದು ಆತನನ್ನು ಎತ್ತಿ ಹಿಡಿಯುತ್ತಾರೆ. ವಧುವಿನ ಕಡೆಯಿಂದ ಯಾರೂ ಆಕೆಯನ್ನು ಅಷ್ಟು ಬೇಗ ಎತ್ತುವುದಿಲ್ಲ. ಆದರೆ ಅಲ್ಲೇ ಮೂಲೆಯಲ್ಲಿ ಒಬ್ಬರು ಫೋಟೋ ತೆಗೆಯುತ್ತ ಇದ್ದವರು ಕೂಡಲೇ ಬಂದು ವಧುವನ್ನು ಎತ್ತಿ ಹಿಡಿಯುತ್ತಾರೆ. ಆಗ ವಧುವಿಗೆ ವರನ ತಲೆ ಎಟಕುವ ಕಾರಣ ಆಕೆ ಹಾರ ಹಾಕುತ್ತಾಳೆ. ವರನೂ ಹಾರ ಹಾಕುತ್ತಾನೆ.

ಪರಸ್ಪರರಿಗೆ ಹಾರ ಹಾಕಿದ್ದು ಸುಸೂತ್ರವಾಗಿ ನಡೆಯಿತು. ಆದರೆ ವಧುವನ್ನು ಎತ್ತಿದ್ದ ವ್ಯಕ್ತಿಯ ಗ್ರಹಚಾರ ಮಾತ್ರ ಸರಿ ಇರಲಿಲ್ಲ. ಹಾರ ಹಾಕಿ, ಆತನ ತೋಳಿನಿಂದ ಕೆಳಗೆ ಇಳಿದ ವಧು, ತಿರುಗಿ ಆ ವ್ಯಕ್ತಿಯ ಕಪಾಲಕ್ಕೆ ಹೊಡೆದು, ಏನೋ ಎಚ್ಚರಿಕೆ ಕೊಡುತ್ತಾಳೆ. ಅವಮಾನದಿಂದ, ಕೋಪದಿಂದ ಅಲ್ಲಿಂದ ತೆರಳಿದ ಆ ವ್ಯಕ್ತಿ ಹೋಗುವಾಗ ಸುಮ್ಮನೆ ಹೋಗದೆ..ಅಲ್ಲೇ ಮೂಲೆಯಲ್ಲಿ ನಿಂತಿದ್ದ ಮಹಿಳೆಯ ಕಪಾಳಕ್ಕೆ ಹೊಡೆದು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಮದುವೆಗಳಲ್ಲಿ ಹಾರ ಬದಲಿಸುವ ಸಂದರ್ಭದಲ್ಲಿ ಈ ಆಟ ಸಹಜ. ಎರಡೂ ಕಡೆಯವರು ವಧು-ವರನನ್ನು ಎತ್ತಿ ಹಿಡಿದು, ಹಾರ ಹಾಕಲಾಗದಂತೆ ಸ್ವಲ್ಪ ಹೊತ್ತು ಸತಾಯಿಸುತ್ತಾರೆ. ಆದರೆ ವಧುವನ್ನು ಎತ್ತಿದ ಈತ ಯಾರು? ವಧುವಿಗ್ಯಾಕೆ ಅಷ್ಟು ಸಿಟ್ಟು ಬಂತು? ಎತ್ತಿ ಹಿಡಿಯುವಾಗ ಪ್ರತಿಭಟಿಸದ ಆಕೆ ನಂತರ ಯಾಕೆ ಹಾಗೆ ಹೊಡೆದಳು?..ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ. ಆದರೆ ವಿಡಿಯೋ ಮಾತ್ರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿರುತ್ತದೆ.

ಇದನ್ನೂ ಓದಿ: Viral Video: ಗಾಜಿನ ಬಾಟಲಿಯ ಮೇಲೆ ನಿಂತು ಯೋಗ ಮಾಡುತ್ತಿದ್ದಾಳೆ ಯುವತಿ! ಇದ್ದಕ್ಕಿದ್ದಂತೆ ಏನಾಯ್ತು ಅಂತ ವಿಡಿಯೋ ನೋಡಿ

Bride Slaps Man for Lifting Her During Varmala Ceremony viral video

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು