AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕ್​ ಸರ್ವರ್​ ಹ್ಯಾಕ್​; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು

ಹೈದ್ರಾಬಾದ್​ನ ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್​ಅನ್ನು ಸೈಬರ್​ ವಂಚಕರು ಹ್ಯಾಕ್​ ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್​ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ.

ಬ್ಯಾಂಕ್​ ಸರ್ವರ್​ ಹ್ಯಾಕ್​; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 26, 2022 | 2:23 PM

Share

ಹೈದ್ರಾಬಾದ್​ನ ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್ ( Mahesh Co-Operative Urban Bank )​ ಅನ್ನು ಸೈಬರ್​ ವಂಚಕರು ಹ್ಯಾಕ್ (Hack)​ ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್​ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ. ಒಂದೇ ಬ್ಯಾಂಕ್​ನ ಮೂರು ಖಾತೆಗಳನ್ನು ಹ್ಯಾಕ್​ ಮಾಡಿದ್ದು ಒಂದೇ ದಿನದಲ್ಲಿ 12 ಕೋಟಿಗೂ ಹೆಚ್ಚು ಹಣಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಮಹೇಶ್​ ಕೋ ಆಪರೇಟಿವ್​ ಅರ್ಬನ್​ ಬ್ಯಾಂಕ್​ನ ಐಟಿ ಹೆಡ್​ ಕೆ ಬದ್ರಿನಾಥ್​ ಮಾಹಿತಿ ನೀಡಿದ್ದು, ಬ್ಯಾಂಕ್ ಗ್ರಾಹಕರ ಖಾತೆಗಳಲ್ಲಿನ ಹಣ ಸುರಕ್ಷಿತವಾಗಿದೆ. ಹ್ಯಾಕರ್ಸ್​​ಗಳು  ಬ್ಯಾಂಕ್​ನ ರೆಮಿಟನ್ಸ್​​ ಫಂಡ್ (Remittance Funds) (ರವಾನೆ ಮಾಡುವ ಹಣ)ನ ಖಾತೆಯನ್ನು ಹ್ಯಾಕ್​ ಮಾಡಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಗಮನಕ್ಕೆ ಬಂದ ತಕ್ಷಣ ಹಣ ವರ್ಗಾವಣೆಯಾಗುವುದನ್ನು ತಡೆಯಲಾಗಿದೆ. ಆದರೂ 12.90 ಕೋಟಿರೂಗಳನ್ನು ವಂಚಕರು ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಣ ದೋಚಿದ್ದರ ಕುರಿತು ಬ್ಯಾಂಕ್​ ಕಡೆಯಿಂದ ಸೈಬರ್​ ಕ್ರೈಮ್​ ಪೊಲೀಸರಿಗೆ ದುರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ  ಸೈಬರ್​ ಕ್ರೈಮ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಒಂದು ಖಾತೆಯನ್ನು ಪತ್ತೆ ಮಾಡಲಾಗಿದೆ. ಬ್ಯಾಂಕ್​ನಲ್ಲಿ ಎಲ್ಲಾ ರೀತಿಯ ಸುರಕ್ಷತೆಗಳಿವೆ ಆದರೂ ಇದೇ  ಮೊದಲ ಬಾರಿಗೆ ಹ್ಯಾಕ್​ ಆಗಿದೆ.  ಹೇಗೆ ಹ್ಯಾಕ್​ ಮಾಡಲಾಗಿದೆ ಎಂದು ತಿಳಿಯಲು ಟೆಕ್ನಿಕಲ್​ ಎಕ್ಸ್​ಪರ್ಟ್ಸ್​​ಗಳನ್ನು ನೇಮಕ ಮಾಡಲಾಗಿದೆ ಎಂದು ಬ್ಯಾಂಕ್​​ನ ಐಟಿ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯಾ.ಕಾಂ ವರದಿ ಮಾಡಿದೆ.

ಬ್ಯಾಂಕ್​ಗೆ ಈಗಾಗಲೇ ಸೈಬರ್​ ಕ್ರೈಮ್​ ವಿರುದ್ಧ ಇನ್ಸುರೆನ್ಸ್​ ಮಾಡಿಸಲಾಗಿದೆ. ಸೈಬರ್​ ಕ್ರೈಮ್​ ಅಧಿಕಾರಿಗಳೂ ಕೂಡ ತನಿಖೆಯನ್ನು ಆರಂಭಿಸಿದ್ದಾರೆ. ತನಿಖೆಯ ಬಳಿಕ ಹಣ ವರ್ಗಾವಣೆಯಾಗಿದ್ದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಹೇಳಿದ್ದಾರೆ. ​​ಹಣ ದೋಚಿದ ವಂಚಕರು ದೆಹಲಿ, ಬಿಹಾರ್​ ಸೇರಿದಂತೆ ಒಟ್ಟು ದೇಶದ ವಿವಿಧ ರಾಜ್ಯಗಳ 128 ಬ್ಯಾಂಕ್​ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ.

ಇದನ್ನೂ ಓದಿ:

ಬೆಂಗಳೂರಲ್ಲಿ ಮನೆ ಮುಂದಿನ ಹೂಕುಂಡಗಳನ್ನೂ ಕದಿಯುತ್ತಿದ್ದಾರೆ! ಕಾರಿನಲ್ಲಿ ಬಂದ ಯುವತಿಯಿಂದ ಕುಕೃತ್ಯ

Published On - 11:58 am, Wed, 26 January 22

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ