AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಯ್ಡಾ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣದ 10 ಅಂಶಗಳು

PM Narendra Modi ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತವೆ. ಈ ಜನರ ಆಲೋಚನೆಯು ಸ್ವಹಿತಾಸಕ್ತಿಯಾಗಿದೆ, ಅವರ ಸ್ವಂತ, ಕುಟುಂಬದ ಅಭಿವೃದ್ಧಿ ಮತ್ತು ಅವರು ವಾಸಿಸುವ ಪ್ರದೇಶದ ಅಭಿವೃದ್ಧಿ ಮಾತ್ರ. ಇದನ್ನು ವಿಕಾಸ ಎಂದು ಅವರು ಭಾವಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.

ನೋಯ್ಡಾ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಷಣದ 10 ಅಂಶಗಳು
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 25, 2021 | 5:22 PM

ನೋಯ್ಡಾ: ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Noida International Airport) ಶಂಕುಸ್ಥಾಪನೆ ಸಮಾರಂಭವು 2017 ರಲ್ಲಿ ನಡೆಯಬಹುದಿತ್ತು. ರಾಜ್ಯದಲ್ಲಿ ಯೋಗಿ ಆದಿತ್ಯನಾಥ (Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆಯನ್ನು ಹಿಂದಿನ ಬಿಜೆಪಿ ಸರ್ಕಾರವು ಪರಿಕಲ್ಪನೆ ಮಾಡಿತ್ತು ಎಂದು ಉತ್ತರ ಪ್ರದೇಶದ (Uttar Pradesh) ಜೆವಾರ್​​ನಲ್ಲಿ (Jewar)  ಗುರುವಾರ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ರಾಜಕೀಯದ ಪ್ರಮಾಣಿತ ಅಭ್ಯಾಸದ ಮೂಲಕ ಹೋಗುವುದಾದರೆ, ಅದನ್ನು ಕೆಣಕಲಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ ಬಿಜೆಪಿಯ ರಾಜಕೀಯವು ಈ ಹಿಂದೆ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಪ್ರಧಾನಿ ಹೇಳಿದರು. “ನಾವು ಫೋಟೋ ತೆಗೆಯಬಹುದಿತ್ತು ಮತ್ತು ಎಲ್ಲಾ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿತ್ತು. ಆದರೆ ಇದು ಹಿಂದಿನ ಸರ್ಕಾರದ ಅಭ್ಯಾಸವಾಗಿತ್ತು” ಎಂದು ಪ್ರಧಾನಿ ಮೋದಿ ಹೇಳಿದರು. ವಿರೋಧ ಪಕ್ಷಗಳನ್ನು ಕೆಣಕುವ ಅವಕಾಶವನ್ನು ಬಳಸಿಕೊಂಡ ಮೋದಿ ಪಕ್ಷಗಳು ವೆಚ್ಚವನ್ನು ಅಂದಾಜು ಮಾಡದೆ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಯೋಜನೆಗಳನ್ನು ಘೋಷಿಸುತ್ತವೆ ಮತ್ತು ಆದ್ದರಿಂದಲೇ ಅನೇಕ ಯೋಜನೆಗಳು ದಿನದ ಬೆಳಕನ್ನು ಕಾಣಲಿಲ್ಲ ಎಂದು ಹೇಳಿದರು. ಪ್ರಧಾನಿ ಭಾಷಣದ ಮುಖ್ಯಾಂಶಗಳು 1. ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತವೆ. ಈ ಜನರ ಆಲೋಚನೆಯು ಸ್ವಹಿತಾಸಕ್ತಿಯಾಗಿದೆ, ಅವರ ಸ್ವಂತ, ಕುಟುಂಬದ ಅಭಿವೃದ್ಧಿ ಮತ್ತು ಅವರು ವಾಸಿಸುವ ಪ್ರದೇಶದ ಅಭಿವೃದ್ಧಿ ಮಾತ್ರ. ಇದನ್ನು ವಿಕಾಸ ಎಂದು ಅವರು ಭಾವಿಸುತ್ತಾರೆ. ಆದರೆ ನಾವು ಮೊದಲು ರಾಷ್ಟ್ರದ ಮನೋಭಾವವನ್ನು ಅನುಸರಿಸುತ್ತೇವೆ. ಸಬ್ಕಾ ಸಾಥ್ – ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್ ನಮ್ಮ ಮಂತ್ರವಾಗಿದೆ.

2. ಮೂಲಭೂತ ಸೌಕರ್ಯಗಳು ನಮಗೆ ರಾಜಕೀಯದ ಭಾಗವಲ್ಲ ಆದರೆ ರಾಷ್ಟ್ರೀಯ ನೀತಿಯ ಭಾಗವಾಗಿದೆ.

3. ಹಿಂದಿನ ಸರಕಾರಗಳು ಉತ್ತರ ಪ್ರದೇಶಕ್ಕೆ ಸಿಗಬೇಕಾದ್ದನ್ನು ಕಸಿದುಕೊಂಡಿದ್ದವು. ಅದು ಹಗರಣಗಳು, ಕೆಟ್ಟ ಮೂಲಸೌಕರ್ಯಗಳು, ಜಾತಿ ರಾಜಕೀಯ ವಿಷಯದಲ್ಲಿ ಉತ್ತರಪ್ರದೇಶ ಕೇವಲ ಟೀಕೆಗೆ ಒಳಗಾಗಿತ್ತು.

4. ಉತ್ತರಪ್ರದೇಶದ ಜನರು ತಮ್ಮ ರಾಜ್ಯವು ಎಂದಿಗೂ ಸಕಾರಾತ್ಮಕ ಚಿತ್ರವನ್ನು ಹೊಂದಿರುವುದಿಲ್ಲವೇ ಎಂದು ಆಶ್ಚರ್ಯ ಪಡುತ್ತಿದ್ದರು. ಆದರೆ ಅದೇ ಉತ್ತರಪ್ರದೇಶ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ.

5. ಸ್ವಾತಂತ್ರ್ಯ ಪಡೆದ ಏಳು ದಶಕಗಳ ನಂತರ, ಉತ್ತರ ಪ್ರದೇಶವು ಡಬಲ್ ಇಂಜಿನ್ ಸರ್ಕಾರದ ಪ್ರಯತ್ನದಿಂದ ಈ ಹಿಂದಿನದ್ದನ್ನು ಪಡೆಯುತ್ತಿದೆ.

6. ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಲಾಜಿಸ್ಟಿಕ್ಸ್ ಗೇಟ್ ವೇ ಆಗಿರುತ್ತದೆ. ಇದು ಇಡೀ ಪ್ರದೇಶವನ್ನು ರಾಷ್ಟ್ರೀಯ ಗತಿಶಕ್ತಿ ಮಾಸ್ಟರ್‌ಪ್ಲಾನ್‌ನ ಪ್ರಬಲ ಪ್ರತಿಬಿಂಬವಾಗಿಸುತ್ತದೆ.

7. ಈಗಉತ್ತರ ಪ್ರದೇಶ ಎಂದರೆ ಉತ್ತಮ ಸುವಿದಾ (ಅತ್ಯುತ್ತಮ ಸೌಲಭ್ಯಗಳು), ನಿರಂತರ ನಿವೇಶ್ (ಅಂತ್ಯವಿಲ್ಲದ ಹೂಡಿಕೆ). ಒಮ್ಮೆ ಈ ವಿಮಾನ ನಿಲ್ದಾಣ ಸಿದ್ಧಗೊಂಡರೆ ಐದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಬರಲಿವೆ.

8. ಉತ್ತರ ಪ್ರದೇಶದ ಹಿಂದಿನ ಸರ್ಕಾರವು ಈ ವಿಮಾನ ನಿಲ್ದಾಣದ ಕೆಲಸವನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರವನ್ನೂ ಬರೆದಿದೆ.

9. ಮೋದಿ ಮತ್ತು ಯೋಗಿ ಬಯಸಿದ್ದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ವಿಮಾನ ನಿಲ್ದಾಣವನ್ನು ಉದ್ಘಾಟಿಸಬಹುದಿತ್ತು. ಆದರೆ ಇದು ನಮ್ಮ ರಾಜಕೀಯ ಅಲ್ಲ.

10. ಯೋಜನೆಯು ಯಾವುದೇ ಅಡೆತಡೆಯಿದ್ದರೂ ಮಧ್ಯೆ ನಿಲ್ಲುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ವಿಳಂಬವಾದರೆ ದಂಡ ವಿಧಿಸುವ ಅವಕಾಶವೂ ಇದೆ.

ಇದನ್ನೂ ಓದಿ:  ಸಲ್ಮಾನ್​ ಖುರ್ಷಿದ್​ ಪುಸ್ತಕ ನಿಷೇಧಿಸಲಾಗದು, ನೀವೇ ಓದುವುದನ್ನು ಬಿಡಬಹುದು: ದೆಹಲಿ ಹೈಕೋರ್ಟ್​​

‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್