AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ

ದೆಹಲಿ ಚಲೋ ಆರಂಭವಾದಾಗ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಕೇಂದ್ರ ಸರ್ಕಾರ ಪಂಜಾಬ್ ರೈತರ ಬಳಿ ಕೋರಿತ್ತು. ಒಂದೊಮ್ಮೆ ಬುರಾರಿಯಲ್ಲಿ ಎಲ್ಲ ರೈತರು ವಾಸ್ತವ್ಯ ಹೂಡಿದ್ದರೆ ಅದು ‘ತೆರೆದ ಜೈಲಾ’ಗಿ ಮಾರ್ಪಡುವ ಸಂಭವವಿತ್ತು. ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿಗೆ ತೆರಳಿದ್ದರು.

ದೆಹಲಿಯ ಬುರಾರಿ ಮೈದಾನ: ಆಗ ತೆರೆದ ಜೈಲು, ಈಗ ಕೃಷಿ ಭೂಮಿ
ಬುರಾರಿ ಮೈದಾನದಲ್ಲಿ ಕೃಷಿಯಲ್ಲಿ ನಿರತ ಪಂಜಾಬ್ ರೈತರು
guruganesh bhat
| Edited By: |

Updated on: Jan 07, 2021 | 3:48 PM

Share

ದೆಹಲಿ: ಒಮ್ಮೆ ತೆರೆದ ಕಾರಾಗೃಹವಾಗುವ ಸಂಭವವಿದ್ದ ರಾಷ್ಟ್ರ ರಾಜಧಾನಿಯ ಬುರಾರಿ ಮೈದಾನ ಈಗ ಕೃಷಿ ಭೂಮಿಯಂತೆ ಬದಲಾಗುತ್ತಿದೆ! ಪಂಜಾಬ್ ರೈತರು ಚಳುವಳಿ ಆರಂಭಿಸಿ ದೆಹಲಿಗೆ ತಲುಪಿದಾಗ ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ರೈತ ಒಕ್ಕೂಟಗಳ ಬಳಿ ಮನವಿ ಮಾಡಿತ್ತು. ಆದರೆ, ಅದಕ್ಕೊಪ್ಪದ ರೈತರು ದೆಹಲಿಯ ಗಡಿಭಾಗಗಳಲ್ಲೇ ವಾಸ್ತವ್ಯ ಹೂಡಿದ್ದರು. ಕೆಲ ರೈತರು ಮಾತ್ರ ದೆಹಲಿ ಪ್ರವೇಶಿಸಿ ಬುರಾರಿ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಒಂದೊಮ್ಮೆ ಎಲ್ಲ ರೈತರೂ ಬುರಾರಿ ಮೈದಾನ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರೆ ಬುರಾರಿ ಮೈದಾನ ತೆರೆದ ಜೈಲಾಗಿ ಪರಿವರ್ತನೆಯಾಗುವ ಸಂಭವವಿದೆ ಎಂದು ರೈತ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ತಮ್ಮನ್ನು ಒಂದೆಡೆ ಕೂಡಿ ಹಾಕಲು ಕೇಂದ್ರ ಸರ್ಕಾರ ಬುರಾರಿ ಮೈದಾನದಲ್ಲಿ ಪ್ರತಿಭಟನೆ ಆಯೋಜಿಸಲು ತಿಳಿಸಿದೆ ಎಂದು ರೈತ ನಾಯಕರು ದೂರಿದ್ದವು. ಹೀಗಾಗಿ, ನಂತರದ ದಿನಗಳಲ್ಲಿ ಕೆಲ ರೈತರಷ್ಟೇ ಬುರಾರಿ ಮೈದಾನದಲ್ಲಿ ವಸತಿ ಹೂಡಿದ್ದರು.

ಆಗ ತೆರೆದ ಜೈಲು, ಈಗ ಕೃಷಿ ಭೂಮಿ! ಬುರಾರಿ ಮೈದಾನ ಇದೀಗ, ಪಂಜಾಬ್ ರೈತರಿಗೆ ಕೃಷಿ ಭೂಮಿಯಾಗಿದೆ. 60 ದಿನಗಳ ಬೆಳೆಯಾದ ಈರುಳ್ಳಿಯನ್ನು ಬೆಳೆದಿರುವ ರೈತ ಗುರುದೇವ್ ಸಿಂಗ್ ಬುರಾರಿಯ ನೆಲದಲ್ಲಿ ಬೆಳೆದಿದ್ದಾರೆ. ಈಗಾಗಲೇ ಈರುಳ್ಳಿ ಬೆಳೆದು 12 ದಿನಗಳಾಗಿದ್ದು, ನಾವು ನಮ್ಮ ಬೇಡಿಕೆ ಈಡೇರುವವರೆಗೂ ದೆಹಲಿ ಬಿಟ್ಟು ಕದಲುವುದಿಲ್ಲ ಎಂಬುದರ ಸಂಕೇತವಾಗಿದೆ ಎಂದು ಗುರುದೇವ್ ಸಿಂಗ್ ಅಭಿಪ್ರಾಯಪಡುತ್ತಾರೆ.

ಹತ್ತಿರದ ಕೃಷಿ ನರ್ಸರಿಯಿಂದ ಅಗತ್ಯ ಬೀಜಗಳನ್ನು ಖರೀದಿಸಿದ್ದೇವೆ. ಟೊಮೆಟೋ, ಈರುಳ್ಳಿ ಸೇರಿದಂತೆ ಕೆಲ ತರಕಾರಿಗಳನ್ನು ಬೆಳೆದಿದ್ದೇವೆ. ಹವಾಮಾನ ಸ್ವಲ್ಪ ಬೆಚ್ಚಗಾದಂತೆ ಭತ್ತ ಮತ್ತು ಇನ್ನಿತರ ತರಕಾರಿಗಳನ್ನು ಬೆಳೆಯಲಿದ್ದೇವೆ ಎಂದು ಫಿರೋಜ್​ಪುರದ ಜಸ್ಕರಣ್ ಸಿಂಗ್ ಕಹನ್ ವಿವರಿಸುತ್ತಾರೆ.

ಚಳುವಳಿ ನಿರತರಾದ ನಮಗೆ ಪಂಜಾಬ್​ ಅಥವಾ ಇತರ ಭಾಗಗಳಿಂದ ಆಹಾರ ಸಾಮಾಗ್ರಿಗಳು ಹೇರಳವಾಗಿ ಹರಿದುಬರುತ್ತಿದೆ. ಆದರೆ, ಸ್ವತಃ ನಾವೇ ನಮ್ಮ ಆಹಾರವನ್ನು ಬೆಳೆದುಕೊಳ್ಳಬೇಕು ಎಂಬ ಇಚ್ಛೆಯಿಂದ ಸ್ವತಃ ಕೃಷಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ