AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರಕ್ಕೆ ಬೇಕಾಗಿದ್ದಾರೆ ಬಾಸ್: ಸಿಇಒ ಹುದ್ದೆಗೆ 1,000 ಮಂದಿಯಿಂದ ಅರ್ಜಿ, ಜುಲೈ 22ಕ್ಕೆ ಅಂತಿಮ ಮುದ್ರೆ

ಅಯೋಧ್ಯೆಯ ರಾಮ ಮಂದಿರದ ಪಾರದರ್ಶಕ ನಿರ್ವಹಣೆಗಾಗಿ ಸಿಇಒ ಹುದ್ದೆ ಸೃಷ್ಟಿಸಲಾಗಿದೆ. ಕೇವಲ 5 ದಿನಗಳಲ್ಲಿ 1,000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಕಾರ್ಪೊರೇಟ್ ತಜ್ಞರು ಸೇರಿದ್ದಾರೆ. 'ರಾಮಭಕ್ತ' ಹಾಗೂ 20 ವರ್ಷಗಳ ಅನುಭವ ಕಡ್ಡಾಯ. ಜುಲೈ 22 ರಂದು ಅಂತಿಮ ಆಯ್ಕೆ ನಡೆಯಲಿದ್ದು, ತಿರುಪತಿ ಮಾದರಿಯಲ್ಲಿ ಮಂದಿರದ ದೈನಂದಿನ ಕಾರ್ಯನಿರ್ವಹಣೆ ಸುಧಾರಿಸುವುದು ಮುಖ್ಯ ಗುರಿಯಾಗಿದೆ.

ರಾಮ ಮಂದಿರಕ್ಕೆ ಬೇಕಾಗಿದ್ದಾರೆ ಬಾಸ್: ಸಿಇಒ ಹುದ್ದೆಗೆ 1,000 ಮಂದಿಯಿಂದ ಅರ್ಜಿ, ಜುಲೈ 22ಕ್ಕೆ ಅಂತಿಮ ಮುದ್ರೆ
ರಾಮ ಮಂದಿರ
ನಯನಾ ರಾಜೀವ್
|

Updated on: Jul 15, 2026 | 12:41 PM

Share

ಅಯೋಧ್ಯೆ, ಜುಲೈ 15: ಜಗತ್ಪ್ರಸಿದ್ಧ ಅಯೋಧ್ಯೆಯ ರಾಮ ಮಂದಿರ(Ram Mandir)ದಲ್ಲಿ ಇತ್ತೀಚೆಗೆ ಕೇಳಿಬಂದಿದ್ದ ದೇಣಿಗೆ ದುರುಪಯೋಗದ ಆರೋಪಗಳಿಗೆ ಶಾಶ್ವತ ಬ್ರೇಕ್ ಹಾಕಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಸ್ಟರ್ ಪ್ಲಾನ್ ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮಂದಿರದ ದೈನಂದಿನ ನಿರ್ವಹಣೆಗಾಗಿ ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ’ (CEO) ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಈ ಉನ್ನತ ಹುದ್ದೆಗಾಗಿ ಕೇವಲ 5 ದಿನಗಳಲ್ಲಿ ಬರೋಬ್ಬರಿ 1,000 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ದೇಶದ ಹಿರಿಯ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು, ಮಾಜಿ ಸೇನಾ ಅಧಿಕಾರಿಗಳು, ಪ್ರಸಿದ್ಧ ರಾಜಕಾರಣಿಗಳು ಹಾಗೂ ಪ್ರಭಾವಿ ಕಾರ್ಪೊರೇಟ್ ವಲಯದ ತಜ್ಞರು ಸೇರಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜುಲೈ 18, 2026

ಅರ್ಜಿಗಳ ಪರಿಶೀಲನೆ ಆರಂಭ: ಜುಲೈ 19, 2026

ಅಂತಿಮ ಆಯ್ಕೆ ಪ್ರಕಟಣೆ: ಜುಲೈ 22, 2026 (ಟ್ರಸ್ಟ್‌ನ ಮಹತ್ವದ ಸಭೆಯಲ್ಲಿ ನಿರ್ಧಾರ)

ಅರ್ಹತೆಗಳೇನು? ‘ರಾಮಭಕ್ತ’ ಆಗಿರುವುದು ಕಡ್ಡಾಯ ರಾಮ ಮಂದಿರದ ಸಿಇಒ ಹುದ್ದೆ ಸುಮ್ಮನೆ ಸಿಗುವಂತದ್ದಲ್ಲ. ಇದಕ್ಕೆ ಟ್ರಸ್ಟ್ ಅತ್ಯಂತ ಕಠಿಣ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಿದೆ.

ವಯಸ್ಸು ಮತ್ತು ಅನುಭವ: ಅಭ್ಯರ್ಥಿಗೆ 50 ರಿಂದ 70 ವರ್ಷ ವಯಸ್ಸಾಗಿರಬೇಕು. ಯಾವುದೇ ದೊಡ್ಡ ಸರ್ಕಾರಿ ಇಲಾಖೆ, ಸಂಸ್ಥೆ ಅಥವಾ ಕಂಪನಿಯಲ್ಲಿ ಕನಿಷ್ಠ 20 ವರ್ಷಗಳ ಉನ್ನತ ವ್ಯವಸ್ಥಾಪಕ ಅನುಭವ ಇರಬೇಕು.

ಧಾರ್ಮಿಕ ಹಿನ್ನೆಲೆ: ಅಭ್ಯರ್ಥಿಯು ಕಡ್ಡಾಯವಾಗಿ ಹಿಂದೂ ಧರ್ಮವನ್ನು ಪಾಲಿಸುವವರಾಗಿರಬೇಕು ಮತ್ತು ‘ಶ್ರೀರಾಮನ ಪರಮ ಭಕ್ತ’ ಆಗಿರಬೇಕು. ಅದರಲ್ಲೂ ವೈಷ್ಣವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆ ಮೊದಲ ಆದ್ಯತೆ ನೀಡಲಾಗುತ್ತದೆ.

ಭಾಷಾ ಜ್ಞಾನ: ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಮತ್ತು ಬರೆಯುವ ಜ್ಞಾನವಿರಬೇಕು.

ಮತ್ತಷ್ಟು ಓದಿ: ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಆಯ್ಕೆಯಾಗುವ ಸಿಇಒ ಅವರನ್ನು ಆರಂಭದಲ್ಲಿ 3 ವರ್ಷಗಳ ಒಪ್ಪಂದದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರ ಕೆಲಸದ ದಕ್ಷತೆಯನ್ನು ನೋಡಿ ಅವಧಿಯನ್ನು ವಿಸ್ತರಿಸಲಾಗುತ್ತದೆ. ಇವರ ಕಚೇರಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲೇ ಇರಲಿದ್ದು, ವೇತನವನ್ನು ಚರ್ಚೆಯ ಮೂಲಕ ನಿಗದಿಪಡಿಸಲಾಗುತ್ತದೆ.

ಆಯ್ಕೆ ಮಾಡುವುದು ಯಾರು? ಸಾವಿರಾರು ಅರ್ಜಿಗಳ ಪೈಕಿ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ವ್ಯಕ್ತಿಯನ್ನು ಹುಡುಕಲು ಟ್ರಸ್ಟ್ ಮೂವರು ಸದಸ್ಯರ ಹೈ-ಪ್ರೊಫೈಲ್ ಸಮಿತಿಯನ್ನು ರಚಿಸಿದೆ.

ನ್ಯಾ. ಪ್ರಮೋದ್ ಕೊಹ್ಲಿ

ಲೆಫ್ಟಿನೆಂಟ್ ಜನರಲ್ ವಿಷ್ಣುಕಾಂತ್ ಚತುರ್ವೇದಿ (ನಿವೃತ್ತ ಸೇನಾ ಅಧಿಕಾರಿ)

ಸುರೇಶ್ ಹವಾರೆ (ಖ್ಯಾತ ಟ್ರಸ್ಟಿ)

ತಿರುಪತಿ ಮಾದರಿಯಲ್ಲಿ ಅಯೋಧ್ಯೆ ನಿರ್ವಹಣೆ ರಾಮ ಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ಹರಿದು ಬರುತ್ತಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಇಷ್ಟೊಂದು ದೊಡ್ಡ ವ್ಯವಸ್ಥೆಯನ್ನು ಕೇವಲ ಅರ್ಚಕರು ಅಥವಾ ಟ್ರಸ್ಟಿಗಳು ಮಾತ್ರ ನಿರ್ವಹಿಸುವುದು ಕಷ್ಟಸಾಧ್ಯ.

ತಿರುಪತಿ ಮಾದರಿ ಆಡಳಿತ: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನವನ್ನು (TTD) ಐಎಎಸ್ ಅಧಿಕಾರಿಗಳು ಐಎಎಸ್ ಮಾದರಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಅದೇ ಮಾದರಿಯನ್ನು ಈಗ ಅಯೋಧ್ಯೆಯಲ್ಲೂ ತರಲಾಗುತ್ತಿದ್ದು, ಆಡಳಿತ, ಹಣಕಾಸು, ಭದ್ರತೆ, ಮಾನವ ಸಂಪನ್ಮೂಲ (HR) ಮತ್ತು ಐಟಿ (IT) ವಿಭಾಗಗಳನ್ನು ಈ ಹೊಸ ಸಿಇಒ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಪಾರದರ್ಶಕತೆಗೆ ಆದ್ಯತೆ: ಇತ್ತೀಚಿನ ವಿವಾದಗಳಿಂದ ಟ್ರಸ್ಟ್‌ನ ಇಮೇಜ್‌ಗೆ ಧಕ್ಕೆಯಾಗಿತ್ತು. ಈಗ ಹೊಸ ಸಿಇಒ ನೇಮಕದಿಂದ ಇಡೀ ಮಂದಿರದ ಆರ್ಥಿಕ ವಹಿವಾಟು ಅತ್ಯಂತ ಪಾರದರ್ಶಕವಾಗಲಿದ್ದು, ಭಕ್ತರ ಪ್ರತಿಯೊಂದು ರೂಪಾಯಿ ಕಾಣಿಕೆಗೂ ಲೆಕ್ಕ ಸಿಗಲಿದೆ. ಇದು ದೇಶದ ಅತಿ ದೊಡ್ಡ ಧಾರ್ಮಿಕ ಕೇಂದ್ರದ ಇತಿಹಾಸದಲ್ಲೇ ಅತ್ಯಂತ ಕ್ರಾಂತಿಕಾರಿ ಆಡಳಿತಾತ್ಮಕ ಬದಲಾವಣೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಕಾರಣ ನೀಡಿದ ಶೆಲ್ವಪಿಳ್ಳೈ ಅಯ್ಯಂಗಾರ್!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಸ್ಮಶಾನವಿಲ್ಲದೆ ನಡುರಸ್ತೆಯಲ್ಲೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು!
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಮತ್ತೊಂದು ಮಹಾ ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್​ 1ರಿಂದ ಕ್ಲೀನಿಂಗ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಫಿಫಾ ವಿಶ್ವಕಪ್ ಕ್ರೇಜ್: ರಾತ್ರಿ 3:30ರವರೆಗೆ ರೆಸ್ಟೋರೆಂಟ್​ಗಳು ಓಪನ್
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಕಲಬುರಗಿ ಸೆಂಟ್ರಲ್ ಜೈಲಿನಿಂದ ಸಜಾ ಕೈದಿಗಳು ಎಸ್ಕೇಪ್ ಆದ ದೃಶ್ಯ ಇಲ್ಲಿದೆ !
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಗಜಕೇಸರಿ ಮಹಾಯೋಗ, ಆಷಾಢ ಮಾಸ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ವಾಹನ ನಿಲುಗಡೆ
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಮೋದಿ ಕೊಟ್ಟ ಬಿಹಾರದ ಠೇಕುವಾ ಸ್ವೀಟ್ ಸವಿದ ಸ್ಲೋವಾಕಿಯಾ ನಾಯಕ ಹೇಳಿದ್ದೇನು?
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಜಮೀರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ರಾಜ್ಯಪಾಲ
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್
ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್