AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mangalyana-2: ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಮಂಗಳ ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ ಎಂದು ವರದಿ ಹೇಳಿದೆ.

Mangalyana-2: ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ
Mangalyana-2
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 07, 2023 | 10:30 AM

ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ (Mangalyana) ಅಕಾ ಮಾರ್ಸ್ ಆರ್ಬಿಟರ್ ಮಿಷನ್ (MOM)ನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ  ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ MOM-2 ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ ಎಂದು ವರದಿ ಹೇಳಿದೆ. ವರದಿಗಳ ಪ್ರಕಾರ ಈ ಪೇಲೋಡ್‌ಗಳು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಇದು ನೌಕೆಯು ಗ್ರಹದ ಧೂಳು, ಮಂಗಳದ ವಾತಾವರಣ ಮತ್ತು ಪರಿಸರವನ್ನು ಒಳಗೊಂಡಂತೆ ಬಂಜರು ಗ್ರಹದ ಅಂಶಗಳನ್ನು ಅಧ್ಯಯನ ಮಾಡುತ್ತದೆ.

ಮಾರ್ಸ್ ಆರ್ಬಿಟ್ ಡಸ್ಟ್ ಪ್ರಯೋಗ (MODEX), ರೇಡಿಯೋ ಆಕ್ಲ್ಟೇಶನ್ (RO) ಪ್ರಯೋಗ, ಎನರ್ಜಿಟಿಕ್ ಅಯಾನ್ ಸ್ಪೆಕ್ಟ್ರೋಮೀಟರ್ (EIS) ಮತ್ತು ಲ್ಯಾಂಗ್‌ಮುಯಿರ್ ಪ್ರೋಬ್ ಮತ್ತು ಎಲೆಕ್ಟ್ರಿಕ್ ಫೀಲ್ಡ್ ಪ್ರಯೋಗ (LPEX)ಗಳನ್ನು ಕೂಡ ನಡೆಸಲಿದೆ. ಇನ್ನು ಈ ಬಗ್ಗೆ ಮಾತನಾಡಿದ ಇಸ್ರೋ ವಿಜ್ಞಾನಿಯೊಬ್ಬರು ಈಗಾಗಲೇ ಇವುಗಳನ್ನು ವಿವಿಧ ಹಂತಗಳಲ್ಲಿ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.

ಇವುಗಳು ಮಂಗಳಗ್ರಹದ ಅನೇಕ ಭಾಗಗಳನ್ನು ಅಧ್ಯಯನ ಮಾಡುತ್ತದೆ. ಜತೆಗೆ ಮಂಗಳದಲ್ಲಿ ಯಾವೆಲ್ಲ ಕಣಗಳು ಹಾಗೂ ಧೂಳಿನ ಅಂಶಗಳ ಬಗ್ಗೆ ಅಧ್ಯಯನ ಮಾಡಲಿದೆ. ರೇಡಿಯೋ ಆಕ್ಲ್ಟೇಶನ್ ಉಪಕರಣದ ಮೂಲಕ ಅಲ್ಲಿನ ಸಾಂದ್ರತೆಯ ಬಗ್ಗೆ ಕೂಡ ಸಂಶೋಧನೆಯನ್ನು ನಡೆಸಲಿದೆ. ಇನ್ನು ಇಲ್ಲಿನ ವಾತಾವರಣದ ವರ್ತನೆಯ ಬಗ್ಗೆ ಅಧ್ಯಯನ ನಡೆಸಲಿದೆ. ಎನರ್ಜಿಟಿಕ್ ಐಯಾನ್ ಸ್ಪೆಕ್ಟ್ರೋಮೀಟರ್ (ಇಐಎಸ್) ಮಂಗಳದ ಪರಿಸರದಲ್ಲಿ ಸೌರ ಶಕ್ತಿ ಮತ್ತು ಸೂಪರ್-ಥರ್ಮಲ್ ಸೌರ ಗಾಳಿಯ ಕಣಗಳನ್ನು ನಿರೂಪಿಸಲು ಬಾಹ್ಯಾಕಾಶ ಸಂಸ್ಥೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:ಭಾರತದ ಚಂದ್ರಯಾನ-3 ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ ಎಂದ ಚೀನಾ ವಿಜ್ಞಾನಿ

ಹಿಂದಿನ ಮಂಗಳಯಾನ ಮಿಷನ್ ಭಾರತದ ಮೊದಲ ಅಂತರಗ್ರಹ ಮಿಷನ್ ಆಗಿತ್ತು, ಇದು ರಷ್ಯಾದ ROSCOSMOS, US ನ NASA ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ನಂತರ ಮಂಗಳನ ಕಕ್ಷೆಯನ್ನು ತಲುಪಲಿರುವ ನಾಲ್ಕನೇ ದೇಶವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:57 pm, Mon, 2 October 23

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ