AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Blue Star ಸಿಖ್ಖರನ್ನು ದಮನಿಸಲು ನೆಹರು ಮಾಡಿದ ನೀತಿಯ ಫಲಿತಾಂಶವೇ ಆಪರೇಷನ್ ಬ್ಲೂ ಸ್ಟಾರ್: ಅಕಾಲ್ ತಖ್ತ್ ಜತೇದಾರ್

Operation Blue Star anniversary ಗ್ರಾಮಗಳಲ್ಲಿರುವ ಚರ್ಚ್​​ಗಳ ಬಗ್ಗೆಯೂ ಮಾತನಾಡಿದ ಸಿಂಗ್, ನಮ್ಮನ್ನು ಧಾರ್ಮಿಕವಾಗಿ ಕುಗ್ಗಿಸುವ ಸವಾಲುಗಳ ವಿರುದ್ಧ ನಾವು ಹೋರಾಡಬೇಕಿದೆ. ಪಂಜಾಬ್​ನ ಗ್ರಾಮಗಳಲ್ಲಿ ಚರ್ಚ್​​ಗಳು ತಲೆಎತ್ತಿವೆ. ಸಿಖ್ ಬೋಧಕರು ಎಸಿ ರೂಂನಿಂದ ಹೊರಬಂದು ಧರ್ಮದ ಪ್ರಚಾರ ಮಾಡಬೇಕು. ಅವರು ಹಳ್ಳಿಗಳಿಗೆ ಹೋಗಬೇಕು ಎಂದಿದ್ದಾರೆ.

Operation Blue Star ಸಿಖ್ಖರನ್ನು ದಮನಿಸಲು ನೆಹರು ಮಾಡಿದ ನೀತಿಯ ಫಲಿತಾಂಶವೇ ಆಪರೇಷನ್ ಬ್ಲೂ ಸ್ಟಾರ್: ಅಕಾಲ್ ತಖ್ತ್ ಜತೇದಾರ್
ಸ್ವರ್ಣ ಮಂದಿರದಲ್ಲಿ ಸಿಖ್ ಹೋರಾಟಗಾರರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 06, 2022 | 3:14 PM

ಅಮೃತ್​​ಸರ್: ಅಕಾಲ್ ತಖ್ತ್ ಜತೇದಾರ್​ ಗಿಯಾನಿ ಹರ್‌ಪ್ರೀತ್ ಸಿಂಗ್ (Giani Harpreet Singh) ಆಪರೇಷನ್ ಬ್ಲೂ ಸ್ಟಾರ್ (Operation Blue Star) 38 ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಮಾಡಿದ ಭಾಷಣದಲ್ಲಿ ಸಾಂಪ್ರದಾಯಿಕ ಸಮರ ಕಲೆ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿಗೆ ರಾಜ್ಯದ ಯುವಕರನ್ನು ಪ್ರೋತ್ಸಾಹಿಸುವಂತೆ ಸಿಖ್ ಸಂಘಟನೆಗಳನ್ನು ಒತ್ತಾಯಿಸಿದ್ದಾರೆ. ಅತ್ಯುನ್ನತ ಸಿಖ್ ಸ್ಥಾನದಲ್ಲಿರುವ ಅಕಾಲ್ ತಖ್ತ್‌ನ ಜತೇದಾರ್, ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು (Jawahar Lal Nehru) ಸಿಖ್ ವಿರೋಧಿ ನೀತಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಿಖ್ ಯುವಕರ ಗುಂಪು ಖಲಿಸ್ತಾನ್ ಪರ ಘೋಷಣೆ ಕೂಗಿದೆ.1947ರಲ್ಲಿಯೇ ಇದು ಶುರುವಾಗಿದ್ದು, ಸಿಖ್ಖರನ್ನು ದಮನಿಸುವ ನೀತಿಗಳನ್ನು ನೆಹರು ಮಾಡಿದ್ದರು. ಅದರ ಫಲಿತಾಂಶವೇ 1984ರಲ್ಲಿ ನಡೆದ ಆಪರೇಷನ್ ಬ್ಲೂ ಸ್ಟಾರ್ ಎಂದು ಹರ್‌ಪ್ರೀತ್ ಸಿಂಗ್ ಹೇಳಿದ್ದಾರೆ . ಗ್ರಾಮಗಳಲ್ಲಿರುವ ಚರ್ಚ್​​ಗಳ ಬಗ್ಗೆಯೂ ಮಾತನಾಡಿದ ಸಿಂಗ್, ನಮ್ಮನ್ನು ಧಾರ್ಮಿಕವಾಗಿ ಕುಗ್ಗಿಸುವ ಸವಾಲುಗಳ ವಿರುದ್ಧ ನಾವು ಹೋರಾಡಬೇಕಿದೆ. ಪಂಜಾಬ್​ನ ಗ್ರಾಮಗಳಲ್ಲಿ ಚರ್ಚ್​​ಗಳು ತಲೆಎತ್ತಿವೆ. ಸಿಖ್ ಬೋಧಕರು ಎಸಿ ರೂಂನಿಂದ ಹೊರಬಂದು ಧರ್ಮದ ಪ್ರಚಾರ ಮಾಡಬೇಕು. ಅವರು ಹಳ್ಳಿಗಳಿಗೆ ಹೋಗಬೇಕು ಎಂದಿದ್ದಾರೆ.

ನಾವು ಧಾರ್ಮಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದೃಢವಾಗಿದ್ದರೆ ರಾಜಕೀಯವಾಗಿ ಯಾರಿಗೂ ನಮ್ಮನ್ನು ಕುಗ್ಗಿಸವಾಗುವುದಿಲ್ಲ ಎಂದು ಜತೇದಾರ್ ಹೇಳಿದ್ದಾರೆ. ಪಂಜಾಬ್ ನ ಯುವಕರು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತ ಪಡಿಸಿದ್ದಾರೆ.

ನಾವು ಘಾಟ್ಕ (ಸಿಖ್ ಸಮರಕಲೆ) ಕೇಂದ್ರಗಳನ್ನು ಮತ್ತು ನೂತನ ಶೂಟಿಂಗ್ ರೇಂಜ್​ಗಳನ್ನು ಆರಂಭಿಸಬೇಕಿದೆ. ಕೆಲವರು ಕದ್ದು ಮುಚ್ಚಿ ಆಯುಧ ಬಳಕೆಗೆ ತರಬೇತಿ ನೀಡುತ್ತಿದ್ದಾರೆ, ಆದರೆ ನಾವು ಮುಕ್ತವಾಗಿಯೇ ತರಬೇತಿ ನೀಡಬೇಕು. ಮಾದಕ ವಸ್ತುವ್ಯಸನದಿಂದ ಯುವಕರನ್ನು ಮುಕ್ತ ಮಾಡಿ ಅವರಿಗೆ ಆಯುಧ ಬಳಸುವ ತರಬೇತಿ ನೀಡಬೇಕು. ನಾವು ಅವರನ್ನು ಶಿಕ್ಷಿತರನ್ನಾಗಿ ಮಾಡಿದರೆ ವಿವಿಧ ದೇಶಗಳಲ್ಲಿನ ಆರ್ಥಿಕತೆಯನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗುತ್ತದೆ. ಹಾಗಾದರೆ ವಿಶ್ವದ ಯಾವುದೇ ಶಕ್ತಿ ನಮ್ಮನ್ನು ತಡೆಯಲಾರದು ಎಂದಿದ್ದಾರೆ ಸಿಂಗ್. ಪ್ರಯಾಣ ಕಷ್ಟಕರವಾದುದು. ಯಾರೊಬ್ಬರೂ ನಡೆಯದ ಹಾದಿಯಲ್ಲಿ ಸಂಚರಿಸುವಾಗ ಹಲವಾರ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಬೇಧ ಮರೆತು ನಾವು ಎಲ್ಲರೂ ಜತೆಯಾಗಿ ಬಂದರೆ ಈ ಪಯಣ ಸುಗಮವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
Watch ಆಪರೇಷನ್ ಬ್ಲೂಸ್ಟಾರ್​​ನ 38ನೇ ವಾರ್ಷಿಕೋತ್ಸವ ವೇಳೆ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ್ ಪರ ಘೋಷಣೆ
Image
Anil Ambani: ಅನಿಲ್ ಅಂಬಾನಿ ವಿರುದ್ಧ ಕಪ್ಪುಹಣ ಕಾಯ್ದೆ ಆದೇಶ; ಕಡಲಾಚೆಯ 800 ಕೋಟಿ ರೂ. ಆಸ್ತಿ ಪತ್ತೆ
Image
PM Narendra Modi: ಜನ ಸಮರ್ಥ ಪೋರ್ಟಲ್​ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ; ಹೊಸ ನಾಣ್ಯಗಳ ಬಿಡುಗಡೆ

ಸಿಖ್ ಗುರುಗಳ ಬಾದ್ಶಾಹತ್ ಅಥವಾ ಪರಮಾಧಿಕಾರ (ರಾಜ್) ಕಲ್ಪನೆ ಬಗ್ಗೆ ಮಾತನಾಡಿದ ಅಕಾಲ್ ತಖ್ತ್ ಜತೇದಾರ್, ಪ್ರತಿಯೊಂದು ಪ್ರಾರ್ಥನೆಯಲ್ಲಿಯೂ ನಾವು ಈ ಕಲ್ಪನೆಯನ್ನು ಪುನರಾವರ್ತಿಸುತ್ತೇವೆ, ಪುನರಾವರ್ತಿಸುತ್ತಿರಬೇಕು. ರಾಜ್ ಕಲ್ಪನೆಯನ್ನು ಸಿಖ್ ವ್ಯಕ್ತಿ ಯಾವತ್ತೂ ನಿರಾಕರಿಸಬಾರದು. ಸಿಮ್ರಂಜಿತ್ ಸಿಂಗ್ ಮಾನ್ ಅವರಂತಹ ಕೆಲವರು ಬಹಿರಂಗವಾಗಿ ಮತ್ತು ಇತರರು ನನ್ನಂತೆ ಸೂಕ್ಷ್ಮವಾಗಿ ಬೇಡಿಕೆಯಿಡುವುದು ಪ್ರತ್ಯೇಕ ವಿಷಯ. ನಾವು ರಾಜ್ ಮಾಡಲು ಬಯಸಿದರೆ ನಾವು ನಿಜವಾದ ಖಾಲ್ಸಾ ಆಗಬೇಕು. ಸಿಖ್ ಧರ್ಮದ ಪವಿತ್ರ ಕ್ಷೇತ್ರವಾದ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ಭಾರತೀಯ ಸೇನೆಯು ಜೂನ್ 6, 1984 ರಂದು ಆಪರೇಷನ್ ಬ್ಲೂ ಸ್ಟಾರ್ ಅನ್ನು ನಡೆಸಿತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:11 pm, Mon, 6 June 22

ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಬರೋಬ್ಬರಿ 11 ಸಿಕ್ಸ್​: IPLನಲ್ಲಿ ಅಟ್ಟರ್ ಫ್ಲಾಸ್, MLCಯಲ್ಲಿ ಸಿಡಿಲಬ್ಬರ
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿತ, ಎದೆನಡುಗಿಸುತ್ತೆ ಭಯಾನಕ ದೃಶ್ಯ!
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್
ಮಡೆನೂರು ಮನು ಆ ರೀತಿ ಮಾತಾಡಿದ್ದರೆ ಖಂಡಿತಾ ತಪ್ಪು: ವಿನೋದ್ ಪ್ರಭಾಕರ್