AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಸಹ ಜೀವಿಸುವ ಹಕ್ಕಿನ ಭಾಗ, ಅರ್ಜಿಕೊಟ್ಟ 1 ತಿಂಗಳಲ್ಲಿ ಸಂಪರ್ಕ ಒದಗಿಸುವುದು ವಿತರಣಾ ಕಂಪನಿಗಳ ಕರ್ತವ್ಯ: ಕೇರಳ ಹೈಕೋರ್ಟ್

ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಒದಗಿಸಲು ತಡ ಮಾಡಿದ ವಿದ್ಯುತ್ ಮಂಡಳಿಯ ಇಬ್ಬರು ನೌಕರರಿಗೆ ಗ್ರಾಹಕರ ನ್ಯಾಯಾಲಯ ವಿಧಿಸಿರುವ ದಂಡಕ್ಕೆ ಯಾವುದೇ ವಿನಾಯ್ತಿ ನೀಡಲು ನಿರಾಕರಿಸಿದೆ.

ವಿದ್ಯುತ್ ಸಹ ಜೀವಿಸುವ ಹಕ್ಕಿನ ಭಾಗ, ಅರ್ಜಿಕೊಟ್ಟ 1 ತಿಂಗಳಲ್ಲಿ ಸಂಪರ್ಕ ಒದಗಿಸುವುದು ವಿತರಣಾ ಕಂಪನಿಗಳ ಕರ್ತವ್ಯ: ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 16, 2021 | 7:54 PM

Share

ಕೊಚ್ಚಿ: ‘ನೀರು ಮತ್ತು ವಿದ್ಯುತ್ ಸಂಪರ್ಕವು ಘನತೆಯ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ಅಂಶ. ಸಂವಿಧಾನದ 21ನೇ ಪರಿಚ್ಛೇದದಲ್ಲಿರುವ ಜೀವಿಸುವ ಹಕ್ಕಿನ ವ್ಯಾಪ್ತಿಯಲ್ಲಿ ಇವೂ ಬರುತ್ತವೆ’ ಎಂದು ಕೇರಳ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ. ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಒದಗಿಸಲು ತಡ ಮಾಡಿದ ವಿದ್ಯುತ್ ಮಂಡಳಿಯ ಇಬ್ಬರು ನೌಕರರಿಗೆ ಗ್ರಾಹಕರ ನ್ಯಾಯಾಲಯ ವಿಧಿಸಿರುವ ದಂಡಕ್ಕೆ ಯಾವುದೇ ವಿನಾಯ್ತಿ ನೀಡಲು ನಿರಾಕರಿಸಿದೆ.

ವಿದ್ಯುತ್ ಕಾಯ್ದೆಯ 43ನೇ ವಿಧಿಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಮುರಳಿ ಪುರುಷೋತ್ತಮನ್ ಅವರಿದ್ದ ಏಕಸದಸ್ಯ ನ್ಯಾಯಪೀಠವು, ‘ಅರ್ಜಿ ಸ್ವೀಕರಿಸಿದ ಒಂದು ತಿಂಗಳ ಒಳಗೆ ಅರ್ಜಿದಾರರ ಬಳಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ವಿದ್ಯುತ್ ವಿತರಣಾ ಕಂಪನಿಗಳ ಶಾಸನಬದ್ಧ ಕರ್ತವ್ಯವಾಗಿರುತ್ತದೆ’ ಎಂದು ಹೇಳಿತು.

ಸೈನುದ್ದೀನ್ ಎಂಬುವವರ ಮನೆಗೆ ವಿದ್ಯುತ್ ಸಂಪರ್ಕ ನೀಡಲು ತಡ ಮಾಡಿದ್ದಕ್ಕಾಗಿ ಕೇರಳ ವಿದ್ಯುತ್ ಮಂಡಳಿಯ ಇಬ್ಬರು ಅಧಿಕಾರಿಗಳಿಗೆ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯ ಮತ್ತು ಕೇರಳ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ದಂಡ ವಿಧಿಸಿತ್ತು. ಈ ನಿರ್ಧಾರವನ್ನು ಅಧಿಕಾರಿಗಳಿಬ್ಬರೂ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ವಿಚಾರಣೆ ವೇಳೆ ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ‘ಮನೆಯೊಳಗೆ ಒಂದು ಸಣ್ಣ ಬಲ್ಬ್​ ಬೆಳಕು ಹರಿಸಬೇಕೆಂದು ಸೈನುದ್ದೀನ್ ಕಂಬದಿಂದ ಕಂಬಕ್ಕೆ ಅಲೆಯಬೇಕಾಯಿತು. ಗ್ರಾಹಕರ ವೇದಿಕೆ ವಿಧಿಸಿದ ದಂಡವಾಗಲಿ, ವಿದ್ಯುತ್​ ನಿಯಂತ್ರಣಾ ಪ್ರಾಧಿಕಾರ ನೀಡಿದ ಶಿಕ್ಷೆಯಾಗಲಿ ಸೈನುದ್ದೀನ್ ಮನೆಗೆ ಬೆಳಕು ತರಲಿಲ್ಲ. ಈಗ ಇದೇ ಕಾರಣಕ್ಕೆ ಇವರಿಬ್ಬರೂ ಇಲ್ಲಿದ್ದಾರೆ’ ಎಂದು ವಿಷಾದಿಸಿದರು.

ಪ್ರಕರಣದ ವಿವರ ಲೋ ಟೆನ್ಷನ್ (ಎಲ್​ಟಿ) ವಿದ್ಯುತ್ ಮಾರ್ಗದಿಂದ ಕನಿಷ್ಠ ಅಂತರವನ್ನೂ ಕಾಪಾಡಿಕೊಳ್ಳದೇ ಸೈನುದ್ದೀನ್ ಮನೆ ಕಟ್ಟಿದ್ದರು. ಈ ಮಾರ್ಗ ಬದಲಾವಣೆಯ ನಂತರವಷ್ಟೇ ಸೈನುದ್ದೀನ್ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯ ಎಂದು ವಿದ್ಯುತ್ ಮಂಡಳಿಯ ನೌಕರರು ವಾದಿಸಿದ್ದರು. ಈ ಬಗ್ಗೆ ವಿದ್ಯುತ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಿದ್ದನ್ನು ಪ್ರಸ್ತಾಪಿಸಿದ ಸೈನುದ್ದೀನ್ ಪರ ವಕೀಲರು, ಸೂಕ್ತ ಮೊತ್ತವನ್ನು ಠೇವಣಿಯಾಗಿ ಇರಿಸಿಕೊಂಡು 21 ದಿನಗಳ ಒಳಗೆ ಎಲ್​ಟಿ ಮಾರ್ಗವನ್ನು ಬದಲಿಸಬೇಕು ಎಂದು ಪ್ರಾಧಿಕಾರ ಸೂಚಿಸಿತ್ತು. ಠೇವಣಿ ಇರಿಸಿದ ನಂತರವೂ ವಿದ್ಯುತ್ ಸಂಪರ್ಕ ಒದಗಿಸಲು ನೌಕರರು ಯಾವುದೇ ಕ್ರಮವಹಿಸಲಿಲ್ಲ ಎಂದು ವಿವರಿಸಿದರು.

ವಿದ್ಯುತ್ ಮಂಡಳಿಯ ನಿರಾಸಕ್ತಿಯ ಬಗ್ಗೆ ಸೈನುದ್ದೀನ್ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ಮಂಡಳಿಯ ಇಬ್ಬರು ನೌಕರರು ವಿದ್ಯುತ್ ಸಂಪರ್ಕ ಒದಗಿಸಲು ಉದ್ದೇಶಪೂರ್ವಕವಾಗಿ ತಡ ಮಾಡುತ್ತಿದ್ದಾರೆ ಎಂದು ಹೇಳಿದ ಆಯೋಗವು, ವಿದ್ಯುತ್ ಕಾಯ್ದೆಯ ಅನ್ವಯ ಮೊದಲ ತಪ್ಪಿತಸ್ಥನಿಗೆ ₹ 50,000 ಮತ್ತು 2ನೇ ತಪ್ಪಿಸ್ಥನಿಗೆ ₹ 25,000 ದಂಡವಿಧಿಸಿ ತೀರ್ಪು ನೀಡಿತ್ತು. ಕೇರಳ ಹೈಕೋರ್ಟ್​ ಸಹ ಈ ತೀರ್ಪನ್ನು ಎತ್ತಿಹಿಡಿದು, ದಂಡವನ್ನು ಕಾಯಂಗೊಳಿಸಿತು.

‘ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಪರಮಾಧಿಕಾರವು ಕೇರಳ ವಿದ್ಯುತ್ ವಿತರಣಾ ಮಂಡಳಿಗಿದೆ. ಅರ್ಜಿದಾರರಿಗೆ ಸಕಾಲದಲ್ಲಿ ವಿದ್ಯುತ್ ಸಂಪರ್ಕ ನೀಡಲು ಮಂಡಳಿ ಮತ್ತು ಅದರ ಅಧಿಕಾರಿಗಳು ಬಾಧ್ಯಸ್ಥರಾಗಿರುತ್ತಾರೆ’ ಎಂದು ಹೈಕೋರ್ಟ್​ ತೀರ್ಪಿನಲ್ಲಿ ಹೇಳಿತು. ಸೈನುದ್ದೀನ್ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲು ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ ನಂತರ ಹೈಕೋರ್ಟ್​, ಅರ್ಜಿಯನ್ನು ವಜಾ ಮಾಡಿತು.

ಇದನ್ನೂ ಓದಿ: NTPCL ಸೇರಿ ಭಾರತದ ಪ್ರಮುಖ ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್​ಗಳ ಕಣ್ಣು

Published On - 7:53 pm, Tue, 16 March 21

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!