Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ

ದೆಹಲಿ ಚಲೋ ಆರಂಭವಾದಾಗ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಕೇಂದ್ರ ಸರ್ಕಾರ ಪಂಜಾಬ್ ರೈತರ ಬಳಿ ಕೋರಿತ್ತು. ಒಂದೊಮ್ಮೆ ಬುರಾರಿಯಲ್ಲಿ ಎಲ್ಲ ರೈತರು ವಾಸ್ತವ್ಯ ಹೂಡಿದ್ದರೆ ಅದು ‘ತೆರೆದ ಜೈಲಾ’ಗಿ ಮಾರ್ಪಡುವ ಸಂಭವವಿತ್ತು. ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿಗೆ ತೆರಳಿದ್ದರು.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ
ಬುರಾರಿ ಮೈದಾನದಲ್ಲಿ ಕೃಷಿಯಲ್ಲಿ ನಿರತ ಪಂಜಾಬ್ ರೈತರು
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Jan 07, 2021 | 3:48 PM

ದೆಹಲಿ: ಒಮ್ಮೆ ತೆರೆದ ಕಾರಾಗೃಹವಾಗುವ ಸಂಭವವಿದ್ದ ರಾಷ್ಟ್ರ ರಾಜಧಾನಿಯ ಬುರಾರಿ ಮೈದಾನ ಈಗ ಕೃಷಿ ಭೂಮಿಯಂತೆ ಬದಲಾಗುತ್ತಿದೆ! ಪಂಜಾಬ್ ರೈತರು ಚಳುವಳಿ ಆರಂಭಿಸಿ ದೆಹಲಿಗೆ ತಲುಪಿದಾಗ ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ರೈತ ಒಕ್ಕೂಟಗಳ ಬಳಿ ಮನವಿ ಮಾಡಿತ್ತು. ಆದರೆ, ಅದಕ್ಕೊಪ್ಪದ ರೈತರು ದೆಹಲಿಯ ಗಡಿಭಾಗಗಳಲ್ಲೇ ವಾಸ್ತವ್ಯ ಹೂಡಿದ್ದರು. ಕೆಲ ರೈತರು ಮಾತ್ರ ದೆಹಲಿ ಪ್ರವೇಶಿಸಿ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಒಂದೊಮ್ಮೆ ಎಲ್ಲ ರೈತರೂ ಬುರಾರಿ ಮೈದಾನ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರೆ ಬುರಾರಿ ಮೈದಾನ ತೆರೆದ ಜೈಲಾಗಿ ಪರಿವರ್ತನೆಯಾಗುವ ಸಂಭವವಿದೆ ಎಂದು ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ತಮ್ಮನ್ನು ಒಂದೆಡೆ ಕೂಡಿ ಹಾಕಲು ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ಆಯೋಜಿಸಲು ತಿಳಿಸಿದೆ ಎಂದು ರೈತ ನಾಯಕರು ದೂರಿದ್ದವು. ಹೀಗಾಗಿ, ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿ ಮೈದಾನದಲ್ಲಿ ವಸತಿ ಹೂಡಿದ್ದರು.

ಆಗ ತೆರೆದ ಜೈಲು, ಈಗ ಕೃಷಿ ಭೂಮಿ! ಬುರಾರಿ ಮೈದಾನ ಇದೀಗ, ಪಂಜಾಬ್ ರೈತರಿಗೆ ಕೃಷಿ ಭೂಮಿಯಾಗಿದೆ. 60 ದಿನಗಳ ಬೆಳೆಯಾದ ಈರುಳ್ಳಿಯನ್ನು ಬೆಳೆದಿರುವ ರೈತ ಗುರುದೇವ್ ಸಿಂಗ್ ಬುರಾರಿಯ ನೆಲದಲ್ಲಿ ಬೆಳೆದಿದ್ದಾರೆ. ಈಗಾಗಲೇ ಈರುಳ್ಳಿ ಬೆಳೆದು 12 ದಿನಗಳಾಗಿದ್ದು, ನಾವು ನಮ್ಮ ಬೇಡಿಕೆ ಈಡೇರುವವರೆಗೂ ದೆಹಲಿ ಬಿಟ್ಟು ಕದಲುವುದಿಲ್ಲ ಎಂಬುದರ ಸಂಕೇತವಾಗಿದೆ ಎಂದು ಗುರುದೇವ್ ಸಿಂಗ್ ಅಭಿಪ್ರಾಯಪಡುತ್ತಾರೆ.

ಹತ್ತಿರದ ಕೃಷಿ ನರ್ಸರಿಯಿಂದ ಅಗತ್ಯ ಬೀಜಗಳನ್ನು ಖರೀದಿಸಿದ್ದೇವೆ. ಟೊಮೆಟೋ, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳನ್ನು ಬೆಳೆದಿದ್ದೇವೆ. ಹವಾಮಾನ ಸ್ವಲ್ಪ ಬೆಚ್ಚಗಾದಂತೆ ಭತ್ತ ಮತ್ತು ಇನ್ನಿತರ ತರಕಾರಿಗಳನ್ನು ಬೆಳೆಯಲಿದ್ದೇವೆ ಎಂದು ಫಿರೋಜ್​ಪುರದ ಜಸ್ಕರಣ್ ಸಿಂಗ್ ಕಹನ್ ವಿವರಿಸುತ್ತಾರೆ.

ಚಳುವಳಿ ನಿರತರಾದ ನಮಗೆ ಪಂಜಾಬ್​ ಅಥವಾ ಇತರ ಭಾಗಗಳಿಂದ ಆಹಾರ ಸಾಮಾಗ್ರಿಗಳು ಹೇರಳವಾಗಿ ಹರಿದುಬರುತ್ತಿದೆ. ಆದರೆ, ಸ್ವತಃ ನಾವೇ ನಮ್ಮ ಆಹಾರವನ್ನು ಬೆಳೆದುಕೊಳ್ಳಬೇಕು ಎಂಬ ಇಚ್ಛೆಯಿಂದ ಸ್ವತಃ ಕೃಷಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು