AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂ​ಆರ್

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ಡಾ ವಿಕೆ ಪಾಲ್ ಅವರು, ಕೇವಲ ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜನ ಮನೆಯಿಂದ ಆಚೆ-ಅದೂ ಮಾಸ್ಕ ಧರಿಸಿಯೇ ಬರಬೇಕು ಅಂತ ಆಗ್ರಹಿಸಿದರಲ್ಲದೆ ಹೊರಗಿನವರನ್ನು ಮನೆಯೊಳಗೆ ಆಹ್ವಾನಿಸದಿರುವಂತೆ ತಾಕೀತು ಮಾಡಿದರು.

ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂ​ಆರ್
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 26, 2021 | 11:33 PM

ನವದೆಹಲಿ: ದೈಹಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಕೊವಿಡ್-19 ರೋಗ ಹರಡುವ ಸಾರ್ಸ್-ಕೊವಿ-2 ವೈರಸ್​ನಿಂದ ಸೋಂಕಿತನಾಗಿರುವ ವ್ಯಕ್ತಿಯೊಬ್ಬ 30 ದಿನಗಳ ಅವಧಿಯಲ್ಲಿ 406 ಜನರಿಗೆ ಸೋಂಕನ್ನು ಹರಡಬಲ್ಲನೆಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರದಂದು ಹೇಳಿದೆ. ಅಧಿಕೃತ ಸುದ್ದಿಗೋಷ್ಟಿಯೊಂದರಲ್ಲಿ ಇಲಾಖೆಯ ಅಧಿಕಾರಿಯೊಬ್ಬರು ಕೊವಿಡ್-19 ಸೋಂಕಿನ ವಿದ್ಯಮಾನಗಳು, ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವಾಗ, ‘ಸೂಕ್ತವಾಗಿ ದೈಹಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಒಬ್ಬ ಸೋಂಕಿತ 406 ಜನರಿಗೆ ರೋಗ ಹರಡಬಲ್ಲ ಎನ್ನುವುದು ಸಂಶೋಧನೆಯ ಮೂಲಕ ಧೃಡಪಟ್ಟಿದೆ’ ಅಂತ ಹೇಳಿದರು.

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ಡಾ ವಿಕೆ ಪಾಲ್ ಅವರು, ಕೇವಲ ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜನ ಮನೆಯಿಂದ ಆಚೆ-ಅದೂ ಮಾಸ್ಕ ಧರಿಸಿಯೇ ಬರಬೇಕು ಅಂತ ಆಗ್ರಹಿಸಿದರಲ್ಲದೆ ಹೊರಗಿನವರನ್ನು ಮನೆಯೊಳಗೆ ಆಹ್ವಾನಿಸದಿರುವಂತೆ ತಾಕೀತು ಮಾಡಿದರು.

‘ಈಗಿನ ಕೊವಿಡ್-19 ಸ್ಥಿತಿಯಲ್ಲಿ ದಯವಿಟ್ಟು ಯಾರೂ ಅನಗತ್ಯವಾಗಿ ಮನೆಯಿಂದ ಆಚೆ ಬರಬೇಡಿ, ಮನೆಯಲ್ಲಿದ್ದಾಗಲೂ ತಪ್ಪದೆ ಮಾಸ್ಕ್ ಧರಿಸಿ. ಅದನ್ನು ಧರಿಸುವುದು ಅತ್ಯವಶ್ಯಕವಾಗಿದೆ. ಯಾರನ್ನೂ ಮನೆಗೆ ಆಹ್ವಾನಿಸಬೇಡಿ, ಸಾಮಾಜಿಕ ಅಂತರ ಮತ್ತು ಬಾರಿ ಬಾರಿ ಸ್ಯಾನಿಟೈಸ್ ಮಾಡಿಕೊಳ್ಳುವುದು ಸೋಂಕಿನ ಆಪಾಯವನ್ನು ಕಡಿಮೆ ಮಾಡುತ್ತದೆ,’ ಎಂದು ಡಾ ಪಾಲ್ ಹೇಳಿದರು.

‘ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಶೇಕಡಾ 50 ರಷ್ಟು ಪಾಲಿಸದರೂ ಸೋಂಕಿತ ವ್ಯಕ್ತಿಯು 406 ಜನರ ಬದಲಿಗೆ ಕೇವಲ 15 ಜನಕ್ಕೆ ಸೋಂಕನ್ನು ಹರಡುತ್ತಾನೆ, ಮತ್ತು ಅಪಾಯದ ಪ್ರಮಾಣ ಶೇಕಡಾ 75ರಷ್ಟು ಕಡಿಮೆಯಾಗುತ್ತದೆ. ಈ ಆಂಶವನ್ನು ಎಲ್ಲರೂ ಮನಗಾಣಿರೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ವೈದ್ಯಕೀಯ ನಿರ್ವಹಣೆ ಮತ್ತು ಸೋಂಕು ನಿಯಂತ್ರಣಗಳ ಮೇಲೆ ಗಮನವಿರಲಿ,’ ಎಂದು ಪಾಲ್ ಹೇಳಿದರು.

ಲಾಕ್​ಡೌನ್ ಮತ್ತು ದೈಹಿಕ ಅಂತರವನ್ನು ಸೂಕ್ತವಾಗಿ ಜಾರಿಗೊಳಿಸದಿದ್ದರೆ, ಒಬ್ಬ ಕೊವಿಡ್-19 ರೋಗಿಯು 406 ಜನರಿಗೆ ಸೋಂಕನ್ನು ಹರಡುತ್ತಾನೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಸಂಸ್ಥೆ (ಐಸಿಎಮ್​ಆರ್) ನಡೆಸಿರುವ ಅಧ್ಯಯನದ ಮೂಲಕ ಬಯಲಿಗೆ ಬಂದಿದೆ.

ಕೊವಿಡ್-19ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಅದರಲ್ಲೂ ವಿಶೇಷವಾಗಿ ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸದರೆ ಸೋಂಕಿತನೊಬ್ಬ ಕೇವಲ 2.5 ಜನಕ್ಕೆ ಮಾತ್ರ ಹರಡುವಷ್ಟರ ಮಟ್ಟಿಗೆ ಅದನ್ನು ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಏಪ್ರಿಲ್ 8ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಜನ ಸಮೂಹಗಳಿಗೆ ಸಾಮಾಜಿಕ ಅಂತರವು ‘ಸಾಮಾಜಿಕ ಲಸಿಕೆ’ ಎಂದು ಬಣ್ಣಿಸಿದ ಅಗರ್​ವಾಲ್ ಪ್ರತಿಯೊಬ್ಬರು ಈ ನಿಯಮವನ್ನು ಚಾಚೂತಪ್ಪದೆ ಪಾಲಿಸಬೇಕು ಅಂತ ಹೇಳಿದ್ದರು.

ಜನರು ವಿನಾಕಾರಣ ಆತಂಕಕ್ಕೊಳಗಾಗಿ ಅಸ್ಪತ್ರೆಗಳಲ್ಲಿ ಬೆಡ್​ಗಳನ್ನು ಆಕ್ರಮಿಸಿಕೊಳ್ಳುತ್ತಿರುವುದರ ವಿರುದ್ಧ ಎಚ್ಚರಿಸಿದ ಇಲಾಖೆಯ ಇತರ ಅಧಿಕಾರಿಗಳು, ಕೇವಲ ವೈದ್ಯರ ಸಲಹೆ ನೀಡಿದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕೆಂದು ಹೇಳಿದರು.

‘ನಾವು ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಮತ್ತು ಆಸ್ಪತ್ರೆಗಳನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಿದೆ. ಆಕ್ಸಿಜನ್ ಉಪಯೋಗವನ್ನು ಬಹಳ ಜಾಗರೂಕತೆಯಿಂದ ಬಳಸಿಕೊಳ್ಳುವ ಅವಶ್ಯಕತೆಯಿದೆ. ಆದರೆ ಈಗ ದೇಶದಲ್ಲಿ ಅನಾವಶ್ಯಕ ಆತಂಕ ಹಬ್ಬಿದೆ,’ ಎಂದು ಎಐಐಎಮ್​ಎಸ್​ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಸೋಮವಾರ ಹೇಳಿದರು.

ಇದನ್ನೂ ಓದಿ: ICMR Guidelines for Covid Treatment: ವಯಸ್ಕರ ಕೋವಿಡ್- 19 ಚಿಕಿತ್ಸೆಗಾಗಿ ಹೊಸ ಮಾರ್ಗದರ್ಶಿ ಸೂತ್ರ ವಿತರಿಸಿದ ಏಮ್ಸ್

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 29,744 ಮಂದಿಗೆ ಕೊರೊನಾ ಸೋಂಕು, 201 ಜನರ ಸಾವು

Published On - 11:32 pm, Mon, 26 April 21

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ