AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2023: ಆನ್​ಲೈನ್​ನಲ್ಲೇ ಸಿಗಲಿದೆ ಗಣರಾಜ್ಯೋತ್ಸವ ಪಾಸ್, ಟಿಕೆಟ್; ಖರೀದಿಸುವುದು ಹೀಗೆ

ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಗಣ್ಯರಿಗೆ ನೀಡಲಾಗುವ ಪಾಸ್, ಸಾರ್ವಜನಿಕರಿಗೆ ನೀಡುವ ಟಿಕೆಟ್​ ಇನ್ನು ಮುಂದೆ ಆನ್​ಲೈನ್​ನಲ್ಲೇ ಸಿಗಲಿದೆ. ಆಮಂತ್ರಣ್ ಪೋರ್ಟಲ್​​ನಲ್ಲಿ ಪಾಸ್ / ಟಿಕೆಟ್ ಖರೀದಿ ಹೇಗೆ ಎಂಬ ಮಾಹಿತಿ ಇಲ್ಲಿದೆ.

Republic Day 2023: ಆನ್​ಲೈನ್​ನಲ್ಲೇ ಸಿಗಲಿದೆ ಗಣರಾಜ್ಯೋತ್ಸವ ಪಾಸ್, ಟಿಕೆಟ್; ಖರೀದಿಸುವುದು ಹೀಗೆ
ಆಮಂತ್ರಣ್ ಪೋರ್ಟಲ್
TV9 Web
| Edited By: |

Updated on: Jan 07, 2023 | 11:26 AM

Share

ನವದೆಹಲಿ: ಗಣರಾಜ್ಯೋತ್ಸವ (Republic Day) ಮತ್ತು ಸ್ವಾತಂತ್ರ್ಯೋತ್ಸವ (Independence Day) ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಗಣ್ಯರಿಗೆ ನೀಡಲಾಗುವ ಪಾಸ್, ಸಾರ್ವಜನಿಕರಿಗೆ ನೀಡುವ ಟಿಕೆಟ್​ ಇನ್ನು ಮುಂದೆ ಆನ್​ಲೈನ್​ನಲ್ಲೇ ಸಿಗಲಿದೆ. ಪಾಸ್​ ಅಥವಾ ಟಿಕೆಟ್​ ಖರೀದಿಗಾಗಿ ಅಲೆಯುವ ಅಗತ್ಯವಿಲ್ಲ, ಎಲ್ಲಿ ಬೇಕಾದರೂ ಇದ್ದುಕೊಂಡು ಖರೀದಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪಾಸ್ ಮತ್ತು ಟಿಕೆಟ್ ವಿತರಣೆಗೆ ಸಂಬಂಧಿಸಿದ ‘ಇನ್ವಿಟೇಷನ್ ಮ್ಯಾನೇಜ್​​ಮೆಂಟ್ ಪೋರ್ಟಲ್’ ‘ಆಮಂತ್ರಣ್ (Aamantran)’ ಗೆ ರಕ್ಷಣಾ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಭಟ್ ನವದೆಹಲಿಯಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ. ಗಣರಾಜ್ಯೋತ್ಸವ ಸಮಾರಂಭ ಸಮೀಪಿಸುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

ಇ-ಆಡಳಿತ ಉಪಕ್ರಮದ ಭಾಗವಾಗಿ ಈ ಪೋರ್ಟಲ್ (www.aamantran.mod.gov.in) ಆರಂಭಿಸಲಾಗಿದೆ. ಆಮಂತ್ರಣ್ ಪೋರ್ಟಲ್ ಒಟ್ಟಾರೆ ಪಾಸ್, ಟಿಕೆಟ್​ ವಿತರಣೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಸರ್ಕಾರ ಮತ್ತು ಸಾರ್ವಜನಿಕರ ನಡುವಣ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಪೋರ್ಟಲ್ ‘ಡಿಜಿಟಲ್ ಇಂಡಿಯಾ’ದ ಮಹತ್ವದ ಮೈಲಿಗಲ್ಲು ಎಂದು ಅಜಯ್ ಭಟ್ ಬಣ್ಣಿಸಿದ್ದಾರೆ.

ಪ್ರತಿಯೊಬ್ಬ ನಾಗರಿಕನ ಬದುಕನ್ನೂ ಸುಗಮಗೊಳಿಸುವ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ. ಡಿಜಿಟಲ್ ಇಂಡಿಯಾ, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಕ್ರಮಗಳು ಸರ್ಕಾರ ಮತ್ತು ಜನರನ್ನು ಒಗ್ಗೂಡಿಸಿವೆ ಎಂದು ಅವರು ಹೇಳಿದ್ದಾರೆ.

ಆಮಂತ್ರಣ್ ಪೋರ್ಟಲ್​​ನಲ್ಲಿ ಪಾಸ್ / ಟಿಕೆಟ್ ಖರೀದಿ ಹೇಗೆ?

  1. ಆಮಂತ್ರಣ್ (www.aamantran.mod.gov.in) ಪೋರ್ಟಲ್​ಗೆ ಭೇಟಿ ನೀಡಿ.
  2. ಮೊಬೈಲ್ ಸಂಖ್ಯೆ ಸಹಾಯದಿಂದ ನೋಂದಣಿ ಮಾಡಿಕೊಳ್ಳಿ.
  3. ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಅಲ್ಲಿ ಕೇಳಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
  4. ವಿವರಗಳನ್ನು ಭರ್ತಿ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
  5. ನಂತರ ನಿಮಗೆ ಬೇಕಿರುವ ಟಿಕೆಟ್​ ಅನ್ನು ಆಯ್ಕೆ ಮಾಡಿ.
  6. ಎಲ್ಲ ವಿವರಗಳನ್ನು ಭರ್ತಿ ಮಾಡಿದ ಬಳಿಕ ಹಣ ಪಾವತಿಸಿ, ಟಿಕೆಟ್ ಪಡೆಯಿರಿ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ