AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲುಗಳಲ್ಲಿ ಮೆನು, ಬೆಲೆಯ ಪಟ್ಟಿ ಕಡ್ಡಾಯ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ಇನ್ಮುಂದೆ ಭಾರತೀಯ ರೈಲುಗಳಲ್ಲಿ ನೀಡಲಾಗುವ ಆಹಾರದ ಮೆನು, ಅದರ ಬೆಲೆಯ ವಿವರಗಳನ್ನು ವೆಬ್ ಸೈಟಿನಲ್ಲಿ ಹಾಕುವುದು ಕಡ್ಡಾಯ. ಪ್ಯಾಂಟ್ರಿ ಕಾರುಗಳಲ್ಲಿ ದರ ಪಟ್ಟಿಯನ್ನು ಪ್ರದರ್ಶಿಸಲಾಗಿದ್ದು, ಉತ್ತಮ ಪಾರದರ್ಶಕತೆಗಾಗಿ ಪ್ರಯಾಣಿಕರು ಈಗ ಮೆನುಗಳು ಮತ್ತು ಸುಂಕಗಳ ಲಿಂಕ್‌ಗಳೊಂದಿಗೆ ಎಸ್ ಎಂಎಸ್ ಅಲರ್ಟ್ ಕೂಡ ಸ್ವೀಕರಿಸಬಹುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರೈಲುಗಳಲ್ಲಿ ಮೆನು, ಬೆಲೆಯ ಪಟ್ಟಿ ಕಡ್ಡಾಯ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
Ashwini Vaishnaw
Follow us
ಸುಷ್ಮಾ ಚಕ್ರೆ
|

Updated on: Mar 12, 2025 | 10:29 PM

ನವದೆಹಲಿ, (ಮಾರ್ಚ್ 12): ರೈಲುಗಳಲ್ಲಿ ಆಹಾರದ ಮೆನು ಮತ್ತು ದರಗಳ ಪ್ರದರ್ಶನ ಕಡ್ಡಾಯವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಲೋಕಸಭೆಗೆ ತಿಳಿಸಿದರು. ಪ್ರಯಾಣಿಕರು ಆಹಾರದ ಬೆಲೆಗಳನ್ನು ವಿವರಿಸುವ ಮೆನು ಕಾರ್ಡ್‌ಗಳು, ದರ ಪಟ್ಟಿಗಳು ಮತ್ತು ಡಿಜಿಟಲ್ ಅಲರ್ಟ್​ ಪಡೆಯಲು ಲಾಗಿನ್ ಆಗಬೇಕು ಎಂದು ಅವರು ಹೇಳಿದರು. “ಪ್ರಯಾಣಿಕರ ಮಾಹಿತಿಗಾಗಿ ಎಲ್ಲಾ ಆಹಾರ ಪದಾರ್ಥಗಳ ಮೆನುವಿನ ಜೊತೆಗೆ ದರಗಳು ಲಭ್ಯವಿದೆ. ಎಲ್ಲಾ ವಿವರಗಳೊಂದಿಗೆ ಮುದ್ರಿತ ಮೆನು ಕಾರ್ಡ್‌ಗಳನ್ನು ವೇಟರ್‌ಗಳೊಂದಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಬೇಡಿಕೆಯ ಮೇರೆಗೆ ಪ್ರಯಾಣಿಕರಿಗೆ ಅದನ್ನು ನೀಡಲಾಗುತ್ತದೆ” ಎಂದು ಅಶ್ವಿನಿ ವೈಷ್ಣವ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ದರ ಪಟ್ಟಿಯನ್ನು ಪ್ಯಾಂಟ್ರಿ ಕಾರುಗಳಲ್ಲಿ ಪ್ರದರ್ಶಿಸಲಾಗುತ್ತದೆ ಮತ್ತು ಉತ್ತಮ ಪಾರದರ್ಶಕತೆಗಾಗಿ ಪ್ರಯಾಣಿಕರು ಇನ್ನು ಮೆನುಗಳು ಮತ್ತು ಸುಂಕಗಳ ಲಿಂಕ್‌ಗಳೊಂದಿಗೆ SMS ಎಚ್ಚರಿಕೆಗಳನ್ನು ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದರು. ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳನ್ನು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ. ಉತ್ತಮ ಗುಣಮಟ್ಟದ ಅಡುಗೆಮನೆಗಳಿಂದ ಊಟವನ್ನು ಪೂರೈಸಲಾಗುತ್ತದೆ, ಪ್ರಮುಖ ಸ್ಥಳಗಳಲ್ಲಿ ಆಧುನೀಕೃತ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಆಹಾರ ತಯಾರಿಕೆಯನ್ನು ಮೇಲ್ವಿಚಾರಣೆ ಮಾಡಲು ಅಡುಗೆಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಡುಗೆ ಎಣ್ಣೆ, ಗೋಡಂಬಿ, ಅಕ್ಕಿ, ಬೇಳೆಕಾಳುಗಳು, ಮಸಾಲಾ, ಪನೀರ್ ಮತ್ತು ಡೈರಿ ಉತ್ಪನ್ನಗಳಂತಹ ಬ್ರಾಂಡ್ ಕಚ್ಚಾ ವಸ್ತುಗಳ ಬಳಕೆಯನ್ನು ರೈಲ್ವೆ ಕಡ್ಡಾಯಗೊಳಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದ ರೈಲು ಹೈಜಾಕ್; ಉಗ್ರರಿಂದ 50 ಒತ್ತೆಯಾಳುಗಳ ಹತ್ಯೆ

ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಸ್ವಚ್ಛತೆ ಮತ್ತು ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಅಡುಗೆಮನೆಗಳಲ್ಲಿ ಆಹಾರ ಸುರಕ್ಷತಾ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಆನ್-ಬೋರ್ಡ್ IRCTC ಮೇಲ್ವಿಚಾರಕರು ರೈಲುಗಳಲ್ಲಿ ಅಡುಗೆ ಸೇವೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಆಹಾರ ಪ್ಯಾಕೆಟ್‌ಗಳಲ್ಲಿನ ಕ್ಯೂಆರ್ ಕೋಡ್‌ಗಳು ಈಗ ಅಡುಗೆಮನೆಯ ಹೆಸರು ಮತ್ತು ಪ್ಯಾಕೇಜಿಂಗ್ ದಿನಾಂಕದಂತಹ ಪ್ರಮುಖ ವಿವರಗಳನ್ನು ಪ್ರದರ್ಶಿಸುತ್ತವೆ. ಇದು ಪ್ರಯಾಣಿಕರು ತಮ್ಮ ಊಟವನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ಕಾರ್ಗಿಲ್ ರೈಲು ಸಂಪರ್ಕ:

ಕಾರ್ಗಿಲ್ ಇಲ್ಲಿಯವರೆಗೆ ರೈಲ್ವೆ ಸಂಪರ್ಕದಿಂದ ಹೊರಗುಳಿದಿದೆ. ಕಾರ್ಗಿಲ್‌ಗೆ ರೈಲ್ವೆ ಹಳಿಗಳನ್ನು ಹಾಕಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ, ಇದು ಭಾರತಕ್ಕೆ ಉನ್ನತ ಪ್ರದೇಶದಲ್ಲಿ ಕಾರ್ಯತಂತ್ರದ ಪ್ರಯೋಜನವನ್ನು ನೀಡುತ್ತದೆ ಎಂದು ಬಿಲಾಸ್ಪುರ್-ಮನಾಲಿ-ಲೇಹ್ ರೈಲ್ವೆ ಮಾರ್ಗದ ಸಮೀಕ್ಷೆಯ ಕುರಿತ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದರು. ಕಾರ್ಗಿಲ್‌ಗೆ ಸಂಪರ್ಕವನ್ನು ಒದಗಿಸುವ ಹೊಸ ಬಿಲಾಸ್ಪುರ್-ಮನಾಲಿ-ಲೇಹ್ ರೈಲ್ವೆ ಮಾರ್ಗದ ನಿರೀಕ್ಷಿತ ವೆಚ್ಚ 1,31,000 ಕೋಟಿ ರೂ. ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬುಲೆಟ್ ರೈಲು ಕಾರ್ಮಿಕರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಕಾಶ್ಮೀರದ ಗಂಡೇರ್‌ಬಲ್ ಅನ್ನು ಕಾರ್ಗಿಲ್‌ನೊಂದಿಗೆ ಸಂಪರ್ಕಿಸಲು ಸಮೀಕ್ಷೆ ನಡೆಸಲು ಸರ್ಕಾರ ಯಾವುದೇ ಯೋಜನೆಯನ್ನು ಹೊಂದಿದೆಯೇ ಎಂಬ ಬಗ್ಗೆ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೊಸ ಬಿಲಾಸ್ಪುರ್-ಮನಾಲಿ-ಲೇಹ್ ಮಾರ್ಗದ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ